ಐಪಿಎಲ್ (Ipl) ಮುಗಿದರೂ ಐಪಿಎಲ್ ನ ಫೀವರ್ ಇನ್ನೂ ಮುಗಿದ ಹಾಗೆ ಕಾಣ್ತಿಲ್ಲ. ಹಲವಾರು ವಿಚಾರಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ವಾರ್ (Fams war) ಇನ್ನೂ ಮುಂದುವರೆದಿದೆ .ಈ ಮಧ್ಯೆ ಅಂಬಟಿ ರಾಯುಡು (Ambati rayudu) ನಸೀಬು ಯಾಕೋ ಕೆಟ್ಟಂತೆ ಕಾಣುತ್ತಿದೆ.
ಐಪಿಎಲ್ 17ರ ಸೀಜನ್ ಅಂತ್ಯದಲ್ಲಿ ವಿರಾಟ್ ಕೊಹ್ಲಿ (Virat kohli) ಆರೆಂಜ್ ಕ್ಯಾಪ್ (orange cap) ಒಡೆಯ ಆದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದ ಅಂಬಟಿ ರಾಯುಡು ಸಾಕಷ್ಟು ಟೀಕೆಗೆ, ನಿಂದನೆಗೆ ಗುರಿಯಾಗಿದ್ದರು .ಇಷ್ಟಾಗಿಯೂ ರಾಯುಡು ಬುದ್ಧಿ ಕಲಿತ ಹಾಗೆ ಕಾಣುತ್ತಿಲ್ಲ .ವಿಶ್ವಕಪ್ ಟಿ20 (T20 world cup) ಸರಣಿಗೆ ಸಂಬಂಧ ಪಟ್ಟಂತೆ ರಾಯುಡು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ವಿಶ್ವ ಕಪ್ ಟಿ20 ಟೀಮ್ ಇಂಡಿಯಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ರಾಯುಡು ಮತ್ತೊಮ್ಮೆ ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನ ಕಡೆಗಣಿಸುವ ಹಾಗೆ ಮಾತನಾಡಿದ್ದಾರೆ. ಈ ಬಾರಿ ವಿಶ್ವಕಪ್ ನಲ್ಲಿ ಸೂರ್ಯಕುಮಾರಿ ಯಾದವ್ ,ರೋಹಿತ್ ಶರ್ಮ ,ಹಾರ್ದಿಕ್ ಪಾಂಡ್ಯ ,ಮತ್ತು ಭೂಮ್ರಾ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಹೊರತು ವಿರಾಟ್ ಕೊಹ್ಲಿ ಅಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಕಿಂಗ್ ಫಾನ್ಸ್ ಮತ್ತೊಮ್ಮೆ ರಾಯುಡುಗೆ ಕ್ಲಾಸ್ ತಗೊಂಡಿದ್ದಾರೆ.