• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತೀವ್ರ ಇಳಿಜಾರಿನಲ್ಲಿ ಷೇರುಪೇಟೆ, ಎರಡು ವಾರದಲ್ಲಿ ಶೇ.10ರಷ್ಟು ಕುಸಿದ ಸೂಚ್ಯಂಕ

Any Mind by Any Mind
May 19, 2022
in ದೇಶ, ವಾಣಿಜ್ಯ
0
ತೀವ್ರ ಇಳಿಜಾರಿನಲ್ಲಿ ಷೇರುಪೇಟೆ, ಎರಡು ವಾರದಲ್ಲಿ ಶೇ.10ರಷ್ಟು ಕುಸಿದ ಸೂಚ್ಯಂಕ
Share on WhatsAppShare on FacebookShare on Telegram

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಮಾಡಿದಾಗ ಆರಂಭವಾದ ಷೇರುಪೇಟೆಯಲ್ಲಿನ ರಕ್ತದೋಕುಳಿ ನಿಲ್ಲುತ್ತಲೇ ಇಲ್ಲ.  ಗುರುವಾರವೂ ಷೇರುಮಾರುಕಟ್ಟೆ ತೀವ್ರ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ 1500 ಅಂಶಗಳಷ್ಟು ಕುಸಿದರೆ, ನಿಫ್ಟಿ 400 ಮತ್ತು ಬ್ಯಾಂಕ್ ನಿಫ್ಟಿ 800 ಅಂಶಗಳಷ್ಟು ಕುಸಿದಿವೆ.

ADVERTISEMENT

ನಿಧಾನಗತಿಯಲ್ಲಿ ಷೇರುಪೇಟೆಯಲ್ಲಿ ಕರಡಿ ಹಿಡಿತ ಬಿಗಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಸಾಧ್ಯೆಯಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಮೇ 4ರಂದು ಆರ್ಬಿಐ ಶೇ.0.40ರಷ್ಟು ಬಡ್ಡಿ ದರ ಏರಿಕೆ ಮಾಡಿತ್ತು. ಹಣದುಬ್ಬರ ನಿಯಂತ್ರಿಸುವುದು ಬಡ್ಡಿದರ ಏರಿಕೆಯ ಉದ್ದೇಶವಾಗಿತ್ತು. ಬಡ್ಡಿದರ ಏರಿಕೆಗೆ ಷೇರು ಮಾರುಕಟ್ಟೆ ವ್ಯತಿರಿಕ್ತವಾಗಿ ಸ್ಪಂದಿಸಿದೆ. 57,200 ಅಂಶಗಳಷ್ಟಿದ್ದ ಸೆನ್ಸೆಕ್ಸ್ ಸತತ ಕುಸಿತ ದಾಖಲಿಸಿ 52,700 ಅಂಶಗಳಿಗೆ ಇಳಿದಿದೆ. ಸರಿಸುಮಾರು ಶೇ.10ರಷ್ಟು ಕುಸಿತ ದಾಖಲಿಸಿದಂತಾಗಿದೆ. ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳೂ ಸಹ ಶೇ.10ರಷ್ಟು ಕುಸಿದಿವೆ. ಮಾರುಕಟ್ಟೆ ಕುಸಿದಾಗಲೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು ಐಟಿ ವಲಯದ ಸೂಚ್ಯಂಕವೂ ತೀವ್ರ ಕುಸಿತದ ಹಾದಿಯಲ್ಲಿದೆ. ಹೀಗಾಗಿ ಕರಡಿ ಹಿಡಿತ ಬಿಗಿಗೊಳ್ಳುತ್ತಿದೆ .ಗುರುವಾರ ಐಟಿ, ಆಟೋ, ರಿಯಾಲ್ಟಿ, ಎಫ್ಎಂಸಿಜಿ, ಎನರ್ಜಿ, ಇನ್ಫ್ರಾ ಸೇರಿದಂತೆ ಎಲ್ಲಾ ವಲಯಗಳ ಸೂಚ್ಯಂಕಗಳೂ ಶೇ.2ರಿಂದ 5ರಷ್ಟು ಕುಸಿತ ದಾಖಲಿಸಿವೆ.

ಷೇರುಪೇಟೆ ಕುಸಿತದ ಜತೆಗೇ   ರೂಪಾಯಿ ಮೌಲ್ಯವು ಮತ್ತಷ್ಟು ಕುಸಿಯುತ್ತಿದೆ. ಗುರುವಾರ ಪ್ರತಿ ಡಾಲರ್ ಗೆ 77.73ರ ಆಜುಬಾಜಿನಲ್ಲಿ ರೂಪಾಯಿ ವಹಿವಾಟಾಗಿದೆ. ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯವು 80ಗಡಿದಾಟಿ ಕುಸಿಯುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ. ಜಾಗತಿಕವಾಗಿ ಡಾಲರ್ ಮೌಲ್ಯ ಏರುತ್ತಲೇ ಇದೆ. ಉದಯಿಸುತ್ತಿರುವ ರಾಷ್ಟ್ರಗಳ ಕರೆನ್ಸಿಗಳ ಮೌಲ್ಯ ಕುಸಿಯುತ್ತಿದೆ.

ಮುಗಿಯದ ರಷ್ಯಾ- ಉಕ್ರೇನ್ ಯುದ್ಧ, ತೀವ್ರಗತಿಯಲ್ಲಿರುವ ಹಣದುಬ್ಬರ, ಹಣದುಬ್ಬರ ತಡೆಗೆ ಆರ್ಬಿಐ ಬಡ್ಡಿದರ ಏರಿಕೆ, ಮುಂದೆ ಮತ್ತಷ್ಟು ಏರಿಸುವ ನಿರೀಕ್ಷೆ, ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವಾ ದರಗಳ ತೀವ್ರ ಏರಿಕೆ ಈ ಎಲ್ಲಾ ಕಾರಣದಿಂದಾಗಿ ಷೇರುಪೇಟೆ ಕುಸಿತದ ಹಾದಿಯಲ್ಲಿದೆ. ಅಮೆರಿಕಾ ಮತ್ತು ಇಂಗ್ಲೆಂಡ್ ದೇಶಗಳಲ್ಲೂ ಹಣದುಬ್ಬರ 40 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಈ ದೇಶಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರ ಏರಿಸಿವೆ, ಮತ್ತಷ್ಟು ಏರಿಸಲು ಸಿದ್ಧತೆ ನಡೆಸಿವೆ. ಇದು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಷೇರುಪೇಟೆ ಸದ್ಯಕ್ಕೆ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಜೂನ್ ತಿಂಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಸುತ್ತು ಬಡ್ಡಿದರ ಏರಿಕೆ ಮಾಡಲಿದೆ. ಬಡ್ಡಿದರ ಏರಿಕೆ ಪ್ರಮಾಣವು 50ರಿಂದ 100 ಅಂಶಗಳಷ್ಟಾಗಬಹುದು (ಶೇ.0.50 ರಿಂದ ಶೇ.1 ರಷ್ಟು). ಈ ಪ್ರಮಾಣದಲ್ಲಿ ಬಡ್ಡಿ ಏರಿದರೆ ಷೇರುಪೇಟೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅಸ್ಥಿರತೆ ಮುಂದುವರೆದಿದೆ. ಅಸ್ಥಿರತೆಯ ನಡುವೆಯೇ ಏರುಹಾದಿಯಲ್ಲಿ ಸಾಗಿದೆ. ಡಬ್ಲ್ಯೂಟಿಐ ಮತ್ತು ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರೆಲ್ಲಿಗೆ 108-115 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮುನ್ನ 85 ಡಾಲರ್ ಆಜುಬಾಜಿನಲ್ಲಿದ್ದ ಕಚ್ಚಾ ತೈಲ ಒಂದು ಹಂತದಲ್ಲಿ 140 ಡಾಲರ್ ಗೆ ಜಿಗಿದಿತ್ತು. ನಂತರ 100 ಡಾಲರ್ ಮಟ್ಟದಿಂದ ಕೆಳಕ್ಕಿಳಿದಿಲ್ಲ. ಕಚ್ಚಾ ತೈಲ ದರ ಏರಿಕೆಯಿಂದಾಗಿ ಭಾರತವಷ್ಟೇ ಅಲ್ಲದೇ, ಇಂಧನ ಆಮದು ರಾಷ್ಟ್ರಗಳೆಲ್ಲವೂ ಸಂಕಷ್ಟ ಎದುರಿಸುತ್ತಿವೆ. 

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಬಾಕ್ಸಿಂಗ್‌ ಸ್ಪರ್ಧೆಯ ನೇರ ಪ್ರಸಾರದಲ್ಲೇ ಚಾಂಪಿಯನ್‌ ಹೃದಯಾಘಾತದಿಂದ ಸಾವು!

Next Post

ಇವತ್ತು ನಂಗೆ ಖುಷಿಯ ದಿನ : NALPAD | BV SRINIVAS | PRATIDHVANI |

Related Posts

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!
Top Story

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

by ಪ್ರತಿಧ್ವನಿ
May 17, 2026
0

ಬೆಂಗಳೂರು : ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಇದರಿಂದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೆಪಿಎಸ್‌ಸಿ ವಿರುದ್ಧ ವ್ಯಕ್ತವಾಗುತ್ತಿವೆ. ಆದರೆ ಇದೀಗ ರಾಜ್ಯದ...

Read moreDetails
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

May 15, 2026
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
Next Post
ಇವತ್ತು ನಂಗೆ ಖುಷಿಯ ದಿನ : NALPAD | BV SRINIVAS | PRATIDHVANI |

ಇವತ್ತು ನಂಗೆ ಖುಷಿಯ ದಿನ : NALPAD | BV SRINIVAS | PRATIDHVANI |

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada