ಕಳೆದ ಹತ್ತು ದಿನಗಳ ಹಿಂದೆ ನಾದ ಬ್ರಹ್ಮ ಹಂಸಲೇಖ ಅವರು ದಲಿತ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಇದು ಹಿಂದೂ ಧರ್ಮಕ್ಕೆ ಮತ್ತು ನಂಬಿಕೆಗೆ ಮಾಡಿದ ಅವಮಾನ ಎಂದು ಬಸವನ ಗುಡಿ ಪೋಲಿಸ್ ಠಾಣೆಗೆ ದೂರು ದಾಖಲಾದ ಹಿನ್ನೆಲೆ ಅವರನ್ನು ವಿಚಾರಣೆಗೆ ಕರೆಯಲಾಗುತ್ತು. ಇಂದು ಗುರುವಾರ ವಿಚಾರಣೆಗೆ ಹಾಜರಾಸ ಹಂಸಲೇಖ ಅವರೊಂದಿಗೆ ಬೆಂಬಲರ್ಥವಾಗಿ ಬಂದಿದ್ದ ನಟ ಚೇತನ್ ವಿರುದ್ಧ ಭಜರಂಗದಳ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳು ಅವರ ವಿರುದ್ಧ ಪ್ರತಿಭಟನೆ ಮಾಡಿವೆ.
ಪ್ರತಿಭಟನೆ ಮಾಡುತ್ತಿದ್ದ ಗುಂಪನ್ನು ಪೋಲಿಸಲು ಪ್ರಶ್ನಿಸಿದಾಗ, ನಟ ಚೇತನ್ ಈ ದೇಶದ ಪ್ರಜೆಯೇ ಅಲ್ಲ ಆದರೆ ಮಾಂಹಹಾರಿ ಮತ್ತು ಸಸ್ಯಹಾರಿಗಳ ನಡುವೆ ತಂದಿಟ್ಟು ಧರ್ಮ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ದೇಶ ದ್ರೋಹಿ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ನಟ ಚೇತನ್, ಗುರುವಾರ ಹಂಸಲೇಖ ಅವರು ಠಾಣೆಗೆ ಹಾಜರಾಗಲಿದ್ದಾರೆ ಅವರ ಜೊತೆ ನಾನು ನಿಲ್ಲುತ್ತೇನೆ ನಾನು ಬರುತ್ತಿದ್ದೇನೆ ಎಂದು ಹೇಳಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದೂ ಪರ ಸಂಘಟನೆ ನಟ ಚೇತನ್ ಯಾಕೆ ಬರಬೇಕು ಅವರು ಬಂದರೆ ಠಾಣೆಯ ಮುಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೆಚ್ಚರಿಕೆ ನೀಡಿದ್ದರು. ಅವರು ಬಂದ ಕೂಡಲೇ ಸಂಘಟನೆಗಳು ಪ್ರತಿಭಟನೆಯಲ್ಲಿ ನಿರತವಾಗಿವೇ.






