ಬೆಂಗಳೂರು :ಏ.೧೨: ಕೆಡಿ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್ ಗಾಯಗೊಂಡಿದ್ದಾರೆ. ಕೆಡಿ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್ಗೆ ಗಾಯವಾಗಿದ್ದು ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಾಂಬ್ ಬ್ಲಾಸ್ಟ್ ಸನ್ನಿವೇಶ ಚಿತ್ರೀಕರಿಸುವ ವೇಳೆ ಸಂಜಯ್ ದತ್ ಗೆ ಗಾಯವಾಗಿದೆ. ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ನಡೆಯುತ್ತಿದ್ದ ಕೇಡಿ ಶೂಟಿಂಗ್ ಸಂದರ್ಭ ಅವಘಡ ಸಂಭವಿಸಿ ಅಪಾಯವಾಗಿದೆ. ಬಾಂಬ್ ಬ್ಲಾಸ್ಟ್ ಆದ ವೇಳೆ ಗ್ಲಾಸ್ ಪೀಸ್ ಸಂಜಯ್ ದತ್ ಕಣ್ಣಿನ ಕೆಳಭಾಗದಲ್ಲಿ ಬಿದ್ದಕಾರಣ ಸಣ್ಣ ಗಾಯವಾಗಿದೆ. ಗಾಯವಾದ ಕಾರಣ ಕೆಡಿ ಚಿತ್ರತಂಡ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ನಟ ಸಂಜಯ್ ದತ್ ಅವರಿಗೆ ಗಂಭೀರ ಗಾಯವಾಗಿಲ್ಲ, ಸದ್ಯ ಸಂಜಯ್ ದತ್ ಮುಂಬೈಗೆ ವಾಪಸ್ ತೆರಳಿದ್ದಾಗಿ ತಿಳಿದುಬಂದಿದೆ. ಇಂದು ಎಚ್ ಎಮ್ ಟಿಯಲ್ಲಿ ಕೇಡಿ ಚಿತ್ರತಂಡ ಮತ್ತೆ ಶೂಟಿಂಗ್ ಮಾಡುತ್ತಿದೆ. ಮಂಗಳವಾರ ಸಾಯಂಕಾಲ ಘಟನೆ ನಡೆದಿದ್ದು ಫ್ಯಾನ್ಸ್ ಆತಂಕಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸಂಜಯ್ ದತ್, ನನಗೆ ಯಾವುದೇ ಗಂಭೀರ ಗಾಯವಾಗಿಲ್ಲ, ದೇವರ ದಯಯಿಂದ ಸಣ್ಣ ಪ್ರಮಾಣದ ಗಾಯವಾಗಿದೆ, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.