• Home
  • About Us
  • ಕರ್ನಾಟಕ
Thursday, July 31, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಸರ್ಕಾರದ ಕೈಗಾರಿಕಾ ಪ್ರದೇಶಾಭಿವೃದ್ದಿ ಕನಸು ನುಚ್ಚುನೂರು ; ಲೀಸ್ ಹೆಸರಲ್ಲಿ ಆಂಧ್ರ ಮೂಲದ ಕಂಪನಿಯ ಕಳ್ಳಾಟ!

ಸರ್ಕಾರದ ಕೈಗಾರಿಕಾ ಪ್ರದೇಶಾಭಿವೃದ್ದಿ ಕನಸು ನುಚ್ಚುನೂರು ; ಲೀಸ್ ಹೆಸರಲ್ಲಿ ಆಂಧ್ರ ಮೂಲದ ಕಂಪನಿಯ ಕಳ್ಳಾಟ!

ನಚಿಕೇತು by ನಚಿಕೇತು
December 13, 2021
in Uncategorized
0
Share on WhatsAppShare on FacebookShare on Telegram

ಕೈಗಾರಿಕೆಗಳಿಗೆ ಬೇಕಿದ್ದ ಮೂಲಭೂತ ಸೌಕರ್ಯ ಸ್ಥಾಪಿಸೋಕೆ ಎಕರೆಗಟ್ಟಲೆ ಪ್ರದೇಶವನ್ನ ಸರ್ಕಾರ ಆಂಧ್ರ ಪ್ರದೇಶದ ಸಂಸ್ಥೆಗೆ ಲೀಸ್‌ ನೀಡಿತ್ತು. ಆದರೆ ಲೀಸ್‌ ಗೆ ನೀಡಿ 16 ವರ್ಷ ಕಳೆದ್ರೂ ಅಲ್ಲಿ ನಯಾಪೈಸೆ ಅಭಿವೃದ್ಧಿ ಕಂಡಿಲ್ಲ. ಇದೀಗ ಮತ್ತೆ ಆ ಜಾಗವನ್ನ ಲೀಸ್ ಪಡೆಯಲು ಅದೇ ಕಂಪನಿ ಮುಂದೆ ಬಂದಿರೋದು ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಹೌದು, ಸುತ್ತ ನೋಡಿದರೂ ಕಣ್ಣಿಗೆ ಕಾಣಿಸೋದು ಖಾಲಿ ಖಾಲಿ ಜಾಗಗಳೇ, ಪ್ರಾಣಿಗಳು ಮೇಯೋಕೆ ಹುಲ್ಲು ಬೆಳ್ಕೊಂಡಿದ್ದು ಬಿಟ್ಟರೆ ಬೇರೆ ರೀತಿಯ ಅಭಿವೃದ್ಧಿ ಕಾರ್ಯಗಳು ಈ ಪ್ರದೇಶದಲ್ಲಿ ಕಾಣಿಸೋಲ್ಲ. ಸ್ಥಳೀಯರಿಗೆ ಉದ್ಯಮ ಸಿಗಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಬಾಗಲಕೋಟೆ ಜಿಲ್ಲೆಯ ನವನಗರದ ಇಂಡಸ್ಟ್ರಿಯಲ್ ಏರಿಯಾದ 100 ಎಕರೆ ಪ್ರದೇಶವನ್ನ ಖಾಸಗಿ ಕಂಪನಿಗೆ ಲೀಸ್‌ ನೀಡಿತ್ತು. ಆದರೆಲೀಸ್‌ ನೀಡಿ 16 ವರ್ಷ ಕಳೆದರೂ ಸ್ಥಳೀಯರ ಉದ್ಯೋಗದ ಕನಸು ಈಡೇರಿಲ್ಲ.

ಆಂಧ್ರಪ್ರದೇಶ ಮೂಲದ ಆದಿಕೇಶವಲು ಎಂಬ ವ್ಯಕ್ತಿಯ ನೇತೃತ್ವದ ಗ್ರೀನ್ ಫುಡ್‌ ಪಾರ್ಕ್ ಸಂಸ್ಥೆಗೆ ಸರ್ಕಾರ ಭೂಮಿಯನ್ನ ಲೀಸ್‌ ನೀಡಿತ್ತು. ಎಕರೆಗೆ 1 ಲಕ್ಷ ರೂಪಾಯಿ ವೆಚ್ಚದಂತೆ ಭರ್ತಿ 100 ಎಕರೆಯನ್ನ 1 ಕೋಟಿ ರೂಪಾಯಿ ವೆಚ್ಚದಲ್ಲಿ 2೦೦5ರಲ್ಲಿ ಲೀಸ್‌ ಗೆ ನೀಡಲಾಗಿತ್ತು. ಲೀಸ್ ಒಪ್ಪಂದದ ಪ್ರಕಾರ 5 ವರ್ಷಗಳ ಅವಧಿಯಲ್ಲಿ ಮೀಸಲಿಟ್ಟ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಸಂಸ್ಥೆ ಕಲ್ಪಿಸಬೇಕಿತ್ತು. ಮೊದಲಿಗೆ 5 ವರ್ಷಗಳ ಕಾಲ ಲೀಸ್‌ ಹೆ ಪಡೆದ ಕಂಪನಿ, ಹಾಗೋ ಹೀಗೋ ಮಾಡಿ ಇಲ್ಲಿಯವರೆಗೂ ಈ ಜಾಗವನ್ನ ತಾನೇ ಲೀಸ್‌ ಪಡೆದುಕೊಳ್ತಾ ಬಂದಿದೆ. ಆದರೆ ಲೀಸ್ಗೆ ಪಡೆದ ಕಂಪನಿ 16 ವರ್ಷ ಕಳೆದ್ರೂ ಪುಡ್ ಪಾರ್ಕ್ ಜಾಗದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ನೀರಿನ ಸೌಕರ್ಯ ಸೇರಿದಂತೆ ಯಾವುದೇ ರೀತಿಯ ಮೂಲ ಸೌಲಭ್ಯ ಕಲ್ಪಿಸಿಲ್ಲ.

ಇನ್ನೊಂದೆಡೆ ಆದಿಕೇಶವಲು ಈ ಜಾಗದಲ್ಲಿ ಈಗಾಗಲೇ 40 ಎಕರೆ ಜಾಗವನ್ನು ಬೇರೆ ಬೇರೆ ಕೈಗಾರಿಕೆಗಳಿಗೆ ಎಕರೆಗೆ 20 ಲಕ್ಷದಿಂದ 50-60 ಲಕ್ಷ ರೂಪಾಯಿವರೆಗೂ ಉಪ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬರ್ತಿವೆ. ಸದ್ಯ, ಲೀಸ್ ಅವಧಿ ಮುಕ್ತಾಯವಾಗಿದ್ದು, ಅದನ್ನು ಮತ್ತೆ ಲೀಸ್ಗೆ ಪಡೆದುಕೊಳ್ಳಲು ಗ್ರೀನ್ ಫುಡ್ ಪಾರ್ಕ್ ಕಂಪನಿ ಮುಂದಾಗಿದೆ. ಸೇಮ್ ಇದೇ ಕಂಪನಿಗೆ ಲೀಸ್ ಮುಂದುವರಿಸಬೇಕು ಅಂತಾ ಸರ್ಕಾರಕ್ಕೆ ಕೆಐಎಡಿಬಿ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಆದ್ರೆ, ಯಾವುದೇ ಕಾರಣಕ್ಕೂ ಲೀಜ್ ಮುಂದುವರೆಸಬಾರದು ಅಂತಾ ಅಂತಾ ಕರವೇ ಕಾರ್ಯಕರ್ತರು ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲು ಮುಂದಾಗಿದ್ದಾರೆ.

ಗ್ರೀನ್ ಫುಡ್ ಪಾರ್ಕ್ ಸಂಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಬ್ಸಿಡಿ ಹಣ ಪಡೆದು ಯಾವುದೇ ಅಭಿವೃದ್ಧಿ ಪಡಿಸದೇ ವಂಚನೆ ಮಾಡ್ತಿದೆ ಎನ್ನುವ ಆರೋಪಗಳು ಇವೆ. ಈ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಳಿದರೆ, ಗ್ರೀನ್ ಪುಡ್ ಪಾರ್ಕ್ಗೆ ಲೀಸ್ ಮುಂದುವರೆಸಿಲ್ಲ. ಕರವೇ ಆರೋಪ ಸತ್ಯಕ್ಕೆ ದೂರವಾದದ್ದು ಅಂತಿದ್ದಾರೆ.

ಒಟ್ಟಿನಲ್ಲಿ ಸ್ಥಳಿಯರಿಗೆ ಉದ್ಯೋಗದ ಜೊತೆಗೆ ಕೈಗಾರಿಕೆ ಸ್ಥಾಪನೆಗೆ ಆಸರೆಯಾಗಬೇಕಿದ್ದ ಫುಡ್ ಪಾರ್ಕ್ ಪಾಳು ಬಿದ್ದಿದೆ. ಈಗ ಮತ್ತೆ ಅದೇ ಕಂಪನಿಗೆ ಲೀಸ್ ಅವಧಿ ವಿಸ್ತರಿಸಲು ಮುಂದಾಗಿರುವ ಕೆಐಎಡಿಬಿ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಕಾನೂನು ಹೋರಾಟದ ಎಚ್ಚರಿಕೆ ಕೂಡಾ ನೀಡಿದ್ದಾರೆ. ಸರ್ಕಾರ ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

Previous Post

ಗದಗದಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೆಚ್ಚಾಯ್ತು ಮರಳು ದಂಧೆ!

Next Post

ಕಾಶಿ ಕಾರಿಡರ್ ಉದ್ಘಾಟಿಸಿದ ಪ್ರಧಾನಿ ಮೋದಿ ; ಯೋಜನೆ ನಮ್ಮದೆಂದು ಅಖಿಲೇಶ್‌ ಯಾದವ್‌ ತಗಾದೆ

Related Posts

Uncategorized

ಇಂಧನ ಇಲಾಖೆಯ 447.73 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

by ಪ್ರತಿಧ್ವನಿ
July 19, 2025
0

ಚಾವಿಸನಿನಿಯ 408.95 ಕೋಟಿ ರೂ.ಗಳ ನಾಲ್ಕು ಕಾಮಗಾರಿಗಳು ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಎರಡು ಕಾಮಗಾರಿಗಳು ಮೈಸೂರು, ಜುಲೈ 19, 2025ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ...

Read moreDetails

ಸಹಿಸಿಕೊಳ್ಳೋ ಯೋಗ್ಯತೆಯಿಲ್ಲ ಅಂದ್ರೆ ರಾಜಕಾರಣಕ್ಕೆ ಯಾಕೆ ಬರಬೇಕು?

July 19, 2025
ದೊಡ್ಡ ತೂಗುಸೇತುವೆ

ದೊಡ್ಡ ತೂಗುಸೇತುವೆ

July 18, 2025

CM Siddaramaiah: ಹಿಂಸೆ ಹಾಗೂ ಪ್ರಚೋದನೆಗಳನ್ನು ತಡೆದರೆ ಸಮಾಜದ ಒಳಿತು ಸಾಧ್ಯ..

July 16, 2025

Basavaraj Bommai: ಜಿಟಿಟಿಸಿ ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ..

July 16, 2025
Next Post
ಕಾಶಿ ಕಾರಿಡರ್ ಉದ್ಘಾಟಿಸಿದ ಪ್ರಧಾನಿ ಮೋದಿ ; ಯೋಜನೆ ನಮ್ಮದೆಂದು ಅಖಿಲೇಶ್‌ ಯಾದವ್‌ ತಗಾದೆ

ಕಾಶಿ ಕಾರಿಡರ್ ಉದ್ಘಾಟಿಸಿದ ಪ್ರಧಾನಿ ಮೋದಿ ; ಯೋಜನೆ ನಮ್ಮದೆಂದು ಅಖಿಲೇಶ್‌ ಯಾದವ್‌ ತಗಾದೆ

Please login to join discussion

Recent News

Top Story

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

by ಪ್ರತಿಧ್ವನಿ
July 31, 2025
Top Story

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

by ಪ್ರತಿಧ್ವನಿ
July 30, 2025
Top Story

N Chaluvarayaswamy: ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆಯಿಂದ ರಾಜ್ಯದಲ್ಲಿ ಸಮಸ್ಯೆ..!!

by ಪ್ರತಿಧ್ವನಿ
July 30, 2025
Top Story

MB Patil: ಕೈಗಾರಿಕೆ ಮತ್ತು ಐಟಿ ಇಲಾಖೆಯ ಯೋಜನೆ ಕುರಿತು ಎಂ ಬಿ ಪಾಟೀಲ, ಪ್ರಿಯಾಂಕ್‌ ಖರ್ಗೆ ಮಾತುಕತೆ

by ಪ್ರತಿಧ್ವನಿ
July 30, 2025
Top Story

Australia:16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸದಂತೆ ನೀಷೇದಿಸಿದ ಆಸ್ಟ್ರೇಲಿಯಾ ಸರ್ಕಾರ..!!

by ಪ್ರತಿಧ್ವನಿ
July 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನನ್ನನ್ನು ಜೈಲಿಗೆ ಕಳಿಸಿದ್ದೆ ಆರ್.ಅಶೋಕ್‌

July 31, 2025

DCM DK Shivakumar: ಚುನಾವಣಾ ಆಯೋಗದ ಅನ್ಯಾಯದ ಬಗ್ಗೆ ಹೋರಾಡಬೇಕಿದೆ.!!

July 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada