• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೇಶದ 1% ಜನರಲ್ಲಿ ರಾಷ್ಟ್ರದ 20% ಆದಾಯ ಇದೆ; ಆರ್ಥಿಕ ಅಸಮಾನತೆ ವಿರುದ್ಧ ಆರ್‌ಎಸ್‌ಎಸ್‌ ಆಕ್ಷೇಪ

ಫೈಝ್ by ಫೈಝ್
October 4, 2022
in ದೇಶ, ರಾಜಕೀಯ
0
ಏನಿದು ಆರ್‌ಎಸ್‌ಎಸ್ ಪ್ರತಿಪಾದಿಸುತ್ತಿರುವ ‘ಸಮಗ್ರ ಮಾನವತಾವಾದ?
Share on WhatsAppShare on FacebookShare on Telegram

ದೇಶದಲ್ಲಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಅಸಮಾನತೆಯ ಸಮಸ್ಯೆಗಳನ್ನು ಆರ್‌ಎಸ್‌ಎಸ್ ಎತ್ತಿ ತೋರಿಸಿದೆ. ಮಾಂಸಹಾರ ಪದ್ಧತಿ ಕೆಟ್ಟದೆಂದು ಆರ್‌ಎಸ್‌ಎಸ್‌ ಸಂಚಾಲಕ ಹೇಳಿಕೆ ನೀಡಿ ಬಹುಸಂಖ್ಯಾತ ಮಾಂಸಹಾರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಆರ್‌ಎಸ್‌ಎಸ್‌ ದೇಶದ ಜ್ವಲಂತ ಸಮಸ್ಯೆಯೆಡೆಗೆ ಗಮನವನ್ನು ಸೆಳೆದಿದೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗದಾತರಾಗಲು ಉದ್ಯಮಶೀಲತೆಗೆ ದೃಢವಾದ ವಾತಾವರಣವನ್ನು ಸೃಷ್ಟಿಸಲು ಆರ್‌ಎಸ್‌ಎಸ್‌ ಕರೆ ನೀಡಿದೆ.

ADVERTISEMENT

ದೇಶದಲ್ಲಿರುವ ಬಡತನ ನಮ್ಮ ಮುಂದೆ ರಾಕ್ಷಸನಂತೆ ನಿಂತಿದೆ. ನಾವು ಈ ರಾಕ್ಷಸನನ್ನು ಸಂಹರಿಸುವುದು ಮುಖ್ಯ. 20 ಕೋಟಿ ಜನರು ಇನ್ನೂ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬುದು ನಮಗೆ ತುಂಬಾ ದುಃಖವನ್ನುಂಟುಮಾಡುವ ಅಂಕಿ ಅಂಶವಾಗಿದೆ. 23 ಕೋಟಿ ಜನರು ದಿನಕ್ಕೆ 375 ರೂ.ಗಿಂತ ಕಡಿಮೆ ಆದಾಯ ಹೊಂದಿದ್ದಾರೆ. ದೇಶದಲ್ಲಿ ನಾಲ್ಕು ಕೋಟಿ ನಿರುದ್ಯೋಗಿಗಳಿದ್ದಾರೆ. ನಮ್ಮಲ್ಲಿ 7.6% ನಿರುದ್ಯೋಗ ದರವಿದೆ ಎಂದು ಕಾರ್ಮಿಕ ಬಲದ ಸಮೀಕ್ಷೆ ಹೇಳುತ್ತದೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ ಮಂಚ್ ತನ್ನ ಸ್ವಾವಲಂಬಿ ಭಾರತ್ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ ಎಂದು ಹೊಸಬಾಳೆ ಹೇಳಿದ್ದಾರೆ. “ಭಾರತವು ವಿಶ್ವದ ಅಗ್ರ ಆರು ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಒಂದು ಅಂಕಿ ಹೇಳುತ್ತದೆ. ಆದರೆ ಇದು ಒಳ್ಳೆಯ ಪರಿಸ್ಥಿತಿಯೇ? ಭಾರತದ ಜನಸಂಖ್ಯೆಯ ಅಗ್ರ 1 ಶೇಕಡಾ ಜನರ ಬಳಿಯಲ್ಲಿ ರಾಷ್ಟ್ರದ ಆದಾಯದ ಐದನೇ (20%) ಭಾಗವನ್ನು ಹೊಂದಿದೆ. ಅದೇ ಸಮಯದಲ್ಲಿ, ದೇಶದ ಜನಸಂಖ್ಯೆಯ 50% ಜನರು ದೇಶದ ಆದಾಯದ 13% ಮಾತ್ರ ಹೊಂದಿದ್ದಾರೆ, ” ಎಂದು ಹೊಸಬಾಳೆ ಹೇಳಿದರು.

ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಂವಾದದಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಆರ್ಥಿಕ ಅಸಮಾನತೆಯ ಸಮಸ್ಯೆಗಳನ್ನು ಎತ್ತುತ್ತಿರುವ ಸಮಯದ ನಡುವೆಯೇ ಆರ್‌ಎಸ್‌ಎಸ್‌ ಕಡೆಯಿಂದ ಈ ಹೇಳಿಕೆಗಳು ಬಂದಿವೆ.

ಬಡತನ ಮತ್ತು ಅಭಿವೃದ್ಧಿಯ ಕುರಿತು ವಿಶ್ವಸಂಸ್ಥೆಯ ಅವಲೋಕನಗಳನ್ನು ಉಲ್ಲೇಖಿಸಿದ ಹೊಸಬಾಳೆ “ದೇಶದ ಹೆಚ್ಚಿನ ಭಾಗವು ಇನ್ನೂ ಶುದ್ಧ ನೀರು ಮತ್ತು ಪೌಷ್ಟಿಕ ಆಹಾರದ ಪ್ರವೇಶವನ್ನು ಹೊಂದಿಲ್ಲ. ನಾಗರಿಕ ಕಲಹ ಮತ್ತು ಕಳಪೆ ಶಿಕ್ಷಣವೂ ಬಡತನಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಹವಾಮಾನ ಬದಲಾವಣೆ ಕೂಡ ಬಡತನಕ್ಕೆ ಕಾರಣವಾಗಿದೆ. ಮತ್ತು ಕೆಲವು ಸ್ಥಳಗಳಲ್ಲಿ ಸರ್ಕಾರದ ಅಸಮರ್ಥತೆಯು ಬಡತನಕ್ಕೆ ಕಾರಣವಾಗಿದೆ.” ಎಂದು ಹೇಳಿದ್ದಾರೆ.

ಹೊಸಬಾಳೆ ಅವರ ಪ್ರಕಾರ, ನಗರ ಪ್ರದೇಶಗಳಿಗೆ ಮಾತ್ರ ಉದ್ಯೋಗಗಳು ಎಂಬ ಕಲ್ಪನೆಯು ಹಳ್ಳಿಗಳನ್ನು ಖಾಲಿ ಮಾಡಿದೆ ಮತ್ತು ನಗರ ಜೀವನವನ್ನು ನರಕವನ್ನಾಗಿ ಮಾಡಿದೆ.

“ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ಕೋವಿಡ್ ಸಮಯದಲ್ಲಿ ನಾವು ಕಲಿತಿದ್ದೇವೆ. ಅದಕ್ಕಾಗಿಯೇ ಸ್ವಾವಲಂಬಿ ಭಾರತ ಅಭಿಯಾನವನ್ನು ಪ್ರಾರಂಭಿಸಲಾಯಿತು. ನಮಗೆ ಅಖಿಲ ಭಾರತ ಮಟ್ಟದ ಯೋಜನೆಗಳು ಮಾತ್ರವಲ್ಲ, ಸ್ಥಳೀಯ ಯೋಜನೆಗಳೂ ಬೇಕಾಗಿಲ್ಲ. ಇದನ್ನು ಕೃಷಿ, ಕೌಶಲ್ಯ ಅಭಿವೃದ್ಧಿ, ಮಾರುಕಟ್ಟೆ ಇತ್ಯಾದಿ ಕ್ಷೇತ್ರದಲ್ಲಿ ಮಾಡಬಹುದು. ನಾವು ಗುಡಿ ಕೈಗಾರಿಕೆಯನ್ನು ಪುನರುಜ್ಜೀವನಗೊಳಿಸಬಹುದು. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಆಯುರ್ವೇದ ಔಷಧಗಳನ್ನು ಸ್ಥಳೀಯ ಮಟ್ಟದಲ್ಲಿಯೇ ತಯಾರಿಸಬಹುದು. ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತಿ ಇರುವವರನ್ನು ಹುಡುಕಬೇಕು’ ಎಂದು ಹೊಸಬಾಳೆ ಹೇಳಿದರು.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಪರೇಶ್ ಮೇಸ್ತಾ ಹತ್ಯೆಯಲ್ಲ, ಆಕಸ್ಮಿಕ ಸಾವು: ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಸಿದ ಸಿಬಿಐ

Next Post

ಸುಳ್ಳು ಆರೋಪಕ್ಕೆ ಬಿಜೆಪಿ ಕ್ಷಮೆಯಾಚಿಸಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ಸರ್ಕಾರಿ ಕಚೇರಿಗಳಲ್ಲಿ ಪೋಟೋ ಹಾಗೂ ವಿಡಿಯೋಗ್ರಾಫಿ ನಿಷೇಧಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಸುಳ್ಳು ಆರೋಪಕ್ಕೆ ಬಿಜೆಪಿ ಕ್ಷಮೆಯಾಚಿಸಬೇಕು : ಮಾಜಿ ಸಿಎಂ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada