• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಯೋಗಿತಾ ಭಯಾನಾ: ವಿಮಾನಯಾನ ಸಂಸ್ಥೆಯಲ್ಲಿನ ಕೆಲಸ ತೊರೆದು ಅತ್ಯಾಚಾರ ಸಂತ್ರಸ್ತರಿಗೆ ಆಸರೆಯಾಗಿ ನಿಂತ ಅಪರೂಪದ ಹುಡುಗಿ

ಫಾತಿಮಾ by ಫಾತಿಮಾ
December 1, 2021
in ಅಭಿಮತ
0
ಯೋಗಿತಾ ಭಯಾನಾ: ವಿಮಾನಯಾನ ಸಂಸ್ಥೆಯಲ್ಲಿನ ಕೆಲಸ ತೊರೆದು ಅತ್ಯಾಚಾರ ಸಂತ್ರಸ್ತರಿಗೆ ಆಸರೆಯಾಗಿ ನಿಂತ ಅಪರೂಪದ ಹುಡುಗಿ
Share on WhatsAppShare on FacebookShare on Telegram

ಹದಿನಾಲ್ಕು ವರ್ಷಗಳ ಹಿಂದೆ ಯೋಗಿತಾ ಭಯಾನಾ ಅವರು ದೆಹಲಿಯ ಇತರ ಯುವತಿಯರಂತೆಯೇ ಸಾಮಾನ್ಯ ಹುಡುಗಿ. ಸಾವಿರಾರು ಕನಸುಗಳನ್ನು ಹೊತ್ತು ಏವಿಯೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ನಗರದಲ್ಲೆ ಬೆಳೆದ ಆಧುನಿಕ ಯುವತಿ. ಆದರೆ ಈಗ ಆಕೆ ಮಹಿಳಾ ಹಕ್ಕುಗಳ ಹೋರಾಟಗಾರ್ತಿ. ಅತ್ಯಾಚಾರ, ಕ್ರೌರ್ಯ ಮತ್ತು ಅನ್ಯಾಯ ನಡೆದಾಗೆಲ್ಲಾ ಈ ದೇಶದ ದುರ್ಬಲ ವರ್ಗದ ಬೆನ್ನಿಗೆ ನಿಲ್ಲುವ ಅಸಾಮಾನ್ಯ ಛಲಗಾರ್ತಿ.

ADVERTISEMENT

ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದ ಯೋಗಿತಾ, ಗುರು ಗೋಬಿಂದ್ ಸಿಂಗ್ ವಿಶ್ವವಿದ್ಯಾನಿಲಯದಿಂದ ವಿಪತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಕಿಂಗ್‌ಫಿಷರ್ ಏರ್‌‍ಲೈನ್ಸ್ ‌ನಲ್ಲಿ ವೃತ್ತಿ ಜೀವನ‌ ಪ್ರಾರಂಭಿಸಿದ್ದರು. ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೇರುವ ಎಲ್ಲಾ ಅವಕಾಶಗಳಿದ್ದ ಅವರು ಒಂದು ದಿನ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗುತ್ತಾರೆ. ಅಪಘಾತ ಮಾಡಿದ ದುಷ್ಕರ್ಮಿ ಓಡಿ ಹೋಗುತ್ತಾರೆ. ಅಲ್ಲಿದ್ದ ಯಾರೂ ಅವರ ಸಹಾಯಕ್ಕೆ ಬರುವುದಿಲ್ಲ. ಯೋಗಿತಾ ಮತ್ತವರ ಸ್ನೇಹಿತರು ಸೇರಿ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ನೀಡಬೇಕಾದ ವೈದ್ಯರು ತಡ ಮಾಡಿದ್ದರಿಂದ ಪತ್ನಿ ಮತ್ತು ಒಂದರಿಂದ ಐದು ವರ್ಷಗಳೊಳಗಿನ ಮಕ್ಕಳನ್ನು ಅಗಲಿ ಗಾಯಾಳು ಮರಣ ಹೊಂದಿದರು. ಎಳವೆಯಿಂದಲೇ ಸಮಾಜ ಸೇವೆಯ ಕಡೆ ಆಕರ್ಷಿತರಾಗಿದ್ದ ಯೋಗಿತಾರ ಬದುಕಿನಲ್ಲಿ ಈ ಘಟನೆ ಬಹುದೊಡ್ಡ ಪ್ರಭಾವ ಬೀರಿತು.

ಅಪಘಾತಕ್ಕೀಡಾದವರ ಕುಟುಂಬಕ್ಕೆ ಬೆಂಬಲವಾಗಿ ಯೋಗಿತಾ ನಿಂತರು. ಅವರ‌‌ ಪರವಾಗಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು. ಈ ಮೂಲಕ ಅವರ ಹೆಂಡತಿ ಮತ್ತು ಮಕ್ಕಳಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ ಪರಿಹಾರ ಸಿಗುವಂತೆ ಮಾಡಿದರು.  ಆದರೆ ಈ ಘಟನೆಯಿಂದಾಗಿ ನ್ಯಾಯ ಪ್ರಕ್ರಿಯೆಯು ಎಷ್ಟು ಜಟಿಲವಾಗಿದೆ ಎಂಬುವುದು ಅವರಿಗೆ ಮೊದಲ ಬಾರಿ ಅನುಭವಕ್ಕೆ ಬಂತು. ಮತ್ತು ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು.

ಕ್ರಮೇಣ ಸಾಮಾಜಿಕ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ತಮ್ಮ ಕೆಲಸ ತೊರೆದರು. ಈ ಬಗ್ಗೆ ‘The better india’ ಜೊತೆ ಮಾತಾಡಿರುವ ಅವರು “ ಕೆಲಸವನ್ನು ತ್ಯಜಿಸುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು.  ನಾನು ಬಹಳ ಹಿಂದೆಯೇ ಸಾಮಾಜಿಕ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕಿತ್ತು ಎಂದು ಅನಿಸುತ್ತದೆ. ಆದರೆ ನಾನು ವಾಯುಯಾನದಲ್ಲಿನ ಕೆಲಸವನ್ನು ಬದುಕಿನ ಅನುಭವವಾಗಿ ಪರಿಗಣಿಸುತ್ತೇನೆ ”ಎಂದು ಹೇಳಿದ್ದಾರೆ.

2007 ರಲ್ಲಿ ಅವರು ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಸಹಾಯ ಮಾಡಲು ‘ದಾಸ್ ಚಾರಿಟೇಬಲ್ ಫೌಂಡೇಶನ್’ ಅನ್ನು ಸ್ಥಾಪಿಸಿ ಆಸ್ಪತ್ರೆಯ ಸುಧಾರಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಯತ್ನಿಸಿದರು. 2011 ರವರೆಗೆ ಟ್ರಸ್ಟ್‌ ‌ನಲ್ಲಿ  ಕೆಲಸ ಮಾಡಿದ ಅವರು ಮುಂದಿನ ವರ್ಷ, ದೆಹಲಿಯಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರದ ಸುದ್ದಿ ರಾಷ್ಟ್ರವನ್ನು ವ್ಯಾಪಿಸುತ್ತಿದ್ದಂತೆ ಅತ್ಯಚಾರ ವಿರೋಧಿ ಹೋರಾಟಕ್ಕೆ ಧುಮುಕಿದರು.

ಒಂಭತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ನಿರ್ಭಯಾ ಪ್ರಕರಣದ ನ್ಯಾಯ ದೊರಕಿತು. “ನಾನು ನಿರ್ಭಯಾ ಪ್ರಕರಣವನ್ನು ಕೈಗೆತ್ತಿಕೊಂಡಾಗ ಸುಮಾರು ಎಂಟು ಅಥವಾ ಒಂಬತ್ತು ಅತ್ಯಾಚಾರ ಮತ್ತು ಕ್ರೂರ ಪ್ರಕರಣಗಳನ್ನು ಹೊಂದಿದ್ದೆ.  ಆ ದಿನಗಳಲ್ಲಿ ನಾನು ಪ್ರತಿ ದಿನ ನ್ಯಾಯಾಲಯದಲ್ಲೇ ಕಳೆಯುತ್ತಿದ್ದೆ, ಒಂದು ವಿಚಾರಣೆಯಿಂದ ಇನ್ನೊಂದು ವಿಚಾರಣೆಗೆ ಹಾಜರಾಗಬೇಕಿತ್ತು. ನಿರ್ಭಯಾರ ತಾಯಿ ಪ್ರಪಂಚದ ಗಮನ ಮತ್ತು ಸಹಾಯವನ್ನು ಹೊಂದಿದ್ದರು, ಆದರೆ ಅದೆಷ್ಟೋ ಜನರ ನೋವು ಪ್ರಪಂಚಕ್ಕೆ ಗೊತ್ತೇ ಇರಲಿಲ್ಲ. ಅವರ ಪರವಾಗಿ ನಿಲ್ಲುವುದು ನನಗೆ ನಿಜವಾದ ಆಶೀರ್ವಾದವಾಗಿತ್ತು ” ಎಂದು ಅತ್ಯಾಚಾರ ಪ್ರಕರಣಗಳ ಭೀಕರತೆಯನ್ನು ಬಿಚ್ಚಿಡುತ್ತಾರೆ ಯೋಗಿತಾ.

“ನಾವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಇತರ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಂದ ನಮಗೆ ಅನೇಕ ಕರೆಗಳು ಬಂದವು. ನಾನು ಪ್ರತಿಭಟನೆಯಲ್ಲೂ ಕೆಲವು ಸಂತ್ರಸ್ತರನ್ನು ಭೇಟಿಯಾಗಿದ್ದೆ. ಒಂದು ಬಾರಿ ನಾನು  ಸಂತ್ರಸ್ತೆಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ದೆ, ಸುಮಾರು ನಾಲ್ಕು ಅಥವಾ ಐದು ವರ್ಷ ವಯಸ್ಸಿನ ಪುಟ್ಟ ಹುಡುಗಿಯದು.  ಆಸ್ಪತ್ರೆಯಲ್ಲಿ ನಾನು ಅಂತಹ ಹಲವಾರು ಶಿಶುಗಳನ್ನು ಭೇಟಿಯಾದೆ. ಅಂತಹ ಎಷ್ಟು ಹುಡುಗಿಯರು ಆಸ್ಪತ್ರೆಗಳಲ್ಲಿ ಕೊಳೆಯುತ್ತಿದ್ದಾರೆ ಅಥವಾ  ಸತ್ತಿದ್ದಾರೆ ಎಂದು ನಮಗೆ ತಿಳಿದಿಲ್ಲ ” ಎಂದು ಅವರು‌ ವಿಷಾದ ವ್ಯಕ್ತಪಡಿಸುತ್ತಾರೆ.

ನಿರ್ಭಯಾ ಪ್ರಕರಣವು ಬೆಳಕಿಗೆ ಬಂದ ನಂತರ, ಯೋಗಿತಾ ‘ಪೀಪಲ್ ಅಗೇನ್ಸ್ಟ್ ರೇಪ್ ಇನ್ ಇಂಡಿಯಾ’ (PARI) ಅನ್ನು ಪ್ರಾರಂಭಿಸಿದರು, ಇದು ಅತ್ಯಾಚಾರದ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪುನರ್ವಸತಿ, ನ್ಯಾಯ ಮತ್ತು ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಹಿಳೆಯರ ಸುರಕ್ಷತೆ, ಲಿಂಗ ಸಂವೇದನೆ ಮತ್ತು ಮಹಿಳಾ ಸಬಲೀಕರಣಗಳಲ್ಲಿ ಪುರುಷರೂ ಒಳಗೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನು PARI ಮಾಡುತ್ತದೆ.

“ಬದುಕುಳಿದವರಿಗೆ ಸಹಾಯ ಮಾಡುವುದು ಮುಖ್ಯ, ಆದರೆ ಅತ್ಯಾಚಾರ ತಡೆಗಟ್ಟುವ ಕೆಲಸ ಮಾಡುವುದು ಅಷ್ಟೇ ಮುಖ್ಯವಾಗಿದೆ. ಹಾಗೆ ಮಾಡದಿದ್ದರೆ, ಈ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತದೆ” ಎನ್ನುವ ಯೋಗಿತಾ “ನಾವು ಇಲ್ಲಿ ಎರಡು ಹಂತಗಳಲ್ಲಿ ವಿಫಲರಾಗಿದ್ದೇವೆ” ಎನ್ನುತ್ತಾರೆ. “ಮೊದಲನೆಯದಾಗಿ, ನೀತಿ ಮಟ್ಟದಲ್ಲಿ – ಮಹಿಳೆಯರು ಮತ್ತು ಸಂತ್ರಸ್ತರಿಗೆ ಪ್ರಯೋಜನವಾಗುವಂತೆ ಅನೇಕ ಕಾನೂನುಗಳು ಮತ್ತು ಸುಧಾರಣೆಗಳು ಅಸ್ತಿತ್ವದಲ್ಲಿವೆ, ಆದರೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ.  ಎರಡನೆಯದು, ಸಮಾಜದ ಮಟ್ಟದಲ್ಲಿ – ನಾವು ನಮ್ಮ ಮಹಿಳೆಯರನ್ನು ದೇವತೆಗಳಂತೆ ಅಥವಾ ವೇಶ್ಯೆಯರಂತೆ ನೋಡುತ್ತೇವೆ.  ಮಹಿಳೆಯರು ಪುರುಷರಿಗೆ ಸಮಾನವಾಗಿರಬೇಕು, ಮೇಲೂ ಅಲ್ಲ ಮತ್ತು ಕೀಳೂ ಅಲ್ಲ” ಎಂದು ಅತ್ಯಂತ ಪ್ರಾಯೋಗಿಕವಾಗಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ವಿವರಿಸುತ್ತಾರೆ.

ನಿಧಾನವಾಗಿ ನ್ಯಾಯದಾನವಾಗುವ ಭಾರತದಂಥ ದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಹಿಂದೆ ಹೋಗುವುದು ಸುಲಭವಲ್ಲ. ಅದರಲ್ಲೂ ಅತ್ಯಾಚಾತದಂತಹ ಪ್ರಕರಣಗಳಲ್ಲಿ ಹಲವು ಬಾರಿ ಸಂತ್ರಸ್ತರ ಪರವಾಗಿ ಹೋರಾಡುವವರು ಅಪರಾಧಿಗಳಿಂದ, ಪ್ರಭಾವಶಾಲಿಗಳಿಂದ ಬೆದರಿಕೆ ಎದುರಿಸುತ್ತಲೇ ಇರುತ್ತಾರೆ. ಇಂಥವನ್ನೆಲ್ಲಾ ಎದುರಿಸಿ, ನಿಗದಿತ ಮತ್ತು ಸ್ಥಿರ ಆದಾಯ ತರುವ ಕೆಲಸವನ್ನೂ ತೊರೆದು ಸಂತ್ರಸ್ತರ ಪರ ನಿಲ್ಲುವುದಕ್ಕೆ ಅಖಂಡ ಮಾನಸೀ ಸ್ಥೈರ್ಯ ಮತ್ತು ಬದ್ಧತೆ ಬೇಕು. ಹಾಗಾಗಿಯೇ ಯೋಗಿತಾರಂಥವರು ಭಾರತೀಯ ದಿನಮಾನದಲ್ಲಿ ಅಪರೂಪ ಅನ್ನಿಸಿಕೊಳ್ಳುತ್ತಾರೆ.

Tags: Yogitha bhayana: A girl who quits her job in airlines to help rape victims
Previous Post

ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆಗಿ ನೇಮಕ: ಇತರ ಭಾರತೀಯ ಮೂಲದ ಟೆಕ್ ಸಿಇಒಗಳತ್ತ ಒಂದು ನೋಟ

Next Post

ಓಮಿಕ್ರಾನ್ ಭೀತಿ : ಸರ್ಕಾರ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳು

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಓಮಿಕ್ರಾನ್ ಭೀತಿ : ಸರ್ಕಾರ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳು

ಓಮಿಕ್ರಾನ್ ಭೀತಿ : ಸರ್ಕಾರ ಕೈಗೊಳ್ಳಬೇಕಾದ ಮತ್ತು ಕೈಗೊಳ್ಳಬಾರದ ಕ್ರಮಗಳು

Please login to join discussion

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ
Top Story

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

by ಪ್ರತಿಧ್ವನಿ
July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
Top Story

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

by Shivakumar A
July 22, 2025
ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 
Top Story

ಮುಡಾ ಕೇಸ್ ನಲ್ಲಿ ಇ.ಡಿ ಗೆ ಸುಪ್ರೀಂ ಕೋರ್ಟ್ ತರಾಟೆ – ಡಿಕೆ ಬ್ರದರ್ಸ್ ಹೇಳಿದ್ದೇನು..?! 

by Chetan
July 22, 2025
ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ
Top Story

ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ʼನೆಕ್ಸ್ಟ್‌ ಲೆವೆಲ್‌ʼ ಸಿನಿಮಾ

by Shivakumar A
July 22, 2025
ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 
Top Story

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಜುಲೈ 24ಕ್ಕೆ ಮುಂದೂಡಿಕೆ..! 

by Chetan
July 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

Prahlad Joshi: ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ಕೇಂದ್ರದ್ದಲ್ಲ: ಪ್ರಹ್ಲಾದ್ ಜೋಶಿ

July 22, 2025
ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

ಇ.ಡಿ. ರಾಜಕೀಯ ಅಸ್ತ್ರವಾಗಿ ಬಳಕೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಮಹತ್ವದ್ದು: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್

July 22, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada