• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉತ್ತರ ಪ್ರದೇಶ: ಯೋಗಿ ಸರ್ಕಾರದ ವಿರುದ್ದ ಬಹುಕೋಟಿ ಹಗರಣದ ಆರೋಪ

Shivakumar A by Shivakumar A
August 10, 2021
in ದೇಶ, ರಾಜಕೀಯ
0
ಉತ್ತರ ಪ್ರದೇಶ: ಯೋಗಿ ಸರ್ಕಾರದ ವಿರುದ್ದ ಬಹುಕೋಟಿ ಹಗರಣದ ಆರೋಪ
Share on WhatsAppShare on FacebookShare on Telegram

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರದ ಮೇಲೆ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿದೆ. ಆಮ್ ಆದ್ಮಿ ಪಾರ್ಟಿಯ ಸಂಸದರಾದ ಸಂಜಯ್ ಸಿಂಗ್ ಅವರು ದಾಖಲೆಗಳ ಸಮೇತ ಹಗರಣವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಹಗರಣ ನಡೆದಿರುವ ಕುರಿತು ಆರೋಪಗಳು ಕೇಳಿ ಬಂದಿವೆ. ಸಂಜಯ್ ಸಿಂಗ್ ಅವರ ಪ್ರಕಾರ ಯೋಜನೆಯ ಪೈಪ್ ಲೈನ್ ಕಾಮಗಾರಿಯ ಗುತ್ತಿಗೆಯನ್ನು ಬಿಜೆಪಿ ಸಚಿವರಾಗಿರುವ ಡಾ. ಮಹೇಂದ್ರ ಸಿಂಗ್ ಅವರ ಕಂಪನಿಗೆ ನೀಡಲಾಗಿದೆ. ಈ ಕಂಪೆನಿಯನ್ನು ಎಂಟು ರಾಜ್ಯಗಳು ಕಳಪೆ ಕಾಮಗಾರಿಗಾಗಿ ತಿರಸ್ಕರಿಸಿವೆ. ಈ ಕಂಪನಿಯ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಿವೆ. ಇಂತಹ ಕಂಪನಿಗೆ, ಮೂಲ ಅಂದಾಜು ಬೆಲೆಗಿಂತ 40% ಹೆಚ್ಚಿನ ದರಕ್ಕೆ ಟೆಂಡರ್ ನೀಡಲಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಅಭಿವೃದ್ದಿ ಕಾಮಗಾರಿಗಳ ವೇಗ ಹೆಚ್ಚಿಸುವ ಸಲುವಾಗಿ ಇತ್ತೀಚಿಗೆ ಕೇಂದ್ರ ಸರ್ಕಾರ ಜಲ ಶಕ್ತಿ ಇಲಾಖೆಯು ರೂ. 2,400 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡಿತ್ತು. 2019-20ರಲ್ಲಿ ಕೇಂದ್ರ ಸರ್ಕಾರವು ರೂ. 1,206 ಕೋಟಿ ಮೊತ್ತವನ್ನು ಇದೇ ಯೋಜನೆಯ ಅಡಿಯಲ್ಲಿ ಉತ್ತರ ಪ್ರದೇಶಕ್ಕೆ ಮೀಸಲಿಟ್ಟಿತ್ತು. ಇದನ್ನು ನಂತರ ರೂ. 2,571 ಕೋಟಿಗೆ ಏರಿಸಲಾಗಿತ್ತು.

ಉತ್ತರ ಪ್ರದೇಶದ ಪ್ರತೀ ಮನೆಗಳಿಗೆ ನಲ್ಲಿ ನೀರು ನೀಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿತ್ತು. ಇಂತಹ ಬೃಹತ್ ಯೋಜನೆಯಲ್ಲಿ ಈಗ ಭೃಷ್ಟಾಚಾರ ಹೊಗೆಯಾಡುತ್ತಿದೆ. ಟೆಂಡರ್ ಪಡೆಯಲು ಅರ್ಹತೆಯೇ ಇಲ್ಲದಿರುವಂತಹ ಕಂಪೆನಿಯೊಂದಕ್ಕೆ ನೂರಾರು ಕೋಟಿ ಮೊತ್ತದ ಗುತ್ತಿಗೆ ನೀಡಿರುವುದು ಈಗ ಆಪ್ ಬಹಿರಂಗಪಡಿಸಿದೆ.

https://www.facebook.com/206782119437351/posts/4244510745664448/?sfnsn=wiwspmo

“ಜಲ ಜೀವನ್ ಮಿಷನ್ ಒಂದು ಪವಿತ್ರವಾದ ಯೊಜನೆ. ಆದರೆ, ಯೋಗಿ ಸರ್ಕಾರ ಇದರಲ್ಲಿಯೂ ಹಗರಣ ನಡೆಸಿದೆ. ನೀರಿನ ಹೆಸರಿನಲ್ಲಿ ಭೃಷ್ಟಾಚಾರ ನಡೆಸಲು ಸರ್ಕಾರದ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸ್ವೇಚ್ಚತೆ ನೀಡಲಾಗಿದೆ,” ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ.

ಈ ಹಗರಣದ ಕುರಿತಾಗಿ ಹೈಕೋರ್ಟ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು. ಇಲ್ಲದಿದ್ದರೆ, ಉಗ್ರವಾದ ಹೋರಾಟ ನಡೆಸುವುದಾಗಿ ಆಪ್ ಎಚ್ಚರಿಕೆ ನಿಡಿದೆ.

जल जीवन मिशन:Yogi सरकार ने किया हजारों करोड़ का SCAM

घटिया Quality की Pipe लगाई

Empanelled Company को न देकर Blacklisted Co. को दिया ठेका

BJP MLA ने करोड़ों की वसूली का लगाया आरोप

मैं चैलेंज करता हूँ-BJP मंत्री कागजों के साथ आए, दूध का दूध पानी का पानी हो जाएगा-@SanjayAzadSln pic.twitter.com/JAJtp1pJxW

— AAP (@AamAadmiParty) August 9, 2021

जल जीवन मिशन:Yogi सरकार ने किया हजारों करोड़ का SCAM

घटिया Quality की Pipe लगाई

Empanelled Company को न देकर Blacklisted Co. को दिया ठेका

BJP MLA ने करोड़ों की वसूली का लगाया आरोप

मैं चैलेंज करता हूँ-BJP मंत्री कागजों के साथ आए, दूध का दूध पानी का पानी हो जाएगा-@SanjayAzadSln pic.twitter.com/JAJtp1pJxW

— AAP (@AamAadmiParty) August 9, 2021

ಇನ್ನು ಯೋಗಿ ಆದಿತ್ಯನಾಥ್ ವಿರುದ್ದ ಮತ್ತಷ್ಟು ಆರೋಪ ಮಾಡಿರುವ ಸಂಜಯ್ ಸಿಂಗ್, ಈ ಹಿಂದೆಯೂ ಆಮ್ ಆದ್ಮಿ ಪಾರ್ಟಿ ಹಲವು ಹಗರಣಗಳ ಕುರಿತು ಬೆಳಕು ಚೆಲ್ಲಿತ್ತು. ವೆಂಟಿಲೇಟರ್ ಹಗರಣ, ಆಕ್ಸಿಮೀಟರ್ ಹಗರಣ, ರಾಮ ಮಂದಿರ ದೇಣಿಗೆ ಸಂಗ್ರಹ ಹಗರಣ ಹೀಗೆ ದೊಡ್ಡ ಪಟ್ಟಿಯೇ ಇದೆ. ಆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕನಿಷ್ಟ ಪಕ್ಷ ಜಲ ಜೀವನ್ ಮಿಚನ್ ಯೋಜನೆಯಲ್ಲಿ ನಡೆದಿರುವ ಹಗರಣ ಕುರಿತಾದರೂ ಯೋಗಿ ಆದಿತ್ಯನಾಥ್ ಕ್ರಮ ಕೈಗೊಳ್ಳಬೇಕು.

Tags: BJPsanjay singhUttar PradeshYogi Adityanathಬಿಜೆಪಿ
Previous Post

ನ್ಯಾಯಾಧೀಶರ ನೇಮಕ ವಿಳಂಬ: ಇಲ್ಲೂ ಸಂಘ ಸಿದ್ಧಾಂತಿಗಳಿಗೆ ಮೋದಿ ಸರ್ಕಾರ ಕಾಯುತ್ತಿದೆಯೇ?

Next Post

ಬೆಂಗಳೂರಿನ ಎರಡು ಕಡೆ ಮಾನವ ಕಳ್ಳಸಾಗಣೆ ಅಡ್ಡೆ ಮೇಲೆ ದಾಳಿ ನಡೆಸಿದ NIA !

Related Posts

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

by ಪ್ರತಿಧ್ವನಿ
April 29, 2026
0

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ...

Read moreDetails
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
Next Post
ಬೆಂಗಳೂರಿನ ಎರಡು ಕಡೆ ಮಾನವ ಕಳ್ಳಸಾಗಣೆ ಅಡ್ಡೆ ಮೇಲೆ ದಾಳಿ ನಡೆಸಿದ NIA !

ಬೆಂಗಳೂರಿನ ಎರಡು ಕಡೆ ಮಾನವ ಕಳ್ಳಸಾಗಣೆ ಅಡ್ಡೆ ಮೇಲೆ ದಾಳಿ ನಡೆಸಿದ NIA !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada