ಒಕ್ಕಲಿಗ ಸಮುದಾಯ ಹಾಗೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿಕೆ ಕೊಟ್ಟ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಹೈಕಮಾಂಡ್ ಎಚ್ಚರಿಕೆಯ ನೋಟಿಸ್ ಬಗ್ಗೆ ಸ್ಪಷ್ಟ ಉತ್ತರ ಕೊಡದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನುಣುಚಿಕೊಂಡರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಹೇಳಿಕೆಯನ್ನು ಪಕ್ಷದಲ್ಲಿ ಮಾತನಾಡಿತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಒಂದು ರೀತಿ ನೀತಿ ಇದೆ. ಪಕ್ಷ ಚುನಾವಣೆಗಲ್ಲಿ ಗೆದ್ದಾಗ ಸಿಎಂ ಯಾರಾಗಬೇಕು ಎಂಬುದನ್ನು ಶಾಸಕರು ಆಯ್ಕೆ ಮಾಡಬೇಕು. ಬಳಿಕ ಹೈಕಮಾಂಡ್ ನಿರ್ಧಾರ ಮಾಡಬೇಕು. ಯಾರು ಏನು ಹೇಳ್ತಾರೆ ಎಂದು ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ ಎಂದರು.
ಜಮೀರ್ ಗೆ ಮಾತ್ರ ನೋಟಿಸ್ ಏಕೆ ಎಂಬ ಪ್ರಶ್ನೆಗೆ, ಸ್ಪಷ್ಟವಾಗಿ ಉತ್ತರಿಸದೆ ಪಕ್ಷ ಈ ಬಗ್ಗೆ ನಿರ್ಧಾರ ಮಾಡುತ್ತದೆ ಎಂದರು. ನನಗೆ ಗೊತ್ತಿರುವ ಮಟ್ಟಿಗೆ ಹೈಕಮಾಂಡ್ ಅವರ ಜೊತೆ ಮಾತನಾಡಿದ್ದಾರೆ. ಆ ವಿಚಾರ ಮುಗಿದು ಹೋಗಿದೆ ಮತ್ತೆ ಕೆದಕಬೇಕಾದ ಅಗತ್ಯ ಇಲ್ಲ ಎಂದು ಗರಂ ಆದರು.
ಬಿಜೆಪಿಯಿಂದ ರಾಜ್ಯಕ್ಕೆ ಅನ್ಯಾಯ
ಬಸವರಾಜ ಬೊಮ್ಮಾಯಿ ಅವರು 28 ರಂದು ದೊಡ್ಡ ಬಳ್ಳಾಪುರದಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷ ಆಚರಣೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಆಗುತ್ತಿವೆ. ಬೊಮ್ಮಾಯಿ ಅವರು ಯಡಿಯೂರಪ್ಪ ಹಾದಿಯಲ್ಲಿ ಸರ್ಕಾರ ನಡೆಸುತ್ತಿಲ್ಲ ಎಂದು ಹೇಳಲು ಜನೋತ್ಸವ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೊಮ್ಮಾಯಿ ಮೇಲೆ ಸ್ವಲ್ಪ ಭರವಸೆ ಇತ್ತು. ಜನತಾ ಪಕ್ಷದ ಹಿನ್ನೆಲೆಯಿಂದ ಬಂದವರು ವಿಭಿನ್ನವಾಗಿ ಕೆಲಸ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರ ಒಂದು ವರ್ಷದ ಆಡಳಿತ ಭ್ರಮನಿರಸನವಾಗಿದೆ.
ಹಿಂದೆಂದೂ ನಡೆಯದ ಭ್ರಷ್ಟಾಚಾರ ಆಗಿದೆ. 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ನಿರ್ಮಾನ ಆಗಿದ್ದು ಇದೇ ಮೊದಲು. ಹಣ ಕೊಡಲು ಸಾಧ್ಯವಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು ಎಂದು ಆರೋಪದರು.
ಈ ವಿಚಾರವಾಗಿ ಈಶ್ವರಪ್ಪ ರಾಜೀನಾಮೆ ನೀಡಿದ್ದರು, ಆದರೆ ಇವಾಗ ಕ್ಲೀನ್ ಚಿಕ್ ಕೊಡಲಾಗಿದೆ. ಪೊಲೀಸರು ಮಂತ್ರಿಯನ್ನು ರಕ್ಷಣೆ ಮಾಡಬೇಕಾದ ಕೆಲಸ ಮಾಡಿದ್ದಾರೆ. ಅದಕ್ಕಾಗಿ ನಾವು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಎಂದರು. ಡೆತ್ ಡಿಕ್ಲರೇಷನ್ ಇದ್ರೂ ಬಿ ರಿಪೋರ್ಟ್ ಹಾಕಿರುವುದು ಅನ್ಯಾಯ. ಇಂತಹ ಸರ್ಕಾರ ಯಾವಾಗಲೂ ಬಂದಿರಲಿಲ್ಲ ಎಂದು ಆರೋಪಿಸಿದರು.
ಐಎಎಸ್ ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಮಂತ್ರಿಗಳ ಕುಮ್ಮಕ್ಕು ಇಲ್ಲದೆ ನಡೆಯಲು ಸಾಧ್ಯನಾ? ಈ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಿ. ಇಲ್ಲಾಂದ್ರೆ ಸತ್ಯ ಹೊರ ಬರಲ್ಲ. ಕೆ ಪಿ ಎಸ್ ಸಿ ಹಗರಣದಲ್ಲಿ ಬಿಜೆಪಿ ಪಕ್ಷದ ಶಾಸಕ ಸುರೇಶ್ ಕುಮಾರ್ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ ಶಿಸ್ತು ಇಲ್ಲ ಎನ್ನುತ್ತಾರೆ. ಆದರೆ ಯತ್ನಾಳ್, ವಿಶ್ವನಾಥ್ ಏನಂದ್ರು ಭ್ರಷ್ಟಾಚಾರದ ಬಗ್ಗೆ? ಎಂದು ಪ್ರಶ್ನಿಸಿದರು.
ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ನಿಂತು ಹೋಗಿದೆ. ಇದೊಂದು ನಿಷ್ಕ್ರಿಯ ಸರ್ಕಾರ. ವಿಧಾನಸೌಧ ವ್ಯಾಪಾರದ ಸೌಧ ಆಗಿದೆ. ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರವನ್ನು ಬಸವರಾಜ ಬೊಮ್ಮಾಯಿ ಮುಂದುವರಿಸುತ್ತಿದ್ದಾರೆ ಎಂದು ಆರೋಪಿಸಿದರು.