ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಒಂದೊಂದೇ ಯೋಜನೆಗಳನ್ನ ಕಾಯ್ದೆಗಳನ್ನ ವಾಪಸ್ಸು ಪಡೆಯಲು ಮುಂದಾಗಿರುವ ಇಂದಿನ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತವೆ. ಇದಕ್ಕೆ ಪೂರಕ ಎಂಬಂತೆ ನೂತನ ಸರ್ಕಾರ, ಗೋಹತ್ಯೆ ಸಂಬಂಧಿತ ಕಾನೂನನ್ನು ವಾಪಸ್ ಪಡೆಯಲು ಮುಂದಾಗಿದೆ. ಈ ವಿಚಾರಕ್ಕೆ ಪ್ರತಿಪಕ್ಷ ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ.
ಈ ವಿವಾದ ಪ್ರಮುಖವಾಗಿ ಆರಂಭಗೊಳ್ಳುವುದಕ್ಕೆ ಕಾರಣ ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಹೌದು .. ಈಗಾಗಲೇ ಹೆಮ್ಮೆ ಮತ್ತು ಕೋಣಗಳನ್ನು ಕಡೆಲಾಗುತ್ತಿದೆ ಹಸುಗಳನ್ನು ಕಡಿಯುವುದರಲ್ಲಿ ಏನು ತಪ್ಪಿದೆ? ಈಗಾಗಲೇ ಹಲವು ಹಸುಗಳು ಸಾವನ್ನಪ್ಪುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಿದರು . ಇದೀಗ ಕೆ ವೆಂಕಟೇಶ್ ಅವರ ಈ ಹೇಳಿಕೆ ನೂತನ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಸಚಿವರ ಈ ಹೇಳಿಕೆಗೆ ಬಿಜೆಪಿ ನಾಯಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಂದು ಕಡೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕೆ ವೆಂಕಟೇಶ್ ಅವರ ಹೇಳಿಕೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಸಚಿವರು ಸ್ವಲ್ಪ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂಬ ದಾಟಿಯಲ್ಲಿ ಟ್ವಿಟ್ ಮಾಡಿದ್ದರು, ಜೊತೆಗೆ ಪ್ರಹ್ಲಾದ ಜೋಶಿ ಸೇರಿದ ಹಾಗೆ ಬಿಜೆಪಿಯ ಪ್ರಮುಖ ನಾಯಕರು ಕಾಂಗ್ರೆಸ್ ನ ವಿರುದ್ಧ ಹರಿಹಾಯೋದಕ್ಕೆ ಮುಂದಾಗಿದ್ದರು, ಇದೀಗ ಈ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬೆಳಗಾವಿ ಶಾಸಕ ಶಾಸಕ ವಿನಯ ಕುಲಕರ್ಣಿ ಬೆಳಗಾವಿಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಹೇಳಿಕೆ ನೀಡಿದ್ದು ‘ಬಿಜೆಪಿಯವರು ಪ್ಲಾಸ್ಟಿಕ್ ಆಕಳನ್ನು ಪೂಜಿಸುತ್ತಾರೆ’ ಎಂದಿದ್ದಾರೆ.
ಹೌದು.. ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿನಯ್ ಕುಲಕರ್ಣಿ, ‘ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ. ಬರೀ ಮಾತು ಆಡುತ್ತಾರೆ ಅಷ್ಟೇ. ಬಿಜೆಪಿಯವರು ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ’ ಅಂತ ಬಿಜೆಪಿ ನಾಯಕರ ವಿರುದ್ಧ ಹಾಗೂ ವಿವಿಧ ಸಂಘಟನೆಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಆ ಮೂಲಕ ಸಚಿವ ಕೆ ವೆಂಕಟೇಶ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ..