ಉತ್ತರ ಪ್ರದೇಶ ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಹಾಗು ಎಸ್ಪಿ ನಾಯಕರ ನಡುವಿನ ಮಾತಿನ ಚಕಮಕಿ ನಡೆಯಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಭೆಯಲ್ಲಿ ಈ ರೀತಿ ಪದ ಬಳಕೆ ಮಾಡಬಾರದು ಇದು ಸದನಕ್ಕೆ ಶೋಭೆ ತರುವುದಿಲ್ಲ ಎಂದು ಕಿವಿಮಾತು ಹೇಳಿದ್ದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಾದ ಕೆಲಸಗಳ ಬಗ್ಗೆ ಹೊಗಳಿದ್ದಾರೆ. ಒಂದು ವೇಳೆ ಅವರು ಮಾಡಿದ ಅಭಿವೃದ್ದಿ ಕೆಲಸಗಳು ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿದ್ದರೆ ಜನರು ಯಾಕೆ ಅವರ ಪಕ್ಷವನ್ನು ಸೋಲಿಸುತ್ತಿದ್ದರು ಎಂದು ಹೇಳಿದ್ದರು.

ಮುಂದುವರೆದು, ನಿಮ್ಮ ಐದು ವರ್ಷಗಳ ಆಡಳಿತಾವಧಿಯಲ್ಲಿ ತಾವು ಎಷ್ಟು ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಿದ್ದಾರೆ ಎಂಬುದರ ಕುರಿತು ಲೆಕ್ಕ ಹಾಕುವಲ್ಲಿ ಸುಸ್ತಾಗಿದ್ದಾರೆ. ನಿಮ್ಮಗೆ ಇರುವ ಖಾಯಿಲೆ ಬಗ್ಗೆ ನಾನೇ ಹೇಳಲ ಅಥವಾ ಪರೀಕ್ಷೆ ಮಾಡಿಸಿಕೊಳ್ಳುತ್ತೀರಾ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಆಗಿರುವ ಹೆದ್ದಾರಿ, ಮೆಟ್ರೋಗಳೆಲ್ಲವು ನಿಮ್ಮ ಸೈಫೈನಲ್ಲಿರುವ ನಿಮ್ಮ ಜಮೀನುಗಳನ್ನು ಮಾರಾಟ ಮಾಡಿ ನಿರ್ಮಿಸಲಾಗಿದೆಯೇ ಎಂದು ಕಿಚಾಯಿಸಿದ್ದಾರೆ.
ಇದಕ್ಕೆ ತೀವ್ರ ಕಸಿವಿಸಿಗೊಂಡ ಅಖಿಲೇಶ್ ಕೇಶವ್ ಪ್ರಸಾದ್ ಮೌರ್ಯ ವಿರುದ್ದ ಅಸಭ್ಯ ಪದಗಳನ್ನು ಉಪಯೋಗಿಸಿದರು ಮತ್ತು ಬಿಜೆಪಿ ಹಾಗು ಎಸ್ಪಿ ನಾಯಕರ ವಿರುದ್ದ ದೊಡ್ಡ ವಾಗ್ವಾದವೇ ನಡೆಯಿತ್ತು ಈ ವೇಳೆ ಮದ್ಯಪ್ರವೇಶಿಸಿದ ಮುಖ್ಯಮಂತ್ರಿ ಯೋಗಿ ಇಬ್ಬರು ನಾಯಕರಿಗೆ ತಿಳಿಹೇಳಿದ್ದರು ಮತ್ತು ಸದನದ ಗೌರವವನ್ನು ಕಾಪಾಡುವಂತೆ ಮನವಿ ಮಾಡಿದ್ದರು.






