• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ವೈರಲ್ ಫೋಟೋಗಳು, ಘಾಸಿಗೊಂಡ ಇಗೋ ಮತ್ತು ಕರ್ನಾಟಕದ ಹಿಜಾಬ್ ಬಿಕ್ಕಟ್ಟು

ಫಾತಿಮಾ by ಫಾತಿಮಾ
February 12, 2022
in ಅಭಿಮತ, ಕರ್ನಾಟಕ
0
ವೈರಲ್ ಫೋಟೋಗಳು, ಘಾಸಿಗೊಂಡ ಇಗೋ ಮತ್ತು ಕರ್ನಾಟಕದ ಹಿಜಾಬ್ ಬಿಕ್ಕಟ್ಟು
Share on WhatsAppShare on FacebookShare on Telegram

ಕರ್ನಾಟಕದ ಹಿಜಾಬ್ ವಿವಾದ ದೇಶ ವಿದೇಶಗಳ ಗಮನ ಸೆಳೆದಿದೆ. ಮಲಾಲಾರಿಂದ ಹಿಡಿದು ಯುಎಇ ರಾಜಕುಮಾರಿಯವರೆಗೆ ಹಲವಾರು ಹಿಜಾಬ್ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಡಿಸೆಂಬರ್‌ನಲ್ಲೇ ಪ್ರಾರಂಭವಾದ ಹಿಜಾಬ್ ವಿವಾದ ಜನವರಿಯಲ್ಲಿ ಉತ್ತುಂಗಕ್ಕೇರಿತು ಎಂದು ಮೊದಲು ಹೇಳಲಾಗಿತ್ತು. ಆದರೆ ಈ ಸಮಸ್ಯೆ ಅಕ್ಟೋಬರ್‌ನಲ್ಲೇ ಪ್ರಾರಂಭವಾಯಿತು ಎಂದು ಹಿಜಾಬ್‌ಗಾಗಿ ಹೋರಾಡುತ್ತಿರುವ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ತಂದೆ ಶುಕೂರ್ ಹೇಳುತ್ತಾರೆ.  ಅಕ್ಟೋಬರ್‌ನಲ್ಲಿ ಆರ್‌ಎಸ್‌ಎಸ್-ಸಂಯೋಜಿತ ವಿದ್ಯಾರ್ಥಿಗಳ ಒಕ್ಕೂಟವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಸ್ಲಿಂ ಹುಡುಗಿಯರು ಭಾಗವಹಿಸುವಿದರೊಂದಿಗೆ ಸಮಸ್ಯೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ.

ADVERTISEMENT

ಮಣಿಪಾಲದ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ಭಾಗವಾಗಿ ಮುಸ್ಲಿಂ ಹುಡುಗಿಯರು ಎಬಿವಿಪಿ ಧ್ವಜ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದನ್ನು ಅಕ್ಟೋಬರ್ 30 ರಂದು ಉಡುಪಿ ಎಬಿವಿಪಿಯ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು.  “ನನ್ನ ಮಗಳನ್ನು ಅಲ್ಲಿ ನೋಡಿ ನನಗೆ ಆಶ್ಚರ್ಯವಾಯಿತು. ಏಕೆಂದರೆ ಅವಳು ಎಬಿವಿಪಿ ಸದಸ್ಯಳಲ್ಲ, ಇದಲ್ಲದೆ ಫೋಟೋದಲ್ಲಿ ಮುಸ್ಕಾನ್ ತನ್ನ ಎಂದಿನ ಶಿರಸ್ತ್ರಾಣವನ್ನು ಧರಿಸಿರಲಿಲ್ಲ” ಎನ್ನುತ್ತಾರೆ ಶುಕೂರ್ .

“ಫೋಟೋದಲ್ಲಿ ಅವಳು ಏಕೆ ಹೆಡ್ ಸ್ಕಾರ್ಫ್ ಧರಿಸಿಲ್ಲ ಎಂದು ನಾನು ಅವಳನ್ನು ಕೇಳಿದೆ. ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅನುಮತಿಸುವುದಿಲ್ಲ ಎಂದು ಅವಳು ಹೇಳಿದಳು” ಎಂದು ಅವರು ‘ದಿ ಪ್ರಿಂಟ್’ ಜೊತೆ ಮಾತಾಡುತ್ತಾ ಹೇಳಿದ್ದಾರೆ. ಈ ಬಗ್ಗೆ ಕಾಲೇಜು ಪ್ರಿನ್ಸಿಪಾಲರನ್ನು ಸಂಪರ್ಕಿಸಿದ ಶುಕೂರ್ ತಮ್ಮ ಅನುಮತಿಯಿಲ್ಲದೆ ಒಪ್ಪಿಗೆಯಿಲ್ಲದೆ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಹೇಗೆ ಕಳುಹಿಸಿದಿರಿ ಮತ್ತು ತಲೆಗೆ ಸ್ಕಾರ್ಫ್ ಧರಿಸಲು ಏಕೆ ಅವಕಾಶ ನೀಡುತ್ತಿಲ್ಲ ಎಂದು ಕೇಳಿದ್ದರು. ಆದರೆ ಪ್ರಾಂಶುಪಾಲರು ಇದು ಒಂದು ಸಣ್ಣ ಸಮಸ್ಯೆ ಎಂದು ತಳ್ಳಿ ಹಾಕಿದರು ಎಂದು ಶುಕೂರ್ ಹೇಳಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿರುವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ “ ಅನೇಕ ವರ್ಷಗಳಿಂದ, ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಹಿಜಾಬ್‌ಗಳನ್ನು ಧರಿಸುತ್ತಿದ್ದಾರೆ, ಆದರೆ ತರಗತಿಗಳ ಸಮಯದಲ್ಲಿ ಅವುಗಳನ್ನು ತೆಗೆದು ಕೂರುತ್ತಿದ್ದರು.  ಈ ಹುಡುಗಿಯರೂ ಇದಕ್ಕೆ ಬದ್ಧರಾಗಿದ್ದರು, ಆದರೆ ಡಿಸೆಂಬರ್‌ನಿಂದ ಅವರು ತರಗತಿಗಳಲ್ಲಿಯೂ ಹಿಜಾಬ್ ಅನ್ನು ಅನುಮತಿಸಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು” ಎನ್ನುತ್ತಾರೆ.

ಇಲ್ಲಿಂದ ಆರು ಮುಸ್ಲಿಂ ವಿದ್ಯಾರ್ಥಿಗಳ ಕುಟುಂಬಗಳು ಮತ್ತು ಕಾಲೇಜು ಆಡಳಿತದ ನಡುವೆ ಘರ್ಷಣೆಗೆ ಪ್ರಾರಂಭವಾಯಿತು.  ಇಡೀ ಪ್ರಕರಣದ ಹಿಂದೆ ಸಿಎಫ್ಐ ಇದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದರೆ ಹುಡುಗಿಯರ ಮೇಲಿನ ಪ್ರತೀಕಾರದಿಂದ ಕಾಲೇಜು ಅವರ ಮತ್ತು ಅವರ ಕುಟುಂಬದ ವಿವರಗಳನ್ನು ಸಾರ್ವಜನಿಕಗೊಳಿಸಿದೆ ಎಂದು ಪಿಎಫ್‌ಐ ವಿದ್ಯಾರ್ಥಿ ಸಂಘಟನೆಯಾದ CFI ಆರೋಪಿಸಿದೆ.

ಜನವರಿಯಲ್ಲಿ, ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು, ವಿಷಯ ರಾಜ್ಯಾದ್ಯಂತ ಹಬ್ಬಿತು ಮತ್ತು ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಒಳಜಗಳಕ್ಕೆ ಕಿಚ್ಚು ಹಚ್ವಿ ಇಡೀ ರಾಜ್ಯದ ಕಾಲೇಜುಗಳಲ್ಲಿ ಕೋಮು ದಳ್ಳುರಿ ಹುಟ್ಟಿಕೊಂಡಿತು.

ಉಡುಪಿಯ ಮಸೀದಿ, ಜಮಾತ್ ಮತ್ತು ಇಸ್ಲಾಮಿಕ್ ಸಂಘಟನೆಗಳ ಒಕ್ಕೂಟವಾದ ‘ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ’ದ ಹಿರಿಯ ಮುಖಂಡರೊಬ್ಬರು ಈ ಬಗ್ಗೆ ‘ದಿ ಪ್ರಿಂಟ್’ ಜೊತೆ ಮಾತಾಡಿ “ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸದಿರುವುದನ್ನು ದೊಡ್ಡ ಸಮಸ್ಯೆ ಮಾಡಬೇಡಿ ಎಂದು ನಾವು ಹುಡುಗಿಯರಿಗೆ ಸಲಹೆ ನೀಡಿದ್ದೇವೆ.  ನಾವು ಅವರನ್ನು ಮತ್ತು ಅವರ ಪೋಷಕರನ್ನು ಧಾರ್ಮಿಕ ಮೌಲ್ವಿಗಳ ಬಳಿಗೆ ಕರೆದೊಯ್ದಿದ್ದೇವೆ ಮತ್ತು ತರಗತಿಯಲ್ಲಿ ಹಿಜಾಬ್‌ಗಳನ್ನು ತೆಗೆದಿರಿಸುವುದು ಸರಿ ಎಂದು ವಿವರಿಸಿದೆವು” ಎಂದು ಅವರು ಹೇಳಿದ್ದಾರೆ.

ಆದರೆ, ವಿದ್ಯಾರ್ಥಿನಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ, ಏಕೆಂದರೆ ಅವರು 2006 ರಲ್ಲಿ ಕೇರಳದಲ್ಲಿ ಸ್ಥಾಪಿಸಲಾದ ಸಂಘಟನೆಯಾದ ಪಿಎಫ್‌ಐನ ಕ್ಯಾಂಪಸ್ ಅಂಗಸಂಸ್ಥೆಯಾದ ಸಿಎಫ್‌ಐನಿಂದ ಬೆಂಬಲವನ್ನು ಪಡೆದಿದ್ದಾರೆ ಎಂದಿದ್ದಾರೆ  “ಸಿಎಫ್‌ಐ ಹಿಜಾಬ್ ಸಂಘರ್ಷವನ್ನು ತನ್ನ  ನೆಲೆಯನ್ನು ಬಲಪಡಿಸಲು ಬಳಸಿಕೊಂಡಿತು” ಎಂದು ಮುಸ್ಲಿಂ ಒಕ್ಕೂಟದ ನಾಯಕರು ಹೇಳಿದ್ದಾರೆ.  ಕರಾವಳಿ ಕರ್ನಾಟಕದಲ್ಲಿ, ಎರಡು ಪ್ರಮುಖ ವಿದ್ಯಾರ್ಥಿಗಳ ಸಂಘಟನೆಗಳು ಎಬಿವಿಪಿ ಮತ್ತು ಸಿಎಫ್‌ಐ ಆಗಿದ್ದು, ಕಾಂಗ್ರೆಸ್‌ನ ಕ್ಯಾಂಪಸ್ ಸಂಸ್ಥೆಯಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸ್ಥಳೀಯ ಕಾಲೇಜುಗಳಲ್ಲಿ ಅಸ್ತಿತ್ವವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 27 ರಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮೇಲೂ ನಿರೀಕ್ಷಿತ ಫಲ ದೊರಕಿಲ್ಲ ಎಂದಮೇಲೆ ವಿದ್ಯಾರ್ಥಿಗಳು ಸಿಎಫ್ಐನ್ನು ಸಂಪರ್ಕಿಸಿದರು. ಆನಂತರವೇ ಸಂಘಟನೆ ಅವರ ಜೊತೆ ತೊಡಗಿಸಿಕೊಂಡಿದ್ದು ಎಂದು ಸಿಎಫ್ಐ ನಾಯಕರು ಹೇಳುತ್ತಾರೆ.  ಈ ಮಧ್ಯೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಾವು CFI ಸದಸ್ಯರಲ್ಲ ಎಂದು ತಿಳಿಸಿದ್ದಾರೆ.  ಆದರೆ, ಕನಿಷ್ಠ ಮೂವರು ಪೋಷಕರು PFI ಯ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನ ಸದಸ್ಯರಾಗಿದ್ದಾರೆ.

ಮುಸ್ಲಿಂ ಒಕ್ಕೂಟದ ನಾಯಕರ ಪ್ರಕಾರ‌ ಡಿಸೆಂಬರ್ ಅಂತ್ಯದ ವೇಳೆಗೆ ಯಾರೂ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇರಲಿಲ್ಲ.  ಮುಸ್ಲಿಮ್ ಮಹಿಳೆಯರ ಪ್ರತಿಭಟನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ವ್ಯಾಪಕ ಪ್ರಚಾರವು ಕಾಲೇಜು ಅಭಿವೃದ್ಧಿ ಸಮಿತಿಯನ್ನು (ಸಿಡಿಸಿ) ಕೆರಳಿಸಿತು. “ಡಿಸೆಂಬರ್ ಮತ್ತು ಜನವರಿಯಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಗಳು ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಗಮನ ಸೆಳೆಯಲು ಪ್ರಾರಂಭಿಸಿದವು.  ತರಗತಿಯ ಒಳಗೆ ಬಿಡದ ಕಾರಣ ತರಗತಿಯ ಹೊರಗೆ ನಿಂತು ಪಾಠ ಕೇಳುವುದನ್ನು ತೋರಿಸಲಾಯಿತು.  ಇದು ಸಮಿತಿಯ ಸದಸ್ಯರ ಅಹಂಕಾರ ಕೆರಳಿಸಿತು. ಈ ಮಂಡಳಿಯ ಹೆಚ್ಚಿನ ಸದಸ್ಯರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಸದಸ್ಯರಾಗಿದ್ದಾರೆ.  ಸಿಡಿಸಿಯಲ್ಲಿರುವ 21 ಸದಸ್ಯರಲ್ಲಿ ಯಾರೂ ಮುಸ್ಲಿಂ ಸಮುದಾಯದವರಲ್ಲ” ಎನ್ನುತ್ತದೆ ಮುಸ್ಲಿಂ ಒಕ್ಕೂಟ. ಒಂದೆಡೆ ಈ ಸಮಸ್ಯೆಯು ಬಿಜೆಪಿ ಮತ್ತು ಆರ್‌ಎಸ್‌ಎಸ್ ಇನ್ನೊಂದೆಡೆ ಪಿಎಫ್ಐಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದೂ ಮುಸ್ಲಿಂ ಒಕ್ಕೂಟ ಹೇಳುತ್ತದೆ.

ಬಿಜೆಪಿ ಮತ್ತು ಪಿಎಫ್‌ಐ


ಹಿಂದುತ್ವ ಮತ್ತು ಮುಸ್ಲಿಂ ಸಂಘಟನೆಗಳೆರಡೂ ಒಪ್ಪಿಕೊಳ್ಳುವ ಒಂದು ಸಂಗತಿಯೆಂದರೆ, ಉಡುಪಿಯ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ಅವು ಇತರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳನ್ನು ಹುಟ್ಟುಹಾಕಿದವು.  ಜನವರಿ ಮತ್ತು ಫೆಬ್ರುವರಿ ಉದ್ದಕ್ಕೂ, ಕರ್ನಾಟಕವು ಕಾಲೇಜುಗಳಲ್ಲಿ ಹಿಜಾಬ್‌ಗಳನ್ನು ಧರಿಸಿದ ಕೆಲವು ವಿದ್ಯಾರ್ಥಿಗಳು ಮತ್ತು ಇತರರು ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿ ಹಲವಾರು ಕಡೆ ಪ್ರತಿಭಟಿಸಿದರು. 

ಪಿಎಫ್‌ಐನಿಂದ “ಪ್ರಚೋದನೆ” ಇಲ್ಲದಿದ್ದರೆ, ಪ್ರತಿಭಟನೆಗಳು ಈ ಪ್ರಮಾಣವನ್ನು ಇರುತ್ತಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಬಿಜೆಪಿಗರೇ ಪ್ರಚೋದಿಸಿದರು ಎಂದು ಸಿಎಫ್ಐ ನಾಯಕರು ಹೇಳುತ್ತಾರೆ.

“ಒಂದು ಸಂಘಟನೆಯಾಗಿ, ನಾವು ಮಾರ್ಜಿನಲೈಸ್ಡ್ ಸಮುದಾಯಗಳ ಉನ್ನತಿಗಾಗಿ ಕೆಲಸ ಮಾಡುತ್ತಿದ್ದೇವೆ.   ನಮ್ಮ ವಿದ್ಯಾರ್ಥಿ ವಿಭಾಗ (CFI) ನೊಂದ ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡಲು ಮಾತ್ರ ಪ್ರಯತ್ನಿಸುತ್ತಿದೆ.  ಕೋಮು ಸ್ಫೋಟಗಳು ಬಿಜೆಪಿಗೆ ಮಾತ್ರ ಲಾಭದಾಯಕವಾಗಿದೆ” ಎನ್ನುತ್ತಾರೆ ಪಿಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಸ್ ಅಹ್ಮದ್.

PFI ಮತ್ತು ಅದರ ಅಂಗಸಂಸ್ಥೆಗಳು ಏಕೆ ವಿವಾದಾಸ್ಪದವಾಗಿವೆ?


PFI ಕೇರಳ ಮೂಲದ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ (NDF) ನ ಸಾಂಸ್ಥಿಕ ಉತ್ತರಾಧಿಕಾರಿಯಾಗಿದೆ ಮತ್ತು ಮುಸ್ಲಿಮರಿಗೆ, ವಿಶೇಷವಾಗಿ ದಕ್ಷಿಣದ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದಾಗಿ ಹೇಳಿಕೊಳ್ಳುತ್ತದೆ.

2010 ರಲ್ಲಿ, PFI ಯ ರಾಜಕೀಯ ವಿಭಾಗ – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)  ಚುನಾವಣಾ ಆಯೋಗದಲ್ಲಿ ನೋಂದಾಯಿಸಲ್ಪಟ್ಟಿತು.  ಅಂದಿನಿಂದ ಇದು ನಿಧಾನವಾಗಿ ಕರಾವಳಿ ಕರ್ನಾಟಕದ ಬೆಲ್ಟ್‌ನಲ್ಲಿ ಕಾಲಿಡುತ್ತಿದೆ.  ಕರ್ನಾಟಕದಲ್ಲಿ 58 ನಗರ ಸ್ಥಳೀಯ ಸಂಸ್ಥೆಗಳಿಗೆ (ULBs) ಡಿಸೆಂಬರ್ 2021 ರ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿದೆ.  ಈ ಮಧ್ಯೆ, ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ CFI ಜನಪ್ರಿಯವಾಗಿದೆ. 
ಆದರೆ ಪಿಎಫ್‌ಐ ಬಿಜೆಪಿಯಿಂದ ಮೂಲಭೂತವಾದದ ಆರೋಪಗಳನ್ನು ಎದುರಿಸುತ್ತಿದೆ.  ಕಳೆದ ವರ್ಷ ಏಪ್ರಿಲ್‌ನಲ್ಲಿ, ಕೇಂದ್ರ ಸರ್ಕಾರವು PFI ಅನ್ನು ನಿಷೇಧಿಸುವ ಪ್ರಕ್ರಿಯೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು, ಈಗ ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನೊಂದಿಗೆ ಅನೇಕ ಪದಾಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಎಂದು ಹೇಳಿಕೊಂಡಿದೆ.  ಆದರೆ ಪಿಎಫ್ಐ ಇದನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ. ಆದರೆ ಇತರ ಹಲವು ಮುಸ್ಲಿಂ ಸಂಘಟನೆಗಳೇ ಪಿಎಫ್ಐಯನ್ನು ಒಪ್ಪುತ್ತಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.

ದ್ವಿಗುಣಗೊಂಡ ಹಿಜಾಬ್‌ಧಾರಿಗಳ ಸಂಖ್ಯೆ

ಬಹುಶಃ ಒಬ್ಬ ಅಥವಾ ಇಬ್ಬರು ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು ಆದರೆ ಈಗ ಅವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ.  ಅವರು ತಮ್ಮ ಧಾರ್ಮಿಕ ಗುರುತನ್ನು ಪ್ರತಿಪಾದಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಪೂಜಾರಿ ‘ದಿ ಪ್ರಿಂಟ್‌’ಗೆ ತಿಳಿಸಿದ್ದಾರೆ. 

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಮಾತನಾಡಿ, ಹಿಜಾಬ್ ಧರಿಸುವ ಹಕ್ಕಿನ ಹೋರಾಟವು ಸಮುದಾಯದ ಇತರ ಹೆಣ್ಣುಮಕ್ಕಳು ಸಂವಿಧಾನಾತ್ಮಕವಾಗಿ ಖಾತರಿಪಡಿಸಿದ ಸ್ವಾತಂತ್ರ್ಯವನ್ನು ಚಲಾಯಿಸಲು ಪ್ರೇರೇಪಿಸಿದೆ.  “ನಾನು ಮೊದಲು ನನ್ನ ಹಕ್ಕನ್ನು ಚಲಾಯಿಸದ ಕಾರಣ ಭವಿಷ್ಯದಲ್ಲಿ ನಾನು ಅದನ್ನು ಮಾಡಬಾರದು ಎಂದು ಅರ್ಥವಲ್ಲ” ಎಂದು ಅಝೀಝ್ ಉದ್ಯಾವರ್ ಹೇಳುತ್ತಾರೆ.

ಕುಂದಾಪುರದ ಕನಿಷ್ಠ ಮೂರು ಕಾಲೇಜುಗಳ ಪ್ರಾಂಶುಪಾಲರು ThePrint ಜೊತೆ ಮಾತಾಡುತ್ತಾ, ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಯಾವಾಗಲೂ ಹಿಜಾಬ್ ಧರಿಸಿ ತರಗತಿಗಳಿಗೆ ಹೋಗುತ್ತಿದ್ದರು, ಜನವರಿಯಲ್ಲಿ ವಿವಾದ ಪ್ರಾರಂಭವಾದಾಗಿನಿಂದ ಈ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ.


“ಕಾಲೇಜಿನಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಯಾವುದೇ ಸ್ಪಷ್ಟ ನಿಯಮವಿಲ್ಲ, ಆದರೆ ಅದನ್ನು ಅನುಮತಿಸುವ ನಿಯಮವೂ ಇಲ್ಲ” ಎಂದು ಆರ್.ಎನ್.  ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಶೆಟ್ಟಿ ಹೇಳಿದ್ದಾರೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಉಡುಪಿ ಪಿಯು ಕಾಲೇಜು ವಿದ್ಯಾರ್ಥಿಗಳು ತಮಗೆ ಶಿಕ್ಷಣ ಅಥವಾ ಹಿಜಾಬ್ ಧರಿಸುವುದನ್ನು ಆಯ್ಕೆಯಾಗಿ ನೀಡಬಾರದು ಎಂದು ಹೇಳುತ್ತಾರೆ.  ಮತ್ತೊಬ್ಬ ವಿದ್ಯಾರ್ಥಿ ಎ.ಎಚ್. ​​ಅಲ್ಮಾಸ್
“ನಾವು ಪ್ರತಿಭಟಿಸಲು ಪ್ರಾರಂಭಿಸಿದಾಗ, ನಮ್ಮ ವಿವರಗಳು ಸೋರಿಕೆಯಾದವು ಮತ್ತು ಅಪರಿಚಿತ ಜನರು ನಮ್ಮನ್ನು ಹಿಂಬಾಲಿಸುತ್ತಿದ್ದಾರೆ” ಎಂದು ಆರೋಪಿಸುತ್ತಾರೆ.

ಈವರೆಗೆ ಹಿಜಾಬ್ ವಿವಾದವನ್ನು ಬಹಿರಂಗವಾಗಿ ಬೆಂಬಲಿಸದ ಮುಸ್ಲಿಂ ಒಕ್ಕೂಟ ಈಗ ಇತರ ಕೋ-ಎಡ್ ಕಾಲೇಜುಗಳಲ್ಲಿ ಕಲಿಯುತ್ತಿರುವ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದಾದಾಗ ಬೆಂಬಲಿಸುವ ನಿರ್ಧಾರಕ್ಕೆ ಬಂದಿದೆ ಎನ್ನುತ್ತಾರೆ ಉಡುಪಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ  ಇಬ್ರಾಹಿಂ ಸಾಹಿಬ್ ಕೋಟಾ.

ಕೇಸರಿ ಶಾಲ್ ವಿತರಣೆಯ ನೇತೃತ್ವ ವಹಿಸಿರುವ ಹಿರಿಯ ವಿಎಚ್‌ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮುಖಂಡರು

ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿಗೆ ಪತ್ರಕರ್ತರು ಭೇಟಿ ನೀಡಿದಾಗ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್ ಮತ್ತು ಶಿರಸ್ತ್ರಾಣವನ್ನು ಧರಿಸಿದ್ದ ಇತರರೊಂದಿಗೆ ಮುಖಾಮುಖಿಯಾಗಿದ್ದರು. ಆದರೆ‌ ಪತ್ರಕರ್ತರು ಅನೇಕ ಹಿಂದೂ ಪ್ರತಿಭಟನಾಕಾರರೊಂದಿಗೆ ಮಾತನಾಡಿದಾಗ, ಅವರು ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂಬುವುದನ್ನು ಒಪ್ಪಿಕೊಂಡಿದ್ದಾರೆ.

“ನಾನು ಇಲ್ಲಿ ವಾಣಿಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದ್ದೇನೆ ಮತ್ತು 2016-2017 ರ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣನಾಗಿದ್ದೇನೆ” ಎಂದು ಅಲ್ಲಿದ್ದ ಪ್ರತಿಭಟನಾಕಾರ  ಸುಶಾಂತ್ ಹೇಳಿದ್ದಾರೆ. ತನ್ನನ್ನು ABVP ಸದಸ್ಯ ಎಂದು ಗುರುತಿಸಿಕೊಳ್ಳುವ ಅವರು  “ಹಲವು ವರ್ಷಗಳಿಂದ, ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ತರಗತಿ ಕೊಠಡಿಗಳಲ್ಲಿ ಹಿಜಾಬ್‌ಗಳನ್ನು ಧರಿಸುತ್ತಿದ್ದಾರೆ ಆದರೆ ಈಗ ಅವರು ತಮ್ಮ ಧಾರ್ಮಿಕ ಹಕ್ಕನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವುದರಿಂದ, ಹಿಂದೂಗಳಾಗಿ ನಾವು ನಮ್ಮ ಧಾರ್ಮಿಕ ಗುರುತನ್ನು ಪ್ರತಿಪಾದಿಸಬೇಕಲ್ಲವೇ?”  ಎಂದು ಕೇಳುತ್ತಾರೆ. ಆದರೆ‌ ಪ್ರತಿಭಟನಾಕಾರರಿಗೆ
ಹೊರಗಿನವರು ಶಾಲ್ ಒದಗಿಸುತ್ತಾರೆ ಎಂಬುವುದನ್ನು ನಿರಾಕರಿಸಿದ್ದಾರೆ.

ಆದರೆ, ಪುರುಷ ಪ್ರತಿಭಟನಾಕಾರರು ಕಾಲೇಜಿಗೆ ಆಗಮಿಸಿದ ಮಹಿಳಾ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸುವುದನ್ನು ಪತ್ರಕರ್ತರು ಗಮನಿಸಿದ್ದಾರೆ.  ಇನ್ನೊಂದೆಡೆ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಬಳಿ ಹಿಂದೂ ಜಾಗರಣ ವೇದಿಕೆಯ ಸದಸ್ಯರಿಗೆ ತಮ್ಮ ಕೇಸರಿ ಶಿರಸ್ತ್ರಾಣವನ್ನು ಹಿಂದಿರುಗಿಸುವ  ಮತ್ತು  ಇನ್ನೋವಾ ಕಾರಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಸ್ಕಾರ್ಫ್‌ಗಳನ್ನು ವಿತರಿಸುವ ವಿಡಿಯೋಗಳು ವೈರಲ್ ಆಗಿವೆ.

ದಿ ಪ್ರಿಂಟ್ ಮಾತಾಡಿಸಿದ ಮತ್ತೊಬ್ಬ  ಪ್ರತಿಭಟನಾಕಾರ ಅಕ್ಷತ್ ಪೈ ಅವರು 2014 ರಲ್ಲಿ ಕಾಲೇಜಿನಿಂದ ಪದವಿ ಪಡೆದವರು. ಹಿಂದೂ ಜಾಗರಣ ವೇದಿಕೆಯ ನಾಯಕರಾದ ಅವರು  ”ಪ್ರತಿಭಟನೆ ಮಾಡುವಂತೆ ನಾವು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿಲ್ಲ.  ಅವರು ಅದನ್ನು ಸ್ವಂತವಾಗಿ ಮಾಡುತ್ತಿದ್ದಾರೆ ”ಎಂದು ಹೇಳಿದ್ದಾರೆ.

ಪ್ರಥಮ ವರ್ಷದ ಬಿ.ಕಾಂ.  ಓದುತ್ತಿರುವ ಹೆಸರು ಹೇಳಲಿಚ್ಛಿಸದ ಹಿಂದೂ ವಿದ್ಯಾರ್ಥಿನಿಯೊಬ್ಬರು  “ಹೊರಗಿನವರು ಬಂದು ನಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಸ್ಕಾರ್ಫ್‌ಗಳನ್ನು ಏಕೆ ಸರಬರಾಜು ಮಾಡುತ್ತಿದ್ದಾರೆ? ಮುಸ್ಲಿಮ್ ಸ್ನೇಹಿತರಿಗೆ ತನ್ನ ಹಣೆಯ ಮೇಲಿನ ಬಿಂದಿಗೆ ಅಭ್ಯಂತರವಿಲ್ಲದಂತೆಯೇ ಹಿಜಾಬ್‌ನೊಂದಿಗೆ ತನಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದಾರೆ.

ಉಡುಪಿಯ ಡೆಪ್ಯುಟಿ ಸೂಪರಿಂಟೆಂಡೆಂಟ್ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ಪ್ರಿಂಟ್‌ಗೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಕೇಸರಿ ಸ್ಕಾರ್ಫ್ ಹಸ್ತಾಂತರಿಸುವ ಬಗ್ಗೆ ಪೊಲೀಸರಿಗೆ ತಿಳಿದಿತ್ತು ಎಂದಿದ್ದಾರೆ “ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೆ ಬರುವ ಮೊದಲು, ಕೇಸರಿ ಸ್ಕಾರ್ಫ್‌ಗಳನ್ನು ಅವರಿಗೆ ನೀಡಲಾಗುತ್ತಿದೆ ಆದರೆ ಅದು ಅಪರಾಧವಲ್ಲ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ, ಪ್ರತಿಭಟನೆಗಳು ಹೆಚ್ಚು ಹಿಂಸಾತ್ಮಕ ತಿರುವು ಪಡೆದಿವೆ.  ಮಂಗಳವಾರ  ಶಿವಮೊಗ್ಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.  ಕಳೆದ ವಾರ ಉಡುಪಿಯ ಕುಂದಾಪುರದ ಪೊಲೀಸರು ಕುಂದಾಪುರ ಸರಕಾರಿ ಪಿಯು ಕಾಲೇಜು ಬಳಿ ಚಾಕು ಹಿಡಿದು ಹೋಗುತ್ತಿದ್ದ ಅಬ್ದುಲ್ ಮಜೀದ್ ಮತ್ತು ರಜಬ್ ಎಂಬಿಬ್ಬರನ್ನು ಬಂಧಿಸಿದ್ದರು. ಈ ಮಧ್ಯೆ ಕೇಸರಿ ಶಾಲ್ ಧರಿಸಲೊಪ್ಪದ ಹಿಂದೂ ವಿದ್ಯಾರ್ಥಿಗೆ ಚೂರಿಯಿಂದ ಇರಿದ ಘಟನೆಗಳೂ ವರದಿಯಾಗಿದೆ.

Tags: ABVPcollegehijab controversyhijab kesariHindujaibhimKarnatakakesari shawlmuslimStudentsUdupiಉಡುಪಿಎಬಿವಿಪಿಕರ್ನಾಟಕ ಹಿಜಾಬ್‌ಕಾಲೇಜ್‌ಕೇಸರಿ ಶಾಲುಜೈಭೀಮ್‌ಮುಸ್ಲಿಂವಿದ್ಯಾರ್ಥಿಗಳುಹಿಜಾಬ್‌ ವಿವಾದಹಿಂದೂ
Previous Post

ಕೊರೋನಾ ಮೂರನೇ ಅಲೆ ತಗ್ಗಿದ ಹಿನ್ನೆಲೆ : ಖಾಸಾಗಿ ಆಸ್ಪತ್ರೆಯ ಹಾಸಿಗೆ ವಾಪಾಸ್ ನೀಡಲು ನಿರ್ಧರಿಸಿದ ಬಿಬಿಎಂಪಿ

Next Post

ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ : USA

Related Posts

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
0

https://youtu.be/QX4g82NAFtg

Read moreDetails

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
Next Post
ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ : USA

ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ : USA

Please login to join discussion

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada