• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗಡಿ ವಿವಾದ : ಹೊಸ ಕಾನೂನು ರೂಪಿಸಿದ ಚೀನಾ ; ಮೋದಿ ಸರ್ಕಾರ ಹೇಳಿದ್ದೇನು?

ನಚಿಕೇತು by ನಚಿಕೇತು
October 27, 2021
in ದೇಶ, ರಾಜಕೀಯ
0
ಗಡಿ ವಿವಾದ : ಹೊಸ ಕಾನೂನು ರೂಪಿಸಿದ ಚೀನಾ ; ಮೋದಿ ಸರ್ಕಾರ ಹೇಳಿದ್ದೇನು?
Share on WhatsAppShare on FacebookShare on Telegram

ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಗ ಚೀನಾ ಅಧ್ಯಕ್ಷ ಜಿನ್ಪಿಂಗ್ ನೇತೃತ್ವದ ಸರ್ಕಾರ ಹೊಸ ವರಸೆಯೊಂದು ಶುರು ಮಾಡಿದೆ. ಗಡಿ ವಿವಾದಕ್ಕೆ ಸಂಬಂಧ ಚೀನಾ ಹೊಸ ಕಾನೂನೊಂದನ್ನ ತಂದಿದೆ. ಈ ಮೂಲಕ ಗಡಿ ಪ್ರದೇಶದ ಜನರನ್ನ ಎತ್ತಿ ಕಟ್ಟಿ ಭಾರತದ ಗಡಿ ಕಬಳಿಸೋಕೆ ಹೊಸ ಪ್ಲಾನ್ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರೋಪಿಸಿದೆ.

ADVERTISEMENT

ಚೀನಾ ಸೈನಿಕರು ಗಡಿಯಲ್ಲಿ ಖ್ಯಾತೆ ತೆಗೆಯೋದರಲ್ಲಿ ಎತ್ತಿದ ಕೈ ಚೀನಾ ಭಾರತದ ಜೊತೆಗೆ ಗಡಿಯಲ್ಲಿ ನಿತ್ಯವೂ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ. ತನ್ನದಲ್ಲದ ಜಾಗಕ್ಕೆ ಪ್ರವೇಶ ಮಾಡಿ ಇಡೀ ಜಾಗ ನನ್ನದು ಎಂದು ಠಿಕಾಣಿ ಹೂಡುತ್ತೆ. ಚೀನಾ, ಹೀಗೆ ಭಾರತದ ಭೂ ಪ್ರದೇಶ ಕಬಳಿಸಲು ಬಂದಾಗಲೆಲ್ಲಾ ನಮ್ಮ ಸೇನೆ ತಕ್ಕ ಪಾಠ ಕಲಿಸಿದೆ. ಹೀಗೆ ತನ್ನ ಆಟ ಭಾರತೀಯ ಸೇನೆ ಮುಂದೆ ನಡೆಯಲ್ಲ ಎಂದು ಗೊತ್ತಾಗುತ್ತಿದಂತೆಯೇ ಹೊಸ ನಾಟಕ ಶುರು ಮಾಡಿದೆ. ಇದೇ ಕಾರಣಕ್ಕೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ರಚಿಸಿದೆ ಎಂದು ಮೋದಿ ಸರ್ಕಾರ ಕೆಂಡಕಾರಿದೆ.

ಗಡಿಯಲ್ಲಿ ಮಿಲಿಟರಿ ಉದ್ವಿಗ್ನತೆ ಸೃಷ್ಠಿಯಾದ ಬೆನ್ನಲ್ಲೇ ಚೀನಾ ತನ್ನ ಭೂ ಗಡಿಗಳನ್ನು ಬಲಪಡಿಸಲು ಹೊಸ ಕಾನೂನು ಅಂಗೀಕರಿಸಿದೆ. ಚೀನಾ ಹಾಗೂ ಭಾರತದ ಗಡಿ ಪ್ರದೇಶಗಳಲ್ಲಿ ತನ್ನ ಸೇನೆಯನ್ನ ಬಲಪಡಿಸಲು ಈ ಹೊಸ ಕಾನೂನು ತಂದಿರುವುದಾಗಿ ಹೇಳಿಕೊಂಡಿದೆ ಎನ್ನಲಾಗುತ್ತಿದೆ.

ನಮ್ಮ ಸೇನೆ ಗಡಿ ಪ್ರದೇಶಗಳಲ್ಲಿನ ನಾಗರಿಕರ ಜೊತೆ ಉತ್ತಮ ಸಂಬಂಧ ಬೆಳೆಸಲು ಸಹಾಯವಾಗುತ್ತೆ. ಅಲ್ಲದೆ ದೀರ್ಘಕಾಲದ ಗಡಿ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ಈ ಹೊಸ ಕಾನೂನಿನಿಂದ ದೇಶದ ಗಡಿ ಪ್ರದೇಶಗಳನ್ನು ಬಲ ಪಡಿಸಿ, ಅಂತಹ ಜಾಗಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತೆ. ಹಾಗೆಯೇ ಅಲ್ಲಿನ ಪ್ರದೇಶಗಳಲ್ಲಿ ಮೂಲ ಸೌಕರ್ಯ ಸುಧಾರಿಸಲು ಕಾನೂನಿನಲ್ಲಿ ಷರತ್ತು ವಿಧಿಸಿರೋದಾಗಿ ಚೀನಾ ತಿಳಿಸಿದೆ.

ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಹೊಸ ಕಾನೂನು ತಂದಿರೋದಾಗಿ ಚೀನಾ ಹೇಳಿಕೊಂಡಿದೆ. ಆದ್ರೆ ಚೀನಾದ ಈ ನಡೆ ಹಿಂದೆ ಭಾರತದ ಭೂ ಪ್ರದೇಶವನ್ನ ಕಬಳಿಸುವ ಜೊತೆಗೆ ಭಾರತದ ವಿರುದ್ಧ ಸ್ಥಳೀಯರನ್ನ ಎತ್ತಿ ಕಟ್ಟುವ ಸಂಚೂ ಕೂಡ ಅಡಗಿದೆ ಎಂಬುದು ಮೋದಿ ಸರ್ಕಾರ ಆರೋಪ.

ಸದ್ಯ ಭಾರತ ಹಾಗೂ ಚೀನಾ ಗಡಿ ನಿಯಂತ್ರಣ ರೇಖೆಯಲ್ಲಿ ಮಿಲಿಟರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಸ್ಥಳೀಯರಿಗೆ ಮೂಲ ಸೌಕರ್ಯಗಳನ್ನ ಒದಗಿಸಿ ಅವರನ್ನೇ ಸೇನೆಯಾಗಿಸುವ ಹುನ್ನಾರ ಚೀನಾದ ಈ ನಡೆಯ ಹಿಂದಿದೆ ಎನ್ನುತ್ತಿದೆ ಮೋದಿ ಸರ್ಕಾರ.

ಇನ್ನು ಭಾರತ ಹಾಗೂ ಚೀನಾ ಗಡಿ ಪ್ರದೇಶದ ಜನರು ಭಾರತದ ಪರವಾಗಿಯೇ ಇದ್ದಾರೆ. ಹೀಗಾಗಿ ಅಲ್ಲಿನ ಎಲ್ಲ ಸ್ಥಳೀಯರಿಗೆ ಆರ್ಥಿಕ ನೆರವು ನೀಡಿ ಅವರನ್ನ ಭಾರತದ ವಿರುದ್ಧ ಎತ್ತಿ ಕಟ್ಟಲು ಚೀನಾ ಮಾಸ್ಟರ್ ಪ್ಲಾನ್ ರೂಪಿಸಿದೆ. ಇಷ್ಟೆ ಅಲ್ಲದೆ ಗಡಿ ಪ್ರದೇಶಗಳಲ್ಲಿ ನಗರಗಳನ್ನ ನಿರ್ಮಿಸಿ, ಚೀನಾ ತನಗೆ ಬೇಕಾದ ಎಲ್ಲಾ ಮಿಲಿಟರಿ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಗಡಿಯಲ್ಲಿ ತನ್ನ ಸೇನಾ ಪ್ರಾಬಲ್ಯವನ್ನ ಹೆಚ್ಚಿಸಿಕೊಂಡು ಭಾರತದ ಭೂ ಪ್ರದೇಶ ಕಬಳಿಸುವ ದಾರಿಯನ್ನ ಸುಗಮ ಮಾಡಿಕೊಳ್ಳಲು ಚೀನಾ ತಂತ್ರ ಹೆಣೆದಿದೆ ಎಂಬ ಮಾತುಗಳು ಮೋದಿ ಸರ್ಕಾರದಿಂದಲೇ ಕೇಳಿ ಬಂದಿವೆ.

ಈ ಎಲ್ಲಾ ತಂತ್ರಗಾರಿಕೆಯಿಂದ ಚೀನಾ ಹೊಸ ಕಾನೂನುವೊಂದನ್ನ ರಚಿಸಿದೆ. ಈ ಮೂಲಕ ಹಾವು ಸಾಯಬಾರದು, ಕೋಲು ಮುರಿಬಾರದು ಎನ್ನುವಂತೆ ಭಾರತದ ಭೂ ಪ್ರದೇಶವನ್ನ ಕಬಳಿಸಲು ಪ್ಲಾನ್ ರೂಪಿಸಿದೆ ಎಂದು ಭಾರತವಂತೂ ಹೇಳುತ್ತಿದೆ. ಸದ್ಯ ಚೀನಾ ಮತ್ತು ಭಾರತದ ಈ ವಾಕ್ಸಮರದ ಹಿಂದೆ ರಾಜಕೀಯ ನಡೆ ಇರುವುದು ಎರುಡ ದೇಶಗಳ ಪ್ರಜೆಗಳಿಗೆ ಗೊತ್ತಿರುವ ಸಂಗತಿ.

Tags: BJPCongress PartyCovid 19ಕಾನೂನುಕೋವಿಡ್-19ಗಡಿ ವಿವಾದಚೀನಾ-ಭಾರತ ಗಡಿ ವಿವಾದನರೇಂದ್ರ ಮೋದಿಬಿಜೆಪಿ
Previous Post

ಮೂಗೂರು : ನಿರ್ಮಾಣದ ಹಂತದ ವಾಲ್ಮೀಕಿ ಭವನದ ವಿವಾದ,ನ್ಯಾಯ ಕೇಳಿದ್ದಕ್ಕೆ ಹಲ್ಲೆ

Next Post

ಹಾನಗಲ್‌ ಉಪಚುನಾವಣೆ: ‘ಮತದಾರರಿಗೆ ಮೋಡಿ’ ಮಾಡಿದ ಕ್ಷೇತ್ರ ಉಸ್ತುವಾರಿ ಮುರುಗೇಶ್ ನಿರಾಣಿ

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
Next Post
ಹಾನಗಲ್‌ ಉಪಚುನಾವಣೆ: ‘ಮತದಾರರಿಗೆ ಮೋಡಿ’ ಮಾಡಿದ ಕ್ಷೇತ್ರ ಉಸ್ತುವಾರಿ ಮುರುಗೇಶ್ ನಿರಾಣಿ

ಹಾನಗಲ್‌ ಉಪಚುನಾವಣೆ: 'ಮತದಾರರಿಗೆ ಮೋಡಿ' ಮಾಡಿದ ಕ್ಷೇತ್ರ ಉಸ್ತುವಾರಿ ಮುರುಗೇಶ್ ನಿರಾಣಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada