ಹಾಲಿ ಮುಂಗಾರು ಅದೀವೇಶನ ಶುರುವಾಗಿ ಎರಡು ವಾರ ಕಳೆದರು ಸಹ ಬೆಲೆ ಏರಿಕೆ ಹಾಗೂ ಪ್ರತಿಭಟನೆಗಳ ಕಾರಣದಿಂದಾಗಿ ಅಧಿವೇಶನವನ್ನ ಮುಂದೂಡುತ್ತ ಬರಲಾಗುತ್ತಿದೆ.
ಅಧಿವೇಶನ ಶುರುವಾರ ನಂತರ ಕೇಂದ್ರ ಸರ್ಕಾರವು ಮಂಡಿಸಲು 32 ಮಸೂದೆಗಳನ್ನು ತಯಾರಿ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ. ಅಧಿವೇಶನ ಶುರುವಾಗಿ ಸರಿ ಸುಮಾರು ಎರಡು ವವಾರ ಕಳೆದರು ಇಲ್ಲಿಯವರೆಗು ಲೋಕಸಭೆ 16 ಘಂಟೆ ಹಾಗೂ ರಾಜ್ಯಸಭೆ 11 ಘಂಟೆ ಕಾರ್ಯ ನಿರ್ವಹಿಸಿದೆ ಎಂದು ತಿಳಿದು ಬಂದಿದೆ.
ಪ್ರತಿದಿನ 6 ಘಂಟೆಗಳನ್ನು ಕಲಾಪಕ್ಕಾಗಿ ಮೀಸಲಿಡಲಾಗುತ್ತಿದೆ. ಈ ಮಧ್ಯೆ ಬೆಲೆ ಏರಿಕೆ ಹಾಗೂ ಜಿ ಎಸ್ ಟಿ ಕುರಿತ ಪ್ರತಿಭಟನೆಯಿಂದಾಗಿ ಇಲ್ಲಿಯವರೆಗು ಒಟ್ಟು 28ಕ್ಕು ಹೆಚ್ಚು ಸಂಸದರನ್ನು ಅಮಾನತು ಮಾಡಲಾಗಿದ್ದು ರಾಷ್ಟ್ರಪತ್ನಿ ವಿವಾದವು ಈ ಮಧ್ಯೆ ತೀವ್ರ ಸದ್ದು ಮಾಡಿತ್ತು.
ಗದ್ದಲದ ನಡುವೆಯೇ ಆಂಟಿ ಡೋಪಿಂಗ್ ಹಾಗೂ ಕೌಟುಂಬಿಕ ನ್ಯಾಯಾಲಯ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿದೆ.

ಸರ್ಕಾರ ಸೋಮವಾರ ನಡೆಯುವ ಕಲಾಪದಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಗೆ ವಿಪಕ್ಷಗಳ ಜೊತೆ ಚರ್ಚಿಸಲು ಸಿದ್ದ ಎಂದು ಹೇಳಿದೆ. ಆದರೆ ಸುಗುಮ ಕಲಾಪಕ್ಕೆ ವಿಪಕ್ಷಗಳು ಅನುವು ಮಾಡಿಕೊಡುತ್ತದೆ ಎಂಬ ವಿಚಾರ ಇನ್ನು ಅಸ್ಪಷ್ಟವಾಗಿದೆ.
ಇನ್ನು ಆಗಷ್ಟ್ 5ರಂದು ರಾಷ್ಟ್ರವ್ಯಾಪಿ ಕಾಂಗ್ರೆಸ್ ನಿರಂತರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದೆ. ಆದರೆ ಆಡಳಿತ ಪಕ್ಷವು ನಾವು ಚರ್ಚೆಗೆ ಸಿದ್ದರಿದ್ದು ವಿಪಕ್ಷಗಳು ನಿರಂತರ ಗದ್ದಲ ಮಾಡುತ್ತಿರುವುದರಿಂದ ಕಲಾಪವನ್ನ ಹಾಳು ಮಾಡುತ್ತಿವೆ ಎಂದು ಆರೋಪಿಸಿದೆ.
ಇತ್ತ ಪ್ರತಿಪಕ್ಷಗಳ ಒಕ್ಕೂಟವು ಸರ್ಕಾರ ನಾಮ್ಮನ್ನು ಮೂಲೆಗುಂಪು ಮಾಡಲು ನೋಡುತ್ತಿದೆ ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿವೆ.






