• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!

by
September 2, 2020
in ದೇಶ
0
ನಿರ್ಮಲಾ ಸೀತಾರಾಮನ್‌ರಂಥ ಹಣಕಾಸು ಸಚಿವರಿರುವುದು ಆ್ಯಕ್ಟ್ ಆಫ್ ಗಾಡ್ ಅಲ್ಲದೆ ಬೇರೇನೂ ಅಲ್ಲ!
Share on WhatsAppShare on FacebookShare on Telegram

ಕಳೆದವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಮೀಟಿಂಗ್‌ನಲ್ಲಿ ಎಲ್ಲಾ ರಾಜ್ಯಗಳು ಈ ಬಾರಿ ರಾಜ್ಯದ ಪಾಲಿನ ಜಿಎಸ್‌ಟಿ (GST) ಪರಿಹಾರದ ಪ್ರಮಾಣವನ್ನು ಹೆಚ್ಚಿಸಿ ಎಂದು ಒಕ್ಕೊರಲ ಮನವಿ ಮಾಡಿದ್ದವು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂದೇ ಏಟಿಗೆ ಕೇಂದ್ರದ ಬಳಿ ಹಣ ಇಲ್ಲ, ಕೊಡಲಾಗುವುದಿಲ್ಲ ಎಂದು ನಿವಾಳಿಸಿ ಬಿಸಾಕಿದ್ದರು. ಆರ್ಥಿಕ ವಹಿವಾಟು ನೆಟ್ಟಗೆ ನಡೆದರೆ ತಾನೇ ಸರಕು ಸೇವಾ ತೆರಿಗೆ ಸಂಗ್ರಹವಾಗುವುದು. ತೆರಿಗೆ ಸಂಗ್ರಹ ಆಗದೇ ಇರುವುದಕ್ಕೆ ಆರ್ಥಿಕ ವ್ಯವಹಾರ ನಡೆದಿಲ್ಲ ಎನ್ನುವುದು ಒಂದೇ ಕಾರಣವಾದರೆ. ಆರ್ಥಿಕ ವ್ಯವಹಾರ ನಡೆಯದೇ ಇರುವುದಕ್ಕೆ ಕರೋನಾ ಅಥವಾ ಲಾಕ್‌ಡೌನ್ ಒಂದೇ ಕಾರಣವಲ್ಲ. ನೋಟ್ ಬ್ಯಾನ್‌ನಿಂದ ಹಿಡಿದು, ಸಮರ್ಪಕವಲ್ಲದ ಜಿಎಸ್‌ಟಿ ಜಾರಿಯೂ ಸೇರಿದಂತೆ ನರೇಂದ್ರ ಮೋದಿ ಸರ್ಕಾರದ ಹತ್ತಾರು ಆರ್ಥಿಕ ನೀತಿಗಳು ಕಾರಣ. ಆದರೆ ನಿರ್ಮಲಾ ಸೀತಾರಾಮನ್ ಆರ್ಥಿಕ ಇಲಾಖೆ ನಿಭಾಯಿಸಲಾರದ ತಮ್ಮ ಅಸಮರ್ಥತೆಯನ್ನು, ತಮ್ಮ ಪ್ರಧಾನ ಮಂತ್ರಿಗಳ ದೂರದೃಷ್ಟಿ ಕೊರತೆಯನ್ನು ಬದಿಗೆ ಸರಿಸಿ ‘ಕರೋನಾದಿಂದಲೇ ಈ ಪರಿಸ್ಥಿತಿ ನಿರ್ಮಣವಾಗಿದೆ’ ಎಂಬ ಅರ್ಥ ಬರುವಂತೆ ‘Act of God’ (ದೇವರ ಆಟ) ಎಂದು ದೇವರ ಮೇಲೆಯೇ ಆರೋಪ ಹೊರಿಸಿಬಿಟ್ಟರು.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿರ್ಮಲಾ ಸೀತಾರಾಮನ್ ಅವರು ಬಡಪಾಯಿ ದೇವರ ಮೇಲೆ ಮಾಡಬಾರದ ಆರೋಪ ಮಾಡಿದ್ದೇಕೆಂದು ಮೊನ್ನೆ (ಆ. 31) ದೇಶವಾಸಿಗಳಿಗೆ ಅರ್ಥವಾಯಿತು. ಇದೇ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಜೋಡಿಯ ಕೃಪೆಯಿಂದ ದೇಶದ ಜಿಡಿಪಿ ಕಳೆದ 40 ವರ್ಷಗಳ ಬಳಿಕ -23.9ರಷ್ಟು ಕೆಳಗಿಳಿದಿದೆ. ಮರುದಿನ (ಸೆಪ್ಟೆಂಬರ್ 1) ಆಗಸ್ಟ್ ತಿಂಗಳ ಜಿಎಸ್‌ಟಿ ಸಂಗ್ರಹದ ವಿವರಗಳು ಹೊರಬಿದ್ದಿವೆ. ಆಗಸ್ಟ್ ತಿಂಗಳಲ್ಲಿ 86,449 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಪೈಕಿ 15,906 ಕೇಂದ್ರದ ಜಿಎಸ್‌ಟಿ. 21,064 ಕೋಟಿ ರೂಪಾಯಿ ರಾಜ್ಯದ ಜಿಎಸ್‌ಟಿ. ಸಂಯೋಜಿತ ಸರಕು ಸೇವಾ ತೆರಿಗೆ ರೂಪದಲ್ಲಿ ಬಂದಿರುವುದು 42,264 ಕೋಟಿ ರೂಪಾಯಿ. ಇದಲ್ಲದೆ 19,179 ಕೋಟಿ ರೂಪಾಯಿ ಆಮದು ಶುಲ್ಕ ಬಂದಿದೆ. ಆಮದು ಸೆಸ್ 673 ಕೋಟಿ ರೂಪಾಯಿ ಬಂದಿದೆ ಮತ್ತು ಇತರೆ ಸೆಸ್‌ಗಳಿಂದ 7,215 ಕೋಟಿ ರೂಪಾಯಿ ಬಂದಿದೆ. ಇಷ್ಟಾದರೂ ಕಳೆದ ಬಾರಿಗಿಂತ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿದೆ. 2019ರ ಆಗಸ್ಟ್ ತಿಂಗಳಲ್ಲಿ 98,202 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಶೇಕಡಾ 12ರಷ್ಟು ಕಡಿಮೆಯಾಗಿದೆ. ಕಳೆದ ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಶೇಕಡಾ 1 ರಷ್ಟು ಮಾತ್ರ ಕಡಿಮೆಯಾಗಿದೆ.

2020ರ ಆಗಸ್ಟ್ ತಿಂಗಳಲ್ಲಿ 86,449 ಕೋಟಿ ಸಂಗ್ರಹವಾಗಿದೆ, 2019ರ ಆಗಸ್ಟ್ನಲ್ಲಿ 98,202 ಕೋಟಿ ಸಂಗ್ರಹವಾಗಿತ್ತು ಎನ್ನುವುದಾದರೆ ವ್ಯತ್ಯಾಸ ಇರುವುದು 11,753 ಕೋಟಿ ರೂಪಾಯಿ ಮಾತ್ರ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು. 86,449 ಕೋಟಿ ರೂಪಾಯಿಗಳಲ್ಲಿ ರಾಜ್ಯದ ಪಾಲು 21,064 ಕೋಟಿ ರೂಪಾಯಿ ಬಿಟ್ಟರೆ ಉಳಿದ 65,385 ಕೋಟಿ ರೂಪಾಯಿಗಳು ಇಡಿಯಾಗಿ ಕೇಂದ್ರ ಸರ್ಕಾರದ ತಿಜೋರಿಗೆ ಸೇರಿಕೊಳ್ಳುತ್ತವೆ. ಆ 65,385 ಕೋಟಿ ರೂಪಾಯಿಗಳಲ್ಲಿ ಈ ತಿಂಗಳಲ್ಲಿ ಕಡಿಮೆಯಾಗಿರುವ 11,753 ಕೋಟಿ ರೂಪಾಯಿಯನ್ನು ಕಳೆದರೆ ಕೇಂದ್ರ ಸರ್ಕಾರಕ್ಕೆ ಆಗಸ್ಟ್ ತಿಂಗಳಲ್ಲಿ 53,632 ಕೋಟಿ ರೂಪಾಯಿ ಉಳಿಯುತ್ತದೆ. ಆದರೂ ನಿರ್ಮಲಾ ಸೀತಾರಾಮನ್ ಅವರು ‘ಕೇಂದ್ರ ಸರ್ಕಾರದ ಬಳಿ ದುಡ್ಡಿಲ್ಲ, ಇದು ದೇವರ ಆಟ’ ಎನ್ನುತ್ತಾರೆ. ನಿಜ, ಕೇಂದ್ರ ಸರ್ಕಾರದ ಬಳಿ ದುಡ್ಡಿದ್ದು, ರಾಜ್ಯಗಳಿಗೆ ದರ್ದು ಇದ್ದು ನಮ್ಮದು ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತು ಅವರು ದುಡ್ಡು ಕೊಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಎಂದರೆ ರಾಜ್ಯಗಳನ್ನು ಮತ್ತು ರಾಜ್ಯದ ಜನರನ್ನು ದೇವರೇ ಕಾಪಾಡಬೇಕು.

ಮೇಲೆ ನೀಡಲಾಗಿರುವ ಟೇಬಲ್‌ನಲ್ಲಿ ಅಂಕಿ ಅಂಶಗಳನ್ನು ಗಮನಿಸಿದರೆ ಇನ್ನೊಂದು ವಿಷಯವೂ ಸ್ಪಷ್ಟವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳನ್ನು ಹೊರತುಪಡಸಿದರೆ ಉಳಿದ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಹೀನಾಯ ಸ್ಥಿತಿಯನ್ನೇನೂ ತಲುಪಿಲ್ಲ. 2019-20ನೇ ಆರ್ಥಿಕ ವರ್ಷಕ್ಕೆ ಹೋಲಿಸಿಕೊಂಡರೆ 2020-21ನೇ ಆರ್ಥಿಕ ವರ್ಷದಲ್ಲಿ ಕರೋನಾ ಮತ್ತು ಲಾಕ್‌ಡೌನ್ ನಡುವೆಯೂ ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ ತೀರಾ ನಿರಾಶಾದಾಯಕವಾದುದಲ್ಲ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಜೂನ್‌ನಲ್ಲಿ 9,022 ಕೋಟಿ ರೂಪಾಯಿ ವ್ಯತ್ಯಾಸವಿದೆ. ಜುಲೈ ತಿಂಗಳಲ್ಲಿ 14,661 ಕೋಟಿ ರೂಪಾಯಿ ವ್ಯತ್ಯಾಸವಿದೆ. 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುತ್ತಿದ್ದೇವೆ ಎಂದು ವಾರಗಟ್ಟಲೆ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತು ಅದರ ಪ್ರೇರಕ ಶಕ್ತಿ ಪ್ರಧಾನಿ ನರೇಂದ್ರ ಮೋದಿಗೆ ‘ಇಷ್ಟು ಮಾತ್ರದ ಖೋತಾವನ್ನು’ ಭರಿಸಲು ಸಾಧ್ಯವಾಗುತ್ತಿರಲಿಲ್ಲವೇ?

ಪ್ರತಿಬಾರಿ ರಾಜ್ಯವಾರು ಅನುದಾನ ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಈಗಲೂ ರಾಷ್ಟ್ರೀಯವಾಗಿ ಆಗಸ್ಟ್ ತಿಂಗಳಲ್ಲಿ ಶೇಕಡಾ 12ರಷ್ಟು ಜಿಡಿಪಿ ಕುಸಿತವಾಗಿದ್ದರೆ ಕರ್ನಾಟಕದಲ್ಲಿ ಶೇಕಡಾ 11ರಷ್ಟು ಕುಸಿತವಾಗಿದೆ. ಅಂದರೆ ರಾಷ್ಟ್ರೀಯ ಕುಸಿತಕ್ಕಿಂತ ರಾಜ್ಯದ ಕುಸಿತ ಕಡಿಮೆ. ಆದರೂ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರವಿರಲಿ, ಇನ್ನಿತರೆ ನೆರೆ-ಬರಕ್ಕೆ ನೀಡುವ ಪರಿಹಾರವಾಗಲಿ ಕಮ್ಮಿ ಮತ್ತು ಅದನ್ನೂ ಕಾಡಿಬೇಡಿ ಪಡೆಯಬೇಕು. ಆಗಸ್ಟ್ ತಿಂಗಳಲ್ಲಿ ಕರ್ನಾಟಕದಿಂದ 5,502 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 6,201 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. ದೇಶದಲ್ಲಿ ಅತಿಹೆಚ್ಚು ಜಿಎಸ್‌ಟಿ ಸಂಗ್ರಹವಾಗಿರುವುದು ಮಹಾರಾಷ್ಟದಿಂದ; 11,602 ಕೋಟಿ ರೂಪಾಯಿ. ನಂತರದ ಸರದಿ ಗುಜರಾತ್; 6,030 ಕೋಟಿ ರೂಪಾಯಿ. ಬಳಿಕ ಮೂರನೇ ಸ್ಥಾನದಲ್ಲಿರುವುದೇ ಕರ್ನಾಟಕ; 5,502 ಕೋಟಿ ರೂಪಾಯಿ. ಹೀಗೆ ತೆರಿಗೆ ತೆತ್ತುವುದರಲ್ಲಿ ಎತ್ತರದಲ್ಲಿದ್ದರೂ ವಾಪಸ್ ಅನುದಾನ ಪಡೆಯುವಾಗ ಮಾತ್ರ ಕೆಳಗೆ ನಿಂತು ಅಂಗಲಾಚಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಹೆಚ್ಚು ತೆರಿಗೆ ನೀಡುತ್ತಿದ್ದರೂ, ನಮ್ಮವರೇ ಕೇಂದ್ರದ ಹಣಕಾಸು ಸಚಿವರಾಗಿದ್ದರೂ (ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಿರುವುದು) ನಾವು ಕೇಂದ್ರ ಸರ್ಕಾರದ ಮುಂದೆ ಕೈಕಟ್ಟಿ ನಿಲ್ಲಬೇಕಾಗಿರುವುದು ನಿಜಕ್ಕೂ ‘ಆ್ಯಕ್ಟ್ ಆಫ್ ಗಾಡ್’ ಅರ್ಥಾತ್ ದೇವರ ಆಟವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ.

Tags: GDPGSTNirmala Seetaramanನಿರ್ಮಲಾ ಸೀತರಾಮನ್
Previous Post

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಉರುಳು; ಉತ್ತರವಾಗಬೇಕಿದೆ ಪುರಾವೆಗಳು

Next Post

ಜಾನುವಾರು ಬಳಕೆಗೆ ಸೂಕ್ತವಾದ ಅಕ್ಕಿಯನ್ನು ಬುಡಕಟ್ಟು ಜನರಿಗೆ ವಿತರಿಸಿದ ಮ.ಪ್ರ ಸರ್ಕಾರ

Related Posts

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
0

----ನಾ ದಿವಾಕರ---- ಡಿಜಿಟಲ್‌ ಯುಗದಲ್ಲೂ ಅಮಾನವೀಯ ಸಾಂಪ್ರದಾಯಿಕತೆ ಜೀವಂತವಾಗಿರುವುದು ದುರಂತ 2047ರ ವೇಳೆಗೆ ಪೂರ್ಣ ವಿಕಾಸದ ಕನಸು ಕಾಣುತ್ತಿರುವ ಡಿಜಿಟಲ್‌ ಭಾರತ ತಾನು ಪರಿಭಾವಿಸಿಕೊಂಡಿರುವ ʼಪ್ರಗತಿ-ಆಧುನಿಕತೆ-ನಾಗರಿಕತೆʼಯ ಪರಿಕಲ್ಪನೆಗಳನ್ನು...

Read moreDetails

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
Next Post
ಜಾನುವಾರು ಬಳಕೆಗೆ ಸೂಕ್ತವಾದ ಅಕ್ಕಿಯನ್ನು ಬುಡಕಟ್ಟು ಜನರಿಗೆ ವಿತರಿಸಿದ ಮ.ಪ್ರ ಸರ್ಕಾರ

ಜಾನುವಾರು ಬಳಕೆಗೆ ಸೂಕ್ತವಾದ ಅಕ್ಕಿಯನ್ನು ಬುಡಕಟ್ಟು ಜನರಿಗೆ ವಿತರಿಸಿದ ಮ.ಪ್ರ ಸರ್ಕಾರ

Please login to join discussion

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ
Top Story

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

by ಪ್ರತಿಧ್ವನಿ
June 28, 2025
Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

ನವ ಭಾರತದ ಪ್ರಾಚೀನ ಸಮಾಜಗಳ ನಡುವೆ

June 28, 2025

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada