ನಾಳೆಯಿಂದ (ಡಿ.9) ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ (Winter session) ಆರಂಭವಾಗಲಿದೆ.ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ಜಟಾಪಟಿಗೆ ಅಧಿವೇಶನದ ಅಖಾಡ ಸಿದ್ಧವಾಗಿದೆ.ಆದ್ರೆ ವಿರೋಧ ಪಕ್ಷಗಳಲ್ಲಿ ಸಮನ್ವಯದ ಕೊರತೆಯಿದ್ದು, ವಿಪಕ್ಷಗಳಾದ ಜೆಡಿಎಸ್- ಬಿಜೆಪಿಯಲ್ಲಿ (Jds bjp) ಸರ್ಕಾರಕ್ಕೆ ಛಾಟಿ ಬೀಸಲು ರೂಪರೇಷೆಗಳು ಇನ್ನೂ ಸಿದ್ಧವಾಗಿಲ್ಲ ಎನ್ನಲಾಗ್ತಿದೆ.

ಪ್ರತಿಪಕ್ಷ ಬಿಜೆಪಿ ಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಳಿಗಾಲದ ಸದನದಲ್ಲಿ ಪ್ರಯೋಗಿಸಲು ಸಾಲು ಸಾಲು ಅಸ್ತ್ರಗಳಿವೆ.ಆದ್ರೆ ಮೈತ್ರಿಪಕ್ಷಗಳಾದ ಜೆಡಿಎಸ್ ಬಿಜೆಪಿ ನಾಯಕರು ಸಮನ್ವಯ ಸಭೆ ನಡೆಸದೇ,ಯಾವುದೇ ಸಿದ್ಧತೆ ಇಲ್ಲದೇ ಕಲಾಪದಲ್ಲಿ ಭಾಗಿಯಾಗ್ತಿದ್ದು ಸಮನ್ವಯದ ಕೊರತೆ ಕಾಣುತ್ತಿದೆ.
ಮತ್ತೊಂದೆಡೆ ಕಾಂಗ್ರೆಸ್ ಕೂಡ ಬಿಜೆಪಿ ಯನ್ನು ಕೌಂಟರ್ ಮಾಡಲು ತಯಾರಿ ಮಾಡಿಕೊಂಡಿದ್ದು, ಬಿಜೆಪಿಯ ಆಂತರಿಕ ಭಿನ್ನಮತ ಹಾಗೂ ಕಿತ್ತಾಟಗಳನ್ನು ಅಸ್ತ್ರವಾಗಿಸಿಕೊಳ್ಳಲು ಪ್ಲಾನ್ ಮಾಡಿದೆ. ಈ ರಾಜಕೀಯ ಕೆಸರೆರಚಾಟಗಳ ನಡುವೆ ಯಾವ ಯಾವ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವ್ಯೋ, ಯಾವ ಮಸೂದೆಗಳು ಅಂಗೀಕಾರಗೊಳ್ಳಲಿದ್ಯೋ ಕಾಡು ನೋಡಬೇಕಿದೆ.