ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಡೋನೆಷನ್ ಆಫ್ ಅಪ್ಪು ಎಕ್ಸ್ ಪ್ರೆಸ್ ಗೆ ಮೈಸೂರಲ್ಲಿ ಚಾಲನೆ ದೊರೆಯಿತು.
ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಸ್ ಐ ಹೋಲ್ಡ್ಸ್ ವರ್ತ್ ಮೆಮೊರಿಯಲ್ (ಮಿಷನ್) ಆಸ್ಪತ್ರೆ ಹಾಗೂ ಪ್ರಕಾಶ್ ರಾಜ್ ಫೌಂಡೇಶನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು.
ಬಳಿಕ ಮಾತನಾಡಿದ ಪ್ರಕಾಶ್ ರಾಜ್, ಅಪ್ಪು ಅಗಲಿದಾಗ ಇಡೀ ರಾಜ್ಯ ನೋವು ಅನುಭವಿಸಿ, ಅನಾಥ ಭಾವನೆ ಕಂಡು ಬಂದಿತು. ಇದುವರೆವಿಗೂ ಆತನ ಅಗಲಿಕೆ ಬಗ್ಗೆ ಮಾತನಾಡಲಾರದಷ್ಟು ದುಖಃ, ನೋವು ಇತ್ತು. ಅವರನ್ನು ಕೇವಲ ಒಂದೆರಡು ಚಿತ್ರಗಳ ಬಾಂಧವ್ಯ ಅಷ್ಟೇ ಅಲ್ಲ. ನಾಲ್ಕನೇ ವರ್ಷದಲ್ಲಿ ರಾಷ್ಟ್ರಪತಿ ಪದಕದಿಂದ ಹಿಡಿದು ಸಾಯುವವರೆಗಿನ ಕೊನೆಯಲ್ಲೂ ಅವರು ಮಾಡಿದ ಅನನ್ಯ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಅವರ ಸಾಧನೆ ಮತ್ತೊಂದಷ್ಟು ದಿನ ರಾಜ್ಯಕ್ಕೆ ಅಗತ್ಯವಾಗಿತ್ತು. ಕೋವಿಡ್ ನಲ್ಲಿ ನನ್ನ ಕಾರ್ಯನೋಡಿ ರಾಜ್ ಕುಮಾರ್ ಫೌಂಡೇಶನ್ ನಿಂದ 2 ಲಕ್ಷವನ್ನು ನೀಡಿದ್ದರೂ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಆ ವ್ಯಕ್ತಿ ಇದ್ದಿದ್ದಾಗ ಮಾಡುವ ಕೆಲಸವನ್ನು ನಾವು ಮಾಡಿದಾಗಲಲ್ಲವೇ ಆ ವ್ಯಕ್ತಿಯನ್ನು ಜೀವಂತವಾಗಿ ಇರಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಬಡವರಿಗಾಗಿ ಕೆಲಸ ಮಾಡುತ್ತಿರುವ ಶತಮಾನ ಪೂರೈಸಿರುವ ಮಿಷನ್ ಆಸ್ಪತ್ರೆಗೆ ಅಂಬುಲೆನ್ಸ್ ಇದನ್ನು ಕೊಡುಗೆ ನೀಡಲು ಮಾಡಲಾಯಿತು. ಇದು ಕೇವಲ ಆರಂಭ ಅಷ್ಟೇಯಾಗಿದ್ದು, ಅಪ್ಪು ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಪ್ಪು ಹೆಸರಿನ ಅಂಬುಲೆನ್ಸ್ ನೀಡಬೇಕೆಂಬ ದ್ಯೇಯವಿದೆ. ಇದರೊಟ್ಟಿಗೆ ಈ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣಕ್ಕೆ ಆಸ್ಪತ್ರೆ ಜಾಗ ಕೊಡಲು ಒಪ್ಪಿದ್ದಾರೆ. ಅದನ್ನು ಮಾಡಲು ನಿಶ್ಚಿಯಿಸಿದ್ದೇವೆ. ಆ ಮೂಲಕ ಸಮಾಜಮುಖಿ ಕೆಲಸವನ್ನು ನಾವು ಮಾಡುವ ಮೂಲಕ ಅವರನ್ನು ಜೀವಂತವಾಗಿ ಇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.