ವಿವಿಧ ಸಮಸ್ಯೆಗಳಿಂದ ಈಗಾಗಲೇ ತತ್ತರಿಸಿರುವ ದೇಶದ ಜನರಿಗೆ ಅದರಲ್ಲೂ ಹೈನುಗಾರರಿಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೀಕರವಾಗಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ಗಡ್ಡೆ ಚರ್ಮ ರೋಗಕ್ಕೆ ತುತ್ತಾಗಿ ಇದುವರೆಗೂ 67 ಸಾವಿರಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿವೆ.
ಜುಲೈ ತಿಂಗಳೊಂದರಲ್ಲಿ 67,000 ಕ್ಕೂ ಹೆಚ್ಚು ಜಾನುವಾರುಗಳು (lumpy skin disease) ಗಡ್ಡೆ ಚರ್ಮದ ಕಾಯಿಲೆಯಿಂದ ಸಾವನ್ನಪ್ಪಿವೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ಎಂಟು ರಾಜ್ಯಗಳಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜಾನುವಾರುಗಳಲ್ಲಿ ಗಡ್ಡೆ ಚರ್ಮ ರೋಗವನ್ನು (ಎಲ್ಎಸ್ಡಿ) ನಿಯಂತ್ರಿಸಲು ರಾಜ್ಯಗಳು ಪ್ರಸ್ತುತ ʼಗೋಟ್ ಪಾಕ್ಸ್’ (goat pox) ಲಸಿಕೆಯನ್ನು ಬಳಸುತ್ತಿವೆ ಎಂದು ಹೇಳಿದ್ದಾರೆ. ಕೃಷಿ ಸಂಶೋಧನಾ ಸಂಸ್ಥೆ ICAR ನ ಎರಡು ಸಂಸ್ಥೆಗಳು ಅಭಿವೃದ್ಧಿಪಡಿಸಿದ LSD ಗಾಗಿ ಹೊಸ ಲಸಿಕೆ ‘Lumpi-ProVacInd’ ನ ವಾಣಿಜ್ಯ ಬಿಡುಗಡೆಯು ಮುಂದಿನ “ಮೂರು-ನಾಲ್ಕು ತಿಂಗಳುಗಳ” ಬಳಿಕ ನಡೆಯಬಹುದು ಎಂದು ಪಿಟಿಐ ಜೊತೆ ಮಾತನಾಡಿದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಕಾರ್ಯದರ್ಶಿ ಜತೀಂದ್ರ ನಾಥ್ ಸ್ವೈನ್ ಹೇಳಿದ್ದಾರೆ.
ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಮುದ್ದೆ ಚರ್ಮ ರೋಗವು ವ್ಯಾಪಕವಾಗಿ ಹರಡಿದ್ದು, ಆಂಧ್ರಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡಾ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
“ರಾಜಸ್ಥಾನದಲ್ಲಿ, ಈ ರೋಗಕ್ಕೆ ತುತ್ತಾಗಿ ದಿನವೊಂದಕ್ಕೆ 600-700 ಜಾನುವಾರುಗಳ ಸಾವನ್ನಪ್ಪುತ್ತಿವೆ, ಇತರ ರಾಜ್ಯಗಳಲ್ಲಿ, ಈ ಪ್ರಮಾಣವು 100 ಕ್ಕಿಂತ ಕಡಿಮೆಯಾಗಿದೆ. ಲಸಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಚಿವಾಲಯವು ರಾಜ್ಯಗಳನ್ನು ಕೇಳಿದೆ” ಎಂದು ಜತೀಂದ್ರನಾಥ್ ತಿಳಿಸಿದ್ದಾರೆ. .
ಈ ರೋಗಕ್ಕೆ ಗೋಟ್ ಪೋಕ್ಸ್ ಲಸಿಕೆ 100 ಪ್ರತಿಶತ ಪರಿಣಾಮಕಾರಿಯಾಗಿದ್ದು, ಈಗಾಗಲೇ 1.5 ಕೋಟಿ ಡೋಸ್ಗಳನ್ನು ರೋಗ ಪೀಡಿತ ರಾಜ್ಯಗಳಲ್ಲಿ ನೀಡಲಾಗಿದೆ. ದೇಶದಲ್ಲಿ ಮೇಕೆ ಪೋಕ್ಸ್ ಲಸಿಕೆ ಸಾಕಷ್ಟು ಪೂರೈಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ, ಎರಡು ಕಂಪನಿಗಳು ಈ ಲಸಿಕೆಯನ್ನು ತಯಾರಿಸುತ್ತಿದ್ದು, ಅವು ತಿಂಗಳಿಗೆ 4 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಒಟ್ಟು ಜಾನುವಾರುಗಳ ಸಂಖ್ಯೆ ಸುಮಾರು 20 ಕೋಟಿ ಇದ್ದು, ಈಗಾಗಲೇ 1.5 ಕೋಟಿ ಗೋಟ್ ಪಾಕ್ಸ್ ಡೋಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಲಿನ ಉತ್ಪಾದನೆಯ ಮೇಲೆ ಈ ರೋಗವು ಪ್ರಭಾವವನ್ನು ಬೀರಿದ್ದು, ರೋಗದ ಪರಿಣಾಮವಾಗಿ ಗುಜರಾತ್ನಲ್ಲಿ ಹಾಲಿನ ಉತ್ಪಾದನೆಯ ಮೇಲೆ ಶೇಕಡಾ 0.5 ರಷ್ಟು ಕನಿಷ್ಠ ಪರಿಣಾಮ ಬೀರಿದೆ ಎಂದು ಅಮುಲ್ ಬ್ರಾಂಡ್ನಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಹೇಳಿದ್ದಾರೆ.
ಲಸಿಕೆ ಪ್ರಕ್ರಿಯೆಯಿಂದಾಗಿ ಗುಜರಾತ್ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು. ಇತರ ರಾಜ್ಯಗಳಲ್ಲಿ ಇದರ ಪರಿಣಾಮ ಸ್ವಲ್ಪ ಹೆಚ್ಚಾಗಬಹುದು ಎಂದು ಸೋಧಿ ಹೇಳಿದ್ದಾರೆ.
“ಅಮುಲ್ ಸೇರಿದಂತೆ ಸಂಘಟಿತ ಹಾಲು ಉತ್ಪಾದಕರ ಸಂಗ್ರಹವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಆದರೆ ಇದನ್ನು ಎಲ್ಎಸ್ಡಿ ಎಂದು ಹೇಳಲಾಗುವುದಿಲ್ಲ. ಕಳೆದ ವರ್ಷದಂತೆ, ಅಸಂಘಟಿತ ಆಟಗಾರರು, ಸಿಹಿ ತಯಾರಕರು ಮತ್ತು ಹೋಟೆಲ್ಗಳು ಆಕ್ರಮಣಕಾರಿಯಾಗಿ ಹಾಲು ಸಂಗ್ರಹಿಸುತ್ತಿವೆ,” ಅವರು ಹೇಳಿದರು.






