• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಾಧ್ಯಮ ಮಾರುಕಟ್ಟೆ ಮತ್ತು ರಾಜಕೀಯ ಭ್ರಷ್ಟಾಚಾರ

ನಾ ದಿವಾಕರ by ನಾ ದಿವಾಕರ
November 20, 2024
in Top Story, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ಶೋಧ
0
ಮಾಧ್ಯಮ ಮಾರುಕಟ್ಟೆ ಮತ್ತು ರಾಜಕೀಯ ಭ್ರಷ್ಟಾಚಾರ
Share on WhatsAppShare on FacebookShare on Telegram

—-ನಾ ದಿವಾಕರ—-

ADVERTISEMENT

ಸಾರ್ವಜನಿಕ ಪ್ರಜ್ಞೆ ಇಲ್ಲದ ಮಾಧ್ಯಮಗಳು ಪ್ರಜಾತಂತ್ರವನ್ನು ಶಿಥಿಲಗೊಳಿಸುತ್ತವೆ

=====

ಕರ್ನಾಟಕದ ರಾಜಕೀಯ ಚಟುವಟಿಕೆಗಳನ್ನು ಹಾಗೂ ಅದರ ಸುತ್ತ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ಯಾರಿಗೇ ಆದರೂ ಆತಂಕ ಮೂಡುವಂತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಗಳು ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಒಳಗೆ ಹುದುಗಿರಬಹುದಾದ ಕೊಳಕುಗಳನ್ನೆಲ್ಲಾ ಹೊರಹಾಕಿಬಿಟ್ಟಿವೆ. ಅಧಿಕಾರ ರಾಜಕಾರಣ ಮತ್ತು  ಆಡಳಿತ ಭ್ರಷ್ಟಾಚಾರ ಈ ಎರಡೂ ವಿದ್ಯಮಾನಗಳು ಪರಸ್ಪರ ಪೂರಕವಾಗಿ  ಕಾರ್ಯನಿರ್ವಹಿಸುತ್ತಾ, ಜನಸಾಮಾನ್ಯರ ಮೂಲಭೂತ ಅವಶ್ಯಕತೆಗಳನ್ನು ಮೂಲೆಗುಂಪು  ಮಾಡುವ ರಾಜಕೀಯ ಪರಂಪರೆಗೆ ಈ ಚರ್ಚೆಗಳು ಸಾಕ್ಷಿಯಾಗಿ ಕಾಣುತ್ತಿವೆ. ಹಾಲಿ ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸುತ್ತಿಕೊಂಡಿರುವ ಮುಡಾ-ವಾಲ್ಮೀಕಿ ಹಗರಣಗಳು ರಾಜಕೀಯ ಪಕ್ಷಗಳ ಮೇಲೆ ಬೀರಬಹುದಾದ ಪ್ರಭಾವಕ್ಕಿಂತಲೂ, ಈ ಸಾಂಸ್ಥಿಕ ಭ್ರಷ್ಟಾಚಾರ ಪ್ರಜಾತಂತ್ರದ ಮೂಲ ತಳಹದಿಯನ್ನೇ ಸಡಿಲಗೊಳಿಸುವಂತಾಗಿರುವುದು ಆತಂಕಕಾರಿಯಾಗಿ ಕಾಣುತ್ತದೆ.

CP Yogeshwar Son: ಯೋಗೇಶ್ವರ್‌ ವಿರುದ್ಧ ಕೋರ್ಟ್‌ ಮೆಟ್ಟಲೇರಿದ ಪುತ್ರ - ಆಡಿಯೋ ವೈರಲ್‌..! #audio #viral #bjp

ಕಳೆದ ಮೂರು ದಶಕಗಳ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಧಾನವಾಗಿ ಗುರುತಿಸಬಹುದಾದ ಒಂದು ಅಂಶ ಎಂದರೆ ಅಧಿಕಾರವಲಯದಲ್ಲಿ ಕೇಂದ್ರ ಸ್ಥಾನ ಪಡೆದಿರುವ ಮಾರುಕಟ್ಟೆ ಮತ್ತು ಬಂಡವಾಳದ ಪ್ರಭಾವ.  ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹಣಕಾಸು ಭ್ರಷ್ಟಾಚಾರ ಸಹಜ ಪ್ರಕ್ರಿಯೆಯೇ ಆದರೂ, ಇದರ ಸಾಂಸ್ಥೀಕರಣವು ಪ್ರಜಾತಂತ್ರವನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ರಾಜ್ಯ ರಾಜಕಾರಣವನ್ನು ಆವರಿಸಿರುವ ಭ್ರಷ್ಟಾಚಾರ ಹಗರಣಗಳು ಈ ಸಾಂಸ್ಥೀಕರಣದ ಒಂದು ನಿದರ್ಶನ. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಂದಾಚೆ ನೋಡಿದಾಗ, ಈ ಹಗರಣಗಳು ವ್ಯವಸ್ಥೆಯೊಳಗಿನ ಒಂದು ವ್ಯಾಧಿ ಎನ್ನುವುದು ಸ್ಪಷ್ಟವಾಗುತ್ತದೆ. ವಿಕಸಿತ ಭಾರತದ ಒಂದು ವೈಶಿಷ್ಟ್ಯ ಎಂದರೆ, ರಾಜಕೀಯ ಸಂಕಥನಗಳಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಂತಹ ಅಸಾಂವಿಧಾನಿಕ ವಿದ್ಯಮಾನಗಳ ಸುತ್ತಲಿನ ಚರ್ಚೆಗಳು ಬಹುಮಟ್ಟಿಗೆ ಸಾಪೇಕ್ಷ ಹಾಗೂ ವ್ಯಕ್ತಿನಿಷ್ಠವಾಗಿವೆ.

ಭ್ರಷ್ಟಬೇರುಗಳ ರಾಜಕೀಯ ವ್ಯಾಪ್ತಿ

ಯಾರು ಹೆಚ್ಚು ಭ್ರಷ್ಟರು ಅಥವಾ ಯಾರ ಆಳ್ವಿಕೆಯಲ್ಲಿ ಭ್ರಷ್ಟಾಚಾರದ ವ್ಯಾಪ್ತಿ ಮತ್ತು ಹರವು ಆಳವಾಗಿತ್ತು ಎನ್ನುವುದೇ ಮುಖ್ಯ ಚರ್ಚೆಯಾಗುತ್ತದೆ. ಚುನಾವಣಾ ಬಾಂಡ್‌ಗಳಿಂದ ಹಿಡಿದು ಮುಡಾ ಹಗರಣದವರೆಗೆ ವ್ಯಾಪಿಸುವ ಆಡಳಿತ ಭ್ರಷ್ಟತೆಯನ್ನು ಗಮನಿಸಿದಾಗ ಇದು ಇನ್ನೂ ಸ್ಪಷ್ಟವಾಗುತ್ತದೆ. ಈ ವಿದ್ಯಮಾನದ ಮೂಲವನ್ನು ಸುಲಭವಾಗಿ ಮಾರುಕಟ್ಟೆ ಆರ್ಥಿಕತೆಯಲ್ಲಿ ಗುರುತಿಸಬಹುದು. ನವ ಉದಾರವಾದ ಪೋಷಿಸುತ್ತಿರುವ ಔದ್ಯಮಿಕ ಜಗತ್ತು ಇಂದು ನೇರವಾಗಿ ರಾಜಕಾರಣದಲ್ಲಿ ಭಾಗಿಯಾಗುತ್ತಿರುವುದು ಮೇಲ್ನೋಟಕ್ಕೇ ಕಾಣುವಂತಿದೆ. ಚುನಾವಣಾ ಬಾಂಡ್‌ಗಳ ಹಗರಣದಲ್ಲಿ ಇದರ ಸಾಂಸ್ಥಿಕ ಆಯಾಮವನ್ನು ಕಾಣಬಹುದು. ಬಂಡವಾಳ ಮತ್ತು ಮಾರುಕಟ್ಟೆ ನಿರ್ದೇಶಿಸುವ ಭ್ರಷ್ಟ ಮಾರ್ಗಗಳು ರಾಜಕೀಯ ಪಕ್ಷಗಳನ್ನು ಚುನಾವಣೆಗಳ ಹಂತದಿಂದಲೇ ಆವರಿಸುವುದರಿಂದ, ಅಧಿಕಾರ ಗಳಿಸದೆ ಇದ್ದರೂ, ಬೂರ್ಷ್ವಾ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳಿಗಾಗಿ, ಚುನಾವಣಾ ವೆಚ್ಚಗಳಿಗಾಗಿ ಹಾಗೂ ಅಧಿಕಾರ ಗಳಿಸುವ ಪ್ರಯತ್ನಗಳಿಗಾಗಿ ಈ ಕೇಂದ್ರವನ್ನೇ ಅವಲಂಬಿಸುತ್ತವೆ.

ಕರ್ನಾಟಕದ ರಾಜಕೀಯ ಸಂಕಥನಗಳಲ್ಲಿ ಇತ್ತೀಚೆಗೆ ಸದ್ದುಮಾಡುತ್ತಿರುವ 50 ಕೋಟಿ- 100 ಕೋಟಿ ರೂಗಳ ಮಾರುಕಟ್ಟೆ ದರಗಳು ಇದನ್ನೇ ಸೂಚಿಸುತ್ತದೆ. ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ರಾಜಕೀಯ ಪಕ್ಷವೊಂದನ್ನು ಪದಚ್ಯುತಗೊಳಿಸುವವರೆಗೂ ವಿರಮಿಸುವುದಿಲ್ಲ ಎಂಬ ರಾಜಕೀಯ ಘೋಷಣೆಗಳು ಮೇಲ್ನೋಟಕ್ಕೆ ಪ್ರಚಾರದ ತಂತ್ರ ಎನಿಸಿದರೂ, ಈ ಧ್ವನಿಯ ಹಿಂದೆ ಚುನಾಯಿತ ಸರ್ಕಾರವನ್ನು ಪಲ್ಲಟಗೊಳಿಸುವ ಆತ್ಮವಿಶ್ವಾಸವೂ ಇದ್ದೇ ಇರುತ್ತದೆ. ಈ ವಿಶ್ವಾಸದ ಮೂಲವನ್ನು ನಾವು ಔದ್ಯಮಿಕ ಬಂಡವಾಳ ಮತ್ತು ಮಾರುಕಟ್ಟೆ ಶಕ್ತಿಗಳಲ್ಲಿ ಗುರುತಿಸಬಹುದು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳಲ್ಲಿ ಪರಾಭವ ಹೊಂದುವ ಪಕ್ಷಗಳು, ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಆಡಳಿತ ಪಕ್ಷದ ದುರಾಡಳಿತ ಮತ್ತು ಅಧಿಕಾರ ದುರ್ಬಳಕೆಗಳ ವಿರುದ್ಧ ದನಿ ಎತ್ತುವುದು ಅಪೇಕ್ಷಣೀಯ ಮತ್ತು ಅಗತ್ಯವೂ ಹೌದು.

ಆದರೆ ಬದಲಾದ/ಬದಲಾಗುತ್ತಿರುವ ಭಾರತದಲ್ಲಿ ಭಿನ್ನ ವಾತಾವರಣವನ್ನೇ ಕಾಣುತ್ತಿದ್ದೇವೆ. ಕರ್ನಾಟಕದ ಉದಾಹರಣೆಯನ್ನೇ ಗಮನಿಸಿದರೆ, ಮೇ 2023ರಲ್ಲಿ ಕಾಂಗ್ರೆಸ್‌ ಪಕ್ಷವು 135 ಸ್ಥಾನಗಳೊಂದಿಗೆ ಅಧಿಕಾರ ವಹಿಸಿಕೊಂಡ ದಿನದಿಂದಲೂ, ಬಿಜೆಪಿ –ಜೆಡಿಎಸ್‌ ನಾಯಕರು ಸರ್ಕಾರವನ್ನು ಪದಚ್ಯುತಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಜೆಡಿಎಸ್‌ ವರಿಷ್ಠ ನಾಯಕರು ಸರ್ಕಾರದ ಪತನಕ್ಕೆ ಜನವರಿ 2025ರ ಕಾಲಮಿತಿಯನ್ನೂ ನಿಗದಿಪಡಿಸಿದ್ದಾರೆ. ಸಾಂವಿಧಾನಿಕ ನೈತಿಕತೆಯ ನೆಲೆಯಲ್ಲಿ ಈ ವಿದ್ಯಮಾನವನ್ನು ಗಮನಿಸಿದರೆ, ಒಂದು ವಿರೋಧ ಪಕ್ಷದ ಆದ್ಯತೆ ಅಧಿಕಾರಾರೂಢ ಸರ್ಕಾರವನ್ನು ಪಲ್ಲಟಗೊಳಿಸುವುದೋ ಅಥವಾ ಸರ್ಕಾರದ ಲೋಪಗಳನ್ನು ಜನತೆಯ ಮುಂದಿಡುವುದೋ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  ಚುನಾಯಿತ ಸರ್ಕಾರದ ಪತನವೇ ಮುಖ್ಯ ಕಾರ್ಯಸೂಚಿಯಾದಾಗ ಅದಕ್ಕೆ ಬೇಕಾದ ಭೌತಿಕ ಪರಿಕರಗಳನ್ನು ಸಿದ್ದಪಡಿಸಿಕೊಳ್ಳಬೇಕಾಗುತ್ತದೆ.

ಈ ಪರಿಕರಗಳಲ್ಲಿ ಪ್ರಮುಖವಾಗಿ ಕಾಣುವುದು ಶಾಸಕರ ಖರೀದಿ ಮತ್ತು ಅದರ ಸುತ್ತಲಿನ ಮಾರುಕಟ್ಟೆ ಪರಿಸರ. ದುರಾದೃಷ್ಟವಶಾತ್‌ ಚುನಾಯಿತ ಶಾಸಕರನ್ನು ಬಿಕರಿಯ ಸರಕುಗಳನ್ನಾಗಿ ಪರಿಗಣಿಸುವ ಒಂದು ಪರಂಪರೆಯನ್ನು ಹುಟ್ಟುಹಾಕಿದ್ದು ಕರ್ನಾಟಕವೇ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ರಾಜ್ಯದಲ್ಲಿ ಜನಪ್ರತಿನಿಧಿಗಳನ್ನು ಮಾರುಕಟ್ಟೆ ಮೌಲ್ಯಾಂಕಣದ ವಸ್ತುಗಳನ್ನಾಗಿ ಮಾಡಿದ (ಅಪ)ಕೀರ್ತಿ ಕರ್ನಾಟಕಕ್ಕೆ ಸಲ್ಲಬೇಕಿದೆ. ಇದನ್ನು “ ಆಪರೇಷನ್‌ ಕಮಲ – ಆಪರೇಷನ್‌ ಹಸ್ತ ” ಎಂಬ ಸುಂದರ ಪದಗಳ ಮೂಲಕ ಬಣ್ಣಿಸಲಾಗುತ್ತದೆ. ಪ್ರಸ್ತುತ ರಾಜಕೀಯ ಚರ್ಚೆಯನ್ನು ಆವರಿಸಿರುವ ಶಾಸಕರ ದರಪಟ್ಟಿ ಇದರ ಒಂದು ವಿಕೃತ ರೂಪ ಎಂದು ಹೇಳಬಹುದು. ಕೆಲವು ಶಾಸಕರು ಆರೋಪಿಸಿರುವಂತೆ 50 ಅಥವಾ 100 ಕೋಟಿ ರೂಗಳ ಆಮಿಷಗಳ ಸತ್ಯಾಸತ್ಯತೆ ಏನೇ ಇದ್ದರೂ, ಒಂದು ಸುಭದ್ರ ಸರ್ಕಾರವನ್ನು ಪಲ್ಲಟಗೊಳಿಸುವ ಹಾದಿಯಲ್ಲಿ ಈ ಪ್ರಮಾಣದ ಬಂಡವಾಳದ ಅವಶ್ಯಕತೆ  ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

B. K. Hariprasad : ಇಂದಿರಾ ಗಾಂಧಿ ಇತಿಹಾಸ ಹೇಳಿದ ಬಿಕೆ ಹರಿಪ್ರಸಾದ್ #pratidhvani

ಏಕೆಂದರೆ ತಮ್ಮ ಪಕ್ಷ ನಿಷ್ಠೆ ಬದಲಿಸುವ ಜನಪ್ರತಿನಿಧಿಗಳಿಗೆ ವೈಯುಕ್ತಿಕ  ಲಾಭ ಮತ್ತು ಭವಿಷ್ಯದ ರಾಜಕೀಯ ಅಧಿಕಾರ ಎರಡೂ ಮುಖ್ಯವಾಗುತ್ತದೆ. ಪಕ್ಷಾಂತರ ಎಂಬ ಋಣಾತ್ಮಕ ರಾಜಕೀಯ ಪ್ರಕ್ರಿಯೆಯೂ ರೂಪಾಂತರಗೊಂಡಿರುವ ವರ್ತಮಾನದ ರಾಜಕಾರಣದಲ್ಲಿ ರಾಜಕೀಯ ನಾಯಕರ ಬೇಲಿ ಜಿಗಿತವನ್ನು ಮೂಲತಃ ನಿರ್ದೇಶಿಸುವುದು ಬಂಡವಾಳ ಮತ್ತು ಮಾರುಕಟ್ಟೆಯ ಹಿತಾಸಕ್ತಿ. ಇದರ ಒಂದು ಆಯಾಮವನ್ನು 50-100 ಕೋಟಿ ರೂಗಳ ಆಮಿಷಗಳ ಆರೋಪಗಳಲ್ಲಿ ಗುರುತಿಸಬಹುದು. ಚುನಾವಣಾ ವೆಚ್ಚವನ್ನು ಸರಿದೂಗಿಸಲು ರಾಜಕೀಯ ಪಕ್ಷಗಳಿಗೆ ನೆರವಾಗುವ ಮಾರುಕಟ್ಟೆ ಶಕ್ತಿಗಳೇ ಆಯ್ಕೆಯಾಗುವ ಮತ್ತು ಪರಾಭವಗೊಳ್ಳುವ ಅಭ್ಯರ್ಥಿಗಳ ಭವಿಷ್ಯದ ನಡೆಗಳನ್ನೂ ಸಹ ನಿರ್ಧರಿಸುತ್ತವೆ. ಹಾಗಾಗಿ ಮಾರುಕಟ್ಟೆ ನಿಯಮಗಳ ಅನುಸಾರ ತಾನು ಹೂಡಿದ ಬಂಡವಾಳಕ್ಕೆ ಪ್ರತಿಯಾಗಿ ಲಾಭವನ್ನು ಅಪೇಕ್ಷಿಸುವ ಔದ್ಯಮಿಕ ಲಕ್ಷಣವನ್ನು ಅಲ್ಲಗಳೆಯಲಾಗುವುದಿಲ್ಲ. ದಿನದಿಂದ ದಿನಕ್ಕೆ ತೆರೆದುಕೊಳ್ಳುತ್ತಲೇ ಇರುವ MUDA ಹಗರಣದಲ್ಲಿ ಇದರ ಒಂದು ರೂಪವನ್ನು ಗುರುತಿಸಬಹುದು.

ಮಾಧ್ಯಮ ಮತ್ತು ಮಾರುಕಟ್ಟೆ ಹಿತಾಸಕ್ತಿ

ಆದರೆ ಮಾರುಕಟ್ಟೆ-ಔದ್ಯಮಿಕ ಬಂಡವಾಳ-ರಾಜಕಾರಣ ಮತ್ತು ರಾಜಕೀಯ ಪಕ್ಷಗಳ ನಡುವೆ ಇರುವ ಅವಿನಾಭಾವ ಸಂಬಂಧಗಳನ್ನು ಮತ್ತು ಅದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಬಹುದಾದ ಅಪಾಯಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡುವ ಜವಾಬ್ದಾರಿ ಇರುವುದು ಮಾಧ್ಯಮಗಳ ಮೇಲೆ. ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮ-ಸುದ್ದಿಮನೆಗಳ ಮೇಲೆ. ಈ ಕಾರಣಕ್ಕಾಗಿಯೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಅಥವಾ Fourth Estate ಎಂದು ಕರೆಯಲಾಗುತ್ತದೆ. ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ಈ ಜವಾಬ್ದಾರಿಯನ್ನು ನಿಭಾಯಿಸುತ್ತಿವೆಯೇ ? ಹೌದು ಎನ್ನಲು ಯಾವುದೇ ಪುರಾವೆಗಳಿಲ್ಲ. ಏಕೆಂದರೆ ಮುಡಾ ಮತ್ತು ವಾಲ್ಮೀಕಿ ಹಗರಣಗಳ ಮಾಧ್ಯಮ ವರದಿಗಾರಿಕೆಯಲ್ಲಿ ಕಾಣುವುದು ಪಕ್ಷ ರಾಜಕಾರಣದ ಛಾಯೆಯೇ ಹೊರತು, ಈ ಭ್ರಷ್ಟಾಚಾರದ ಮೂಲ ತಳಹದಿ ಅಲ್ಲ.

ಯಾರು ಹೆಚ್ಚು ಭ್ರಷ್ಟರು ಎಂಬ ವಾದ ವಿವಾದಗಳನ್ನೇ ಕೇಂದ್ರೀಕರಿಸುವ ಮೂಲಕ ಸುದ್ದಿಮನೆಗಳು ಕೋಟ್ಯಂತರ ರೂಗಳ ಅಕ್ರಮ ವ್ಯವಹಾರಗಳ ಮೂಲ ಇರುವುದು ಔದ್ಯಮಿಕ  ಮಾರುಕಟ್ಟೆ ಆರ್ಥಿಕತೆಯಲ್ಲಿ ಎಂಬ ವಾಸ್ತವವನ್ನೇ ಜನಸಾಮಾನ್ಯರಿಂದ ಮರೆಮಾಚುತ್ತವೆ. ಇದಕ್ಕೆ ಕಾರಣ ಈ ಮಾಧ್ಯಮ ಸಮೂಹಗಳಿಗೂ ಔದ್ಯಮಿಕ ಮಾರುಕಟ್ಟೆ ಮತ್ತು ಬಂಡವಾಳಕ್ಕೂ ಇರುವ ಸೂಕ್ಷ್ಮ ಸಂಬಂಧಗಳು. ಪ್ರತಿಯೊಂದು ವಾಹಿನಿಯೂ ಒಂದು ನಿರ್ದಿಷ್ಟ ರಾಜಕೀಯ ಪಕ್ಷದೊಡನೆ-ಉದ್ಯಮ ಸಮೂಹದೊಡನೆ,  ಗುರುತಿಸಿಕೊಳ್ಳುವ ಮೂಲಕ, ಆ ಪಕ್ಷಗಳನ್ನು ಪೋಷಿಸುವ ಬಂಡವಾಳಿಗರಿಂದಲೇ ನಿರ್ದೇಶಿಸಲ್ಪಡುತ್ತವೆ. ಈ ವಾಹಿನಿಗಳಲ್ಲಿ ನಡೆಯುವ ʼಬಿಸಿ ಬಿಸಿʼ ಚರ್ಚೆಗಳಲ್ಲೂ ಸಹ ರಾಜಕೀಯ ಪಕ್ಷಗಳಿಂದಾಚೆಗೆ ಇರಬಹುದಾದ ಭ್ರಷ್ಟಾಚಾರದ ಮೂಲಗಳನ್ನು ಶೋಧಿಸುವ ಲಕ್ಷಣಗಳು ಕಾಣುವುದಿಲ್ಲ. ಪರ-ವಿರೋಧದ ಚೌಕಟ್ಟಿನಲ್ಲೇ ನಡೆಯುವ ಈ ಸಂವಾದಗಳಲ್ಲಿ ಆಡಳಿತ ಭ್ರಷ್ಟಾಚಾರಕ್ಕೆ ಇರಬಹುದಾದ ಮಾರುಕಟ್ಟೆ ಸಂಬಂಧಗಳು ಚರ್ಚೆಗೇ ಬರುವುದಿಲ್ಲ. ಕಾರಣ ಈ ಮಾಧ್ಯಮ ಸಮೂಹಗಳೇ ಮಾರುಕಟ್ಟೆ ಶಕ್ತಿಗಳ ಹಿಡಿತದಲ್ಲಿರುತ್ತವೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಜವಾಬ್ದಾರಿಯಲ್ಲಿ ಸೋಲುತ್ತಿರುವುದು ಇಲ್ಲೇ. ತನಿಖಾ ಪತ್ರಿಕೋದ್ಯಮ (Investigative Journalism) ತನ್ನ ಅಂತಃಸತ್ವವನ್ನು ಕಳೆದುಕೊಂಡು ರಾಜಕೀಯವಾಗಿ ಸಾಪೇಕ್ಷತೆಯನ್ನು ಪಡೆದುಕೊಂಡಿರುವ ವರ್ತಮಾನದ ಸನ್ನಿವೇಶದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.  ಕಳೆದ ಮೂರು ತಿಂಗಳಿಂದ ಸುದ್ದಿಮನೆಗಳನ್ನು ನಿರಂತರವಾಗಿ ಬಿತ್ತರವಾಗುತ್ತಿರುವ ಮುಡಾ ಹಗರಣದ ಚರ್ಚೆಗಳನ್ನೇ ಗಮನಿಸಿದರೆ, ಎಲ್ಲಿಯೂ ಸಹ ಈ ಹಗರಣದ ಮೂಲ ಕಾರಣವಾಗಿರುವ ರಿಯಲ್‌ ಎಸ್ಟೇಟ್‌ ಉದ್ಯಮ-ಮಾರುಕಟ್ಟೆ ಮತ್ತು ಅಧಿಕಾರ ರಾಜಕಾರಣದೊಡನೆ ಅದರ ಸಂಬಂಧಗಳು ಚರ್ಚೆಗೊಳಗಾಗಿರುವುದನ್ನು ಕಾಣಲಾಗುವುದಿಲ್ಲ. ಅಥವಾ ಮುಡಾ ಮುಂತಾದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೂ, ನಗರೀಕರಣ ಪ್ರಕ್ರಿಯೆಗೂ ಹಾಗೂ ನಗರ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಾರುಕಟ್ಟೆ ಬಂಡವಾಳಕ್ಕೂ ಇರುವ ಸಂಬಂಧಗಳ ಚರ್ಚೆಯನ್ನು ಕಾಣಲಾಗುವುದಿಲ್ಲ.

ಮಾಧ್ಯಮಗಳ ಜವಾಬ್ದಾರಿ

ಹಗಲಿರುಳೂ, ಪ್ರತಿ ಕ್ಷಣವೂ ರಾಜ್ಯದ ಮೂಲೆ ಮೂಲೆಯನ್ನು ತಲುಪುವ ಸಾಧ್ಯತೆ ಮತ್ತು ಸಾಮರ್ಥ್ಯವನ್ನು ಹೊಂದಿರುವಂತಹ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಔದ್ಯಮಿಕ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವುದು ಸಹಜ. ಆದರೆ ಇದನ್ನೂ ಮೀರಿದಂತೆ ವಿಶಾಲ ಸಮಾಜಕ್ಕೆ ವಾಸ್ತವ ಪರಿಸ್ಥಿತಿಗಳನ್ನು ಮನದಟ್ಟು ಮಾಡುವ ಮೂಲಕ, ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ಸಾಂವಿಧಾನಿಕ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ ಅಲ್ಲವೇ ? ಒಬ್ಬ ಆರೋಪಿ ಸಿನಿಮಾ ನಟನ ಸೆರೆವಾಸದ ಕಥನವನ್ನು ಆತನ ಶೌಚ ವ್ಯವಸ್ಥೆಯಿಂದ ವೈದ್ಯಕೀಯ ಶಸ್ತ್ರಚಿಕಿತ್ಸೆಯವರೆಗೂ ರಂಜನೀಯವಾಗಿ ಬಿತ್ತರಿಸುವ ಸುದ್ದಿಮನೆಗಳು ಅಷ್ಟೆ ಆಸ್ಥೆಯಿಂದ ಅಥವಾ ಸಾಮಾಜಿಕ ಬದ್ಧತೆಯಿಂದ ಆಡಳಿತ ಭ್ರಷ್ಟಾಚಾರದ ಮೂಲ ಬೇರುಗಳನ್ನು ಶೋಧಿಸಿದರೆ ಪರಿಣಾಮ ಏನಾಗಬಹುದು ?

C M Siddaramaiah : ದೇವೇಗೌಡ್ರು ಮಾತಿನಂತೆ ಸಿದ್ದರಾಮಯ್ಯನ ಮಾತು #pratidhvani

ಈ ಭ್ರಷ್ಟ ಪರಂಪರೆಯ ಹಿಂದಿರುವ ಮಾರುಕಟ್ಟೆ-ಬಂಡವಾಳ ಮತ್ತು ಔದ್ಯಮಿಕ ಹಿತಾಸಕ್ತಿಯ  ಬಗ್ಗೆ ಮತ್ತು ಅದರಿಂದ ಪ್ರಜಾಪ್ರಭುತ್ವಕ್ಕೆ ಉಂಟಾಗುತ್ತಿರುವ ಅಪಾಯಗಳ ಬಗ್ಗೆ, ಇದೇ  ಭ್ರಷ್ಟ ರಾಜಕಾರಣಿಗಳನ್ನು ಆಯ್ಕೆ ಮಾಡುವ ಸಾರ್ವಜನಿಕರಲ್ಲಿ ಅರಿವು ಉಂಟುಮಾಡಬಹುದಲ್ಲವೇ ? ಜನಸಾಮಾನ್ಯರಲ್ಲಿ ನಾಗರಿಕ ಪ್ರಜ್ಞೆ ಅಥವಾ ಜಾಗೃತಿಯನ್ನು ಉಂಟುಮಾಡುವ ಅವಕಾಶ ಮತ್ತು ಕ್ಷಮತೆ ಎರಡನ್ನೂ ಎಂದೋ ಕಳೆದುಕೊಂಡಿರುವ ವಿದ್ಯುನ್ಮಾನ ಮಾಧ್ಯಮಗಳು ಕನಿಷ್ಠ ಈ ಕರಾಳ ಜಗತ್ತನ್ನು ಕುರಿತು ಅರಿವು ಮೂಡಿಸಬಹುದಲ್ಲವೇ ? ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಗಂಭೀರ ವಿಚಾರಗಳನ್ನೂ ರೋಚಕ ಸುದ್ದಿಗಳಂತೆ ಬಿತ್ತರಿಸುವ ಮೂಲಕ ಕನ್ನಡ ಸುದ್ದಿಮನೆಗಳು, ಭ್ರಷ್ಟಾಚಾರದಂತಹ ಅನೈತಿಕ-ಅಸಾಂವಿಧಾನಿಕ ವಿದ್ಯಮಾನಗಳನ್ನೂ ಮನರಂಜನೆಯ ವಸ್ತುಗಳನ್ನಾಗಿಸಿರುವುದು ದುರಂತ.

ಆಡಳಿತ ಭ್ರಷ್ಟಾಚಾರ ಭಾರತದ ಪ್ರಜಾಪ್ರಭುತ್ವವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಒಳಗಿನಿಂದಲೇ ತಿನ್ನುತ್ತಿರುವ ಒಂದು ಗಂಭೀರ ವ್ಯಾಧಿ. ರಾಜಕೀಯವಾಗಿ ಇಂದು ಇದರ ವಿರುದ್ಧ ದನಿ ಎತ್ತುವ ಅರ್ಹತೆಯಾಗಲೀ, ನೈತಿಕತೆಯಾಗಲೀ ಮುಖ್ಯವಾಹಿನಿಯ ಪಕ್ಷಗಳಲ್ಲಿ ಉಳಿದಿಲ್ಲ. ಸಮಾಜದ ಉನ್ನತಿಗಾಗಿ ಶ್ರಮಿಸುತ್ತಿರುವ ನಾಗರಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಜನಜಾಗೃತಿ ಮೂಡಿಸುತ್ತಿವೆ. ಈ ನಾಗರಿಕ ಪ್ರಜ್ಞೆಯನ್ನು ಮತ್ತಷ್ಟು ಮೊನಚುಗೊಳಿಸಿ, ನಮ್ಮ ಸಮಾಜ ಸಂಸ್ಕೃತಿ ರಾಜಕೀಯ ಮತ್ತು ವ್ಯವಸ್ಥೆಯನ್ನು ಮೌಲಿಕವಾಗಿ ಶಿಥಿಲಗೊಳಿಸುತ್ತಿರುವ ಮಾರುಕಟ್ಟೆ ಬಂಡವಾಳ ಹಾಗೂ ಅಧಿಕಾರ ರಾಜಕಾರಣದ ಹಿತಾಸಕ್ತಿಗಳನ್ನು ಸಾರ್ವಜನಿಕ ನ್ಯಾಯಾಸ್ಥಾನದ ನ್ಯಾಯಕಟಕಟೆಯಲ್ಲಿ ನಿಲ್ಲಿಸುವ ದೊಡ್ಡ ಜವಾಬ್ದಾರಿ ವಿದ್ಯುನ್ಮಾನ ಮಾಧ್ಯಮಗಳ ಮೇಲಿದೆ.

ಈ ಜವಾಬ್ದಾರಿಯನ್ನು ಮನಗಂಡೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುತ್ತದೆ. ವ್ಯಕ್ತಿಗತ ರಾಜಕೀಯ ಒಲವು-ನಿಷ್ಠೆಗಳನ್ನು ಬದಿಗೊತ್ತಿ, ಸಮಾಜದ ಒಳಿತಿಗಾಗಿ ವಸ್ತುನಿಷ್ಠ ಸುದ್ದಿಗಳನ್ನು ಬಿತ್ತರಿಸುವುದೇ ಅಲ್ಲದೆ, ವಿಶಾಲ ಸಮಾಜಕ್ಕೆ ವ್ಯವಸ್ಥೆಯೊಳಗಿನ ಅಪಸವ್ಯಗಳನ್ನು ತಿಳಿಯಪಡಿಸುವ ನೈತಿಕ ಹೊಣೆಯನ್ನು ವಿದ್ಯುನ್ಮಾನ ಮಾಧ್ಯಮಗಳು ಹೊರಬೇಕಿದೆ. ತಮ್ಮ ಸಾಂಸ್ಥಿಕ ಅಸ್ತಿತ್ವ ಮತ್ತು ಔದ್ಯಮಿಕ ಹಿತಾಸಕ್ತಿಯನ್ನು ಕಾಪಾಡಿಕೊಂಡೇ ವಿದ್ಯುನ್ಮಾನ ಸುದ್ದಿಮನೆಗಳು ಈ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಬಂಡವಾಳ ಮತ್ತು ಮಾರುಕಟ್ಟೆಯ ಹಿಡಿತದಲ್ಲಿರುವ ಮಾಧ್ಯಮ ಲೋಕಕ್ಕೆ ಇದು ಕಷ್ಟಸಾಧ್ಯ ಎನಿಸಬಹುದು ಆದರೆ ಅಂತಿಮವಾಗಿ ಇವುಗಳ ಅಸ್ತಿತ್ವ ಇರುವುದು ನಾಗರಿಕರ ನಡುವೆ. ಈ ವಾಸ್ತವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ.

-೦-೦-೦-೦-

Tags: agricultural land encroachmentcorruptionBJPbrexit corruptionchaduranga karnataka politicschaduranga livecongress corruptionCongress Partycorruption definitioncorruption in britaincorruption in the ukcorruption in usadc corruptiondefinition of corruptionfarmers land encroachmentfarmers rights karnatakahow corruption affects mekarnataka agriculture landkarnataka land issuesland dispute karnatakaland ownership disputesmarket news indiamodi on corruptionnation media grouppolitical corruption in americapolitical newspolitical protestreimagining a world without corruptionstock market indiawaqf act issueswaqf board controversywaqf board karnatakawaqf board newswaqf property controversywaqf property issueswhat is corruptionwhy corruption is badಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಮಾಜಿ ಸಿಎಂ ಬಗ್ಗೆ ಲಾಯರ್‌ ಜಗದೀಶ್‌ ಹೇಳಿಕೆಲಾಯರ್‌ ಜಗದೀಶ್‌ ರ‍್ಯಾಪಿಡ್‌ ಫೈಯರ್‌ ರೌಂಡ್‌ವಿಜಯ ಕರ್ನಾಟಕ ನ್ಯೂಸ್‌ಸಿದ್ದರಾಮಯ್ಯ
Previous Post

ಶಾಸಕ ಗವಿಯಪ್ಪ ಅನುದಾನ ಆರೋಪದ ಬಗ್ಗೆ ಯಾರು ಏನಂದ್ರು..?

Next Post

ಮಣಿಪುರ ಹಿಂಸಾಚಾರ ನೆರೆ ರಾಜ್ಯಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

Related Posts

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
0

https://youtu.be/QX4g82NAFtg

Read moreDetails

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
Next Post

ಮಣಿಪುರ ಹಿಂಸಾಚಾರ ನೆರೆ ರಾಜ್ಯಗಳಲ್ಲಿ ಕಟ್ಟೆಚ್ಚರಕ್ಕೆ ಕೇಂದ್ರ ಸೂಚನೆ

Recent News

Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
Top Story

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
June 27, 2025
ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025

ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada