ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (parliment election) ರಾಜ್ಯದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಲಿದ್ಯಾ?! ಅದೇ ಕಾರಣಕ್ಕಾಗಿ ಬಿಜೆಪಿ ಜೆಡಿಎಸ್ ಮೈತ್ರಿ (BJP-jds) ಮತ್ತು ಕಾಂಗ್ರೆಸ್ (congress) ಒಕ್ಕಲಿಗ ಮತಗಳಿಗಾಗಿ ಕಿತ್ತಾಟ ಶುರು ಮಾಡಿದ್ಯಾ ?! ಈ ಕಾರಣಕ್ಕಾಗಿಯೇ ಎಚ್ ಡಿ ಕುಮಾರಸ್ವಾಮಿ (HD Kumarswamy) ಮತ್ತು ಡಿಕೆಶಿ (Dk shivakumar) ನಡುವೆ ಮತ್ತೊಂದು ಯುದ್ಧ ಶುರುವಾದ ಹಾಗಿದೆ.
ಒಕ್ಕಲಿಗ ಸಮುದಾಯದ ನಾಯಕತ್ವದ ಪಾರುಪತ್ಯಕ್ಕಾಗಿ ಈಗಾಗಲೇ ಎಚ್ ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವೆ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ . ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು(old mysuru ) ಭಾಗದಲ್ಲಿ ಜೆಡಿಎಸ್ ಮತಗಳನ್ನ ಕಾಂಗ್ರೆಸ್ ಕಡೆಗೆ ವರ್ಗೀಕರಿಸುವಲ್ಲಿ ಒಂದು ಹಂತಕ್ಕೆ ಡಿಕೆಶಿ ಯಶಸ್ವಿಯಾಗಿದ್ದರು. ಈ ಕಾರಣಕ್ಕಾಗಿ ಒಕ್ಕಲಿಗ ಮತ ಬ್ಯಾಂಕನ್ನು ಮತ್ತೆ ಜೆಡಿಎಸ್ ಕಡೆಗೆ ವರ್ಗಾಯಿಸಲು ಈ ಲೋಕ ಸಮರ ಹೆಚ್ ಡಿ ಕುಮಾರಸ್ವಾಮಿ ಪಾಲಿಗೆ ನಿರ್ಣಾಯಕವಾಗಿದೆ.
ಒಂದು ಕಡೆ ಮೈತ್ರಿ ಅಭ್ಯರ್ಥಿಗಳು ಆದಿಚುಂಚನಗಿರಿ ಮಠಕ್ಕೆ (aadi chunchanagiri) ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿಯನ್ನ (Nirmalananda Natha swamiji) ಭೇಟಿ ಮಾಡಿರುವುದಕ್ಕೆ ಡಿಕೆಶಿ ಮಾರ್ಮಿಕವಾಗಿ ಟಾಂಗ್ ಕೊಟ್ಟಿದ್ದಾರೆ . ಒಕ್ಕಲಿಗ ಸಿಎಂ ರನ್ನ ಕೆಳಗಿಳಿಸಿದ್ದೆ ಬಿಜೆಪಿ , ಸರ್ಕಾರ ಬಿಳಿಸಿದ್ದೆ ಬಿಜೆಪಿ . ಈಗ ಕುಮಾರಸ್ವಾಮಿ ಅದೇ ಬಿಜೆಪಿಯ ಜೊತೆ ಹೋಗಿರೋದು ಎಷ್ಟು ಸರಿ ?! ಇದನ್ನು ಸ್ವಾಮೀಜಿಗಳೇ ಕುಮಾರಸ್ವಾಮಿಯವರಿಗೆ ಪ್ರಶ್ನೆ ಮಾಡಬೇಕು ಎಂದು ಹೇಳೋದ್ರ ಮೂಲಕ ಒಕ್ಕಲಿಗರು ಕಾಂಗ್ರೆಸ್ ಗೆ ಮತ ಹಾಕಬೇಕು ಅನ್ನೋದನ್ನ ಪ್ರತಿಪಾದಿಸಿದ್ದಾರೆ !
ಒಟ್ನಲ್ಲಿ ಈ ಇಬ್ಬರು ಒಕ್ಕಲಿಗ ನಾಯಕರ ನಡುವೆ ಸಮುದಾಯದ ಮತದಾರರು ಯಾರನ್ನ ತಮ್ಮ ನೇತಾರನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಅದರ ಮೇಲೆ ರಾಜ್ಯದಲ್ಲಿ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆಗಳು ಇದೆ ಅದಕ್ಕಾಗಿ ಚುನಾವಣಾ ಫಲಿತಾಂಶ ಬರುವವರೆಗೂ ಕಾಯಲೇಬೇಕು.