ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರನ್ನು ಬಲೆ ಪಡೆದ ದಿನದಿಂದಲೇ ಭಾರತ ಹಾಗು ಪಾಕಿಸ್ತಾನದ ನಡುವೆ ಉಗ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಆ ಬಳಿಕ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿ, ಉಗ್ರರ ಕುಟುಂಬಗಳನ್ನೇ ಸರ್ವನಾಶ ಮಾಡಿತ್ತು. ಆ ಬಳಿಕ ಪಾಕಿಸ್ತಾನ ಅಪ್ರೋದಿತ ದಾಳಿ ನಡೆಸುವ ಮೂಲಕ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ನಂತರ ಭಾರತವೂ ಕೂಡ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಕೆಲಸ ಮಾಡಿತ್ತು.

ಸ್ವತಃ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನಿವಾಸದ ಬಳಿಯಲ್ಲೇ ಡ್ರೋಣ್ ಸ್ಫೋಟ ಮಾಡುವ ಮೂಲಕ ಭಾರತದ ಸಾಮರ್ಥ್ಯ ಏನು..? ಅನ್ನೋದನ್ನು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ಹಾಗು ಪಾಕಿಸ್ತಾನ ನಡುವೆ ಸೃಷ್ಟಿಯಾಗಿದ್ದ ಆತಂಕದ ಕಾರ್ಮೋಡವನ್ನು ಸರಿಸುವಂತೆ ಒತ್ತಡ ಎದುರಾಗಿತ್ತು. ಆದರೆ ನರಿ ಬುದ್ಧಿಯ ಪಾಕಿಸ್ತಾನ, ಕಳ್ಳನಂತೆ ಭಾರತದ ಗಡಿ ಮೇಲೆ ದಾಳಿ ಮಾಡುವ ಕೆಲಸ ಮಾಡಿತ್ತು.

ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟಿದ್ದ ಭಾರತ, ಪಾಕಿಸ್ತಾನದ ಪ್ರಮುಖ ಏರ್ಬೇಸ್ಗಳನ್ನು ಸ್ಫೋಟ ಮಾಡುವ ಮೂಲಕ ನಾನು ಎಷ್ಟು ಬಲಿಷ್ಠ ಎನ್ನುವುದನ್ನು ತೋರಿಸಿತ್ತು. ಆ ಬಳಿಕ ಪಾಕಿಸ್ತಾನ ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬುದ್ಧಿ ಹೇಳಿಸಲು ಮುಂದಾಗಿತ್ತು. ಆದರೆ ಭಾರತ ಯಾವುದಕ್ಕೂ ಸೊಪ್ಪು ಹಾಕದೆ ಪಾಕ್ನ ಸೊಕ್ಕನ್ನು ಮುರಿಯುವ ಕೆಲಸ ಮಾಡಿತ್ತು. ಅಂತಿಮವಾಗಿ ಅಮೆರಿಕ ಸಂಧಾನವನ್ನು ಫಲಪ್ರಧ ಮಾಡಿದ್ದು, ಪಾಕ್ ಹಾಗು ಭಾರತದ ನಡುವೆ ರಾಜಿ ಸೂತ್ರ ಮುಂದಿಟ್ಟಿದೆ.

ಪಾಕಿಸ್ತಾನದ ಮಿಲಿಟರಿ DG ಭಾರತದ ಮಿಲಿಟರಿ ಅಧಿಕಾರಿ ಜೊತೆಗೆ ಮಾತನಾಡಿದ್ದು, ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆ ಬಳಿಕ ಮೇ 12ರಂದು ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಭಾರತ ಹಾಗು ಪಾಕಿಸ್ತಾನ ತಕ್ಷಣದಿಂದಲೇ ಕದನ ವಿರಾಮ ಘೋಷಣೆಗೆ ಒಪ್ಪಿಕೊಂಡಿದ್ದು, ಎರಡೂ ದೇಶಗಳಿಗೂ ಶುಭಾಶಯಗಳು. ಸಾಮಾನ್ಯ ಜ್ಞಾನವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಎಂದು ಬರೆದುಕೊಂಡಿದ್ದಾರೆ.