ಕೊರೋನಾ ಮೂರನೇ ಅಲೆ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಇತ್ತೀಚೆಗೆ ಸರ್ಕಾರ ಎಲ್ಲಾ ಕ್ಷೇತ್ರಗಳಿಂದಲೂ ಕೊರೋನಾ ನಿರ್ಬಂಧ ತೆರವು ಮಾಡಿ ಮುಕ್ತ ಅವಕಾಶ ಕಲ್ಪಿಸಿತ್ತು. ಇದೀಗ ಸೋಂಕಿನ ಪ್ರಮಾಣ ತಗ್ಗಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಯಿಂದ ತೆಗೆದುಕೊಳ್ಳಲಾಗಿದ್ದ ಹಾಸಿಗೆಯನ್ನು ಮತ್ತೆ ಖಾಸಗಿ ಆಸ್ಪತ್ರೆಗೇ ಕೊಡುವ ನಿರ್ಧಾರ ಮಾಡಲಾಗಿದೆ.
ಓಮೈಕ್ರಾನ್ ಹಾಗೂ ಡೆಲ್ಟಾ ರೂಪಾಂತರಿಗಳಿಂದ ಕೊರೋನಾ ಮೂರನೇ ಅಲೆ ಅಪ್ಪಳಿಸಿತ್ತು. ತೀವ್ರವಾದ ಸಾವು ನೋವುಗಳು ಆಗದಿದ್ದರೂ ಸೋಂಕು ಹರಡುವಿಕೆ ಮಾತ್ರ ತೀವ್ರವಾಗಿಯೇ ಇತ್ತು. ತಜ್ಞರು ಮೊದಲೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅದಾಗಿಯೂ ಎರಡನೇ ಅಲೆಯಲ್ಲಿ ಆದ ಅವಾಂತರಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ದುರಂತವಾಗುವುದು ಎಂಬ ನೆಲೆಗಟ್ಟಿನಲ್ಲಿ ಕೊರೋನಾ ಹಾಟ್ ಸ್ಪಾಟ್ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಲಾಗಿತ್ತು. ಈ ಪೈಕಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲು ಮಾಡಿಟ್ಟಿರುವುದು ಕೂಡ ಒಂದು.
ಖಾಸಗಿ ಆಸ್ಪತ್ರೆಗಳಿಂದ ಬಿಬಿಎಂಪಿ ಪಡೆದಿದ್ದ ಬೆಡ್ಗಳು ವಾಪಾಸ್
ಸದ್ಯ ಕೊರೋನಾ ಪ್ರಕರಣಗಳು ಮತ್ತೆ ಇಳಿಕೆಯಾಗಿದೆ. ಹಾಗೆಂದ ಮಾತ್ರ ಕೊರೋನಾ ಸಂಪೂರ್ಣವಾಗಿ ನಿರ್ಣಾಮವಾಗಿದೆ ಎಂದಲ್ಲ. ಆದರೂ ಪ್ರಕರಣಗಳು ಪೀಕ್ನಿಂದ ಇಳಿಮುಖವಾಗಿದ ಸಾವಿನ ದರ ಸೇರಿದಂತೆ ಎಲ್ಲಾ ರೀತಿಯಲ್ಲೂ ಪರಸ್ಥಿತಿ ಹತೋಟಿಯಲ್ಲಿದೆ. ಆಸ್ಪತ್ರೆ ಸೇರುವವರಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಹೆಚ್ಚಿನ ಬೆಡ್ಗಳ ಅಗತ್ಯ ಸದ್ಯಕ್ಕೆ ಇರುವುದಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಮೀಸಲಿಟ್ಟಿದ್ದ ಬೆಡ್ಗಳನ್ನು ಕೊರೋನಾ ಹೊರತಾಗಿ ಇತರೆ ರೋಗಿಗಳಿಗೆ ಕೊಡುವಂತೆ ಬಿಬಿಎಂಪಿ ಸೂಚನೆ ಕೊಟ್ಟಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸದ್ಯಕ್ಕೆ ಹಾಸಿಗೆಗಳ ಅಗತ್ಯ ಹೆಚ್ಚೇನು ಇರುವುದಿಲ್ಲ. ಸೋಂಕು ಕಡಿಮೆಯಾಗಿದೆ. ಅಗತ್ಯ ಬೀಳುವ ಹಾಸಿಗೆಗಳೆಲ್ಲ ಪಾಲಿಕೆಯ ಟ್ರಾಯಿಂಗ್, ಕೇರ್ ಸೆಂಟರ್ ಹಾಗೂ ಪಾಲಿಕೆ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಂದ ಪಡೆದುಕೊಳ್ಳಳಾಗಿರುವ ಬೆಡ್ಗಳನ್ನು ವಾಪಾಸ್ ನೀಡಲಾಗಿದೆ ಎಂದರು.
ಈ ಹಿಂದೆ ಇದಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಇದೇ ಬೇಡಿಕೆಯನ್ನು ಪಾಲಿಕೆ ಮುಂದಿಟ್ಟಿತ್ತು. ಆದಷ್ಟು ಬೇಗ ಹೊರರೋಗಿ ವಿಭಾಗಕ್ಕೆ ಹಾಸಿಗೆಗಳಳ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮನವಿ ಮಾಡಿಕೊಳ್ಳಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಮೀಸಲಿಟ್ಟಿದ್ದ ಬೆಡ್ಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.