• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

by
March 6, 2020
in ದೇಶ
0
Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?
Share on WhatsAppShare on FacebookShare on Telegram

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಸಹಕಾರಿ ಬ್ಯಾಂಕೂ ಸೇರಿದಂತೆ ಕೆಲ ಬ್ಯಾಂಕ್‌ ಗಳ ಬಿಕ್ಕಟ್ಟು ,ಅವ್ಯವಹಾರಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಿನ ಉದಾಹರಣೆ ಎಂದರೆ ಯೆಸ್‌ ಬ್ಯಾಂಕಿನದ್ದಾಗಿದೆ. ಸಾರ್ವಜನಿಕರ ಠೇವಣಿಗಳನ್ನು ರಕ್ಷಿಸಲು ಆರ್‌ಬಿಐ ನ ಮದ್ಯಪ್ರವೇಶ ಸಕಾಲಿಕವೂ ಮತ್ತು ಕಾನೂನಿಗನುಗುಣವಾಗಿಯೇ ಇದೆ. ಅದರೆ ಆರ್‌ಬಿಐ ಮದ್ಯ ಪ್ರವೇಶ ಆದಾಗಲೆಲ್ಲ ಗ್ರಾಹಕರು ಇಟ್ಟಿರುವ ಠೇವಣಿಯನ್ನು ಹಿಂಪಡೆಯಲು ಬಹಳ ಕಷ್ಟ ನಷ್ಟ ಅನುಭವಿಸಬೇಕಾಗಿ ಬರುವುದು ನಿಜಕ್ಕೂ ದುರಾದೃಷ್ಟಕರ.

ADVERTISEMENT

ಖಾಸಗಿ ವಲಯದ Yes Bank ಈಗಾಗಲೇ ಬಂಡವಾಳ ಕೊರತೆಯನ್ನು ಅನುಭವಿಸುತಿದ್ದು ಗುರುವಾರ ರಾತ್ರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ ) ಠೇವಣಿದಾರರಿಗೆ ಹಣ ಹಿಂಪಡೆಯಲು ನಿರ್ಬಂಧ ಹೇರಿದ ನಂತರ ಬಿಕ್ಕಟ್ಟು ಮತ್ತಷ್ಟು ಉಲ್ಪಣಗೊಂಡಿದೆ. ಅರ್‌ಬಿಐ ಬ್ಯಾಂಕಿನ ಆಡಳಿತ ಮಂಡಳಿಯನ್ನೂ 30 ದಿನಗಳವರೆಗೆ ಅಮಾನತ್ತಿನಲ್ಲಿಟ್ಟಿದ್ದು ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಪ್ರಶಾಂತ್‌ ಕುಮಾರ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ.

ಯೆಸ್ ಬ್ಯಾಂಕಿನಲ್ಲಿನ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ. “ಸಾಲದ ನಷ್ಟವನ್ನು ಪರಿಹರಿಸಲು ಬಂಡವಾಳವನ್ನು ಸಂಗ್ರಹಿಸಲು ಅಸಮರ್ಥತೆಯಿಂದಾಗಿ ಬ್ಯಾಂಕಿನ ಆರ್ಥಿಕ ಸ್ಥಿತಿಯು ಸ್ಥಿರವಾದ ಕುಸಿತಕ್ಕೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿನ ಗಂಭೀರ ಆಡಳಿತ ಸಮಸ್ಯೆಗಳು ಮತ್ತು ವಹಿವಾಟು ಕೊರತೆಯನ್ನೂ ಸಹ ಅನುಭವಿಸಿದೆ, ಇದು ಬ್ಯಾಂಕಿನ ಸ್ಥಿರ ಕುಸಿತಕ್ಕೆ ಕಾರಣವಾಗಿದೆ” ಎಂದು ಅರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಹಣ ವಾಪಸಾತಿ ನಿರ್ಬಂಧಗಳು ಗುರುವಾರ ಸಂಜೆ 6 ಘಂಟೆಯಿಂದ ಜಾರಿಗೆ ಬಂದಿದ್ದು, ಏಪ್ರಿಲ್ 3, 2020 ರವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಅಧಿಸೂಚನೆಯ ಪ್ರಕಾರ ಏಪ್ರಿಲ್ 3 ರವರೆಗೆ ಯಾವುದೇ ಉಳಿತಾಯ, ಕರೆಂಟ್ ಅಥವಾ ಇನ್ನಾವುದೇ ಠೇವಣಿ ಖಾತೆಯಲ್ಲಿ ತಿಂಗಳಿಗೆ 50,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿದಾರರಿಗೆ ಪಾವತಿಸಬಹುದು. ಅದರೆ ಇದಕ್ಕಿಂತ ಹೆಚ್ಚಿನ ಠೇವಣಿಯನ್ನು ಹಿಂಪಡೆಯಲು ಅವಕಾಶವಿಲ್ಲ. ನೀವು ಯೆಸ್‌ ಬ್ಯಾಂಕಿನಲ್ಲಿ ಖಾತೆದಾರರಾಗಿದ್ದರೆ, ತಿಂಗಳಿಗೆ 50,000 ರೂ.ಗಿಂತ ಹೆಚ್ಚಿನದನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಹೆಚ್ಚಿನ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ. ವೈದ್ಯಕೀಯ ವೆಚ್ಚ, ಶಿಕ್ಷಣಕ್ಕಾಗಿ ಮತ್ತು ಮದುವೆಯ ಸಂದರ್ಭದಲ್ಲಿ ಅರ್‌ಬಿಐ ಹಣ ಹಿಂಪಡೆಯಲು ಅರ್‌ಬಿಐ ಅನುಮತಿ ನೀಡಲಿದೆ.

ಯೆಸ್‌ ಬ್ಯಾಂಕಿನ ಆಸ್ತಿ ಮೌಲ್ಯ ಕಳೆದ ಕೆಲವು ವರ್ಷಗಳಿಂದ ಹದಗೆಟ್ಟಿದೆ. ತನ್ನ ನಿಷ್ಕ್ರಿಯ ಆಸ್ತಿಗಳನ್ನು (ಎನ್‌ಪಿಎ) ಒಂದಕ್ಕಿಂತ ಹೆಚ್ಚು ಬಾರಿ ಕಡಿಮೆ ತೋರಿಸಿದ್ದುದಕ್ಕಾಗಿ ಯೆಸ್‌ ಬ್ಯಾಂಕ್‌ ಅರ್‌ಬಿಐ ನ ಕೆಂಗಣ್ಣಿಗೆ ಗುರಿಯಾಗಿತ್ತು. 2019 ರ ಹಣಕಾಸು ವರ್ಷದಲ್ಲಿ Yes Bank 3,277 ಕೋಟಿ ರೂಪಾಯಿಗಳ ಕೆಟ್ಟ ಸಾಲ ಮತ್ತು 978 ಕೋಟಿ ರೂಪಾಯಿಗಳ ಅನುತ್ಪಾದಕ ಆಸ್ತಿ (ಎನ್‌ಪಿಏ)ಹೊಂದಿದೆ. 2019-20ರ ಎರಡನೇ ತ್ರೈಮಾಸಿಕದ ಕೊನೆಯಲ್ಲಿ, ಯೆಸ್‌ ಬ್ಯಾಂಕಿನ ಪ್ರಮುಖ ಬಂಡವಾಳ ಅನುಪಾತವು ಆರ್‌ಬಿಐ ಆದೇಶಿಸಿದ 8% ಬದಲಾಗಿ ಶೇಕಡಾ 8.7 ರಷ್ಟಿತ್ತು. ಬ್ಯಾಂಕಿನ ಎನ್‌ಪಿಏ ಏರಿಕೆ ದಾಖಲಿಸಿದರೆ ಇದು ಮತ್ತಷ್ಟು ಕುಸಿತಕ್ಕೆ ಕಾರಣವಾಗಲಿದೆ. ಇದರ ಒಟ್ಟು ಎನ್‌ಪಿಎ ಅನುಪಾತವು 2019 ರ ಸೆಪ್ಟೆಂಬರ್‌ನಲ್ಲಿ 7.39% ರಷ್ಟಿತ್ತು. ಬ್ಯಾಂಕಿನ ಆಡಳಿತ ಮಂಡಳಿ 31,000 ಕೋಟಿ ರೂ.ಗಳ ಠೇವಣಿಯನ್ನು ಬ್ಯಾಂಕಿನ ಆಡಳಿತವು ಘೋಷಿಸಿತು, ಅದರಲ್ಲಿ ಕನಿಷ್ಠ ಕಾಲು ಭಾಗದಷ್ಟು ಕೆಟ್ಟದ್ದಾಗಿರಬಹುದು. ಸಾಕಷ್ಟು ಬಂಡವಾಳವಿಲ್ಲದೆ, ಬ್ಯಾಂಕ್ ತನ್ನ ಸಾಮಾನ್ಯ ಇಕ್ವಿಟಿ ಶ್ರೇಣಿ -1 ಅನುಪಾತವು ನಿಯಂತ್ರಕ ಕನಿಷ್ಠ 8% ಕ್ಕಿಂತ ಕಡಿಮೆಯಾಗುತ್ತದೆ. ಸರಳವಾಗಿ ಹೇಳುವುದಾದರೆ, ಬ್ಯಾಂಕಿನ ಬೆಳವಣಿಗೆಗೆ ಮತ್ತು ಅದರ ನಿಯಂತ್ರಕ ಅವಶ್ಯಕತೆಗಳನ್ನು ಪೂರೈಸಲು ಬಂಡವಾಳದ ಅಗತ್ಯವಿದೆ.

ಬ್ಯಾಂಕು ಕಳೆದ ಮೂರು ವರ್ಷಗಳಲ್ಲಿ ತೀವ್ರ ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿದೆ. 2018 ರಲ್ಲಿ, ಯೆಸ್ ಬ್ಯಾಂಕಿನ ಮುಖ್ಯಸ್ಥ ರಾಣಾ ಕಪೂರ್ ಅವರ “ಹೆಚ್ಚು ಅನಿಯಮಿತ ಸಾಲ ನಿರ್ವಹಣಾ ಅಭ್ಯಾಸಗಳು, ಆಡಳಿತದಲ್ಲಿನ ಗಂಭೀರ ನ್ಯೂನತೆಗಳು ಮತ್ತು ಕಳಪೆ ಅನುಸರಣೆ ಕಾರಣದಿಂದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವಾವಧಿ ವಿಸ್ತರಣೆಯನ್ನು ನೀಡಲು ಆರ್‌ಬಿಐ ತೀವ್ರವಾಗಿ ನಿರಾಕರಿಸಿತು. ಇನ್ನೂ ಗಂಭಿರವಾದದ್ದೇನೆಂದರೆ, ಯೆಸ್ ಬ್ಯಾಂಕಿನ ಮಂಡಳಿಯು ಅಸಹ್ಯವಾದ ಕಾರ್ಪೊರೇಟ್ ಆಡಳಿತದ ಮಾನದಂಡಗಳನ್ನು ಪ್ರದರ್ಶಿಸುವುದರ ಜೊತೆಗೆ ನಿಷ್ಕ್ರಿಯವಾಗಿದೆ.‌ 2019 ರ ಆರಂಭದಲ್ಲಿ ಯೆಸ್ ಬ್ಯಾಂಕ್‌ಗೆ ಸೇರ್ಪಡೆಯಾದ ಡಚ್‌ಸ್ ಬ್ಯಾಂಕಿನ ಮಾಜಿ ಭಾರತದ ಮುಖ್ಯಸ್ಥ ರಾವ್ನೀತ್ ಗಿಲ್ ಅವರು ಬ್ಯಾಂಕಿನ್ನು ಸುಸ್ಥಿತಿಗೆ ತರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಗಿಲ್‌ ಅವರು ಇದಕ್ಕಾಗಿ ಭಾರೀ ಪರಿಶ್ರಮ ಪಡಲೇಬೇಕಿದೆ.

ಬ್ಯಾಂಕು ಕಳೆದ ಅರು ತಿಂಗಳಿನಿಂದ ಖಾಸಗೀ ಹೂಡಿಕೆದಾರರ ಮೂಲಕ ಬಂಡವಾಳ ಸಂಗ್ರಹಕ್ಕೆ ಪ್ರಯತ್ನಗಳನ್ನು ನಡೆಸಿದೆ. ಕಳೆದ ಆಗಸ್ಟ್ 2019 ರಲ್ಲಿ, ಇದು ಅರ್ಹ ಸಾಂಸ್ಥಿಕ ನಿಯೋಜನೆ (ಕ್ಯೂಐಪಿ) ಮೂಲಕ 1,930.46 ಕೋಟಿ ರೂ. ಸಂಗ್ರಹಿಸಿದೆ, ಆದರೆ ಇದು ಒಟ್ಟು ಅಗತ್ಯದ ಅಲ್ಪವನ್ನು ಮಾತ್ರ ಪೂರೈಸಿದೆ. ದುರದೃಷ್ಟವಶಾತ್, ವಿವಿಧ ಕಾರಣಗಳಿಗಾಗಿ, ನಿಧಿ ಸಂಗ್ರಹಿಸುವ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಯೆಸ್‌ ಬ್ಯಾಂಕ್ ಪಟ್ಟಿ ಮಾಡಿಕೊಂಡಿರುವ ಕೆಲವು ನಿರೀಕ್ಷಿತ ಹೂಡಿಕೆದಾರರು ವಿಶ್ವಾಸಾರ್ಹರು ಅಲ್ಲ ಮತ್ತು ಅವರು ಹೂಡಿಕೆ ಮಾಡಲು ಅರ್ಹತೆ ಹೊಂದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ
ರಿಸರ್ವ್‌ ಬ್ಯಾಂಕು ಯೆಸ್‌ ಬ್ಯಾಂಕಿನ ಆಡಳಿತ ಮಂಡಳಿಗೆ ವಿವಿಧ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲು ಸೂಚಿಸಿತ್ತು., ಮತ್ತು Yes Bank ಇದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಫೆಬ್ರವರಿ 12, 2020 ರಂದು ಮುಂಬೈ ಶೇರು ವಿನಿಮಯ ಕೇಂದ್ರಕ್ಕೆ ಯೆಸ್‌ ಬ್ಯಾಂಕ್‌ ನೀಡಿರುವ ಮಾಹಿತಿಯ ಪ್ರಕಾರ ಬಂಡವಾಳವನ್ನು ತುಂಬುವ ಅವಕಾಶಗಳನ್ನು ಅನ್ವೇಷಿಸಲು ಬ್ಯಾಂಕ್ ಕೆಲವು ಖಾಸಗಿ ಇಕ್ವಿಟಿ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿದೆ.

ಈ ಹೂಡಿಕೆದಾರರು ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಆದರೆ ವಿವಿಧ ಕಾರಣಗಳಿಂದಾಗಿ ಅಂತಿಮವಾಗಿ ಹೂಡಿಕೆಯಿಂದ ಹಿಂದೆ ಸರಿದರು ಎಂದು ಆರ್‌ಬಿಐ ಗುರುವಾರ ಸಂಜೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. “ನಿಯಂತ್ರಕ ಪುನರ್‌ರಚನೆಗಿಂತ ಬ್ಯಾಂಕ್ ಮತ್ತು ಮಾರುಕಟ್ಟೆ ನೇತೃತ್ವದ ಪುನರುಜ್ಜೀವನವು ಆದ್ಯತೆಯ ಆಯ್ಕೆಯಾಗಿರುವುದರಿಂದ, ಅಂತಹ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಿಸರ್ವ್ ಬ್ಯಾಂಕ್ ಎಲ್ಲಾ ಪ್ರಯತ್ನಗಳನ್ನು ಮಾಡಿತು ಮತ್ತು ವಿಶ್ವಾಸಾರ್ಹ ಪುನರುಜ್ಜೀವನ ಯೋಜನೆಯನ್ನು ರೂಪಿಸಲು ಬ್ಯಾಂಕಿನ ನಿರ್ವಹಣೆಗೆ ಸಾಕಷ್ಟು ಅವಕಾಶವನ್ನು ನೀಡಿತು, ಅದು ಕಾರ್ಯರೂಪಕ್ಕೆ ಬರಲಿಲ್ಲ.

ಈ ಮಧ್ಯೆ, ಬ್ಯಾಂಕ್ ನಿಯಮಿತವಾಗಿ ದ್ರವ್ಯತೆಯ ಹೊರಹರಿವನ್ನು ಎದುರಿಸುತ್ತಿದೆ, ”ಎಂದು ಅರ್‌ಬಿಐ ತಿಳಿಸಿದೆ.
ಯೆಸ್‌ ಬ್ಯಾಂಕ್ ತನ್ನ ಠೇವಣಿದಾರರಿಗೆ ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯೇನೂ ಇಲ್ಲ, ಅವರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಆರ್‌ಬಿಐ ಭರವಸೆ ನೀಡಿದೆ. ಬ್ಯಾಂಕಿನಲ್ಲಿ ಠೇವಣಿದಾರರ ವಿಶ್ವಾಸವನ್ನು ಪುನಃಸ್ಥಾಪಿಸುವ ಸಲುವಾಗಿ ಬ್ಯಾಂಕಿನ ಆಡಳಿತ ಮಂಡಳಿಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಮುಂದಿನ ದಾರಿ ಏನು? ಯಾರಾದರೂ ಯೆಸ್‌ ಬ್ಯಾಂಕ್ ಅನ್ನು ಖರೀದಿಸುತ್ತಾರೆಯೇ ಅಥವಾ ಹೊರಗಿನ ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಸಂಸ್ಥೆಗಳು ಯೆಸ್ ಬ್ಯಾಂಕಿನ ತತ್ಕಾಲಿಕ ಆರ್ಥಿಕ ಬಿಕ್ಕಟ್ಟನ್ನು ಶಮನ ಮಾಡಲಿವೆ ಎಂದು ಕೆಲವು ಮಾಧ್ಯಮ ಈ ಹಿಂದೆ ವರದಿ ಮಾಡಿದ್ದು ಇವು ಒಟ್ಟಾಗಿ ಶೇಕಡಾ 49 ರಷ್ಟು ಪಾಲನ್ನು ಹೊಂದಲು ಯೋಜಿಸಿದ್ದವು ಎನ್ನಲಾಗಿದೆ.

ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರತಿ ಠೇವಣಿದಾರರ ಹಣ ಸುರಕ್ಷಿತವಾಗಿದೆ ಎಂದು ಯೆಸ್ ಬ್ಯಾಂಕ್ ಗ್ರಾಹಕರಿಗೆ ಭರವಸೆ ನೀಡಿದ್ದಾರೆ. “ನಾನು ಆರ್‌ಬಿಐ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ” ಎಂದು ಅವರು ಹೇಳಿದರು.

Tags: Economic CrisisRBISBIYes Bank Crisisಆರ್ಥಿಕ ಹಿಂಜರಿತಯೆಸ್‌ ಬ್ಯಾಂಕ್‌
Previous Post

ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ 

Next Post

ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada