
ಕೊಪ್ಪಳ: ಲೋಕಸಭೆ ಚುನಾವಣೆಯಲ್ಲಿ ಇವಿಎಮ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗಲೂ ಅನುಮಾನ ವ್ಯಕ್ತಪಡಿಸಿದೆ. ಉಪಚುನಾವಣೆಯಲ್ಲಿ ಬಿಜೆಪಿಯವರಿಗೆ ಅವಶ್ಯಕತೆ ಇಲ್ಲ ಅದಕ್ಕೆ ಸುಮ್ಮನಿದ್ದಾರೆ. ಇವಿಎಂ ಮೇಲೆ ಅನುಮಾನ ಹೊರಹಾಕಿದ್ದಾರೆ ಸಚಿವ ಶಿವರಾಜ ತಂಗಡಗಿ.
ಕಾರಟಗಿಯಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಗೆಲ್ತಿವಿ ಅಂತ ಹೇಳಿದ್ದೆವು. ಈಗ ಮೂರು ಕ್ಷೇತ್ರದಲ್ಲಿ ಗೆದ್ದಿದ್ದೀವಿ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಮನಸ್ಪೂರ್ತಿಯಾಗಿ ಬೆಂಬಲಿಸಿದ್ದಾರೆ. ಜನರು ಲೋಕಸಭೆ ಚುನಾವಣೆಯಲ್ಲೂ ಬೆಂಬಲಿಸಿದ್ರು. ಆದ್ರೆ ನಮಗೆ ಈಗಲೂ ಇವಿಎಮ್ ಮೇಲೆ ಅನುಮಾನ ಕಾಡ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈಗಲು ನಮಗೆ ಲೋಕಸಭಾ ಚುನಾವಣೆಯಲ್ಲಿ ಆಗಿದ್ದು ಕಾಡ್ತಿದೆ. ಉಪಚುನಾವಣೆ ಅವರಿಗೆ ಅವಶ್ಯಕತೆ ಇಲ್ಲ ಹೀಗಾಗಿ ಈಗ ಮಾಡಿರದೆ ಇರಬಹುದು. ಕೇಂದ್ರ ಸರ್ಕಾರದ ಜೊತೆಗೆ ಹಲವು ವಿಚಾರಗಳು ಕಾಡ್ತಿವೆ. ಜನರು ಕಾಂಗ್ರೆಸ್ ಪರವಾಗಿದ್ದಾರೆ. ನಮ್ಮ ಮೇಲೆ ಸಾಕಷ್ಟು ಆರೋಪ ಮಾಡಿದ್ರು, ಚುನಾವಣೆ ಬಿಜೆಪಿಯವರ ಕಪಾಳಕ್ಕೆ ಬಡಿದಂತೆ ಆಗಿದೆ. ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಮಾಡೋದನ್ನ ಕೂಡಲೆ ಬಿಡಬೇಕು ಎಂದು ಆಗ್ರಹ ಮಾಡಿದ್ದಾರೆ.






