• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

15 ಆನೆಗಳ ಜಾಗದಲ್ಲಿ 25 ಆನೆ, ಸಕ್ರೆಬೈಲ್‌ ಬಿಡಾರದ ಕಣ್ಣೀರ ಕಥೆ

by
December 16, 2019
in ಕರ್ನಾಟಕ
0
15 ಆನೆಗಳ ಜಾಗದಲ್ಲಿ 25 ಆನೆ
Share on WhatsAppShare on FacebookShare on Telegram

ಕೆಲವು ದಿನಗಳ ಹಿಂದೆ ಚಿತ್ರದುರ್ಗದ ಜೋಗಿಮಟ್ಟಿಯಲ್ಲಿ ಸೆರೆಹಿಡಿದ ಆನೆ, ಕ್ಯಾಂಪ್‌ಗಳಲ್ಲಿ ಪಳಗಿಸಿದ ಆನೆಗಿಂತಲೂ ಸೌಮ್ಯ ಸ್ವಭಾವದ್ದು, ಹೆಚ್ಚೆಂದರೆ ಇಪ್ಪತ್ತು ವರ್ಷ ವಯಸ್ಸು, ನಿರರ್ಗಳವಾಗಿ ಸುತ್ತುವುದಕ್ಕೆ ಹೋಗಿ ಅನಾಯಾಸವಾಗಿ ಸಕ್ರೆಬೈಲಿನಲ್ಲಿ ಬಂಧಿಯಾಯ್ತು, ಭದ್ರಾ ಸಂರಕ್ಷಿತ ವಲಯದಿಂದ ಚಿತ್ರದುರ್ಗ ಗಡಿಯ ಜೋಗಿಮಟ್ಟಿ ಅರಣ್ಯದಲ್ಲಿ ನಿರಾಳವಾಗಿ ಬಂದ ಆನೆಯನ್ನ ಕಂಡ ಜನರು ಅಧಿಕಾರಿಗಳಿಗೆ ದೂರು ನೀಡಿದ್ರು, ಅಲ್ಲಿ ಮಟ್ಟಿ ಮುರಿದಿದೆ, ಇಲ್ಲಿ ಸೊಪ್ಪು ತಿಂದಿದೆ, ಹೆಜ್ಜೆ ಗುರುತುಗಳು ನೋಡಿ ಎಂದು ಅದರ ಜಾಡು ಹಿಡಿದು ಹೊರಟರು ಅದು ಸಾಗುತ್ತಲೇ ಇತ್ತು, ಅಲ್ಲಲ್ಲಿ ಜೋಳ ತಿಂದು, ಬೇಲಿ ಮುರಿದು ಕಣ್ಮರೆಯಾಗುತ್ತಿತ್ತು, ಒಂದೇ ರಾತ್ರಿಯಲ್ಲಿ ಹದಿನೈದು ಇಪ್ಪತ್ತು ಕಿಲೋಮೀಟರ್‌ ಸಾಗಿತ್ತು, ಕೊನೆಗೆ ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪದ ಅರಣ್ಯದಲ್ಲಿ ಅಧಿಕಾರಿಗಳಿಗೆ ಇದರ ಸುಳಿವು ಸಿಕ್ಕಿಬಿಡ್ತು.

ADVERTISEMENT

ನಂದಿಪುರ ಎಂಬ ಗ್ರಾಮದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆನೆಯನ್ನ ನಾಗರಹೊಳೆ ಹಾಗೂ ಸಕ್ರೆಬೈಲ್‌ನಿಂದ ತಂದ ಆನೆಗಳಿಂದ ಮಣಿಸಿ, ಅರಿವಳಿಕೆಗೆ ಮೈಯೊಡ್ಡುವಂತೆ ಮಾಡಲಾಯ್ತು, ಈಗ ಆ ಆನೆ ಸಕ್ರೆಬೈಲ್‌ ಬಿಡಾರ ಸೇರಿಕೊಂಡಿದೆ. ಇದರೊಂದಿಗೆ ಇಲ್ಲಿನ ಆನೆಗಳ ಸಂಖ್ಯೆ ಇಪ್ಪತ್ತೈದಕ್ಕೇರಿದೆ. ಜೋಗಿಮಟ್ಟಿ ಆನೆ ಸ್ವಲ್ಪವೂ ತೊಂದರೆ ನೀಡದೇ ಲಾರಿ ಏರಿ, ಇಳಿದು ಕ್ರಾಲ್‌ನಲ್ಲಿ ಸೇರಿ ತನಗೇನು ಅರಿವಿಲ್ಲದ ನಿಂತುಬಿಡುತ್ತೆ. ಪಕ್ಕದಲ್ಲಿಯೇ ಇರುವ ಆನೆ ಅದರೊಂದಿಗೆ ನಡೆಸುವ ಮೂಖ ಸಂಭಾಷಣೆ ನೋಡಿದರೆ, ನೀನು ಇಲ್ಲಿಗೆ ಬಂದು ಬಂಧಿಯಾದೆ ಎಂಬಂತೆ ಕಾಣುತ್ತೆ.

ಹೆಚ್ಚೆಂದರೆ ಹದಿನೈದು ಆನೆಗಳನ್ನ ಸಾಕಬಹುದಾದ ಈ ಕ್ಯಾಂಪ್‌ನಲ್ಲಿ ಇಪ್ಪತ್ತೈದು ಆನೆಗಳಾಗಿವೆ, ಇಷ್ಟೊಂದು ಆನೆಗಳನ್ನ ಕೂಡಿಹಾಕುವ ಅಗತ್ಯತೆ ಏನಿದೆ, ಇಪ್ಪತ್ತರ ಹರೆಯದ ಆನೆಯನ್ನ ಕ್ಯಾಂಪ್‌ನಲ್ಲಿ ಐವತ್ತು ವರ್ಷ ಸರ್ಕಾರದ ಹಣದಲ್ಲಿ ಸಾಕಬೇಕು, ಪ್ರತೀ ಆನೆಗೆ ಕಾವಾಡಿ, ಮಾವುತ ಅಂತ ಸಾಕಷ್ಟು ಸಿಬ್ಬಂದಿಗಳು ಬೇಕು, ಕಾಡಾನೆ ಪಳಗಿಸಲು ಕನಿಷ್ಟ ಎರಡು ಆನೆಗಳನ್ನ ನಿಯೋಜಿಸಬೇಕು, ಅವುಗಳಿಗೆ ಮೇವು ಅಂತ ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು, ವೈದ್ಯಕೀಯ ವೆಚ್ಚವೂ ದುಬಾರಿ, ಹರ್ಪಿಸ್‌ ತರಹದ ವೈರಸ್‌ ದಾಳಿ ಇಟ್ಟರೆ ಕ್ಯಾಂಪ್‌ಗಳಲ್ಲಿ ಆನೆಗಳೇ ಖಾಲಿಯಾಗುತ್ತವೆ.

ತಾತ್ಕಾಲಿಕವಾಗಿ ಆನೆಗಳನ್ನ ಇಡಬಹುದಾದ ಜಾಗದಲ್ಲಿ ಹಿಂಡನ್ನ ತಂದು ಬಿಟ್ಟರೆ ಮುಂದೆ ಆನೆ ಸಂತತಿಗಳೇ ನಾಶವಾಗಬಹುದು ಎಂಬ ಆತಂಕವನ್ನ ರಾಜ್ಯ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಹೊರಹಾಕಿತ್ತು, ನೀಲಗಿರಿ ಪರ್ವತದಂಚಿನಲ್ಲಿ ಆನೆ ಕಾರಿಡಾರ್‌ಗಳ ಜಾಗವನ್ನ ಆಕ್ರಮಿಸಿಕೊಂಡಿದ್ದ ಹೋಟೆಲ್‌ ಹಾಗೂ ರೆಸಾರ್ಟ್‌ಗಳನ್ನ ತೆರವುಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿತ್ತು. ಆದರೆ ಕಾರಿಡಾರ್‌ ಹಿಡಿದು ಹಾದಿತಪ್ಪುವ ಆನೆಗಳನ್ನ ಕ್ಯಾಂಪ್‌ಗಳಲ್ಲಿ ಕೂಡುವುದು ಮಾತ್ರ ಮುಗಿಯುತ್ತಿಲ್ಲ.

ಸಕ್ರೆಬೈಲು ಆನೆಬಿಡಾರ ಆರಂಭವಾಗಿದ್ದು 1954ರಲ್ಲಿ, ಅಂದು ಆನೆಗಳನ್ನ ಪಳಗಿಸಿದರೆ ಸಾಕಷ್ಟು ಕೆಲಸಕ್ಕೆ ಉಪಯೋಗವಾಗುತ್ತಿದ್ದವು, ದಿಮ್ಮಿಗಳನ್ನ ಸಾಗಿಸಲು ಆನೆಗಳೇ ಆಸರೆಯಾಗಿದ್ದವು, ಆನೆಗಳನ್ನ ಕಂಡರೆ ಜನ ದೇವರಂತೆ ನೋಡುವ ಕಾಲ ಮರೆಯಾಯ್ತು, ಅರಣ್ಯ ಕ್ಷೀಣಿಸುತ್ತಾ, ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಗುಂಪು ಕಟ್ಟಿಕೊಂಡು ತಿರುಗುವ ಆನೆಗಳಲ್ಲಿ ಕೆಲವು ಕಾರಿಡಾರ್‌ ನಲ್ಲಿ ಸಂಚರಿಸಿ ಹೊರ ಬರುತ್ತಿವೆ, ಅವುಗಳನ್ನ ಕಾಡಿಗೆ ಅಟ್ಟಿದರೂ ವಿರಳ ಅರಣ್ಯದಾಚೀಚೆ ರೈತರ ಜಮೀನಿಗೆ ಲಗ್ಗೆ ಇಡುತ್ತಲೇ ಇರುತ್ತವೆ, ಹಾಗಾಗಿ ಮೇಲಧಿಕಾರಿಗಳ ನಿರ್ದೇಶನ ಹಾಗೂ ರಾಜಕಾರಣಿಗಳ ಕಾಟಕ್ಕೆ ಅವುಗಳು ಕ್ಯಾಂಪ್‌ ಸೇರುತ್ತವೆ.

ಹೀಗೆ ಸೇರಿದ ಆನೆಗಳು ಮುಂದೆ ನರಕ ಅನುಭವಿಸುತ್ತವೆ. ಶಿವಮೊಗ್ಗ ವ್ಯಾಪ್ತಿಯ ಆನೆಗಳನ್ನ ತಂದು ಕ್ರಾಲ್‌ನಲ್ಲಿ ಇಡುವುದಾದರೆ ಸರಿ ಆದರೆ, ಭದ್ರಾ ತರಹದ ಗೋಂಡಾರಣ್ಯದ ಆಸುಪಾಸಿನಲ್ಲಿ ಸುಳಿದಾಡುವ ಆನೆಗಳನ್ನೆಲ್ಲಾ ತಂದು ತುಂಬಿಸುವುದು ಸರಿಯಲ್ಲ ಎಂಬುದನ್ನ ಸ್ವತಃ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪಸಂರಕ್ಷಣಾಧಿಕಾರಿ ನಾಗರಾಜ್‌ ಒಪ್ಪಿಕೊಳ್ಳುತ್ತಾರೆ. ರಾಜ್ಯಾದ್ಯಂತ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡಿ ಅಪಾರ ಅನುಭವವಿರುವ ನಾಗರಾಜ್‌, ಮೇಲಧಿಕಾರಿಗಳ ಜೊತೆ ಚರ್ಚಿಸಿ ಜೋಗಿಮಟ್ಟಿಯಲ್ಲಿ ಸೆರೆಸಿಕ್ಕ ಆನೆಯನ್ನ ಸಂರಕ್ಷಿತ ಅರಣ್ಯಕ್ಕೆ ಪುನಃ ಬಿಡುವ ಯೋಚನೆಯಲ್ಲೂ ಇದ್ದಾರೆ, ಆದರೆ ಕ್ಯಾಂಪ್‌ನಲ್ಲಿ ಈಗಿರುವ ಆನೆಗಳನ್ನೂ ಕಡಿಮೆಗೊಳಿಸುವ ಕೆಲಸವೂ ಆಗಬೇಕಿದೆ.

Tags: Bhadra Reserve ForestChitradurga DistrictElephantsForest DestroyForest ProtectionSakrebyle Elephant CampShimogga Districtಅರಣ್ಯ ನಾಶಅರಣ್ಯ ಸಂರಕ್ಷಣೆಆನೆಗಳುಚಿತ್ರದುರ್ಗ ಜಿಲ್ಲೆಭದ್ರಾ ಸಂರಕ್ಷಿತ ವಲಯಶಿವಮೊಗ್ಗ ಜಿಲ್ಲೆಸಕ್ರೆಬೈಲು ಆನೆ ಬಿಡಾರ
Previous Post

CAB: ಹಿಂಸಾಚಾರವೂ, ಹಠಮಾರಿ ಕೇಂದ್ರವೂ!

Next Post

ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

Related Posts

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ
ಕರ್ನಾಟಕ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

by ಪ್ರತಿಧ್ವನಿ
April 30, 2026
0

ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರುನಲ್ಲಿ ಮಳೆಯ ಪರಿಣಾಮ ಉಂಟಾದ...

Read moreDetails
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
Next Post
ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

ಟ್ವಿಟ್ಟರ್‌ನಲ್ಲಿ #ResignAmitShah ಹ್ಯಾಶ್‌ಟ್ಯಾಗ್‌ 63 ಸಾವಿರ ದಾಟುತ್ತಿದೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada