• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಾಸಕರ ಅನರ್ಹತೆ: ಐತಿಹಾಸಿಕ ತೀರ್ಪಿನ ಕುತೂಹಲ

by
October 25, 2019
in ಕರ್ನಾಟಕ
0
ಶಾಸಕರ ಅನರ್ಹತೆ: ಐತಿಹಾಸಿಕ ತೀರ್ಪಿನ ಕುತೂಹಲ
Share on WhatsAppShare on FacebookShare on Telegram

ರಾಜ್ಯ ವಿಧಾನಸಭೆಯ 17 ಶಾಸಕರ ಅನರ್ಹತೆ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಅನರ್ಹಗೊಂಡಿರುವ 17 ಶಾಸಕರ ಪೈಕಿ 15 ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ನ. 11ರಂದು ಅಧಿಸೂಚನೆ ಹೊರಬೀಳಲಿದ್ದು, ಅದಕ್ಕೆ ಮುನ್ನ ತೀರ್ಪು ಹೊರಬೀಳಲಿದೆ. ಸುಪ್ರಿಂ ಕೋರ್ಟ್ ತೀರ್ಪು ಏನೇ ಇರಲಿ, ಅದು ಐತಿಹಾಸಿಕವಾಗಿರುವುದಂತೂ ಖಂಡಿತ. ಏಕೆಂದರೆ, ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ಹಲವು ಪ್ರಥಮಗಳನ್ನು ಹುಟ್ಟುಹಾಕಿದ್ದು, ಇವೆಲ್ಲಕ್ಕೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉತ್ತರ ನೀಡಲಿದೆ. ಮೇಲಾಗಿ ಸ್ಪೀಕರ್ ಅವರ ವಿವೇಚನಾಧಿಕಾರದ ಪರಿಮಿತಿ ಎಷ್ಟು ಎಂಬ ಬಗ್ಗೆಯೂ ನಿರ್ಧಾರವಾಗಲಿದೆ. ಹೀಗಾಗಿ ಸುಪ್ರೀಂ ತೀರ್ಪಿನ ಬಗ್ಗೆ ಕರ್ನಾಟಕ ಮಾತ್ರವಲ್ಲ, ದೇಶದ ಕಾನೂನು ತಜ್ಞರು ಕೂಡ ಎದುರು ನೋಡುತ್ತಿದ್ದಾರೆ.

ADVERTISEMENT

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ (2008-13) ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯ ಅವರು 16 ಶಾಸಕರನ್ನು ಅನರ್ಹಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು ಹೊರತುಪಡಿಸಿ ಅನರ್ಹತೆ ಪ್ರಕರಣಗಳಲ್ಲಿ ಸ್ಪೀಕರ್ ಆದೇಶಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸ್ಪೀಕರ್ ಆದೇಶ ರದ್ದುಗೊಳಿಸಿದ ಉದಾಹರಣೆಗಳು ತೀರಾ ಕಡಿಮೆ. ಹೀಗಾಗಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯಲ್ಲಿ ತನ್ನ ನಿಲುವು ತೆಗೆದುಕೊಳ್ಳುತ್ತದೆ ಎಂಬ ಕುತೂಹಲವೂ ತೀರ್ಪಿನ ಬಗ್ಗೆ ಹೆಚ್ಚು ಆಸಕ್ತಿ ಮೂಡಲು ಕಾರಣವಾಗಿದೆ.

ಶಾಸಕರ ಅನರ್ಹತೆ ವಿಚಾರ, ಸ್ಪೀಕರ್ ಅವರ ವಿವೇಚಾನಾಧಿಕಾರ ಮತ್ತು ಪರಮಾಧಿಕಾರಕ್ಕೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತಾದ ಪ್ರಕರಣಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಮುಂದಿದೆ. ಅದು ಇತ್ಯರ್ಥವಾಗದೆ ಸ್ಪೀಕರ್ ಕೈಗೊಂಡ ನಿಲುವಿನ ಬಗ್ಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಪ್ರಶ್ನೆಗೆ ತೀರ್ಪಿನಲ್ಲಿ ಉತ್ತರ ಸಿಗಲಿದೆ. ಹೀಗಾಗಿ ಈ ತೀರ್ಪು ಸ್ಪೀಕರ್ ಆದೇಶವನ್ನು ಎತ್ತಿಹಿಡಿಯಲಿ ಇಲ್ಲವೇ ಆದೇಶ ರದ್ದುಗೊಳಿಸುವ ಅಥವಾ ಭಾಗಷಃ ಸರಿ ಎನ್ನುವಂತೆ ಬರಲಿ, ಅದು ಐತಿಹಾಸಿಕ ತೀರ್ಪು ಆಗಿರುತ್ತದೆ.

ಉತ್ತರ ಸಿಗುವ ಪ್ರಶ್ನೆಗಳು

ಹದಿನೇಳು ಶಾಸಕರ ಅನರ್ಹತೆ ಕುರಿತು ಆದೇಶ ಹೊರಡಿಸಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಅವರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹ ಎಂದು ಘೋಷಿಸಿದ್ದರು. ಇದುವರೆಗೆ ಯಾವುದೇ ಸ್ಪೀಕರ್ ಈ ರೀತಿ ಅನರ್ಹತೆಗೆ ಸಮಯ ನಿಗದಿ ಮಾಡಿರಲಿಲ್ಲ. ಈ ಅಂಶವನ್ನೇ ಅನರ್ಹ ಶಾಸಕರ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಪ್ರಬಲವಾಗಿ ಆಕ್ಷೇಪಿಸಿದ್ದಾರೆ. ನಿಯಮಾನುಸಾರ ಸ್ಪೀಕರ್ ಅವರಿಗೆ ಅನರ್ಹಗೊಳಿಸಲು ಮಾತ್ರ ಅಧಿಕಾರವಿದೆಯೇ ಹೊರತು ಸಮಯ ನಿಗದಿಪಡಿಸಲು ನಿಯಾವಳಿಯಲ್ಲಿ ಅವಕಾಶವಿಲ್ಲ ಎಂದು ವಕೀಲರು ಹೇಳುತ್ತಾರೆ. ಇದಕ್ಕೆ ಪೂರಕವಾದ ಅಭಿಪ್ರಾಯವನ್ನು ಚುನಾವಣಾ ಆಯೋಗದ ಪರ ವಕೀಲರೂ ವ್ಯಕ್ತಪಡಿಸಿದ್ದಾರೆ. ಅನರ್ಹಗೊಂಡ ಶಾಸಕರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ. ಸ್ಪೀಕರ್ ಅವರೂ ಈ ರೀತಿಯ ಆದೇಶಗಳನ್ನು ಹೊರಡಿಸುವಂತಿಲ್ಲ ಎಂದು ಹೇಳಿದ್ದರು. ಹೀಗಾಗಿ ಶಾಸಕರನ್ನು ಅನರ್ಹಗೊಳಿಸುವಾಗ ಸ್ಪೀಕರ್ ಅವರು ಇಂತಿಷ್ಟು ಅವಧಿಗೆ ಎಂದು ಸಮಯ ನಿಗದಿಪಡಿಸಬಹುದೇ? ಮುಂತಾದ ಹಲವು ಪ್ರಶ್ನೆಗಳಿಗೆ ಸುಪ್ರೀಂ ತೀರ್ಪಿನಲ್ಲಿ ಉತ್ತರ ಸಿಗಲಿದೆ.

1. ಅನರ್ಹಗೊಂಡಿರುವ 17 ಶಾಸಕರ ಪೈಕಿ 14 ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ವಿರುದ್ಧ ಅನರ್ಹತೆ ದೂರು ದಾಖಲಾಗಿತ್ತು. ಇನ್ನು ಅನಾರೋಗ್ಯದ ಕಾರಣ ನೀಡಿ ಸದನಕ್ಕೆ ಗೈರು ಹಾಜರಾಗಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ವಿಚಾರಣೆಗೊಳಪಡಿಸದೆ, ಅವರಿಂದ ಆಕ್ಷೇಪಣೆಗಳನ್ನು ಪಡೆಯದೆ ಅನರ್ಹಗೊಳಿಸಲಾಗಿತ್ತು. ಅಲ್ಲದೆ, ಇನ್ನಿಬ್ಬರು ಶಾಸಕರನ್ನು ಹಿಂದೆ ಯಾವತ್ತೋ ನೀಡಿದ್ದ ಅನರ್ಹತೆ ದೂರನ್ನು ತಿಂಗಳುಗಳ ಕಾಲ ಮೂಲೆಯಲ್ಲಿಟ್ಟು ಬಳಿಕ ಏಕಾಏಕಿ ಆ ದೂರು ಆಧರಿಸಿ ಅನರ್ಹಗೊಳಿಸಲಾಗಿದೆ. ಇಲ್ಲಿ ರಾಜೀನಾಮೆ ನೀಡಿದ ಬಳಿಕ ಅನರ್ಹತೆ ದೂರು ದಾಖಲಾದರೆ ರಾಜೀನಾಮೆ ಮತ್ತು ಅನರ್ಹತೆ ದೂರುಗಳ ಪೈಕಿ ಯಾವುದನ್ನು ಮೊದಲು ಪರಿಗಣಿಸಬೇಕು ಎಂಬುದು ಪ್ರಶ್ನೆಯಾಗಿದೆ. ನಿಯಮದ ಪ್ರಕಾರ ಮೊದಲು ಬಂದಿದ್ದನ್ನು ಮೊದಲು ಇತ್ಯರ್ಥಗೊಳಿಸಬೇಕು. ಹೀಗಿರುವಾಗ ಶಾಸಕರ ರಾಜೀನಾಮೆ ತಮ್ಮ ಬಳಿ ಇದ್ದರೂ ಅದನ್ನು ಪರಿಗಣಿಸದೆ ಸ್ಪೀಕರ್ ಅವರು ನಂತರ ಬಂದ ಅನರ್ಹತೆ ದೂರು ಆಧರಿಸಿ ಶಾಸಕರನ್ನು ಅನರ್ಹಗೊಳಿಸಿದ್ದು ಸರಿಯೇ? ಶ್ರೀಮಂತ ಪಾಟೀಲ್ ಅವರನ್ನು ವಿಚಾರಣೆ ಮಾಡದೆ ಅನರ್ಹಗೊಳಿಸಲು ಸಾಧ್ಯವೇ? ಹಿಂದೆ ಯಾವತ್ತೋ ನೀಡಿರುವ ದೂರನ್ನು ಪರಿಗಣಿಸಲು ಸ್ಪೀಕರ್ ಅವರಿಗೆ ಅವಕಾಶವಿದೆಯೇ? ತಮ್ಮ ಬಳಿ ಬಂದ ರಾಜೀನಾಮೆ ಅಥವಾ ಅನರ್ಹತೆ ದೂರನ್ನು ಇತ್ಯರ್ಥಪಡಿಸಲು ಸ್ಪೀಕರ್ ಅವರಿಗೆ ಕಾಲಮಿತಿ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೂ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉತ್ತರ ಸಿಗಬೇಕಾಗುತ್ತದೆ.

2. ಶಾಸಕರು ವಿಪ್ ಉಲ್ಲಂಘಿಸಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಆದೇಶದಲ್ಲಿ ಹೇಳಲಾಗಿದೆ. ಶಾಸಕರು ರಾಜೀನಾಮೆ ನೀಡಿದ ಬಳಿಕ ಅವರಿಗೆ ವಿಪ್ ಅನ್ವಯವಾಗುತ್ತದೆಯೇ? ಅಲ್ಲದೆ, ತಮಗೆ ವಿಪ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ರಾಜೀನಾಮೆ ನೀಡಿದ್ದ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ಶಾಸಕರನ್ನು ಸದನಕ್ಕೆ ಬರುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಹೀಗಿರುವಾಗ ವಿಪ್ ಉಲ್ಲಂಘನೆ ಆಧಾರದ ಮೇಲೆ ಶಾಸಕರನ್ನು ಅನರ್ಹಗೊಳಿಸಿದ್ದು ಕೋರ್ಟ್ ತೀರ್ಪಿನ ಉಲ್ಲಂಘನೆಯಲ್ಲವೇ? ಎಂಬ ಪ್ರಶ್ನೆಗಳು ತೀರ್ಪಿನಿಂದ ಬಗೆಹರಿಯಲಿವೆ.

3. ಶಾಸಕರು ಅನರ್ಹಗೊಂಡು ಪ್ರಕರಣ ಸುಪ್ರೀಂ ಕೋರ್ಟ್ ಏರಿದ ಬಳಿಕ ಸ್ಪೀಕರ್ ಪರ ವಕೀಲರು ಬದಲಾಗಿದ್ದಾರೆ. ವಕೀಲರ ಜತೆಗೆ ಅವರ ನಿಲುವು ಕೂಡ ಬದಲಾಗಿದೆ. ಈ ಹಿಂದೆ ಅನರ್ಹತೆಯನ್ನು ಬಲವಾಗಿ ಸಮರ್ಥಿಸಿ ಸ್ಪೀಕರ್ ಅವರ ವಿವೇಚನಾಧಿಕಾರ, ಪರಮಾಧಿಕಾರದ ಬಗ್ಗೆ ವಕೀಲರು ಪ್ರಸ್ತಾಪಿಸಿದ್ದರು. ಆದರೆ, ಸರ್ಕಾರ ಬದಲಾಗಿ ಬೇರೆಯವರು ಸ್ಪೀಕರ್ ಸ್ಥಾನದಲ್ಲಿ ಕುಳಿತ ಮೇಲೆ ಸ್ಪೀಕರ್ ಪರ ವಕೀಲರ ವಾದ ಸರಣಿಯೂ ಬದಲಾಗಿದೆ. ಅನರ್ಹತೆ ಪ್ರಕರಣವನ್ನು ವಾಪಸ್ ಕಳುಹಿಸಿದಲ್ಲಿ ರಾಜೀನಾಮೆ ಮತ್ತು ಅನರ್ಹತೆ ದೂರುಗಳನ್ನು ಆಧರಿಸಿ ತೀರ್ಪು ಮರುಪರಿಶೀಲಿಸುವುದಾಗಿ ಸ್ಪೀಕರ್ ಪರ ವಕೀಲರು ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದಾರೆ. ಸ್ಪೀಕರ್ ಕಚೇರಿ ಈ ರೀತಿ ನಿಲುವು ಬದಲಿಸಲು ಸಾಧ್ಯವೇ? ಎಂಬುದು ಕೂಡ ತೀರ್ಪಿನಿಂದ ಇತ್ಯರ್ಥಗೊಳ್ಳುತ್ತದೆ.

ಚುನಾವಣಾ ಆಯೋಗದ ವಾದ ಅನರ್ಹರಿಗೆ ವರವೇ?

ಈ ಮಧ್ಯೆ ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಎಂಬ ನಿರ್ಬಧ ಹೇರುವಂತಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲು ನಮ್ಮ ಆಕ್ಷೇಪಣೆ ಇಲ್ಲ ಎಂಬ ಚುನಾವಣಾ ಆಯೋಗದ ವಾದ ಅನರ್ಹ ಶಾಸಕರಿಗೆ ವರವಾಗುವುದೇ ಎಂಬ ಅನುಮಾನ ಉಂಟುಮಾಡಿದೆ. ಅನರ್ಹರನ್ನು ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದಾದರೆ ಸ್ಪೀಕರ್ ಅವರು 17 ಶಾಸಕರನ್ನು 15ನೇ ವಿಧಾನಸಭೆ ಅವಧಿಗೆ ಅನರ್ಹಗೊಳಿಸಿದ ಆದೇಶವೇ ಅಸಿಂಧುವಾಗುತ್ತದೆ. ಹೀಗಾಗಿ ಆಯೋಗದ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದರೆ ಸ್ಪೀಕರ್ ಅವರ ಅನರ್ಹತೆ ಆದೇಶವನ್ನು ಎತ್ತಿಹಿಡಿದರೂ ಸಮಯ ನಿಗದಿಪಡಿಸಿದ್ದು ರದ್ದಾಗುತ್ತದೆ. ಅಂದರೆ, ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಹೀಗಾಗಿ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅನರ್ಹ ಶಾಸಕರ ಭವಿಷ್ಯ ನಿರ್ಧರಿಸುವುದರ ಜತೆಗೆ ಸ್ಪೀಕರ್ ಅವರ ಕಾರ್ಯವ್ಯಾಪ್ತಿಯ ಬಗ್ಗೆಯೂ ವಿಶ್ಲೇಷಣೆ ಮಾಡಲಿದೆ. ಈ ಕಾರಣಕ್ಕಾಗಿಯೇ ಕಾನೂನು ವಿಶ್ಲೇಷಕರು ತೀರ್ಪನ್ನು ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ.

Tags: Central Election CommissionCoalition GovernmentDisqualified MLAsGovernment of KarnatakaMLAs Resignationoffice of the speakerRamesh KumarSupreme Court of Indiaಅನರ್ಹ ಶಾಸಕರುಕರ್ನಾಟಕ ಸರ್ಕಾರಕೇಂದ್ರ ಚುನಾವಣಾ ಆಯೋಗರಮೇಶ್ ಕುಮಾರ್ಶಾಸಕರ ರಾಜಿನಾಮೆಸಮ್ಮಿಶ್ರ ಸರ್ಕಾರಸುಪ್ರೀಂ ಕೋರ್ಟ್ಸ್ಪೀಕರ್ ಕಚೇರಿ
Previous Post

ಒಯೋ ವಿರುದ್ದ ತಿರುಗಿ ಬಿದ್ದಿರುವ ರಾಜ್ಯದ ಹೋಟೆಲ್, ಲಾಡ್ಜ್ ಮಾಲೀಕರು

Next Post

ಕರಾವಳಿಗರನ್ನು ಬಣ್ಣ ಬಣ್ಣದ ಕನಸಿನಲ್ಲಿ ತೇಲಿಸಿ ಮುಳುಗಿಸಿದ ಮಂಗಳೂರು ತೈಲಾಗಾರ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಕರಾವಳಿಗರನ್ನು ಬಣ್ಣ ಬಣ್ಣದ ಕನಸಿನಲ್ಲಿ ತೇಲಿಸಿ ಮುಳುಗಿಸಿದ ಮಂಗಳೂರು ತೈಲಾಗಾರ

ಕರಾವಳಿಗರನ್ನು ಬಣ್ಣ ಬಣ್ಣದ ಕನಸಿನಲ್ಲಿ ತೇಲಿಸಿ ಮುಳುಗಿಸಿದ ಮಂಗಳೂರು ತೈಲಾಗಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada