• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ

ನಾ ದಿವಾಕರ by ನಾ ದಿವಾಕರ
December 14, 2024
in Top Story, ಅಂಕಣ, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಾಣಿಜ್ಯ, ವಿದೇಶ, ವಿಶೇಷ
0
Share on WhatsAppShare on FacebookShare on Telegram

( ದಿನಾಂಕ 10 ಡಿಸೆಂಬರ್‌ 2024ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಮಮನೋಹರ್‌ ಲೋಹಿಯಾ ಅಧ್ಯಯನ ಪೀಠ ಏರ್ಪಡಿಸಿದ್ದ ಆನ್‌ ಲೈನ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧದ ಪರಿಷ್ಕೃತ ಲೇಖನ ರೂಪ )

ADVERTISEMENT

 ಭಾಗ 1

 ಭಾರತದ ರಾಜಕಾರಣದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿದ್ಯಮಾನ ಎಂದರೆ ರಾಜಕೀಯ ಪಕ್ಷಗಳು ಹಾಗೂ ನಾಯಕರು ಅನುಕರಿಸುವ/ಅನುಸರಿಸುವ ತತ್ವ ಅಥವಾ ಸಿದ್ಧಾಂತಗಳು ಅಥವಾ ಅಧಿಕಾರ ಪಡೆಯುವ ಸಲುವಾಗಿ ಪ್ರತಿಪಾದಿಸುವ ತಾತ್ವಿಕ ನೆಲೆಗಳು. ಬಹುಪಾಲು ರಾಜಕೀಯ ಪಕ್ಷಗಳೂ ತಮ್ಮದೇ ಆದ ತಾತ್ವಿಕ/ಸೈದ್ಧಾಂತಿಕ ನೆಲೆಗಳನ್ನು ಹೊಂದಿರುತ್ತವೆ. ಅಧಿಕಾರ ರಾಜಕಾರಣದ ವ್ಯಾಪ್ತಿಯಿಂದ ಹೊರತಾಗಿಯೂ ತಮ್ಮ ತಾತ್ವಿಕತೆಯನ್ನು ಕಾಪಾಡಿಕೊಂಡು ಸಾಮಾನ್ಯ ಜನತೆಯ ನಡುವೆ ತತ್ವಾಧಾರಿತ ರಾಜಕಾರಣದ ಬಗ್ಗೆ ಸಂವಾದದಲ್ಲಿ ತೊಡಗಿರುತ್ತವೆ. ಮಾರ್ಕ್ಸ್‌ , ಗಾಂಧಿ, ಲೋಹಿಯಾ, ಜೆಪಿ, ಅಂಬೇಡ್ಕರ್‌, ಪೆರಿಯಾರ್‌ ಮುಂತಾದ ಅನೇಕ ದಾರ್ಶನಿಕ ನಾಯಕರು ಬಿಟ್ಟುಹೋಗಿರುವ ತತ್ವಗಳನ್ನು ತಮ್ಮ ಸಮಕಾಲೀನ ರಾಜಕಾರಣದ ಅನುಕೂಲತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಸಾಗಿ ಬಂದಿರುವ ಬಂಡವಾಳಿಗ ಪಕ್ಷಗಳು (ಬೂರ್ಷ್ವಾ ಪಕ್ಷಗಳು) ಕಾಲಕಾಲಕ್ಕೆ ಈ ತತ್ವಗಳ ನಮ್ಯತೆ (flexibility ) ಮತ್ತು ಸಮಯಕ್ಕೆ ತಕ್ಕಂತೆ ಹಿಗ್ಗಿಸುವ/ಕುಗ್ಗಿಸುವ ಸ್ಥಿತಿಸ್ಥಾಪಕತ್ವದ ಗುಣವನ್ನು (Elasticity) ಬಳಸಿಕೊಳ್ಳುತ್ತಾ ಅಧಿಕಾರ ರಾಜಕಾರಣದ ಒಂದು ಭಾಗವಾಗಿ ಉಳಿದುಕೊಂಡು ಬೆಳೆಯುತ್ತಾ ಬಂದಿವೆ.

 ತತ್ವ ಮತ್ತು ಸಿದ್ಧಾಂತ , ಇವೆರಡರ ನಡುವಿನ ವ್ಯತ್ಯಾಸವನ್ನು ಸಮಕಾಲೀನ ಯುಗದ ಯುವ ಸಮೂಹ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಿದೆ. ತತ್ವ ಎನ್ನುವುದು ಒಂದು ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ನಡಿಗೆಯ ಮಾದರಿ. ವ್ಯಕ್ತಿ, ಪಕ್ಷ ಅಥವಾ ಸಂಘಟನೆ ಯಾವ ಮಾರ್ಗದಲ್ಲಿ ಸಾಗಬೇಕು, ಯಾವ ಸಾಮಾಜಿಕ ಆಶಯಗಳನ್ನು ಹೊಂದಿರಬೇಕು, ಸಾಂಸ್ಕೃತಿಕವಾಗಿ ಯಾವ ನೆಲೆಗಳನ್ನು ಅವಲಂಬಿಸಬೇಕು, ಸಾಮಾಜಿಕ ಸಂಘರ್ಷದಲ್ಲಿ ಯಾವ ಮಾರ್ಗ ಅನುಸರಿಸಬೇಕು, ಸಮಾಜ ಸುಧಾರಣೆಗಳಿಗೆ ಹೇಗೆ ತೆರೆದುಕೊಳ್ಳಬೇಕು ಇತ್ಯಾದಿ ಮಾರ್ಗದರ್ಶಿ ಸೂತ್ರಗಳನ್ನು ತತ್ವಗಳು ನಿರ್ದೇಶಿಸುತ್ತವೆ. ಮಹಾತ್ಮ ಗಾಂಧಿ, ಡಾ. ರಾಮ ಮನೋಹರ್‌ ಲೋಹಿಯಾ ಮತ್ತು ಒಂದು ನೆಲೆಯಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ತಾತ್ವಿಕ ನೆಲೆಗಳನ್ನೂ ಈ ಚೌಕಟ್ಟಿನೊಳಗೆ ವ್ಯಾಖ್ಯಾನಿಸಬಹುದು. ಅಂಬೇಡ್ಕರ್‌ ಅವರ ತಾತ್ವಿಕತೆ ಈ ನಿಟ್ಟಿನಲ್ಲಿ ಹೆಚ್ಚು ಸೈದ್ಧಾಂತಿಕ ಸ್ಪರ್ಶ ಪಡೆದುಕೊಳ್ಳುತ್ತದೆ.

Yatnal Vs Zameer In Session: ಯತ್ನಾಳ್ vs ಜಮೀರ್.. ಸದನದಲ್ಲಿ ಬಿಗ್ ಫೈಟ್ #pratidhvani

 ಮತ್ತೊಂದೆಡೆ ಸಿದ್ದಾಂತ ಎನ್ನುವುದು ಒಂದು ವಿಶಾಲ ಸಂರಚನೆಗೊಳಗಾದ, ಆಳವಾದ ವೈಚಾರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವ ತತ್ವ ಅಥವಾ ತಾತ್ವಿಕತೆ ಆಗಿರುತ್ತದೆ. ಸಿದ್ದಾಂತ ಎನ್ನುವುದು ವಿಶಾಲ ಸಮಾಜದ (broader society) ಎಲ್ಲ ಸ್ತರಗಳನ್ನೂ, ಎಲ್ಲ ಆಯಾಮಗಳನ್ನೂ, ಎಲ್ಲ ವಲಯಗಳನ್ನೂ ಪ್ರಭಾವಿಸುತ್ತದೆ ಮತ್ತು ಕಾಲಕಾಲಕ್ಕೆ ನಿರ್ದೇಶಿಸುತ್ತಿರುತ್ತದೆ. ಸಮಾಜದ ಮೇಲ್ಪದರ, ಮಧ್ಯಮ ಸ್ತರಗಳನ್ನು ದಾಟಿ, ಸಾಮಾಜಿಕ ಪಿರಮಿಡ್ಡಿನ  ತಳಪಾಯದ ಜನರ ಬದುಕಿನಲ್ಲೂ ತನ್ನ ಅಸ್ತಿತ್ವವನ್ನು ಕಾಣಲು ಬಯಸುತ್ತದೆ. ಸಿದ್ಧಾಂತಗಳು ಒಂದು ನೆಲೆಯಲ್ಲಿ ಸ್ಥಿರತೆಯನ್ನು ಕಂಡುಕೊಂಡರೂ, ಜಡಗಟ್ಟುವುದಿಲ್ಲ. ಜಡಗಟ್ಟಿದ ಸಿದ್ದಾಂತಗಳು ಚಲನಶೀಲತೆಯನ್ನು ಕಳೆದುಕೊಂಡು ಅಪ್ರಸ್ತುತವಾಗಿಬಿಡುತ್ತವೆ. ಜಗತ್ತಿನ ಎಲ್ಲ ರಾಜಕೀಯ ಸಿದ್ಧಾಂತಗಳೂ ಕಾಲಕಾಲಕ್ಕೆ ಮರುಪರಿಷ್ಕರಣೆಗೊಳಗಾಗುತ್ತಲೇ ಹೋಗುತ್ತವೆ. ಆದರೆ ಈ ಹಾದಿಯಲ್ಲಿ ತನ್ನ ಮೂಲ ಚಿಂತನಾ ಧಾರೆಯನ್ನು ಸಡಿಲವಾಗುವ ಅವಕಾಶಗಳನ್ನು ನೀಡುವುದಿಲ್ಲ. ರಾಜಕೀಯ ದೃಷ್ಟಿಯಿಂದ ನೋಡಿದಾಗ ಮಾರ್ಕ್ಸ್‌ವಾದವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಸಮಾಜವಾದ ಎನ್ನುವ ಒಂದು ಸೈದ್ಧಾಂತಿಕ ನೆಲೆಯಲ್ಲೂ ಇದರ ಎಳೆಯನ್ನು ಗುರುತಿಸಬಹುದು. ಹೀಗೆ ಭಿನ್ನ ಚಿಂತನಾ ಲಹರಿಯ ನೆಲೆಯಲ್ಲಿ ನೋಡಿದಾಗ ಎಲ್ಲ ತತ್ವಗಳಿಗೂ, ತಾತ್ವಿಕ ಪ್ರತಿಪಾದನೆಗಳಿಗೂ,  ಎಲ್ಲ ಕಾಲಗಳಲ್ಲೂ ಸೈದ್ಧಾಂತಿಕ ಚೌಕಟ್ಟುಗಳನ್ನು ನಿರ್ಮಿಸಲಾಗುವುದಿಲ್ಲ ಎನ್ನುವುದು ಸ್ಪಷ್ಟ.

ಅದೇ ವೇಳೆ ಸೈದ್ದಾಂತಿಕ ನೆಲೆಯಲ್ಲಿ ನಿಂತು ನೋಡುವಾಗ ಯಾವುದೇ ತತ್ವಗಳನ್ನೂ ವಿಮರ್ಶಿಸದೆ ಒಪ್ಪಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ  ಸೈದ್ಧಾಂತಿಕ ಮಾದರಿಗಳಲ್ಲಿ ಸ್ಪಷ್ಟವಾದ ಗುರಿ, ಗುರಿ ಸಾಧನೆಯ ಮಾರ್ಗೋಪಾಯಗಳು ಹಾಗೂ ಅದಕ್ಕೆ ಅನುಸರಿಸಬೇಕಾದ ಕಾರ್ಯಸೂಚಿಗಳು ಸ್ಪಷ್ಟವಾಗಿರುತ್ತವೆ. ಸಿದ್ಧಾಂತ ಎನ್ನುವುದು ಸಮಾಜವನ್ನು ಕಟ್ಟುವ ಬುನಾದಿಯಾಗಿ ಕಾಣುತ್ತದೆ. ಸಾಮಾನ್ಯವಾಗಿ ಅದಕ್ಕೊಂದು ರಾಜಕೀಯ ಸ್ವರೂಪವೂ ಇರುತ್ತದೆ. ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ತೊಡೆದುಹಾಕುವುದರಿಂದ ಸಂಪತ್ತಿನ ಸಮಾನ ಹಂಚಿಕೆಯವರೆಗೆ ಶೋಷಿತ-ದಮನಿತ ಜನತೆ ಅನುಸರಿಸಬೇಕಾದ ಕಾರ್ಯಮಾರ್ಗಗಳಿಗೆ ಒಪ್ಪಿತ ಸಿದ್ದಾಂತದ ಚೌಕಟ್ಟಿನೊಳಗೇ ಆರ್ಥಿಕ-ಸಾಂಸ್ಕೃತಿಕ-ಸಾಮಾಜಿಕ ಮಾದರಿಗಳನ್ನು ನಿರ್ವಚಿಸುವುದು ಯಾವುದೇ ಸಿದ್ಧಾಂತದ ಆದ್ಯತೆಯಾಗಿರುತ್ತದೆ. ಇಲ್ಲಿ ಅಳವಡಿಸಿಕೊಳ್ಳಬೇಕಾದ ಬೌದ್ಧಿಕ ಚಿಂತನಾ ಕ್ರಮಗಳು, ಭೌತಿಕ ಬೆಳವಣಿಗೆಯ ಹಾದಿಗಳು ಹಾಗೂ ಅನುಸರಿಸಬೇಕಾದ ಸಾಂಸ್ಕೃತಿಕ ಆಚರಣೆಗಳು ಸಿದ್ಧಾಂತಗಳ ಭಾರಕ್ಕೆ ಸಿಲುಕುವ ಸಂದರ್ಭಗಳನ್ನೂ ಇತಿಹಾಸದಲ್ಲಿ ಕಂಡಿದ್ದೇವೆ. ಒಂದು ಸೈದ್ಧಾಂತಿಕ ಸ್ಪಷ್ಟತೆ ಇದ್ದಲ್ಲಿ ಇಂತಹ ಅಪಭ್ರಂಶಗಳನ್ನು ತಪ್ಪಿಸುವುದು ಸಾಧ್ಯ.

 ಸಮಾಜವಾದದ ಉಗಮ-ಬೆಳವಣಿಗೆ

 ಈ ನೆಲೆಯಲ್ಲಿ ನಿಂತು ನೋಡಿದಾಗ ಸಮಾಜವಾದ ಎನ್ನುವ ತತ್ವ ಮತ್ತು ಸಿದ್ಧಾಂತವು ಇತಿಹಾಸದ ಬೇರೆ ಬೇರೆ ಹಂತಗಳಲ್ಲಿ ಉಗಮವಾಗಿರುವುದನ್ನು ಗಮನಿಸಬಹುದು. ಒಂದು ಸಾಮಾಜಿಕ ತತ್ವದ ರೂಪದಲ್ಲಿ ಉಗಮಿಸಿದ ಸಮಾಜವಾದಕ್ಕೆ ಸೈದ್ಧಾಂತಿಕ ರೂಪ ದೊರೆತದ್ದು ಫ್ರೆಂಚ್‌ ಕ್ರಾಂತಿಯ ಬಳಿಕ. 19ನೇ ಶತಮಾನದ ಔದ್ಯೋಗಿಕ ಕ್ರಾಂತಿ ಮತ್ತು ಅದರ ಪರಿಣಾಮವಾಗಿ ರೂಪುಗೊಂಡ ನಗರೀಕರಣದ ಪರಿಣಾಮವಾಗಿ ನಗರ-ಪಟ್ಟಣಗಳಲ್ಲಿ ದುಡಿಯುವ ವರ್ಗಗಳ ಸಂಖ್ಯೆ ಹೆಚ್ಚಾಗತೊಡಗಿತ್ತು. ಔದ್ಯೋಗಿಕ ಜಗತ್ತನ್ನು ಪ್ರವೇಶಿಸುವ ಅಸಂಖ್ಯಾತ ಜನರ ಜೀವನ, ಜೀವನೋಪಾಯ ಮತ್ತು ಭವಿಷ್ಯ ಆಳುವ ವರ್ಗಗಳ ಸಾಮಾಜಿಕ ಜವಾಬ್ದಾರಿಯಾಗಿ ಪರಿಣಮಿಸತ್ತು.  ಆಗ ತತ್ವ ಶಾಸ್ತ್ರಜ್ಞರು ಶ್ರಮಜೀವಿಗಳ ಬದುಕು ಬವಣೆಯನ್ನು ಗಮನಿಸಿ, ಅವರ ದುಸ್ಥಿತಿಯ ಬಗ್ಗೆ ಯೋಚನೆ ಮಾಡಲಾರಂಭಿಸಿದರು. ಸಮಾಜದ ಮತ್ತು ಆರ್ಥಿಕತೆಯ ಉನ್ನತಿಗೆ, ಪ್ರಗತಿಗೆ ಕಾರಣೀಭೂತರಾಗುವ ದುಡಿಮೆಯ ಕೈಗಳಿಗೆ ಸುಗಮ ಬದುಕಿನ ಹಾದಿಗಳನ್ನು ನಿರ್ಮಿಸಲು ತಾತ್ವಿಕ ಮಾರ್ಗದರ್ಶನಗಳನ್ನು, ಸೂತ್ರಗಳನ್ನು ರೂಪಿಸಲಾಯಿತು.

 ಈ ಹಂತದಲ್ಲೇ, 1830ರ ದಶಕದ ಔದ್ಯೋಗಿಕ ಕ್ರಾಂತಿಯ ವಾತಾವರಣದಲ್ಲಿ ಸಮಾಜವಾದ ಎಂಬ ಪದವನ್ನು ಹೆಚ್ಚಿನ ಸಂದರ್ಭಗಳಲ್ಲಿ ತಾತ್ವಿಕ ಅಥವಾ ನೈತಿಕ ನಂಬಿಕೆಗಳನ್ನು ಬಿಂಬಿಸುವ ಚಿಂತನಾ ಕ್ರಮವಾಗಿ ಬಳಸಲಾಗುತ್ತಿತ್ತು. ಅಲೆಕ್ಸಾಂಡ್ರೆ ವಿನೆಟ್‌ ಎಂಬ ತತ್ವಶಾಸ್ತ್ರಜ್ಞ “ ಸಮಾಜವಾದ ಎಂದರೆ ಸರಳವಾಗಿ ವ್ಯಕ್ತಿವಾದದ ವಿರುದ್ಧ ಇರುವುದು ” ಎಂದು ಹೇಳುತ್ತಾನೆ. ರಾಬರ್ಟ್‌ ಓವನ್‌ ಇದಕ್ಕೆ ನೈತಿಕತೆಯ ಸ್ಪರ್ಶ ನೀಡುತ್ತಾನೆ. ಸಮಾಜದ ಎಲ್ಲ ಸ್ತರಗಳ ಜನರನ್ನೂ ಒಳಗೊಳ್ಳುವ ಮತ್ತು ಸಮಷ್ಟಿ ಚಿಂತನೆಯಲ್ಲಿ ಸಮಸ್ತರಿಗೂ ಸುಗಮ ಬದುಕು ಕಲ್ಪಿಸುವ ಒಂದು ಆಲೋಚನಾ ಕ್ರಮವಾಗಿ ಸಮಾಜವಾದ ರೂಪುಗೊಂಡಿತ್ತು. ಯುಟೋಪಿಯನ್‌ ಸಮಾಜವಾದಿಗಳು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಸಮಾಜವನ್ನು ಕಟ್ಟುವ ಚಿಂತನೆಗೆ ತೆರೆದುಕೊಂಡಿದ್ದರು.

 ಕಾರ್ಲ್‌ ಮಾರ್ಕ್ಸ್‌ ಮತ್ತು ಫ್ರೆಡ್ರಿಕ್‌ ಏಂಗೆಲ್ಸ್ ಈ ಕಾಲ್ಪನಿಕ ಸಮಾಜವಾದವನ್ನು ಪುನರ್‌ ವ್ಯಾಖ್ಯಾನಿಸಿದ್ದೇ ಅಲ್ಲದೆ, ಸೈದ್ಧಾಂತಿಕ ನೆಲೆಯಲ್ಲಿ ನಿರಾಕರಿಸಿ ವೈಜ್ಞಾನಿಕ ಸಮಾಜವಾದವನ್ನು ಪ್ರತಿಪಾದಿಸಿದ್ದರು. ಬಂಡವಾಳ ಮತ್ತು ಸಮಾಜದ ಮೇಲೆ ಅದರ ಹಿಡಿತ, ಬಂಡವಾಳದ ಉತ್ಪಾದನೆ ಮತ್ತು ಕ್ರೋಢೀಕರಣಕ್ಕೆ ಅವಶ್ಯವಾದ  ಉತ್ಪಾದನಾ ಸಾಧನಗಳ ಮಾಲೀಕತ್ವ ಮತ್ತು ಉತ್ಪಾದನಾ ವಿಧಾನಗಳು ಮತ್ತು ಉತ್ಪಾದಕೀಯ ಶಕ್ತಿಗಳ ಮೇಲಿನ ಹಿಡಿತ ಯಾವುದೇ ಸಮಾಜದ ಜನರ ಆರ್ಥಿಕ ಪ್ರಗತಿಯನ್ನು ನಿರ್ಧರಿಸುತ್ತದೆ ಎಂಬ ಸೈದ್ಧಾಂತಿಕ ಚಿಂತನೆಯನ್ನು ಮಾರ್ಕ್ಸ್‌ ವೈಜ್ಞಾನಿಕ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಿದ್ದರು. ಈ ಆರ್ಥಿಕತೆಯಲ್ಲಿ ಬಂಡವಾಳಶಾಹಿಯಿಂದ ಉಂಟಾಗಬಹುದಾದ ಶೋಷಣೆ ಮತ್ತು ತಾರತಮ್ಯಗಳಿಂದ ಹೊರಬರಲು ಮತ್ತು ಸಮಾಜವಾದಿ ಸಿದ್ದಾಂತದಡಿ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸಾಧಿಸಲು  ಶ್ರಮಜೀವಿ ವರ್ಗದ (proletarian) ಕ್ರಾಂತಿಯಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

  ಈ ನಿಟ್ಟಿನಲ್ಲಿ ಸಮಾಜವಾದಿಗಳು ಬೇರೆಯಾಗಿ ಯೋಚಿಸುತ್ತಾರೆ.  ಹಿಂಸಾತ್ಮಕ ಹೋರಾಟ  ಅಥವಾ ಕ್ರಾಂತಿಕಾರಿ ಆಲೋಚನೆಗಳನ್ನು ಬದಿಗಿಟ್ಟು ಸಮಾಜ ಸುಧಾರಣೆಯ ಮುಖಾಂತರ, ಸಾಮಾಜಿಕ ಪರಿವರ್ತನೆಯ ಮೂಲಕ ಸಮಾನತೆಯನ್ನು ಸಾಧಿಸಬಹುದು ಎಂದು ಪ್ರತಿಪಾದಿಸುತ್ತಾರೆ. ಸಮಾಜದಲ್ಲಿ ಉತ್ಪಾದನೆಯಾಗುವ ಸಂಪತ್ತು  ಮತ್ತು ಅದಕ್ಕೆ ಪೂರಕವಾಗಿರುವ ಸಂಪನ್ಮೂಲಗಳು ಆರ್ಥಿಕವಾಗಿ ಒಂದೇ ವರ್ಗದಲ್ಲಿ ಕ್ರೋಢೀಕರಣವಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೋಗುವುದಿಲ್ಲ. ತತ್ವಶಾಸ್ತ್ರಜ್ಞ ರೂಸೋ ಇಂದ ಹಿಡಿದು ಗಾಂಧಿಯವರೆಗೂ ಸಂಪತ್ತು ಉಳ್ಳವರು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಸಂಪತ್ತನ್ನು ಬಳಸಬೇಕು ಎಂದೇ ಹೇಳುತ್ತಾರೆ. ಅದು ದಾನ ಧರ್ಮಗಳ ಮೂಲಕ, ಔದಾರ್ಯಯುತ ಕ್ರಮಗಳ ಮೂಲಕ ಸಾಧ್ಯ ಎಂದು  ಭಾವಿಸುತ್ತಾರೆ. ಆದರೆ ಯಾವುದೇ ಸಮಾಜದಲ್ಲಿ ರಾಜ್ಯಾಡಳಿತದ ವ್ಯವಸ್ಥೆ ಇಲ್ಲದಿದ್ದರೆ ಈ ಔದಾರ್ಯದ ಕ್ರಮಗಳು ದಾನಗಳು ಜನರನ್ನು ತಲುಪುವುದಿಲ್ಲ ಎಂಬುದು ಕಟು ಸತ್ಯ. ಇಲ್ಲಿ ಹುಟ್ಟಿಕೊಳ್ಳುವ ಮಧ್ಯವರ್ತಿ ವರ್ಗಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ರಾಜಕೀಯ ಅಧಿಕಾರ, ನಿರ್ವಹಣೆ ಮತ್ತು ನಿಯಂತ್ರಣದ ಪ್ರಶ್ನೆ ಉದ್ಭವಿಸುತ್ತದೆ. ರಾಜಪ್ರಭುತ್ವದ ಅಥವಾ ನಿರಂಕುಶಾಧಿಕಾರದ ಔದಾರ್ಯವಾಗಲೀ (Benevolent Dictatorship) ಅಧಿಕಾರಶಾಹಿಯ ಔದಾರ್ಯವಾಗಲೀ (Benevolent Beauracracy), ಉದಾರವಾದಿ ಪ್ರಜಾಸತ್ತಾತ್ಮಕ ಔದಾರ್ಯವಾಗಲೀ (Liberal Democractic Benevolence) ವಿವಿಧ ದೇಶಗಳಲ್ಲಿ ಈ ಪ್ರಯೋಗಗಳು ನಡೆದಿದ್ದು ವಿಫಲವಾಗಿರುವುದು ಚಾರಿತ್ರಿಕ ಸತ್ಯ.

 ಭಾರತದಲ್ಲಿ ಸಮಾಜವಾದದ ತತ್ವಗಳ ಪ್ರಭಾವ ಉಂಟಾಗಿದ್ದು ಸ್ವಾತಂತ್ರ್ಯ ಸಂಗ್ರಾಮದ ನಡುವೆ ಮತ್ತು ಹೋರಾಟಗಾರರ ನಡುವೆ. ಸ್ವಾತಂತ್ರ್ಯಾಂದೋಲನದ ಮುಂದಾಳತ್ವ ವಹಿಸಿದ್ದ ಕಾಂಗ್ರೆಸ್‌ನಲ್ಲೇ ಸಮಾಜವಾದಿ ಬಣ ಇದ್ದುದನ್ನೂ ಗುರುತಿಸಬಹುದು. ಈ ಸಮಾಜವಾದಿ ಚಿಂತನೆಗಳೇ ದಕ್ಷಿಣ ಭಾರತದ ಜಾತಿ ವಿರೋಧಿ ಹೋರಾಟ, ಬ್ರಾಹ್ಮಣೇತರ ರಾಜಕಾರಣ ಇತ್ಯಾದಿಗಳಿಗೆ ಬುನಾದಿಯಾಗಿದ್ದವು. ಇವರ ಪೈಕಿ ಮಾರ್ಕ್ಸ್‌ವಾದವನ್ನು ಒಪ್ಪಿದವರು ಕಮ್ಯುನಿಸ್ಟ್‌ ಬ್ಲಾಕ್‌ ರೂಪಿಸಿಕೊಂಡಿದ್ದು, ನಂತರದಲ್ಲಿ ಕಮ್ಯುನಿಸ್ಟ್‌ ಪಕ್ಷವಾಗಿ ಉಗಮಿಸಿತು. ಆದರೆ ಈ ಚಿಂತನಾ ಮಾದರಿಯಿಂದ ಹೊರಗುಳಿದವರು ಸ್ವಾತಂತ್ರ್ಯಾನಂತರದಲ್ಲೂ ಸಮಾಜವಾದವನ್ನು ಒಂದು ರಾಜಕೀಯ ತತ್ವವಾಗಿ ಮುಂದುವರೆಸಿದ್ದರು. ಅವರಲ್ಲಿ ಪ್ರಮುಖವಾಗಿ ಕಾಣುವುದು ರಾಮ ಮನೋಹರ್‌ ಲೋಹಿಯಾ , ಜಯಪ್ರಕಾಶ್‌ ನಾರಾಯಣ್(‌ ಜೆಪಿ), ಮಧು ಲಿಮಯೆ, ಮಧು ದಂಡವತೆ ಮುಂತಾದವರು. ಈ ಚಿಂತಕರು ಗಾಂಧಿ ಪ್ರಣೀತ ಗ್ರಾಮಭಾರತದ ಪರಿಕಲ್ಪನೆಯಲ್ಲಿ ಸಮಾಜವಾದವನ್ನು ಅನುಸರಿಸುವ ಮೂಲಕ ಸಾಮಾಜಿಕ ಸಮಾನತೆಯ ಬಗ್ಗೆ ಯೋಚಿಸಿದ್ದರು.

 ಭಾರತದ ರಾಜಕೀಯದಲ್ಲಿ ಸಮಾಜವಾದ ಎಂದರೆ ಲೋಹಿಯಾವಾದ ಎಂದೇ ಅರ್ಥೈಸಬೇಕಾಗುತ್ತದೆ. ಏಕೆಂದರೆ ಭಾರತದ ಕಮ್ಯುನಿಸ್ಟ್‌ ಪಕ್ಷಗಳು ʼಸಮಾಜವಾದಕ್ಕೆ ಭಾರತದ ಮಾರ್ಗವನ್ನುʼ (Indian Way to Socialism) ರೂಪಿಸಲಿಲ್ಲ. ಬದಲಾಗಿ ಕಮ್ಯುನಿಸ್ಟ್ ಪಕ್ಷಗಳು ವೈಜ್ಞಾನಿಕ ಸಮಾಜವಾದ ಮತ್ತು ಕಮ್ಯುನಿಸಂ ಪ್ರತಿಪಾದಿಸುತ್ತಲೇ, ರಷ್ಯಾ ಮಾದರಿ ಅಥವಾ ಚೀನಾ ಮಾದರಿಯನ್ನೇ ಅಳವಡಿಸಿಕೊಂಡರು. ತತ್ಪರಿಣಾಮವಾಗಿ ಕಮ್ಯುನಿಸ್ಟ್‌ ರಾಜಕೀಯ ಮತ್ತು ಚಳುವಳಿಗಳು Dogmatic ಆಗಿ ಮಾರ್ಕ್ಸ್‌ ಪ್ರತಿಪಾದಿಸುವ Base and Superstructure ತತ್ವಗಳಿಗೆ ಬದ್ಧರಾಗಿದ್ದವು . ಹಾಗಾಗಿ ಕಮ್ಯುನಿಸ್ಟ್‌ ಚಳುವಳಿ ಮತ್ತು ರಾಜಕೀಯ ಎರಡೂ ಸಹ ಭಾರತದ ಜಾತಿ ಪ್ರಶ್ನೆಯನ್ನು ಸೈದ್ಧಾಂತಿಕ ನೆಲೆಯಲ್ಲಿ ನಿರ್ವಚಿಸಲಿಲ್ಲ. ಹಾಗಾಗಿ ಕಮ್ಯುನಿಸ್ಟ್‌ ಪಕ್ಷಗಳ ರಾಜಕಾರಣವು ವರ್ಗ ಹೋರಾಟದ ಚೌಕಟ್ಟಿನಲ್ಲಿ ಕಾಣಬಹುದಾಗಿದ್ದ ಜಾತಿ ವೈರುಧ್ಯಗಳನ್ನು ಗುರುತಿಸುವುದರಲ್ಲಿ ವಿಫಲವಾಗಿತ್ತು. ವರ್ಗ ಹೋರಾಟದಲ್ಲಿ ಯಶಸ್ವಿಯಾಗಿ ಆರ್ಥಿಕ ಸಮಾನತೆ ಸಾಧ್ಯವಾದರೆ ಜಾತಿ ಇಲ್ಲವಾಗುತ್ತದೆ ಎಂಬ ಸರಳೀಕೃತ ತತ್ವವನ್ನು ತಮ್ಮದಾಗಿಸಿಕೊಂಡಿದ್ದವು.

 ಆದರೆ ಭಾರತದಲ್ಲಿ ಜಾತಿ ಮತ್ತು ವರ್ಗ ಎರಡೂ ಸಹ ಅಂತರ್‌ ಸಂಬಂಧ ಹೊಂದಿರುವ ವಿದ್ಯಮಾನಗಳು. “ಭಾರತದಲ್ಲಿ ಪ್ರತಿಯೊಂದು ಜಾತಿಯೂ ತನ್ನ ನೆಲೆಯಲ್ಲಿ ಒಂದು ವರ್ಗವಾಗಿರುತ್ತದೆ ” (Every Caste in India is a Class by itself) ಎಂದು ಅಂಬೇಡ್ಕರ್‌ ಒಂದೆಡೆ ಹೇಳುತ್ತಾರೆ. ಹಾಗೆಯೇ Class cuts across caste ಅಂದರೆ ವರ್ಗವು ಜಾತಿ ಶ್ರೇಣಿಯನ್ನು ಲಂಬಗತಿಯಲ್ಲಿ (Vertically) ಹಂತಹಂತದಲ್ಲೂ ಭೇದಿಸುತ್ತಲೇ ಹೋಗುತ್ತದೆ ಎಂದು ಅಂಬೇಡ್ಕರ್‌ ವ್ಯಾಖ್ಯಾನಿಸಿದ್ದರು. ಇದನ್ನು ಸ್ಪಷ್ಟವಾಗಿ ಗುರುತಿಸಿ ಭಾರತದ ಸಮಾಜವಾದಕ್ಕೆ ಹೊಸ ಆಯಾಮವನ್ನು ನೀಡಲು ಯತ್ನಿಸಿದವರು ರಾಮಮನೋಹರ್‌ ಲೋಹಿಯಾ. ಹಾಗಾಗಿಯೇ ಜಾತಿ ಕೇಂದ್ರಿತ ಶೋಷಣೆಯ ನೆಲೆಗಳನ್ನು ಅರ್ಥೈಸುವಲ್ಲಿ ಲೋಹಿಯಾ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲದೆ ಸಮಾಜವಾದಿ ತತ್ವಗಳನ್ನು ಸಂಸದೀಯ ಪ್ರಜಾತಂತ್ರದ ಒಂದು ಭಾಗವಾಗಿ ರೂಪಿಸಿ ರಾಜಕೀಯ ಪಕ್ಷಗಳ ಉದಯಕ್ಕೆ ಲೋಹಿಯಾ ಕಾರಣರಾಗುತ್ತಾರೆ. ಇಂದಿಗೂ ಸಹ ದೇಶದ ಎಲ್ಲ ರಾಜ್ಯಗಳಲ್ಲೂ, ಪ್ರಾದೇಶಿಕ ನೆಲೆಯಲ್ಲಿ ಲೋಹಿಯಾವಾದಿಗಳು ಪಕ್ಷಗಳನ್ನು ಸ್ಥಾಪಿಸಿಕೊಂಡಿದ್ದಾರೆ, ಕಾಂಗ್ರೆಸ್‌ ಪಕ್ಷದೊಳಗೂ ಲೋಹಿಯಾವಾದಿಗಳು ಪ್ರಭಾವ ಹೊಂದಿದ್ದಾರೆ.

 ಮುಂದುವರೆಯುತ್ತದೆ,,,,,,,,

-೦-೦-೦-೦-

Tags: Naa DivakaraPratidhvani
Previous Post

ಜಯ ಮೃತ್ಯುಂಜಯ ಸ್ವಾಮೀಜಿ ನಾಲಾಯಕ್ ! ನಾಲಗೆ ಹರಿಬಿಟ್ಟ ಕೆ.ಎಸ್. ಶಿವರಾಮ್! 

Next Post

ಧನರಾಜ್ – ರಜತ್ ಗೆ ಕಿಚ್ಚನ ಕ್ಲಾಸ್ -ದಿಕ್ಕು ತಪ್ಪಿದ ಸ್ಪರ್ಧಿಗಳಿಗೆ ಕಿಚ್ಚ ಹೇಳಿದ್ದೇನು?

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ಧನರಾಜ್ – ರಜತ್ ಗೆ ಕಿಚ್ಚನ ಕ್ಲಾಸ್ -ದಿಕ್ಕು ತಪ್ಪಿದ ಸ್ಪರ್ಧಿಗಳಿಗೆ ಕಿಚ್ಚ ಹೇಳಿದ್ದೇನು?

ಧನರಾಜ್ - ರಜತ್ ಗೆ ಕಿಚ್ಚನ ಕ್ಲಾಸ್ -ದಿಕ್ಕು ತಪ್ಪಿದ ಸ್ಪರ್ಧಿಗಳಿಗೆ ಕಿಚ್ಚ ಹೇಳಿದ್ದೇನು?

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada