
ಚಿತ್ರದುರ್ಗ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಸಿಎಂ ಮತ್ತು ಡಿಸಿಎಂಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ್ದಾರೆ. ಇದುವರೆಗೂ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಸರಿಯಾದ ಪೇಮೆಂಟ್ ಆಗುತ್ತಿಲ್ಲ. ನಮ್ಮ ಸಣ್ಣ ಗುತ್ತಿಗೆದಾರರಿಗೆ ತುಂಬಾ ಸಮಸ್ಯೆ ಆಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ತೊಂದರೆ ಇದೆ. ಸಿಎಂ & ಡಿಸಿಎಂ ಹಾಗೂ ಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಯಾರೂ ಕೂಡಾ ಸಣ್ಣ ಗುತ್ತಿಗೆದಾರರ ಕಡೆ ಗಮನ ಹರಿಸಿಲ್ಲ. ಜೇಷ್ಠತೆ ಕಾಪಾಡುವಲ್ಲೂ ಸರ್ಕಾರ ವಿಫಲವಾಗಿದೆ. ಎಲ್ಲಾ ಇಲಾಖೆಗಳಲ್ಲೂ ಕಾಣದ ಕೈಗಳು, ಸಚಿವರ ಸಂಬಂಧಿಗಳು ಕಂಟ್ರೋಲ್ ಮಾಡ್ತಿದ್ದಾರೆ ಎಂದಿದ್ದಾರೆ.

ಲೋಕೋಪಯೋಗಿ ಸಚಿವರಾದ ಜಾರಕಿಹೊಳಿ ಸಾಹೇಬ್ರು ಬಗ್ಗೆ ಗೌರವ ಇದೆ. 3-4 ತಿಂಗಳಿಂದ ಅವರ ಸಂಬಂಧಿಯೊಬ್ಬರು ಇಲಾಖೆಯಲ್ಲಿ ತಲೆ ಹಾಕಿದ್ದಾರೆ. ಸಿನಿಯಾರಿಟಿ ಪ್ರಕಾರ ಪೇಮೆಂಟ್ ಮಾಡಲು ಸಚಿವರು ನಿರ್ಧಾರ ಮಾಡಿರ್ತಾರೆ. ಅದನ್ನ ಬದಲಾವಣೆ ಮಾಡಿ ಮಧ್ಯವರ್ತಿಗಳು ಪೇಮೆಂಟ್ ಮಾಡಿಸುತ್ತಾರೆ. ಸೆಕ್ರೆಟರಿಗಳನ್ನ ಕೇಳಿದ್ರು ನಮಗೆ ಗೊತ್ತಿಲ್ಲ ಅಂತಾರೇ, ಮತ್ಯಾರಿಗೆ ಗೊತ್ತು ಇರುತ್ತದೆ. ಸಣ್ಣ ಗುತ್ತಿಗೆದಾರರಿಗೆ 5-50 ಲಕ್ಷ ಇರುವವರಿಗೆ ಪೇಮೆಂಟ್ ಕ್ಲಿಯರ್ ಆಗ್ಬೇಕು. ಜೇಷ್ಟತೆ ಆಧಾರದಲ್ಲಿ ಗುತ್ತಿಗೆದಾರರ ಬಿಲ್ ಕ್ಲಿಯರ್ ಆಗ್ಬೇಕು. ಮಧ್ಯವರ್ತಿಗಳ ಹಾವಳಿಯನ್ನ ಸಚಿವರು ನಿಯಂತ್ರಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ 3 ನೇ ತಾರೀಕು ಮೀಟಿಂಗ್ ಮಾಡಿದ್ರು. ಎಲ್ಲಾ ಎಂಡಿಗಳಿಗೂ ನಾವು ಪತ್ರ ಬರೆದರು ಪ್ರಯೋಜನ ಇಲ್ಲ. ಬಲಾಡ್ಯರಿಗೆ 100-150 ಕೋಟಿ ಪೇಮೆಂಟ್ ಮಾಡುತ್ತಿದ್ದಾರೆ. ಸಣ್ಣ ಕಂಟ್ರಾಕ್ಟರ್ಗಳಿಗೆ ಮಾತ್ರ ಪೇಮೆಂಟ್ ಮಾಡುತ್ತಿಲ್ಲ. ಡಿಸಿಎಂ ಅವರ ಜಲ ಸಂಪನ್ಮೂಲ ಇಲಾಖೆಯಲ್ಲೂ ಯಾವುದೇ ಪೇಮೆಂಟ್ ಮಾಡಿಲ್ಲ. ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜ್ ಅವರ ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅನುದಾನದ ವಿಷ್ಯದಲ್ಲಿ, ಪೇಮೆಂಟ್ ಮಾಡುವ ವಿಷ್ಯದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ. ಸಚಿವರ ಸಂಬಂಧಿಕರು ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಈ ಹಿಂದಿನ ಸರ್ಕಾರಕ್ಕಿಂದ ಹೆಚ್ಚು ಪರ್ಸಂಟೇಜ್ ಪಡೆಯುತ್ತಿದ್ದಾರೆ. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಗಮನಕ್ಕೆ ತಂದಿದ್ದೇವೆ. ಆಯ್ತು, ಆಯ್ತು ಅಂತಾರೇ ಮತ್ತೆ ಅದೇ ಕಥೆ. ಹಿಂದಿನ ಸರ್ಕಾರದಲ್ಲಿ ಸ್ಪೇಷಲ್ LOC ಇರ್ಲಿಲ್ಲ, ಈಗ ಆ ಪಿಡುಗು ಹುಟ್ಟಿದೆ. ಸ್ಪೇಷಲ್ LOC ನಮಗೆ ಬೇಡ, ಫಸ್ಟ್ ಕಂ ಫಸ್ಟ್ ಮಾಡಿ. ಸಣ್ಣ & ಮಧ್ಯ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಿ. ನಮ್ಮ ಕಷ್ಟ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.