ಮೈಸೂರು: ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಮೈಸೂರು ಐತಿಹಾಸಿಕ ಹಿನ್ನೆಲೆಯುಳ್ಳ ನಗರ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಕಾಣಿಸುತ್ತಿರುವುದಕ್ಕೆ ನಮ್ಮ ಬಿಜೆಪಿ ಸರ್ಕಾರ ಕಾರಣ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದರು.
ಮೈಸೂರಿನ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಾಪ್ ಸಿಂಹ ಎಂದರೆ ಅಭಿವೃದ್ಧಿಗೆ ಗೆ ಹೆಸರುವಾಸಿ. ಕಳೆದ ನಾಲ್ಕು ವರ್ಷಗಳಿಂದಾಚೆಗೆ ಮೈಸೂರು ಬದಲಾಗಿದೆ ಎಂದು ಹೇಳಿದರು.
2014ರವರಗೆ ದೇಶ ಅಭಿವೃದ್ಧಿ ಹೊಂದುವ ಸರ್ಕಾರ ಬಂದಿರಲಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ, ತನ್ನ ಕುಟುಂಬಕ್ಕಾಗಿ ಅಧಿಕಾರ ನಡೆಸಿದರು. ಕಳೆದ 70 ವರ್ಷದಿಂದ ಇದ್ದ ಕುಡಿಯುವ ನೀರಿನ ಸಮಸ್ಯೆಯನ್ನ ಬಿಜೆಪಿ ಸರ್ಕಾರ ನೀಗಿಸಿದೆ. ಜನರ ಆರೋಗ್ಯಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಬರಿ ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ. ಅದನ್ನೆಲ್ಲ ಪ್ರಧಾನಿ ಮೋದಿ ಅಳಸಿ ಹಾಕಿದ್ದಾರೆ. ಕೊರೊನ ಕಾಲದಲ್ಲಿ ಸಂಕಷ್ಟದ ಸಮಯದಲ್ಲೂ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭಾರತಾದ್ಯಂತ ಬೆಂಬಲ ದೊರೆದಂತೆ ಕರ್ನಾಟಕದಲ್ಲೂ ಬೆಂಬಲ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಸುಳ್ಳು ಹೇಳಿದಾಗೆ ಕರ್ನಾಟಕದಲ್ಲೂ ಕಾಂಗ್ರೆಸ್ಸಿಗರು ಸುಳ್ಳು ಹೇಳುತ್ತಿದ್ದಾರೆ. ತಮಿಳುನಾಡಿನಲ್ಲೋ ಚುನಾವಣೆ ಸಮಯದಲ್ಲಿ ಪ್ರತಿ ತಿಂಗಳಿಗೆ ಹಣ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದು ಕೊಡುತ್ತಿಲ್ಲ. ಸಿದ್ದರಾಮಯ್ಯ, ಡಿಕೆಶಿ ಎಲ್ಲಿಂದ ಹಣ ಕೊಡುತ್ತಾರೆ. ಮನೆಯಿಂಯಿಂದ ತಂದು ಕೊಡುತ್ತಾರಾ? ಸಿದ್ದರಾಮಯ್ಯ ಡಿಕೆಶಿ ಸುಳ್ಳು ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲೂ ಹೀಗೆ ಹೇಳಿದ್ದರು ಎಂದು ಗುಡುಗಿದರು.
ದೇಶದ ವಿವಿದೆಡೆ ಕಾಂಗ್ರೆಸ್ ನೆಲ ಕಚ್ಚಿದೆ. ಕೆಲವು ರಾಜ್ಯಗಳಲ್ಲಿ 3- 4 ಸ್ಥಾನಗಳಲ್ಲಿ ಮಾತ್ರ ಗೆಲ್ಲುತ್ತಿವೆ. ಗಾಂಧಿಜಿ ಅವರು ಈ ಹಿಂದೆಯೇ ಕಾಂಗ್ರೆಸ್ ಬೇಡ ಎಂದು ಹೇಳಿದ್ದರು ಎಂದರು.
ನೀವು ಮಾಡುವ ಒಂದೊಂದು ವೋಟ್ ಗಳು ಸಹ ಮೋದಿ ಅವರಿಗೆ ಥ್ಯಾಂಕ್ಸ್ ಹೇಳಿದ ಹಾಗೆ. ಕೊರೊನಾ ಸಮಯದಲ್ಲಿ ಸಮರ್ಥವಾಗಿ ನಿರ್ವಹಿಸಿದ ಸರ್ಕಾರಕ್ಕೆ ಧನ್ಯವಾದ ತಿಳಿಸಿದಂತೆ ಆಗುತ್ತದೆ ಎಂದು ಅಣ್ಣಾಮಲೈ ಹೇಳಿದರು.