• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗ್ರಾಮೀಣ ಭಾರತದ 97% ಹಿಂದುಳಿದ ವರ್ಗಗಳ ಪೋಷಕರು ಶಾಲೆ ಮತ್ತೆ ತೆರೆಯಲು ಬಯಸುತ್ತಾರೆ: ಸಮೀಕ್ಷೆ

ಫಾತಿಮಾ by ಫಾತಿಮಾ
September 10, 2021
in ದೇಶ
0
ಗ್ರಾಮೀಣ ಭಾರತದ 97% ಹಿಂದುಳಿದ ವರ್ಗಗಳ ಪೋಷಕರು ಶಾಲೆ ಮತ್ತೆ ತೆರೆಯಲು ಬಯಸುತ್ತಾರೆ: ಸಮೀಕ್ಷೆ
Share on WhatsAppShare on FacebookShare on Telegram

ದೇಶದಲ್ಲಿನ ಎಲ್ಲಾ ರಾಜ್ಯ ಸರ್ಕಾರಗಳು ಸಪ್ಟೆಂಬರ್ ಅಂತ್ಯದ ವೇಳೆಗೆ ಶಾಲೆಗಳನ್ನು ಪುನರಾರಂಭಿಸುವ ಸೂಚನೆ ನೀಡಿದೆ. ಕರ್ನಾಟಕದಲ್ಲೂ ಸಪ್ಟೆಂಬರ್ ಆರರಿಂದ ಆರನೆಯ ತರಗತಿಗಿಂತ ಮೇಲಿನ‌ ಎಲ್ಲಾ ತರಗತಿಗಳು‌ ಪುನರಾರಂಭಗೊಂಡಿವೆ. ಹತ್ತಿರ ಹತ್ತಿರ ಒಂದೂವರೆ ವರ್ಷಗಳ ನಂತರ ಶಾಲೆ ಮತ್ತೆ ಶುರುವಾಗಿದೆ. ಈ ಮಧ್ಯೆ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯೊಂದರ ವರದಿ ಪ್ರಕಟಗೊಂಡಿದ್ದು ಭಾರತದ ಗ್ರಾಮೀಣ ಪ್ರದೇಶದ 97%  ನಷ್ಟು‌ ಪೋಷಕರು ಶಾಲೆ ಪುನರಾರಂಭಗೊಳ್ಳಬೇಕು ಎಂದು ಬಯಸುತ್ತಾರೆ ಎಂಬುವುದನ್ನು ಒತ್ತಿ ಹೇಳಿದೆ.

ADVERTISEMENT

ಕರೋನವೈರಸ್ ಸಾಂಕ್ರಾಮಿಕವು ಅನಿಯಂತ್ರಿತವಾಗಿ ಹಬ್ಬಿದಾಗ ಕಳೆದ ವರ್ಷ ಮಾರ್ಚ್‌ನಲ್ಲಿ ಶಾಲೆಗಳನ್ನು ಮುಚ್ಚಲಾಯಿತು.  ಕೋವಿಡ್ -19 ರ ಎರಡನೇ ಅಲೆಯು ಕಡಿಮೆಯಾಗುತ್ತಿದ್ದಂತೆ ಕೆಲವು ರಾಜ್ಯಗಳು ಮಾಧ್ಯಮಿಕ ವಿದ್ಯಾರ್ಥಿಗಳಿಗೆ  ತರಗತಿಗಳನ್ನು ಪುನರಾರಂಭಿಸಿವೆ, ಆದರೆ ಕಿರಿಯ ಮಕ್ಕಳು ತಮ್ಮ ತರಗತಿಗೆ ಯಾವಾಗ ಮರಳಬಹುದು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.

ಸುಮಾರು 1,400 ಶಾಲಾ ಮಕ್ಕಳನ್ನು ಸಮೀಕ್ಷೆಗೊಳಪಡಿಸಿದ ಆರ್ಥಿಕ ತಜ್ಞರಾದ ಜೀನ್ ಡ್ರೀಜ್ ಮತ್ತು ರೀತಿಕಾ ಖೇರಾ ಹಾಗೂ ಸಂಶೋಧಕ ವಿಪುಲ್ ಪೈಕ್ರಾ ಆನ್ಲೈನ್ ಶಿಕ್ಷಣದ ವಿಫಲತೆಯ ಬಗ್ಗೆ ಹೇಳುತ್ತಾ “ಸಮೀಕ್ಷೆಗೊಳಪಟ್ಟ ಅರ್ಧದಷ್ಟು ಮಕ್ಕಳಿಗೆ ಕೆಲವು ಪದಗಳಿಗಿಂತ ಹೆಚ್ಚು ಓದಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ. 

“ಹೆಚ್ಚಿನ ಪೋಷಕರು ತಮ್ಮ ಮಗುವಿನ ಓದುವ ಮತ್ತು ಬರೆಯುವ ಸಾಮರ್ಥ್ಯವು ಲಾಕ್‌ಡೌನ್ ಸಮಯದಲ್ಲಿ ಕಡಿಮೆಯಾಗಿದೆ ಎಂದು ಭಾವಿಸುತ್ತಾರೆ.  ಶಾಲೆಗಳು ಮತ್ತೆ ತೆರೆಯಲು ಅವರು ಕಾಯುತ್ತಿದ್ದಾರೆ” ಎಂದು ವರದಿ ಒಪ್ಪಿಸಿದ್ದಾರೆ. 

ಆಗಸ್ಟ್ ಆರಂಭದಲ್ಲಿ ಸಮೀಕ್ಷೆಯನ್ನು ನಡೆಸಿದಾಗ, ದೇಶದ ಗ್ರಾಮೀಣ ಪ್ರದೇಶದ ಕೇವಲ 8% ಮಕ್ಕಳು ಮಾತ್ರ ಆನ್‌ಲೈನ್ ತರಗತಿಗಳ ಮೂಲಕ ನಿಯಮಿತವಾಗಿ ಓದುತ್ತಿದ್ದರು. 37% ಮಕ್ಕಳು ಯಾವುದೇ ರೀತಿಯ ಶಿಕ್ಷಣ ಪಡೆಯುತ್ತಿರಲಿಲ್ಲ ಎಂಬುವುದು ಕಂಡು ಬಂದಿದೆ.

ವರದಿಯ ಪ್ರಕಾರ ಇದಕ್ಕೆ ಮುಖ್ಯ ಕಾರಣ ಅನೇಕ ಮನೆಗಳಿಗೆ ಸ್ಮಾರ್ಟ್ ಫೋನ್‌ಗಳು‌ ಇಲ್ಲದಿರುವುದು.  “ಸ್ಮಾರ್ಟ್‌ಫೋನ್ ಹೊಂದಿರುವ ಮನೆಗಳಲ್ಲಿಯೂ ಸಹ, ಆನ್‌ಲೈನ್‌ನಲ್ಲಿ ನಿಯಮಿತವಾಗಿ ಓದುತ್ತಿರುವ ಮಕ್ಕಳ ಪ್ರಮಾಣವು ನಗರ ಪ್ರದೇಶಗಳಲ್ಲಿ ಕೇವಲ 31% ಮತ್ತು ಗ್ರಾಮೀಣ ಪ್ರದೇಶದಲ್ಲಿ 15% ಆಗಿದೆ” ಎಂದು ವರದಿ ಹೇಳಿದೆ.

ಅಸ್ಸಾಂ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳಂತಹ ರಾಜ್ಯ ಸರ್ಕಾರಗಳು ಶಾಲೆಗಳನ್ನು ಮುಚ್ಚಿರುವಾಗ ಆನ್‌ಲೈನ್ ತರಗತಿಗಳನ್ನು ಪಡೆಯಲು ಸಾಧ್ಯವಿಲ್ಲದವರು ‘ಒಂದಲ್ಲ ಒಂದು ರೀತಿಯಲ್ಲಿ’ ಓದುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಏನನ್ನೂ ಮಾಡಿಲ್ಲ ಎಂದು ವರದಿ ಹೇಳಿದೆ.

ಮತ್ತೊಂದೆಡೆ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ರಾಜಸ್ಥಾನಗಳು ಶಿಕ್ಷಕರು ಮಕ್ಕಳಿಗೆ ಸಲಹೆಯನ್ನು ನೀಡಲು ಮತ್ತು ಆಫ್‌ಲೈನ್ ಹೋಂ ವರ್ಕ್  ನೀಡಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುವಂತೆ ಕೇಳಿಕೊಳ್ಳಲಾಗಿತ್ತು.  ಆದರೆ ಇದರ ಹೊರತಾಗಿಯೂ, ಈ ಹೆಚ್ಚಿನ ಪ್ರಯತ್ನಗಳ ಫಲಿತಾಂಶಗಳು “ತೃಪ್ತಿದಾಯಕವಲ್ಲ” ಎಂದು ವರದಿ ಹೇಳಿದೆ.

“ಮನೆಕೆಲಸವು ಹೆಚ್ಚಾಗಿ ಮಗುವಿನ ತಿಳುವಳಿಕೆಯನ್ನು ಮೀರಿದಂಥವುಗಳು ಮತ್ತು ಅನೇಕ ಮಕ್ಕಳು ತಾವು ಮಾಡಿರುವ ಯಾವುದೇ ಹೋಂ ವರ್ಕ್‌ಗೆ ಫೀಡ್‌ಬ್ಯಾಕ್ ಪಡೆಯಲು ಸಾಧ್ಯವಿರಲಿಲ್ಲ” ಎಂದು ಅದು ಹೇಳಿದೆ.  “ಮನೆಯಲ್ಲಿ ಯಾವುದೇ ಸಹಾಯ ಪಡೆದುಕೊಳ್ಳಲು ಸಾಧ್ಯವಿಲ್ಲದ ಮಕ್ಕಳಿಗೆ ಈ ಹೋಮ್‌ವರ್ಕ್‌ಗಳು ತರಗತಿಯ ಕಲಿಕೆಗೆ ಕಳಪೆ ಬದಲಿಯಾಗಿದೆ ” ಎಂದು ವರದಿ ತಿಳಿಸುತ್ತದೆ. ನಗರ ಪ್ರದೇಶಗಳಲ್ಲಿ, ಕೇವಲ 23% ಪೋಷಕರು ತಮ್ಮ ಮಗುವಿಗೆ ‘ಸಮರ್ಪಕ ಆನ್‌ಲೈನ್ ಶಿಕ್ಷಣ ಲಭಿಸುತ್ತಿದೆ’  ಎಂದು ಭಾವಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಹೀಗೆ ಭಾವಿಸುವವರ ಸಂಖ್ಯೆ ಕೇವಲ 8% ಮಾತ್ರ.

“ಇನ್ನೊಂದು ಪ್ರಮುಖ ಅಡಚಣೆಯೆಂದರೆ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯು ಆನ್‌ಲೈನ್ ವಸ್ತುಗಳನ್ನು ಮಕ್ಕಳಿಗೆ ಕಳುಹಿಸುತ್ತಿಲ್ಲ. ಅಥವಾ ಕಳುಹಿಸಿದರೂ ಪೋಷಕರಿಗೆ ಅದರ ಬಗ್ಗೆ ತಿಳಿದಿಲ್ಲ.  ಕೆಲವು ಮಕ್ಕಳು ಅದರಲ್ಲೂ ಸಣ್ಣ ಮಕ್ಕಳು ಆನ್‌ಲೈನ್ ಅಧ್ಯಯನದ ಬಗ್ಗೆ ತಿಳುವಳಿಕೆಯನ್ನು ಹೊಂದಿರುವುದಿಲ್ಲ, ಅಥವಾ ಅದರತ್ತ ಅವರಿಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ” ಎಂದು ಹೇಳಿದೆ. ನಗರ ಪ್ರದೇಶಗಳಲ್ಲೂ ಮೂರನೇ ಎರಡರಷ್ಟು ಪೋಷಕರು ತಮ್ಮ ಮಗುವಿನ ಓದುವ ಮತ್ತು ಬರೆಯುವ ಸಾಮರ್ಥ್ಯವು ಲಾಕ್‌ಡೌನ್ ಸಮಯದಲ್ಲಿ ಕಡಿಮೆಯಾಗಿದೆ ಎಂದು ಹೇಳಿರುವುದಾಗಿ ವರದಿ ಪ್ರಕಟಿಸಿದೆ.

ಇದಲ್ಲದೆ ಗ್ರಾಮೀಣ ಪ್ರದೇಶದ ಇತರ ಜಾತಿಗಳ 15% ಮಕ್ಕಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ 4% ಮಕ್ಕಳು ಮಾತ್ರ ಆನ್‌ಲೈನ್‌ನಲ್ಲಿ ನಿಯಮಿತವಾಗಿ ಓದುತ್ತಿದ್ದಾರೆ ಎಂದು ವರದಿಯು ಎತ್ತಿ ತೋರಿಸಿದೆ.  “ಅವರಲ್ಲಿ ಅರ್ಧದಷ್ಟು ಮಕ್ಕಳಿಗೆ ಓದುವ ಪರೀಕ್ಷೆಯಲ್ಲಿ ಕೆಲವು ಅಕ್ಷರಗಳಿಗಿಂತ ಹೆಚ್ಚು ಓದಲು ಸಾಧ್ಯವಾಗಲಿಲ್ಲ” ಎಂದು ಅದು ಹೇಳಿದೆ.  “ಗ್ರಾಮೀಣ ಎಸ್‌ಸಿ/ಎಸ್‌ಟಿ ಪೋಷಕರಲ್ಲಿ 98% ‌ಪೋಷಕರು ಶಾಲೆಗಳು ಆದಷ್ಟು ಬೇಗನೆ ಮತ್ತೆ ತೆರೆಯಬೇಕೆಂದು ಬಯಸುತ್ತಾರೆ” ಎಂದೂ ವರದಿ ಹೇಳುತ್ತದೆ.

ಅನೇಕ ಪೋಷಕರು ತಮ್ಮ ಮಗುವಿನ ಶಿಕ್ಷಣದ ಮೇಲೆ ಕೋವಿಡ್ 19 ಬೀರಿರುವ ಪರಿಣಾಮದ ಬಗ್ಗೆ ತಿಳಿದಿದ್ದಾರೆ ಮತ್ತು ಇದರಿಂದ  ‘ಮಗುವಿನ ಜೀವನ ಹಾಳಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.

ಲಾಕ್‌‌ಡೌನ್‌ಗೆ ಮುನ್ನ ಮೂರನೇ ತರಗತಿಗೆ ದಾಖಲಾಗಿದ್ದ, ಆದರೆ ತನ್ನ ವಿವಿಧ ಕಾರಣಗಳಿಂದಾಗಿ ಎರಡನೇ ತರಗತಿಯ ಪಠ್ಯಕ್ರಮವನ್ನೂ ಕರಗತ ಮಾಡಿಕೊಳ್ಳದ ಮಗುವಿನ ಬೌದ್ಧಿಕ ಬೆಳವಣಿಗೆ‌ ಒಂದನೇ ತರಗತಿಯಷ್ಟಿದ್ದರೂ ಒಂದೂವರೆ ವರ್ಷಗಳ ಕಾಲ ಶಾಲೆ ಮುಚ್ಚಿದ್ದರಿಂದ  ಇಂದು 5 ನೇ ತರಗತಿಗೆ ದಾಖಲಾಗಬೇಕಾಗಿ ಬರುತ್ತದೆ. ಇದು ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಅನಗತ್ಯ ಒತ್ತಡ ಹೇರುತ್ತದೆ ಎಂದೂ ವರದಿ ಹೇಳಿದೆ.

Tags: Covid 19Government SchoolsPrivate SchoolsSchoolsಕೋವಿಡ್-19
Previous Post

ಕಾಂಗ್ರೆಸ್‍ ನಾಯಕತ್ವಕ್ಕೆ ಲಿಂಗಾಯತರ ಲಗ್ಗೆ: ಎಸ್‍.ಆರ್‌. ಪಾಟೀಲ್‌ ಮಠ ಯಾತ್ರೆಗೆ ಹೈಕಮಾಂಡ್‍ ಬೆಂಬಲ?

Next Post

ಬೆಂಗಳೂರಲ್ಲಿ ಸುಮಾರು 4,000 ಅಕ್ರಮ ನೀರಿನ ಸಂಪರ್ಕ ಪತ್ತೆ : BWSSB ಸಮೀಕ್ಷೆ

Related Posts

Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
0

ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರೊಂದಿಗೆ  ಸಭೆ...

Read moreDetails
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

December 2, 2025
ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

December 1, 2025
ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

ವಿದೇಶಿ ವಿನಿಮಯ ಷೇರುಗಳ ಏರಿಳಿತಕ್ಕೆ ಕಾರಣ ಕೊಟ್ಟ RBI

December 1, 2025
Next Post
ಬೆಂಗಳೂರಲ್ಲಿ ಸುಮಾರು 4,000 ಅಕ್ರಮ ನೀರಿನ ಸಂಪರ್ಕ ಪತ್ತೆ : BWSSB ಸಮೀಕ್ಷೆ

ಬೆಂಗಳೂರಲ್ಲಿ ಸುಮಾರು 4,000 ಅಕ್ರಮ ನೀರಿನ ಸಂಪರ್ಕ ಪತ್ತೆ : BWSSB ಸಮೀಕ್ಷೆ

Please login to join discussion

Recent News

Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
ರೋಹಿತ್- ಕೊಹ್ಲಿ ಅಬ್ಬರಕ್ಕೆ ಬಾಡಿದ ಗಂಭೀರ್ ಮುಖ: ಡ್ರೆಸ್ಸಿಂಗ್ ಕೋಣೆ ಒಳಗಿನ ವಿಡಿಯೋ ಲೀಕ್..!
Top Story

ರೋಹಿತ್- ಕೊಹ್ಲಿ ಅಬ್ಬರಕ್ಕೆ ಬಾಡಿದ ಗಂಭೀರ್ ಮುಖ: ಡ್ರೆಸ್ಸಿಂಗ್ ಕೋಣೆ ಒಳಗಿನ ವಿಡಿಯೋ ಲೀಕ್..!

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada