16 ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ. ದೇವರಾಜ್ ಅರಸ್ ದಾಖಲೆ ಮುರಿದು ಸಿಎಂ ಆಗಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಸಿಎಂ ಮೇಲಿರಲಿ. ನಿಮ್ಮ ಆಶೀರ್ವಾದ ಇರೋವರೆಗೂ ಸಿದ್ದರಾಮಯ್ಯ ಅವರಿಗೆ ಯಾರು ಏನು ಮಾಡೋಕೆ ಆಗೊಲ್ಲ. ನಾನು ಅವರ ಕ್ಯಾಬಿನೆಟ್ನಲ್ಲಿ ಮಂತ್ರಿ ಆಗಿರೋದು ನನ್ನ ಪುಣ್ಯ ಎಂದು ಹೇಳಿದ್ದಾರೆ.

ದೇಶದಲ್ಲಿ ಪ್ರಾಮಾಣಿಕ ಸಿಎಂ ಯಾರಾದ್ರು ಇದ್ದರೆ ಅವರು ಸಿದ್ದರಾಮಯ್ಯ (Siddaramaiah). ಸಿಎಂ ಮೇಲೆ ಏನೇನೋ ಆರೋಪ ಮಾಡಿ ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಬೇರೆ ರಾಜಕಾರಣಿಗಳು ಮಾಡ್ತಾರೆ. ಆದರೆ ಈ ಆರೋಪಗಳು ಸಿದ್ದರಾಮಯ್ಯ ಅವರ ಹತ್ತಿರವೂ ಬರುವುದಿಲ್ಲ. ಸಿಎಂ ಮೇಲಿನ ಹೊಟ್ಟೆ ಉರಿಗೆ ಆರೋಪ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಹಿಂದೆ ಅನೇಕರು ಈ ಸಮಾಜದವರು ಮಂತ್ರಿ ಆಗಿದ್ದರು. ಆದರೆ ಅವರು ಯಾರು ಏನು ಮಾಡಿಲ್ಲ. ಇದೆಲ್ಲವನ್ನೂ ಮಾಡಿದ್ದು, ಸಿದ್ದರಾಮಯ್ಯ ಮಾತ್ರ. ನಮ್ಮ ಸಮಾಜದ ಕೆಲವರಿಗೆ ಸಿದ್ದರಾಮಯ್ಯ ಕಂಡರೆ ಜಲಸ್, ಹೊಟ್ಟೆ ಉರಿಯಿಂದ ಅವರ ವಿರುದ್ಧ ಮಾತಾಡ್ತಾರೆ. ಸಿದ್ದರಾಮಯ್ಯ ಅವರು ಮಾಡಿದ 1% ಕೆಲಸವನ್ನು ಸಮುದಾಯದ ಯಾವ ನಾಯಕರು ಮಾಡಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಯಾರಿಗೆ ಸಹಾಯ ಮಾಡಿದ್ರು ಅದರ ಕ್ರೆಡಿಟ್ ತಗೊಳ್ಳೊಲ್ಲ. ನನ್ನನ್ನು ಮಂತ್ರಿ ಮಾಡೋವಾಗ ಹಿಂದಿನ ದಿನವೂ ನನಗೆ ಹೇಳಿರಲಿಲ್ಲ. ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಅನೇಕರು ಶಾಸಕರು, ಮಂತ್ರಿಗಳು ಆಗಿದ್ದಾರೆ. ನಿಮ್ಮ ಸಹಕಾರ ಸಿದ್ದರಾಮಯ್ಯಗೆ ಇರಲಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು 42 ವರ್ಷ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ವಿರುದ್ಧ ಆಪಾದನೆ ಮಾಡಿದ್ರು ದಾಖಲೆಗಳು ಇರಲ್ಲ. ಮುಂಚೆ ರಾಜಕಾರಣದಲ್ಲಿ ಕುರುಬ ಎಂದು ಹೇಳಲು ಆಗುತ್ತಿರಲಿಲ್ಲ. ಈಗ ನಾನು ಕುರುಬ ಎಂದು ಹೇಳಲು ಹೆಮ್ಮಯಿದೆ. ಯಾಕೆಂದರೆ ಸಿದ್ದರಾಮಯ್ಯ ಅವರು ಜನಪರ ಯೋಜನೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಕುರುಬ ಸಮುದಾಯದಲ್ಲಿ ಹುಟ್ಟಿರುವುದು ಪುಣ್ಯ ಎಂದು ಹಾಡಿ ಹೊಗಳಿದ್ದಾರೆ.