ರಾಜಸ್ಥಾನ: ಜೈಲಿನೊಳಗೆ ಆರಂಭವಾದ ಪ್ರೇಮಕಥೆಯೊಂದು ಈಗ ಮದುವೆಯಾಗಲು ಸಜ್ಜಾಗಿದೆ. ಕೊಲೆ ಮಾಡಿದ ಮಹಿಳೆ ಹಾಗೂ ಐದು ಜನರ ಕೊಲೆಯಲ್ಲಿ ದೋಷಿಯಾಗಿರುವ ವ್ಯಕ್ತಿಯೊಬ್ಬ ಮದುವೆಯಾಗಲು ಪರೋಲ್ ಪಡೆದಿದ್ದಾರೆ. ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಎಂಬ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಮದುವೆಗೆ ರಾಜಸ್ಥಾನ ಹೈಕೋರ್ಟ್ 15 ದಿನಗಳ ತುರ್ತು ಪೆರೋಲ್ ನೀಡಿದೆ. ಈ ಪ್ರಕರಣ ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಾಡೆಲ್ ಆಗಿದ್ದ ಪ್ರಿಯಾ ಸೇಠ್ ಪ್ರಸ್ತುತ ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಇದೇ ಜೈಲಿನಲ್ಲಿ ಐದು ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹನುಮಾನ್ ಪ್ರಸಾದ್ನನ್ನು ಆಕೆ ಸುಮಾರು ಆರು ತಿಂಗಳ ಹಿಂದೆ ಭೇಟಿಯಾಗಿದ್ದಾಳೆ. ದಿನನಿತ್ಯದ ಜೈಲು ಜೀವನದ ನಡುವೆ ಪರಿಚಯ ಬೆಳೆದು, ಅದು ಕ್ರಮೇಣ ಪ್ರೀತಿಯಾಗಿದೆ. ಜೈಲು ಆಡಳಿತದ ಮಾಹಿತಿಯಂತೆ, ಇಬ್ಬರೂ ತಮ್ಮ ಮದುವೆಗೆ ಕಾನೂನುಬದ್ಧ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಮಾನವೀಯ ನೆಲೆಯಲ್ಲಿ ಪೆರೋಲ್ ನೀಡಿದೆ.

ಕೊಲೆ ಮಾಡಿ ಜೈಲು ಸೇರಿದ್ದ ಪ್ರಿಯಾ ಸೇಠ್ ಪ್ರಕರಣ
ಇದನ್ನೂ ಓದಿ: BREAKING: ಕರ್ನಾಟಕದ ಕಡಲೆ ಕಾಳು ಬೆಳೆಗಾರರಿಗೆ ಸಿಹಿ ಸುದ್ದಿ: ಇಲ್ಲಿದೆ ಮಹತ್ವದ ಮಾಹಿತಿ
2018ರಲ್ಲಿ ಪ್ರಿಯಾ ಸೇಠ್ ಹಾಗೂ ಆಕೆ ಗ್ಯಾಂಗ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಅಪಹರಿಸಿ 3 ಲಕ್ಷ ರೂಪಾಯಿ ವಸೂಲಿ ಮಾಡಿ ಕೊಲೆ ಮಾಡಿದ್ದರು. ಹತ್ಯೆಯ ಬಳಿಕ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಎಸೆದಿದ್ದರು. ಮೇ 3ರಂದು ಶವ ಪತ್ತೆಯಾಗಿ, ತನಿಖೆ ಬಳಿಕ ಪ್ರಿಯಾ ಸೇಠ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.

ಐದು ಜನರ ಹತ್ಯೆ ಮಾಡಿ ಜೈಲು ಸೇರಿದ್ದಹನುಮಾನ್ ಪ್ರಸಾದ್
2017ರಲ್ಲಿ ಪ್ರೇಯಸಿಯ ಮಾತು ಕೇಳಿ ಹನುಮಾನ್ ಪ್ರಸಾದ್ ಆಕೆಯ ಪತಿ ಮೂವರು ಮಕ್ಕಳು ಹಾಗೂ ಮತ್ತೋರ್ವ ಸಂಬಂಧಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ರಾಜಸ್ಥಾನ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲಿ ಹನುಮಾನ್ ಪ್ರಸಾದ್ ಹಾಗೂ ಆತನ ಪ್ರೇಯಸಿ ಇಬ್ಬರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಇಬ್ಬರೂ ಕೊಲೆ ಆರೋಪಿಗಳಿಗೆ ಪೆರೋಲ್ ನೀಡಿರುವುದುಸಾಮಾಜಿಕ ಮತ್ತು ನೈತಿಕ ಚರ್ಚೆಗೆ ಕಾರಣವಾಗಿದೆ.






