ಬೆಂಗಳೂರು : ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದರ ಕುರಿತು ಸುಪ್ರೀಂಕೋರ್ಟ್ ಈ ಪ್ರಮಾಣದಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣೆಗಳ ಒತ್ತಡದಿಂದ ಈ ಪ್ರಕ್ರಿಯೆಯನ್ನು ವಿಕೃತಗೊಳಿಸಬಾರದು’ ಎಂದು ಎಚ್ಚರಿಸಿದೆ. ಅಲ್ಲದೆ ಮತದಾರರು ಪಟ್ಟಿಯಲ್ಲಿ ಉಳಿಯುವ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಇದು ಸರಿ. ಆದರೆ ಇದೇ ಪೀಠ 27 ಲಕ್ಷ ಮತದಾರರಿಗೆ ಎಪ್ರಿಲ್ 23 & 29ರ ಮತದಾನಕ್ಕೆ ಅವಕಾಶ ನಿರಾಕರಿಸಿದೆ.
ಇದು ವಿಧಿ 326ರ ಉಲ್ಲಂಘನೆ. ಹಾಗೆಯೇ ನಿವೃತ್ತ ಮುಖ್ಯ ಚುನಾವಣಾ ಅಧಿಕಾರಿ ಖುರೇಷಿ ಅವರು ಹೇಳಿದಂತೆ ‘ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 21(3)ರ ಪ್ರಕಾರ ಮತದಾರರ ತೀವ್ರ ಪರಿಷ್ಕರಣೆ ಮುಗಿದು ಅಂತಿಮಗೊಳ್ಳುವವರೆಗೂ ಪ್ರತಿಯೊಬ್ಬ ಮತದಾರರು ಪಟ್ಟಿಯಲ್ಲಿ ಇರುತ್ತಾರೆ’ ಎನ್ನುವ ನೀತಿಯ ಉಲ್ಲಂಘನೆಯೂ ಹೌದಲ್ಲವೇ?
ಘನವೆತ್ತ ಸುಪ್ರೀಂಕೋರ್ಟ್ಗೆ ಇದನ್ನು ನೆನಪಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆಯೇ?.
ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!
ಹಾಗೆಯೇ ಮುಖ್ಯವಾಗಿ ಸಿಜೆಐ ಅವರು ‘ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುವ ತನಕ ಅವರಿಗೆ ಮತ ಚಲಾಯಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ : ಮ್ಯಾಪಿಂಗ್ ಮಾಡಿದ ಯಾವುದೇ ಮತದಾರರನ್ನು ಹೊರತುಪಡಿಸಬಾರದು ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಚುನಾವಣಾ ಆಯೋಗಕ್ಕೆ ತನ್ನ ವಾಗ್ದಾನವನ್ನು ನೆನಪಿಸಿದ್ದಾರೆ.
ಆದರೆ ಸುಪ್ರೀಂಕೋರ್ಟ್ 27 ಲಕ್ಷ ಮತದಾರರಿಗೆ (ಇದಲ್ಲದೆ ಮತಗಟ್ಟೆ ಅಧಿಕಾರಿಗಳು ಸಹ ಸೇರಿ) ಪರಿಹಾರ ನೀಡಲು ವಿಫಲವಾಗಿದೆ. ಬಂಗಾಳದ ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಲಕ್ಷಾಂತರ ಜನರಿಗೆ ತಾತ್ಕಾಲಿಕ ಮತದಾನ ಹಕ್ಕುಗಳನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
34 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಬಾಕಿ ಇರುವುದರಿಂದ ಮತ್ತು ಮತದಾನ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ.ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆಯೇ? ಈ ತರಹದ ಇಬ್ಬಂದಿತನದ ನಡೆ ಯಾಕೆ?






