ಈಗಾಗಲೇ ಜೈಲು ಸೇರಿರುವ ದರ್ಶನ್ (Actor darshan) ಆಪ್ತರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ. ಆರೋಪಿಗಳಾದ ಲಕ್ಷ್ಮಣ್ (Lakshman), ನಾಗರಾಜು (nagaraj) ಏಪ್ರಿಲ್ 22 ರಂದು ಗನ್ ಮ್ಯಾನ್ ನಾಗೇಶ್ (Gun man nagesh) ಮೇಲೆ ನಡೆದಿದ್ದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಗೆ (Kotturu police station) ನಾಗೇಶ್ ದೂರು ನೀಡಿದ್ರು FIR ದಾಖಲಾಗಿಲ್ಲ.
ಈ ಮುಂಚೆ ಅಧಿಕಾರಿಯೊಬ್ಬರ ಸೂಚನೆಯಂತೆ ಮೇರೆಗೆ ಪೊಲೀಸ್ರು ದೂರು ದಾಖಲಿಸಿಕೊಂಡಿಲ್ಲ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾಗ್ತಿದ್ದಂತೆ ಮಂಡ್ಯ ಎಸ್ಪಿಯಿಂದ (Mandya SP) ಗೃಹ ಇಲಾಖೆ ಮಾಹಿತಿ ಪಡಿದುಕೊಂಡಿದ್ದು, ಪೇದೆ ಮೇಲೆ ಹಲ್ಲೆ ನಡೆದ್ರೂ ಯಾಕೆ FIR ದಾಖಲಿಸಿಲ್ಲ? ಪ್ರಕರಣ ಬಗ್ಗೆ ವರದಿ ನೀಡುವ ಜೊತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂತಲೂ ಸೂಚಿಸಿದ್ಯಂತೆ.
ಆದ್ರಂತೆ ಇದೀಗ ಕೇಸ್ ದಾಖಲಾದ್ರೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ,ನೌಕರನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸೆಕ್ಷನ್ ಹಾಕಿ, ಎಫ್ಐಆರ್ ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.