ಕಳೆದ ವರ್ಷ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನಟಿ ಶೃತಿ ಅವರನ್ನು ನೇಮಕ ಮಾಡಿದ್ದ ರಾಜ್ಯ ಸರ್ಕಾರ ಈಗ ದಿಢೀರನೆ ನೇತಕಾತಿಯನ್ನು ಹಿಂಪಡೆದಿರುವಾಗಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಅದೇಶವನ್ನು ಹೊರಡಿಸಿದ್ದಾರೆ.
ಈ ಕುರಿತು ಅದೇಶ ಪತ್ರವನ್ನು ಹೊರಡಿಸಿರುವ ಅವರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರಯವ ಶ್ರೀಮತಿ ಶೃತಿ ಇವರ ನೇಮಕಾತಿಯನ್ನು ಹಿಂಡಪಡೆದು ಕಾಪು ಸಿದ್ದಲಿಂಗಸ್ವಾಮಿ, ಕಾರ್ಯ ಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ದಿಢೀರನೆ ನೇಮಕಾತಿಯನ್ನು ಹಿಂಪಡೆದು ನೂತನ ಅಧ್ಯರನ್ನು ನೇಮಿಸಿರುವ ಕುರಿತು ಏಕೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ದೊರಕಿಲ್ಲ. ಆದರೆ ದಿಡೀರ್ ಅಧ್ಯಕ್ಷರ ಬದಲಾವಣೆ ಮುಂದೆ ಅಸಮಾಧಾನಕ್ಕೆ ಕಾರಣವಾಗಬಹುದೆ ಎಂಬುದನ್ನು ನೋಡಬೇಕಿದೆ.