ಬಾಲಿವುಡ್ ನಟಿ (Bollywood actress) ಹಾಗೂ ಬಿಜೆಪಿಯ ಸಂಸದೆ ಕಂಗನಾ ರಣಾವತ್ (Kangana ranaut) ರೈತರ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದೇ ಇದ್ದರೆ ರೈತರ ಪ್ರತಿಭಟನೆ (Framers protest) ಬಾಂಗ್ಲಾದೇಶದಲ್ಲಿ ನಡೆದ ಧಂಗೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಈ ಹೇಳಿಕೆ ತೀರಾ ವಿವಾದಕ್ಕೆ ಕಾರಣವಾಗಿದೆ.ಹೀಗಾಗಿ ರಣಾವತ್ ಹೇಳಿಕೆಯಿಂದ ಬಿಜೆಪಿ (Bjp) ಪಕ್ಷ ಸದ್ಯ ಅಂತರ ಕಾಯ್ದುಕೊಂಡಿದೆ.ಕಂಗನಾ ಈ ಹೇಳಿಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪಕ್ಷ ಸಂಸದೆಗೆ ಛೀಮಾರಿ ಹಾಕಿದ್ದು, ಅವರ ಹೇಳಿಕೆಗೂ ಬಿಜೆಪಿ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
ಬಿಜೆಪಿ ಪಕ್ಷದ ಪರವಾಗಿ ನೀತಿ ವಿಷಯಗಳ ಬಗ್ಗೆ ಮಾತನಾಡಲು ಕಂಗನಾ ರಣಾವತ್ಗೆ ಅಧಿಕಾರವಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದೆ.