ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪನವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪ ಕೇಳಿ ಬಂದಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
![](https://pratidhvani.com/wp-content/uploads/2023/04/1679912857_1661580088_1645295937_bs-yediyurappa.jpg)
2010ರಲ್ಲಿ 15 ಗುಂಟೆ ಅಕ್ರಮವಾಗಿ ಬಿಎಸ್ ಯಡಿಯೂರಪ್ಪನವರ ಸೂಚನೆ ಮೇರೆಗೆ ಡಿನೋಟಿಕೇಷನ್ ಮಾಡಲಾಗಿದೆ ಅಂತ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ. ಬಿಡಿಎ ಅಧಿಕಾರಿಗಳ ವಿರೋಧದ ಮಧ್ಯೆ ಡಿನೋಫೀಕೇಷನ್ ಮಾಡಲಾಗಿತ್ತು. ಈ ಮೂಲಕ ಯಡಿಯೂರಪ್ಪ ಕಿಕ್ ಬ್ಯಾಕ್ ಪಡೆದ ಬಗ್ಗೆ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.
![](https://pratidhvani.com/wp-content/uploads/2023/04/tja_040717-1a.jpg)
ಯಡಿಯೂರಪ್ಪನವರ ಜೊತೆಗೆ ಭೂ ಮಾಲೀಕರು ಹಾಗೂ ಬಿಲ್ಡರ್ ಗಳ ವಿರುದ್ಧವೂ ಟಿ.ಜೆ.ಅಬ್ರಹಾಂ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ.
![](https://pratidhvani.com/wp-content/uploads/2023/04/86c99c28-2dbc-408c-86f1-bec0c920de7e-742x1024.jpg)