• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

by
February 29, 2020
in Uncategorized
0
ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ
Share on WhatsAppShare on FacebookShare on Telegram

ಮಹಿಳೆಯರ ಟಿ-20 ವಿಶ್ವಕಪ್‌ನಲ್ಲಿ ಅಜೇಯ ಓಟದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡ, ದೇಶವಾಸಿಗಳಿಗೆ ಕೇಳಲು ಹಿತಕರವಾದ ಸುದ್ದಿ ಕೊಡುವ ಮೂಲಕ ಎಡ/ಬಲಗಳ ರಾಜಕೀಯ ಸೈದ್ಧಾಂತಿಕ ಕಚ್ಚಾಟದಲ್ಲಿ ಬ್ಯುಸಿ ಆಗಿದ್ದ ನೆಟ್ಟಿಗರೆಲ್ಲಾ ಒಟ್ಟಾಗಿ, ಒಂದು ವಿಚಾರಕ್ಕಾಗಿ ಸಮಾನ ಮನಸ್ಸಿನಿಂದ ಸೆಲೆಬ್ರೇಟ್ ಮಾಡಲು ಕಾರಣ ನೀಡಿದೆ.

ADVERTISEMENT

ಅದರಲ್ಲೂ, ನ್ಯೂಝೀಲೆಂಡ್ ವಿರುದ್ಧದ ಪಂದ್ಯದಲ್ಲಿ ಚುರುಕಿನ 46 ರನ್‌ಗಳಿಸಿ ಭಾರತ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟ 16 ವರ್ಷದ ಆರಂಭಿಕ ಬ್ಯಾಟ್ಸ್‌ವುಮನ್ ಶೆಫಾಲಿ ವರ್ಮಾ ಇದೀಗ ಎಲ್ಲರ ಕಣ್ಮನ ಸೆಳೆದ ಸೆನ್ಸೇಶನ್ ಆಗಿದ್ದಾರೆ. ಬರೀ 34 ಎಸೆತಗಳಲ್ಲಿ 46 ರನ್‌ಗಳ ತಮ್ಮ ಇನಿಂಗ್ಸ್‌ನಿಂದಾಗಿ ವರ್ಮಾಗೆ ಟೂರ್ನಿಯ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.

ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ 114 ರನ್‌ ಕಲೆ ಹಾಕಿರುವ ಶೆಫಾಲಿ, 172.72 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದು, ವಿಶ್ವಕಪ್‌ ದಾಖಲೆ ನಿರ್ಮಿಸಿದ್ದಾರೆ. ಶೆಫಾಲಿಯ ಈ ಮಿಂಚಿನ ಓಟದಿಂದ ಕ್ರಿಕೆಟ್‌ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಭಾರತೀಯ ಪುರುಷರ ತಂಡದ ಮಾಜಿ ಆಟಗಾರರು ಇಂಪ್ರೆಸ್ ಆಗಿದ್ದಾರೆ.

“ಟಿ-20 ವಿಶ್ವಕಪ್‌ ಸೆಮಿಫೈನಲ್ ತಲುಪಿದ ಮೊದಲ ತಂಡವಾದ ಭಾರತೀ ಮಹಿಳಾ ತಂಡಕ್ಕೆ ಅಭಿನಂದನೆಗಳು. ಇದೊಂದು ಟೈಟ್ ಗೇಮ್ ಆಗಿದ್ದು ಒತ್ತಡದಲ್ಲಿ ನಾವು ಒಳ್ಳೆಯ ಆಟವಾಡಿದ್ದೇವೆ. ಮತ್ತೊಂದು ನಿರ್ಣಾಯಕ ಆಟವಾಡಿದ ಶೆಫಾಲಿಯನ್ನು ನೋಡುವುದು ಬಹಳ ಸಂತಸವಾಯಿತು,” ಎಂದು ಸಚಿನ್ ತೆಂಡೂಲ್ಕರ್‌ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, “ಥ್ಯಾಂಕ್ಯೂ ಸರ್‌ ನಿಮ್ಮ ಶ್ಲಾಘನೆಯ ಮಾತುಗಳು ಹಾಗೂ ಬೆಂಬಲಕ್ಕೆ! ನನ್ನ ತಂಡಕ್ಕೆ ನನ್ನ ಬೆಸ್ಟ್‌ ಆಟವನ್ನು ನೀಡುತ್ತಲೇ ಇರಲು ಇಚ್ಛಿಸುತ್ತೇನೆ ಸರ್‌.” ಎಂದು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, “ವಾಹ್ ಭಾಯ್‌ ಬಾಹ್‌!ಒತ್ತಡಲ್ಲಿ ತಮ್ಮ ಶಾಂತಚಿತ್ತೆ ಕಾಪಾಡಿಕೊಂಡ ಹುಡುಗಿಯರು ನ್ಯೂಝೀಲೆಂಡ್ ತಂಡವನ್ನು ಮಣಿಸಿ ಟಿ-20 ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶೆಫಾಲಿ ವರ್ಮಾ ಒಬ್ಬ ದೊಡ್ಡ ರಾಕ್ ಸ್ಟಾರ್‌. ಹುಡುಗಿಯರ ಪ್ರದರ್ಶನ ಕಂಡು ಆನಂದವಾಗುತ್ತಿದೆ,” ಎಂದಿದ್ದಾರೆ.

ಶೆಫಾಲಿ ಕುರಿತು ಮೆಚ್ಚುಗೆ ಮಾತನ್ನು ಆಡಿದ ಮತ್ತೊಬ್ಬ ಲೆಜೆಂಡರಿ ಆಟಗಾರ ವಿವಿಎಸ್ ಲಕ್ಷ್ಮಣ್‌, “ಪಂದ್ಯದಲ್ಲಿ 132 ರನ್‌ಗಳನ್ನು ಡಿಫೆಂಡ್ ಮಾಡುವಲ್ಲಿ ಬೌಲರ್‌ಗಳು ಅತ್ಯುತ್ತಮ ಆಟವಾಡಿದ್ದಾರೆ. ಶೆಫಾಲಿ ವರ್ಮಾ ಭಾರತದ ಪರವಾಗಿ ಟಾಪ್ ಕ್ಲಾಸ್ ಆಟವಾಡಿದ್ದಾರೆ,” ಎಂದಿದ್ದಾರೆ.

ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಮಾತನಾಡಿ, “ಯೆಸ್‌! ವೆಲ್ ಡನ್, ಶಿಕಾ ಪಾಂಡೆ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಮೇಲಿಯಾ ಕರ್‌‌ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯದಂತೆ ನೋಡಿಕೊಂಡರು ಆಕೆ,” ಎಂದಿದ್ದಾರೆ.

ಕಳೆದ 3-4 ವರ್ಷಗಳಿಂದ ಜಾಗತಿಕ ಕೂಟಗಳಲ್ಲಿ ಅತ್ಯುತ್ತಮ ಆಟವಾಡುತ್ತಾ ಬಂದಿರುವ ಮಹಿಳಾ ಕ್ರಿಕೆಟ್‌ಗೆ ಪುರಷರ ಕ್ರಿಕೆಟ್‌ಗಿರುವಷ್ಟು ಹಿಂಬಾಲಕರಿಲ್ಲ ಎಂಬುದೇನೂ ಗೊತ್ತಿರದ ವಿಚಾರವಲ್ಲ. ಇದು ಬರೀ ಕ್ರಿಕೆಟ್‌ನಲ್ಲಿ ಮಾತ್ರವಲ್ಲೇ ಫುಟ್ಬಾಲ್‌ನಲ್ಲೂ ಇರುವ ಟ್ರೆಂಡ್.

ಆದರೂ, ಈ ವಿಶ್ವಕಪ್‌ಅನ್ನೇ ತೆಗೆದುಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಎಷ್ಟು ಚಂದ ಆಡಿರಲ್ಲ ನಮ್ಮ ಮಾನಿನಿಯರು? ಅಲ್ಪ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಸ್ತಿನ ಬೌಲಿಂಗ್ ಹಾಗೂ ಅದಕ್ಕೆ ಪೂರಕವಾಗಿ ಚುರುಕಾದ ಫೀಲ್ಡಿಂಗ್ ಮೂಲಕ ವೀಕ್ಷಕರ ಗಮನವನ್ನು ಹಿಡಿದಿಡುವ ಆಟ ಆಡುವಲ್ಲಿ ಮಹಿಳೆಯರು ಸಫಲರಾಗಿದ್ದಾರೆ ಎನ್ನಲಡ್ಡಿಯಿಲ್ಲ.

ಎಳಸು ಎಳಸಾಗಿ ಆಡುವ ರಿಶಭ್ ಪಂತ್‌ನನ್ನೂ ನಾಚಿಸುವಂತೆ ಆಡುತ್ತಿರುವ ಶೆಫಾಲಿ ಆಗಲೀ, ಎದುರಾಳಿ ಬ್ಯಾಟ್ಸ್‌ವುಮೆನ್‌ಅನ್ನು ದಂಗುಬಡಿಸುವಂಥ ಗೂಗ್ಲಿಗಳ ಪ್ರಯೋಗ ಮಾಡುತ್ತಿರುವ ಪೂನಮ್ ಯಾದವ್‌ ಇರಲಿ ಗುಣಮಟ್ಟದ ಆಟವನ್ನು ಅಭಿಮಾನಿಗಳಿಗೆ ಕೊಡಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಇವರೊಂದಿಗೆ ಸ್ಮೃತಿ ಮಂದನಾ, ಹರ್ಮನ್ ಪ್ರೀತ್‌ ಕೌರ್‌ ಹಾಗೂ ಜೆಮಿಮಾ ರಾಡ್ರಿಗ್ಸ್‌ರಂಥ ಯಂಗ್‌ಸ್ಟರ‍್ಸ್‌‌ ನೆರವಿನಿಂದ ಭಾರತ ತಂಡ ಫೈನಲ್ ತಲುಪಿದಲ್ಲಿ ಅಚ್ಚರಿಯಲ್ಲ. ಈ ಆಟಗಾತಿಯರನ್ನು ದೇಶದ ಜನತೆ ಚೆನ್ನಾಗೇ ಗುರುತಿಸುತ್ತಿದ್ದು, ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆಗಳು ಸಾಕಷ್ಟು ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ಗಳಂತೆ ಮಹಿಳಾ ಕ್ರಿಕೆಟ್‌ ಸಹ ಫೇಮಸ್ ಆಗಲು ಮಾಡಬಹುದಾದ ಬ್ರಾಂಡಿಂಗ್ ಅನ್ನು ಮಾಡಲು ಕ್ರಿಕೆಟ್‌ ಮಂಡಳಿಗಳು ಮಾಡಲು ಮುಂದೆ ಬರಬೇಕಿದೆ. ಕಳೆದ ದಶಕದಿಂದ ತೀರಾ ಬೋರಿಂಗ್ ಆಗಿಬಿಟ್ಟಿರುವ ಏಕದಿನ ಪಂದ್ಯಗಳಿಗೆ ಮನ್ವಂತರ ನೀಡಲು ಮಾಡುತ್ತಿರುವಂಥ ಪ್ರಯತ್ನವನ್ನು ಮಹಿಳಾ ಕ್ರಿಕೆಟ್‌ಗೂ ನೀಡಬೇಕಾಗಿದೆ.

Tags: BCCI CricketIndian Women's cricket teamWomen's CricketWomen's T20 Worldcupಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡಮಹಿಳಾ ಕ್ರಿಕೆಟ್ಮಹಿಳೆಯರ ಟಿ-20 ವಿಶ್ವಕಪ್‌
Previous Post

ದೆಹಲಿ ಹಿಂಸಾಚಾರದ ಹಿಂದೆ ಇತ್ತೆ ಗುಜರಾತ್ ಮಾದರಿಯ ಬ್ಲೂಪ್ರಿಂಟ್?

Next Post

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

Related Posts

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ
Uncategorized

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 20, 2025
0

ಬಿ.ಆರ್. ಪಾಟೀಲ್, ಕೃಷ್ಣಭೈರೇಗೌಡ ಇದ್ದಿದ್ದನ್ನೇ ಹೇಳಿದ್ದಾರೆ ಎಂದು ಕಿಡಿ ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ ಎಂದು ಕಿಡಿ ಭೂಮಿ...

Read moreDetails
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025

ನಿವೃತ್ತ ಯೋಧರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ .

May 11, 2025
Next Post
ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada