ಮಹಾರಾಷ್ಟ್ರ ಪಾಲ್ಟರ್ ರೈಲು ನಿಲ್ದಾಣದ ಬಳಿ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಪೇದೆ ಸೋಮವಾರ (ಜು.31) ಚಲಿಸುವ ರೈಲಿನ ಮೇಲೆ ಗುಂಡು ಹಾರಿಸಿ ರೈಲಿನಲ್ಲಿದ್ದ 4 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೇದೆ ತಮ್ಮ ಸ್ವಯಂಚಾಲಿತ ಬಂದೂಕಿನಿಂದ ಜೈಪುರ-ಮುಂಬೈ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಮೇಲೆ ಗುಂಡು ಹಾರಿಸಿದ್ದಾರೆ. ಮೃತರಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಮೂವರು ಪ್ರಯಾಣಿಕರು ಸೇರಿದ್ದಾರೆ. ಆರೋಪಿ ಚೇತನ್ ಎಂಬುವವನ್ನು ಬಂಧಿಸಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ತನಿಖೆ ಆರಂಭಿಸಿದ್ದಾರೆ ಎಂದು ರೈಲ್ವೆ ರಕ್ಷಣಾ ದಳ ಹೇಳಿದೆ.
ಬೆಳಿಗ್ಗೆ 7:30 ರ ಸುಮಾರಿಗೆ ಪಶ್ಚಿಮ ರೈಲ್ವೆಯ ಮೀರಾ ರೋಡ್ ಮತ್ತು ಭಾಯಂದರ್ ನಿಲ್ದಾಣಗಳ ನಡುವೆ ಮಹಾರಾಷ್ಟ್ರ ರೈಲು ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ನಿಲ್ದಾಣದಲ್ಲಿ ಜೈಪುರ-ಮುಂಬೈ ರೈಲಿನ ಬಿ5 ಎಸಿ ಕೋಚ್ನಲ್ಲಿ ಪೇದೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇದರಿಂದ ರೈಲಿನಲ್ಲಿದ್ದ ಎಎಸ್ಐ ಟೀಕಾ ರಾಮ್ ಮೀನಾ ಮತ್ತು ಮೂವರು ಪ್ರಯಾಣಿಕರು ಹತರಾಗಿದ್ದಾರೆ.
ಗುಂಡು ಹಾರಿಸಿದ ಪೇದೆಯು ಭಾಯಂದರ್ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಶ್ಮೀರ | ರಜೆಯ ಮೆಲೆ ಊರಿಗೆ ಬಂದಿದ್ದ ಯೋಧ ನಾಪತ್ತೆ ; ವ್ಯಾಪಕ ಶೋಧ
ಬೋರಿವಲಿ ನಿಲ್ದಾಣದಲ್ಲಿ ಎಲ್ಲಾ ನಾಲ್ಕು ಮೃತದೇಹಗಳನ್ನು ರೈಲಿನಿಂದ ಹೊರತೆಗೆಯಲಾಗಿದ್ದು, ಕಾಂದಿವಲಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಸಲಾಗಿದೆ.
“ಬೆಳಿಗ್ಗೆ 6 ಗಂಟೆಗೆ ಮಹಾರಾಷ್ಟ್ರ ರೈಲು ನಿಲ್ದಾಣದಲ್ಲಿ ರೈಲು ಸಂಚರಿಸುವಾಗ ಒಳಗೆ ಕರ್ತವ್ಯದಲ್ಲಿದ್ದ ಆರ್ಪಿಎಫ್ ಪೇದೆ ರೈಲು ಪಾಲ್ಘರ್ ರೈಲು ನಿಲ್ದಾಣ ದಾಟಿದ ನಂತರ ಗುಂಡು ಹಾರಿಸಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಬಳಿಕ ಪೇದೆ ರೈಲಿನ ಸರಪಳಿ ಎಳೆದು ದಹ್ಸಿರ್ ನಿಲ್ದಾಣದ ಬಳಿ ಇಳಿದಿದ್ದಾರೆ. ಗಂಡಿನ ದಾಳಿಯಿಂದ ನಾಲ್ಕು ಜನರು ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸರು ಮತ್ತು ಆರ್ಪಿಎಫ್ ಅಧಿಕಾರಿಗಳ ನೆರವಿನಿಂದ ಪೇದೆಯನ್ನು ಬಂಧಿಸಲಾಗಿದೆ. ನಮ್ಮ ರೈಲ್ವೆ ಅಧಿಕಾರಿ ಸ್ಥಳಕ್ಕೆ ತಲುಪಿದ್ದಾರೆ. ಮೃತರ ಕುಟುಂಬಗಳನ್ನು ಸಂಪರ್ಕಿಸಲಾಗಿದ್ದು, ಪರಿಹಾರ ನೀಡಲಾಗುವುದು” ಎಂದು ಡಿಆರ್ಎಂ ನೀರಜ್ ಕುಮಾ ಹೇಳಿದ್ದಾರೆ.