ಮೈಸೂರು: ನಂಜನಗೂಡು ತಾಲೂಕಿನ ಬಳ್ಳೂರುಹುಂಡಿಯಲ್ಲಿ ಮಂಗಳವಾರ ರೈತರೊಬ್ಬರ (Formers) ಮೇಲೆ ದಾಳಿ ಮಾಡಿದ್ದ ಹುಲಿ (Tiger) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರಕ್ಷಿಸಲಾಗಿದೆ.
ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತ್ತೀಚಿಗೆ ವನ್ಯ ಮೃಗಗಳು ಕಾಡಿನಿಂದ ನಾಡಿಗೆ ಬಂದು ಹೊಲ ಗದ್ದೆಗಳಲ್ಲಿ ರೈತರ ಮೇಲೆ ದಾಳಿ ಮಾಡುವುದು ಹೆಚ್ಚು ಕಾಣುತ್ತಿದ್ದು ಅರಣ್ಯ ಇಲಾಖೆಯವರು ಹೆಚ್ಚು ಗಮನ ಹರಿಸಬೇಕಿದೆ.