ಬಳ್ಳಾರಿಯ ಬಿಮ್ಸ್ ನಲ್ಲಿ (BIMS) ಬಾಣಂತಿಯರ ಸರಣಿ ಸಾವಿಗೆ ಸಂಬಂಧಪಟ್ಟಂತೆ ಸಚಿವ ದಿನೇಶ್ ಗುಂಡೂರಾವ್ (Dinesh gundu rao) ಪ್ರತಿಭಟನೆ ಮುಂದಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಾಣಂತಿಯರ ಸಾವು ಪ್ರಕರಣ ಬಂದ ತಕ್ಷಣ ಎಲ್ಲ ಆಸ್ಪತ್ರೆಯಲ್ಲಿ IV ಪ್ಯೂಯಿಡ್ ಸ್ಟಾಪ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ.
ಈ ಫ್ಲೂಯಿಡ್ (IV fluids) ಬಗ್ಗೆ ನಮಗೆ ಸಂಶಯವಿದೆ. ಹೀಗಾಗಿ ಈ ಕಂಪನಿ ಮೇಲೆ ಪ್ರಾಸಿಕ್ಯೂಷನ್ ಗೆ ನೀಡಲಾಗುತ್ತದೆ. ಬಾಣಂತಿಯರ ಸಾವಿನ ಕುರಿತು ಪೂರ್ತಿ ತನಿಖೆ ಆಗಲಿದೆ. ಆದ್ರೆ ಈ ಸಾವುಗಳು ಹೇಗಾಯ್ತು ಎಂಬ ಸತ್ಯಾಂಶ ಗೊತ್ತಾಗೋಕು ಎಂದಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Cm siddaramaiah) ಹಾಗೂ ನಾನು ಆರೋಗ್ಯ ಇಲಾಖೆಯ (Health department) ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಈ ಬಗ್ಗೆ ವಿರೋಧ ಪಕ್ಷವಾಗಿ ನೀವು ಪ್ರತಿಭಟನೆ ಮಾಡುವುದು ಸರಿಯಿದೆ. ಇದು ಭಾವನಾತ್ಮಕ, ಮಾನವೀಯತೆ ವಿಚಾರ ಎಂದು ಸಚಿವರು ಹೇಳಿದ್ದಾರೆ.

ಹೀಗಾಗಿ ಚಳಿಗಾಲದ ಅಧಿವೇಶನದಲ್ಲಿ (Winter session) ಸದನದಲ್ಲಿ ಕೂಡ ಈ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಿವಿ.ಈ ಸಾವುಗಳ ತಡೆಗೆ ಗಂಭೀರವಾಗಿ ಕ್ರಮ ತೆಗೆದುಕೊಂಡಿದ್ದೇವೆ ಮತ್ತು ಪರಿಹಾರವನ್ನು ನೀಡಲಾಗುತ್ತಿದೆ.ಈ ಕಾರಣಗಳಿಗೆ ನೀವು ಪ್ರತಿಭಟನೆ ಹಿಂಪಡೆಯಬೇಕು ಎಂದಿದ್ದಾರೆ.







