• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮಸ್ಕಿ ನೀರಾವರಿ ಹೋರಾಟಕ್ಕೆ ಒಂದು ವರ್ಷ; ಉಪ ಚುನಾವಣೆ ಫಲಿತಾಂಶ ನಿರ್ಧರಿಸಿದ ಹೋರಾಟ!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 18, 2021
in ಕರ್ನಾಟಕ
0
ಮಸ್ಕಿ ನೀರಾವರಿ ಹೋರಾಟಕ್ಕೆ ಒಂದು ವರ್ಷ; ಉಪ ಚುನಾವಣೆ ಫಲಿತಾಂಶ ನಿರ್ಧರಿಸಿದ ಹೋರಾಟ!
Share on WhatsAppShare on FacebookShare on Telegram

ಹಿಂದುಳಿದ ಜಿಲ್ಲೆಯೊಂದರ ಪುಟ್ಟ ತಾಲೂಕಿನ 58 ಗ್ರಾಮಗಳ ಜನತೆ ನೀರಾವರಿ ಕಾಲುವೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ನವೆಂಬರ್‌ 20ರಂದು ಒಂದು ವರ್ಷ ತುಂಬಲಿದೆ.

ADVERTISEMENT

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ 58 ಗ್ರಾಮಗಳು ಸತತ ಒಂದು ವರ್ಷದಿಂದ ನೀರಾವರಿ ನಾಲೆಗಾಗಿ ಹೋರಾಟ ನಡೆಸುತ್ತಿದ್ದಾರೆ.  ಈ ಯೋಜನೆ ಅನುಷ್ಠಾನವಾದರೆ  107 ಗ್ರಾಮಗಳ 1 ಲಕ್ಷ 20 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ,

 ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಭರವಸೆಗಳಲ್ಲಿ ಇವರಿಗೆ ನಂಬಿಕೆ ಇಲ್ಲ. ಯೋಜನೆ ಅನುಷ್ಠಾನ ಆರಂಭವಾದ ನಂತರವಷ್ಟೇ ಹೋರಾಟ ಅಂತ್ಯ ಮಾಡಲಿದ್ದಾರೆ. ಸದ್ಯ ಕೃಷಿ ಕಾರ್ಯಗಳನ್ನು ಮಾಡುತ್ತಲೇ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುತ್ತಿದ್ದಾರೆ.

ಅದರಂತೆ ದೆಹಲಿಯಲ್ಲಿ ನಡೆದಿರುವ ರೈತ ಮಾದರಿ ಹೋರಾಟಕ್ಕೂ ಒಂದು ವಾರ ಮುಂಚೆ ಮಸ್ಕಿ ಹೋರಾಟ ಶುರುವಾಗಿತ್ತು.

ಐದು ತಿಂಗಳ ಹಿಂದೆ ನಡೆದ ಮಸ್ಕಿ ಉಪ ಚುನಾವಣೆಯ ಫಲತಾಂಶದ ಮೇಲೆ ಈ ಹೋರಾಟ ಪ್ರಭಾವ ಬೀರಿತು. ʼಬಿಜೆಪಿಯನ್ನು ಸೋಲಿಸಿʼ ಎಂದು ಪ್ರತಿಭಟನಾಕಾರರು ಜನರಲ್ಲಿ ಮನವಿ ಮಾಡಿದರು. ಬಿಜೆಪಿಯ ಪ್ರತಾಪಗೌಡ ಪಾಟೀಲರು ನೀರಾವರಿ ನಾಲೆ ಸ್ಥಾಪಿಸಲು ಅಡ್ಡಿಯಾಗಿದ್ದನ್ನು ಜನರಿಗೆ ಮನವರಿಕೆ ಮಾಡಲಾಗಿತು. ಇದರ ಪರಿಣಾಮ ಕ್ಷೇತ್ರದ ಎಲ್ಲ ಕಡೆಯೂ ಸಂಚಲನ ಮೂಡಿದ್ದರಿಂದ, ಸಾಕಷ್ಟು ಹಣ-ಹೆಂಡ ಹರಿಸಿಯೂ,,ಸಚಿವರ ದಂಡೇ ನೆರೆದಿದ್ದರೂ ಬಿಜೆಪಿಗೆ ಸೋಲಾಗಿತು.

ಏನಿದು ಹೋರಾಟ?

 ಕೃಷ್ಣಾ ಬಲದಂಡೆ ಯೋಜನೆಯಲ್ಲಿ (ಯುಕೆಪಿ) ಆಲಮಟ್ಟಿಯಲ್ಲಿ ಬೃಹತ್‌ ಡ್ಯಾಮ್‌ ನಿರ್ಮಿಸಲಾಗಿದೆ. ಕಲಬುರ್ಗಿ-ವಿಜಯಪುರದ ಗಡಿಗಳ ಸಮೀಪ ನಾರಾಯಣಪುರ ಎಂಬಲ್ಲಿ ಬಸವ ಜಲಾಶಯ ನಿರ್ಮಿಸಲಾಗಿದೆ. ನಾರಾಯಣಪುರ ಬಲದಂಡೆ ಕಾಲುವೆ ಯೋಜನೆಯಡಿ ಹಲವು ಕಾಲುವೆಗಳನ್ನು ನಿರ್ಮಿಸಿ, ನೂರಾರು ಹಳ್ಳಿಗಳ ಭೂಮಿಗೆ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಈಗ ಮಸ್ಕಿ ಹೋರಾಟಗಾರರು ಎನ್‌ಆರ್‌ಬಿಸಿ-5A ನಾಲೆ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆ 12 ವರ್ಷಗಳಿಂದ ಇದ್ದರೂ ಯಾವ ಸರ್ಕಾರವೂ ಯೋಜನೆಯ ಸಾಕಾರಕ್ಕೆ ಶ್ರಮಿಸಲೇ ಇಲ್ಲ. ಕಳೆದ ವರ್ಷ ನವೆಂಬರ್‌ 20ರಿಂದ ಎನ್‌ಆರ್‌ಬಿಸಿ-5A ಪಾಮನಕಲ್ಲೂರು ಕಾಲುವೆ ಹೋರಾಟ ಸಮಿತಿ ಕರ್ನಾಟಕ ನೀರಾವರಿ ಸಂಘಗಳ ಆಶ್ರಯದಲ್ಲಿ ರೈತರು ಹೋರಾಟ ಆರಂಭಿಸಿದರು.

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಬಿಜೆಪಿ ಪ್ರಣಾಳಿಕೆಯಲ್ಲೂ ಇದನ್ನು ಸೇರಿಸಿದ್ದರು. ಮುಂದೆ ಸಮ್ಮಿಶ್ರ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರ ಈ ಯೋಜನೆಗೆ ಗಮನ ನೀಡಲೇ ಇಲ್ಲ. ಹೋರಾಟ ಸಮಿತಿಯವರು ಸುಮಾರು 12-13  ಸಲ ನಿಯೋಗ ಒಯ್ದು ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಮತ್ತು ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಇಲ್ಲಿ ಕಾಂಗ್ರೆಸ್‌ನಿಂದ ಎಂಎಲ್‌ಎ ಆಗಿ ಆಪರೇಷನ್‌ ಕಮಲದಲ್ಲಿ ಬಿಜೆಪಿ ಪಾಲಾಗಿ ಶಾಸಕತ್ವ ಕಳೆದುಕೊಂಡಿದ್ದ ಪ್ರತಾಪಗೌಡ ಪಾಟೀಲರು ಎಂದೂ ಈ ಹೋರಾಟದ ಪರ ಪ್ರಾಮಾಣಿಕವಾಗಿ ನಿಲ್ಲಲಿಲ್ಲ. ಅವರಿಗೆ ಈ ನಾಲಾ ಯೋಜನೆಗಿಂತ ಸಾವಿರಾರು ಕೋಟಿ ರೂ. ವೆಚ್ಚದ ವಟಕಲ್‌ ಬಸವಣ್ಣ ಏತ ನೀರಾವರಿ ಬಗ್ಗೆ ಆಸಕ್ತಿಯಿತ್ತು.

ಉಪಚುನಾವಣೆಯಲ್ಲಿ ಬಿಜೆಪಿಗೆ ಪಾಠ

ಪ್ರಚಾರದ ವೇಳೆ ಹೋರಾಟದ ಸ್ಥಳಕ್ಕೆ ಬಂದ ಸಚಿವ ಶ್ರೀರಾಮುಲು ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಪ್ರತಾಪಗೌಡ ಪರವಾಗಿ ಶ್ರೀರಾಮುಲು ಕ್ಷಮೆ ಕೇಳಿದರ ಜನರು ಅವರಿಗೆ ಸ್ಪಂದಿಸದೇ ವಾಪಾಸ್‌ ಕಳಿಸಿದರು.

ಹೋರಾಟಗಾರರನ್ನು ಭೇಟಿಯಾದ ಸಿದ್ದರಾಮಯ್ಯ ಮಾತ್ತು ಡಿ.ಕೆ. ಶಿವಕುಮಾರ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 3 ಸಾವಿರ ಕೋಟಿ ರೂ.ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು. ಅಂತಿಮದಲ್ಲಿ ಬಿಜೆಪಿ 14 ಸಾವಿರ ಮತಗಳಿಂದ ಸೋತಿತು.

ಈಗಲೂ ಹೋರಾಟ ನಿಂತಿಲ್ಲ. ದೆಹಲಿ ಹೋರಾಟದ ಮಾದರಿಯಲ್ಲೇ ಇಲ್ಲೂ ಯೋಜನೆ ಅನುಷ್ಠಾನ ಆಗುವವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿದೆ.

ಸದ್ಯ ತಿಮ್ಮನಗೌಡ ಚಿಲಕರಾಗಿ, ನಾಗರಡ್ಡೆಪ್ಪ ತಿಮ್ಮರೆಡ್ಡಿ, ಬಸವರಾಜಪ್ಪಗೌಡ ಹರಾಪೂರ, ನಾಗರಡೆಪ್ಪ ದೇವರೂರು, ಶಿವನಗೌಡ ವಟಗಲ್‌ ಹೋರಾಟದ ನಾಯಕತ್ವ ವಹಿಸಿದ್ದಾರೆ.

ಪಾಮನಕಲ್ಲೂರು, ವಟಗಲ್‌, ಅಮಿನಗಡ, ಚಿಲಕರಾಗಿ, ಅಂಕುಶದೊಡ್ಡಿ ಮುಂತಾದ 58 ಗ್ರಾಮಗಳ ಜನತೆ ಪಾಳಿ ರೂಪದಲ್ಲಿ ಭಾಗಿಯಾಗುತ್ತಿದ್ದಾರೆ.

ಒಂದು ವರ್ಷ ಮುಗಿಯುವ ಸಂದರ್ಭದಲ್ಲಿ ದೆಹಲಿ ರೈತ ನಾಯಕರು ಇಲ್ಲಿಗೆ ಭೇಟಿ ನೀಡಲಿದ್ದಾರೆ.

Tags: BJPCongress PartyFirst AniiversarymaskiRaichurನೀರಾವರಿಹೋರಾಟಬಿಜೆಪಿ
Previous Post

2023 ಚುನಾವಣೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ಫೈಟ್ ; ಜಮೀರ್ vs ಹ್ಯಾರಿಸ್!

Next Post

2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ 400% ಹೆಚ್ಚಳ: NCRB ಡೇಟಾ

Related Posts

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
0

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹೋಳಾಗಿದ್ದು, ಜನರ ಪಾಲಿಗೆ ಗೋಳು ಹಾಗೂ ರೈತರಿಗೆ ಹೂಳು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ. https://youtu.be/08RCmq0_6ZY?si=TI6mlA8BZyxXTGUN ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ...

Read moreDetails
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

November 21, 2025
Next Post
2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ 400% ಹೆಚ್ಚಳ: NCRB ಡೇಟಾ

2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ 400% ಹೆಚ್ಚಳ: NCRB ಡೇಟಾ

Please login to join discussion

Recent News

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada