ಎಲ್ಗಾರ್ ಪರಿಷತ್ನಲ್ಲಿ (Elgar Parishad) ಪ್ರಚೋದನಕಾರಿ ಭಾಷಣ ಮತ್ತು ಮಾವೋವಾದಿ ನಂಟು ಪ್ರಕರಣದ ಆರೋಪಿ ಕವಿ ಮತ್ತು ಸಮಾಜಿಕ ಹೋರಾಟಗಾರ ವರವರ ರಾವ್ (Varavara Rao) ಅವರ ವೈದ್ಯಕೀಯ ಜಾಮೀನನ್ನು ಬಾಂಬೆ ಹೈಕೋರ್ಟ್ ಶನಿವಾರ ಮಾರ್ಚ್ 3ರವರೆಗೆ ವಿಸ್ತರಿಸಿದೆ.
ವರವರ ರಾವ್ (82), ಅವರು ಮೊದಲ ಬಾರಿಗೆ ಆರೋಗ್ಯದ ಆಧಾರದ ಮೇಲೆ ಫೆಬ್ರವರಿ 2021 ರಲ್ಲಿ ಆರು ತಿಂಗಳ ಕಾಲ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದರು. ಷರತ್ತನ್ನು ವಿಧಿಸಿ ರಾಔ ಅವರಿಗೆ ಮುಂಬೈ ಕೋರ್ಟ್ (Bombay High Court ) ವೈದ್ಯಕೀಯ ಜಾಮೀನಿ ನೀಡಿತ್ತು. ನಂತರ ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಶ್ವತ ಜಾಮೀನು (permanent bail) ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.
ಸೆಪ್ಟೆಂಬರ್ 2021 ರಿಂದ ನ್ಯಾಯಾಲಯವು ಅವರಿಗೆ ಶರಣಾಗಲು ನೀಡಿದ್ದ ಸಮಯವನ್ನು ಹಲವಾರು ಬಾರಿ ವಿಸ್ತರಿಸಿದೆ. ಶನಿವಾರ, ರಾವ್ ಅವರ ವಕೀಲರು ನ್ಯಾಯಮೂರ್ತಿಗಳಾದ ಎಸ್ಬಿ ಶುಕ್ರೆ ಮತ್ತು ಎಎಂ ಬೋರ್ಕರ್ (Justices SB Shukre and AM Borkar) ಅವರ ವಿಭಾಗೀಯ ಪೀಠದ ಮುಂದೆ ಜಾಮೀನು ವಿಸ್ತರಣೆ ಕೋರಿ ಅವರ ಹೊಸ ಮನವಿಯನ್ನು ಪ್ರಸ್ತಾಪಿಸಿದರು.
ವೈದ್ಯಕೀಯ ವರದಿಗಳ ಪ್ರಕಾರ ಅವರು ರೋಗಲಕ್ಷಣಗಳಿಲ್ಲದ ಪಾರ್ಕಿನ್ಸನ್ ಕಾಯಿಲೆ, ನರವೈಜ್ಞಾನಿಕ ಕಾಯಿಲೆಗಳನ್ನು ಹೊಂದಿದ್ದಾರೆ ಮತ್ತು ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಎಂದು ರಾವ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಮುಂಬೈ ತೊರೆಯಬಾರದು ಎಂಬ ಜಾಮೀನು ಷರತ್ತನ್ನು ಮಾರ್ಪಾಡು ಮಾಡುವಂತೆ ಕೋರಿದ ಅವರು, ತಮ್ಮ ಸ್ಥಳೀಯ ರಾಜ್ಯವಾದ ತೆಲಂಗಾಣಕ್ಕೆ ಮರಳಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಮಾರ್ಚ್ 1 ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ ಶರಣಾಗತಿಗೆ ಮಾರ್ಚ್ 3 ರವರೆಗೆ ಸಮಯವನ್ನು ವಿಸ್ತರಿಸಿದೆ.
ಈ ವಾರದ ಆರಂಭದಲ್ಲಿ, ನ್ಯಾಯಮೂರ್ತಿ ಎಸ್ಎಸ್ ಶಿಂಧೆ ನೇತೃತ್ವದ ಪೀಠವು ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳಿಂದ ಹಿಂದೆ ಸರಿಯಿತು (ಹಿಂತೆಗೆದುಕೊಳ್ಳಲಾಗಿದೆ). ನಂತರ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ನ್ಯಾಯಮೂರ್ತಿ ಶುಕ್ರೆ ನೇತೃತ್ವದ ಪೀಠಕ್ಕೆ ಪ್ರಕರಣಗಳನ್ನು ನಿಯೋಜಿಸಿದರು.
ಈ ಪ್ರಕರಣವು 2017 ರ ಡಿಸೆಂಬರ್ 31 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದಕ ಭಾಷಣಗಳಿಗೆ ಸಂಬಂಧಿಸಿದೆ, ಇದು ಮರುದಿನ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಪುಣೆ ಪೊಲೀಸರು, ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಹೇಳಿದ್ದರು. ನಂತರ ಎನ್ಐಎ ತನಿಖೆಯನ್ನು ವಹಿಸಿಕೊಂಡಿತ್ತು. ರಾವ್ ಅವರನ್ನು ಹೊರತುಪಡಿಸಿ, ಹಲವಾರು ಇತರ ಕಾರ್ಯಕರ್ತರನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.