ಭಗವಾನ್ (Bhagawan) ಅಂತ ಹೆಸರು ಇಟ್ಟುಕೊಂಡಿದ್ದಾರೆ, ಮೊದಲು ಅವರು ಭಗವಂತನಲ್ಲಿ ನಂಬಿಕೆ ಇಡಲಿ ಎಂದು ಕೆ.ಎಸ್ ಭಗವಾನ್ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ (Basavaraj bommayi) ಕಿಡಿ ಕಾರಿದ್ದಾರೆ.ಈ ಬಗ್ಗೆ ಗದಗದಲ್ಲಿ ಮಾತನಾಡಿದ ಅವರು, ಧರ್ಮದ ವಿರುದ್ದ ಮಾತನಾಡುವಂಥದ್ದು ಯಾವುದೇ ಮಾನವೀಯ ಧರ್ಮವಿಲ್ಲ ಎಂದಿದ್ದಾರೆ.
ಭಗವಾನ್ ಹೇಳಿದ ಹಾಗೇ ಚಾಮುಂಡೇಶ್ವರಿ (chamundeshwari) ಕಾಲ್ಪನಿಕ ಅನ್ನೋದಾದ್ರೆ, ಮಹಿಷಾಸೂರನು (Mahishasura) ಕಾಲ್ಪನಿಕ ಅಲ್ಲವೇ, ಈ ರೀತಿ ದ್ವಂದ್ವ ವಿಪರ್ಯಾಸದಿಂದ ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅದಾವುದಕ್ಕೂ ಮಹತ್ವ ಕೊಟ್ಟಿಲ್ಲ, ಕೊಡಲುಬಾರದು ಎಂದಿದ್ದಾರೆ.
ಈ ಹಿಂದೆ ಈ ಭಗವಾನ್ ರಾಮನ ಬಗ್ಗೆಯೂ ಮಾತಾಡಿದ್ರು. ಸಮಾಜದಲ್ಲಿ ಒಂದು ಕ್ರೋಧ ಉಂಟು ಮಾಡುವ ಕೆಲವು ಶಕ್ತಿಗಳಿದ್ದಾವೆ. ಸಮಾಜ ಇದನ್ನೆಲ್ಲ ಅರ್ಥ ಮಾಡಿಕೊಂಡಿದೆ ಅಂತ ಬಸವರಾಜ ಬೊಮ್ಮಾಯಿ ಕೆ.ಎಸ್ ಭಗವಾನ್ ವಿರುದ್ಧ ಕೆಂಡ ಕಾರಿದ್ರು.