• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಲಸೆ ಕಾರ್ಮಿಕರಿಗೆ ಮಾರಕವಾಗಿರುವ ಕಾರ್ಮಿಕ ಕಾನೂನು ವಿನಾಯಿತಿ

by
August 26, 2020
in ದೇಶ
0
ವಲಸೆ ಕಾರ್ಮಿಕರಿಗೆ ಮಾರಕವಾಗಿರುವ ಕಾರ್ಮಿಕ ಕಾನೂನು ವಿನಾಯಿತಿ
Share on WhatsAppShare on FacebookShare on Telegram

ವಿಶ್ವಾದ್ಯಂತ ಜನತೆಯನ್ನು ಭಯಬೀತಗೊಳಿಸಿರುವ ಕರೋನಾ ಸೋಂಕು ಭಾರತದಲ್ಲಿ ಮಾಡಿರುವ ಹಾನಿ ಕಡಿಮೆ ಪ್ರಮಾಣದ್ದೇನಲ್ಲ. ದೇಶವು ಇಂದು ಅತೀ ಹೆಚ್ಚು ಕರೋನಾ ಪ್ರಕರಣ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸೋಂಕು ಹರಡುವಿಕೆಯ ವೇಗ ತಗ್ಗಿಸಲು ಸರ್ಕಾರ ಲಾಕ್‌ ಡೌನ್‌ ಘೋಷಿಸಿತ್ತು. ಈ ಲಾಕ್‌ಡೌನ್‌ ನಿಂದಾಗಿ ಸುಮಾರು ಎರಡು ಕೋಟಿ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಲಕ್ಷಾಂತರ ಚಿಕ್ಕ ಪುಟ್ಟ ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಅದರೆ ಈ ಲಾಕ್‌ಡೌನ್‌ ನಿಂದಾಗಿ ಬೀದಿಗೆ ಬಿದ್ದಿರುವವರೆಂದರೆ ಅದು ದೇಶದ ವಲಸೆ ಕಾರ್ಮಿಕ ವರ್ಗ. ಸರ್ಕಾರ ಕಾರ್ಮಿಕರ ಹಿತ ಕಾಪಾಡಲು ಅವರಿಗೆ ಪ್ರತೀ ತಿಂಗಳೂ ಭತ್ಯೆ ಮತ್ತು ಆಹಾರ ಭದ್ರತಾ ಯೋಜನೆಯಡಿಯಲ್ಲಿ ಆಹಾರ ಒದಗಿಸುವುದಾಗಿ ಹೇಳಿತ್ತು. ಅದರೆ ದೇಶದ ಗ್ರಾಮೀಣ ಭಾಗದಲ್ಲಿರುವ ವಲಸೆ ಕಾರ್ಮಿಕರು ಈತನಕ ಸರ್ಕಾರದ ಭತ್ಯೆಯನ್ನು ಪಡೆದಿಲ್ಲ ಎಂಬ ಅರೋಪ ಕೇಳಿ ಬಂದಿದೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾರ್ಮಿಕರ ಎಲ್ಲಾ ಜೀವನೋಪಾಯಗಳನ್ನು ಕಸಿದುಕೊಳ್ಳುವ ಲಾಕ್‌ಡೌನ್‌ ನಿರ್ಧಾರದಿಂದ, ಉಂಟಾಗುವ ಸಂಕಟಗಳನ್ನು ತಗ್ಗಿಸಲು ಸರ್ಕಾರಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಮತ್ತು ಜಯಂತಿ ಘೋಷ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಲಾಕ್‌ಡೌನ್‌ ಅವಧಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 7,000 ರೂ.ಗಳ ನಗದು ವರ್ಗಾವಣೆ ಮಾಡಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕಿದೆ ಎನ್ನುತ್ತಾರೆ.

ದೇಶದ ಲಕ್ಷಾಂತರ ವಲಸೆ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದು ಇಂದು ಅತಂತ್ರವಾಗಿದ್ದಾರೆ. ವಲಸೆ ಕಾರ್ಮಿಕರನ್ನು ನೋಂದಾವಣೆಯನ್ನು ಕಡ್ಡಾಯಗೊಳಿಸುವ ಕಾನೂನುಗಳು ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿಲ್ಲ. ವಲಸೆ ಕಾರ್ಮಿಕರ ಸೇವೆಯ ಪರಿಸ್ಥಿತಿಗಳನ್ನು ನಿಯಂತ್ರಿಸುವುದು ಮತ್ತು ಹಿತ ಕಾಪಾಡುವುದು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ 1979 ರ ಉದ್ದೇಶಿತ ಉದ್ದೇಶವಾಗಿದೆ. ಇದು ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ಎಲ್ಲಾ ಉದ್ಯೋಗದಾತರು ತಮ್ಮ ಕಾರ್ಮಿಕರ ದಾಖಲೆಯನ್ನು ಕಾಯ್ದುಕೊಳ್ಳುವ ಅಗತ್ಯವಿರುತ್ತದೆ. ಆದಾಗ್ಯೂ, ಇದು ಬಹುಪಾಲು ಸ್ವಯಂ ಉದ್ಯೋಗಿ ಕೂಲಿ ಕಾರ್ಮಿಕರನ್ನು ಮತ್ತು ಆರ್ಥಿಕತೆಯಲ್ಲಿ ಅಂತರ್-ರಾಜ್ಯ ಕೃಷಿ ಮತ್ತು ಇತರ ವಲಸಿಗರನ್ನು ಹೊರತುಪಡಿಸಿದೆ.

ಇದಲ್ಲದೆ, ಕಾರ್ಮಿಕ ಪರವಾದ ಯಾವುದೇ ಶಾಸನವನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆಯಲ್ಲಿ ಇಂದಿಗೂ ಇಚ್ಚಾ ಶಕ್ತಿ ಉಳ್ಳ ರಾಜಕಾರಣಿಗಳ ಸಂಖ್ಯೆ ಬಹಳ ಕಡಿಮೆ. ದೇಶದ ಬಹುತೇಕ ರಾಜ್ಯಗಳಲ್ಲಿ, ಒಬ್ಬ ಉದ್ಯೋಗದಾತ ಅಥವಾ ಗುತ್ತಿಗೆದಾರನನ್ನು ಈ ಕಾಯಿದೆಯಡಿ ನೋಂದಾಯಿಸಲಾಗಿಲ್ಲ ಎಂದು 2011-12ರಲ್ಲಿ ಬಿಡುಗಡೆ ಮಾಡಲಾದ ಅಧಿಕೃತ ವರದಿಯು ಹೇಳಿದೆ. ಇಂದು ದೇಶದಲ್ಲಿ ವಲಸೆ ಕಾರ್ಮಿಕರನ್ನು ಅತಿ ಹೆಚ್ಚು ನೋಂದಣಿ ಹೊಂದಿರುವ ರಾಜ್ಯ ಬಿಹಾರವಾಗಿದ್ದು, ಇದು ಅತಿ ಹೆಚ್ಚು ಗುತ್ತಿಗೆದಾರರನ್ನು ನೋಂದಾಯಿಸಿದ ರಾಜ್ಯವೂ ಕೂಡ ಆಗಿದೆ.ಲಾಕ್‌ಡೌನ್‌ನ ವಿಪತ್ತಿನ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸಬಹುದಾದ ಮತ್ತೊಂದು ಕಾನೂನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ, 1996 ಅಥವಾ BOCW. ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ಈ ಕಾಯಿದೆಯಡಿ ಉದ್ಯೋಗದಾತರು ಒದಗಿಸುವ ಸಾಮಾಜಿಕ ರಕ್ಷಣೆ ಮತ್ತು ವಸತಿ ಸೇವೆಗಳಿಗೆ ಅರ್ಹರಾಗಿರುತ್ತಾರೆ. ಕಳೆದ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿದ ಯಾವುದೇ ವ್ಯಕ್ತಿ ನಿರ್ಮಾಣ ಕೆಲಸಗಾರನಾಗಿ ನೋಂದಾಯಿಸಲು ಅರ್ಹನಾಗಿರುತ್ತಾನೆ. ಆದರೆ ಕಾರ್ಮಿಕರ ನೋಂದಣಿ ಉದ್ಯೋಗದಾತ ಅಥವಾ ಟ್ರೇಡ್ ಯೂನಿಯನ್ ಓರ್ವ ವ್ಯಕ್ತಿಯನ್ನು ನಿರ್ಮಾಣ ಕೆಲಸಗಾರ ಎಂದು ಪ್ರಮಾಣೀಕರಿಸಿದರೆ ಮಾತ್ರ ನೋಂದಾವಣೆ ಮಾಡಬಹುದಾಗಿದೆ.

ಸಿಎಜಿ ಲೆಕ್ಕಪರಿಶೋಧನಾ ವರದಿಯ ಪ್ರಕಾರ ಉತ್ತರ ಪ್ರದೇಶದ BOCW ಮಂಡಳಿಯಲ್ಲಿ ಲಭ್ಯವಿರುವ 4,246.61 ಕೋಟಿ ರೂ.ಗಳಲ್ಲಿ 282.57 ಕೋಟಿ ರೂ. ಮಾತ್ರ ಖರ್ಚು ಮಾಡಿದೆ ಎಂದು ಬೊಟ್ಟು ಮಾಡಿ ತೋರಿಸಿದೆ. ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಇಂಡಿಯಾ ಸ್ಪೆಂಡ್‌ ಎನ್‌ಜಿಓ ವಿವಿಧ ರಾಜ್ಯಗಳಲ್ಲಿ 3,196 ವಲಸೆ ಕಾರ್ಮಿಕರನ್ನು ಸಂದರ್ಶಿಸಿದಾಗ ಮತ್ತು ಸಂದರ್ಶಿಸಿದ 94% ಕ್ಕಿಂತಲೂ ಹೆಚ್ಚು ನಿರ್ಮಾಣ ಕಾರ್ಮಿಕರು BOCW ಕಾರ್ಡ್‌ಗಳನ್ನು ಹೊಂದಿಲ್ಲ ಮತ್ತು ಆದ್ದರಿಂದ ಅವರು ಕಾಯಿದೆಯ ವ್ಯಾಪ್ತಿಯಿಂದ ಹೊರಗೆಯೇ ಇದ್ದಾರೆ. ದೆಹಲಿ ಮೂಲದ ಸಾಮಾಜಿಕ ಉದ್ಯಮದ ಸಹ-ಸಂಸ್ಥಾಪಕ ಆದಿತೇಶ್ವರ ಸೇಠ್ ಇಂಡಿಯಾ ಸ್ಪೆಂಡ್‌ಗೆ ಎನ್‌ಜಿಓಗೆ ನೀಡಿದ ಮಾಹಿತಿಯ ಪ್ರಕಾರ ವಲಸೆ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳ ಜಾರಿಗೊಳಿಸುವಿಕೆಯು ದುರ್ಬಲವಾಗಿದ್ದರೂ, ಕಾರ್ಮಿಕರ ಹಕ್ಕುಗಳನ್ನು ಹೆಚ್ಚಾಗಿ ಉಲ್ಲಂಘಿಸಲು ಒಂದು ಪ್ರಮುಖ ಕಾರಣವೆಂದರೆ ಹೆಚ್ಚು ದಾಖಲೆ ರಹಿತವಾಗಿರುವುದೇ ಆಗಿದೆ. ಸಂಕೀರ್ಣ ಸ್ವ-ನೋಂದಣಿ ಪ್ರಕ್ರಿಯೆಗಳು ಕಾರ್ಮಿಕರನ್ನು ನೋಂದಾಯಿಸುವುದನ್ನು ತಡೆಯುತ್ತದೆ ಎಂದು ಅವರು ಹೇಳುತ್ತಾರೆ. ಇವುಗಳಲ್ಲಿ ದಾಖಲಾತಿಗಳು, ವಿವರವಾದ ನಮೂನೆಗಳನ್ನು ಭರ್ತಿ ಮಾಡುವುದು, ಉದ್ಯೋಗದ ಪುರಾವೆ ಮತ್ತು ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಗಳಲ್ಲಿ ನೋಂದಣಿ, ಇವೆಲ್ಲವೂ ದುರ್ಬಲ ಬಡ ಮತ್ತು ಸಾಮಾನ್ಯವಾಗಿ ಕೆಳ ಸ್ಥರದಲ್ಲಿರುವ ಕಾರ್ಮಿಕರಿಗೆ ಬಹಳ ಕಷ್ಟಕರವಾಗಿದೆ.

ಸಾಮಾನ್ಯವಾಗಿ ಉದ್ಯೋಗದಾತರು ತಾವು ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡಿ ಸರ್ಕಾರಕ್ಕೆ ಲೆಕ್ಕ ತೋರಿಸುತ್ತಾರೆ. ಇದು ಪ್ರತಿ ಉದ್ಯೋಗಿಗೆ ಸಾಮಾಜಿಕ-ಭದ್ರತೆ ಪಾವತಿಗಳಿಗೆ ನೀಡಲೇಬೇಕಾದ ಕಡ್ಡಾಯ ವೆಚ್ಚಗಳನ್ನು ಮತ್ತು ನೌಕರರ ಪ್ರಯೋಜನಗಳಿಗೆ (ಸಾರಿಗೆ ಮತ್ತು ಜೀವನ ವೆಚ್ಚಗಳಂತಹ) ವೆಚ್ಚವನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಅದೇ ಸಮಯದಲ್ಲಿ, ಕಾರ್ಖಾನೆಗಳು, ಕೈಗಾರಿಕೆಗಳು, ಒಕ್ಕೂಟೀಕರಣ ಮತ್ತು ಮುಂತಾದವುಗಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಅಡಿಯಲ್ಲಿ ನಿಗದಿಪಡಿಸಿದ ಮಿತಿಗಳಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಘಟಕಗಳಿಗೆ ಪ್ರಯೋಜನಗಳನ್ನು ಪಡೆಯಲು ಇದು ಅವರಿಗೆ ಸಹಾಯ ಮಾಡುತ್ತದೆ. ಇದರರ್ಥ ಕಾರ್ಮಿಕರು ಅಗೋಚರವಾಗಿರುತ್ತಾರೆ- ಅವರು ಯಾರೆಂದು ಸರ್ಕಾರಕ್ಕೆ ತಿಳಿದಿಲ್ಲ ಮತ್ತು ಅಂತಹ ಯೋಜನೆಗಳ ಅಡಿಯಲ್ಲಿ ಅನುಮತಿಸಲಾದ ಯಾವುದೇ ವಿಮಾ ಸೌಲಭ್ಯಗಳು, ಹೆರಿಗೆ ಸೌಲಭ್ಯಗಳು, ವಸತಿ ಮತ್ತು ಇತರ ನಿಬಂಧನೆಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ವಲಸೆ ಮತ್ತು ಕಾರ್ಮಿಕರ ಮೇಲೆ ಅವಲಂಬಿತವಾಗಿರುವ ಸಮುದಾಯಗಳಿಗಾಗಿ ಕೆಲಸ ಮಾಡುವ ಏಜೆನ್ಸಿಯ ಬ್ಯೂರೋದ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಖಂಡೇಲ್ವಾಲ್, ಈ ಅಂಕಿ ಅಂಶಗಳು ಕೇವಲ ನಗದು ವರ್ಗಾವಣೆಗೆ ಸೀಮಿತವಾಗಿಲ್ಲ. ಉದ್ಯೋಗದಾತರು ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಲು ಇದು ಅನುಕೂಲಕರವಾಗಿದೆ.

Also Read: ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ

ಗುಜರಾತ್, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದ ಸರ್ಕಾರಗಳು ಕೋವಿಡ್‌ ಲಾಕ್‌ ಡೌನ್‌ ಸಮಯದಲ್ಲಿ ಗರಿಷ್ಠ ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆ ಮತ್ತು ವಾರಕ್ಕೆ 72 ಗಂಟೆಗಳವರೆಗೆ ವಿಸ್ತರಿಸುತ್ತವೆ, ನಂತರ ಒಡಿಶಾ, ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು. ಉತ್ತರ ಪ್ರದೇಶವು ಮತ್ತಷ್ಟು ಮುಂದುವರಿದು, ರಾಜ್ಯದ ಕಾರ್ಖಾನೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಮಿಕ ಕಾನೂನುಗಳನ್ನು ಮೂರು ವರ್ಷಗಳ ಕಾಲ ಸ್ಥಗಿತಗೊಳಿಸುವ ಸುಗ್ರೀವಾಜ್ಞೆಯನ್ನು ಪ್ರಸ್ತಾಪಿಸಿತು. ಗುಜರಾತ್ ಕೂಡ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸಲು ಮುಂದಾಯಿತು. ಕಾರ್ಮಿಕರ ಆರೋಗ್ಯ, ಸುರಕ್ಷತೆ, ನ್ಯಾಯಯುತ ಸಂಭಾವನೆ ಮತ್ತು ಕಲ್ಯಾಣವನ್ನು ಖಾತ್ರಿಪಡಿಸಿಕೊಳ್ಳಲು ಉದ್ಯೋಗದಾತರಿಗೆ ಆದೇಶ ನೀಡುವ ಕಾರ್ಖಾನೆ ಕಾಯ್ದೆಯ ನಿಬಂಧನೆಗಳನ್ನು ಮಧ್ಯಪ್ರದೇಶ ದುರ್ಬಲಗೊಳಿಸಿತು ಮತ್ತು ಕರ್ನಾಟಕವು ಕೂಡ ಹಲವಾರು ಕಾರ್ಮಿಕ ಕಾನೂನುಗಳನ್ನು ಪಾಲಿಸುವುದರಿಂದ ಅನೇಕ ಸಂಸ್ಥೆಗಳನ್ನು ಮುಕ್ತಗೊಳಿಸಿತು.

Also Read: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾರ್ಮಿಕ ಹಿತರಕ್ಷಣಾ ಕಾಯ್ದೆಗಳಿಗೆ ಕತ್ತರಿ: ಸುಪ್ರೀಂ ಕೋರ್ಟ್‌ಗೆ PIL

ಮದ್ಯ ಪ್ರದೇಶ ಸರ್ಕಾರ ಘೋಷಿಸಿದ ಕಾರ್ಖಾನೆಗಳ ಕಾಯ್ದೆಯ ಕಾನೂನು ರಕ್ಷಣೆಯಿಂದ ಹೊಸ ವಿನಾಯಿತಿಗಳು ಉದ್ಯೋಗದಾತರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯಿಂದ ಉದ್ಯೋಗದಾತರನ್ನು ಮುಕ್ತಗೊಳಿಸಿದೆ. ಕಾರ್ಮಿಕರ ಸುರಕ್ಷತೆ, ಹಣ ಪಾವತಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರವು ಕೆಲವು ಕನಿಷ್ಠ ಸುರಕ್ಷತೆಗಳನ್ನು ರಕ್ಷಿಸಲು ಪ್ರಯತ್ನಿಸಿದರೆ, ಉತ್ತರ ಪ್ರದೇಶ ಸರ್ಕಾರವು ಸಂಪೂರ್ಣ ನಿರ್ಲಕ್ಷಿಸಿತು. ಉತ್ತರ ಪ್ರದೇಶ ಸರ್ಕಾರವು ಜಾರಿಗೆ ತಂದ ಕಾರ್ಮಿಕ ಕಾನೂನುಗಳ ಸುಗ್ರೀವಾಜ್ಞೆ, 2020 ರಲ್ಲಿ ಜಾರಿಯಲ್ಲಿದ್ದ ಬಹುತೇಕ ಎಲ್ಲ ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿತು.

ಈ ಎಲ್ಲ ಕಾರಣಗಳಿಂದ ಇಂದು ವಲಸೆ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಕೇಂದ್ರ ರಾಜ್ಯ ಸರ್ಕಾರಗಳು ಎಚ್ಚತ್ತುಕೊಂಡು ವಲಸೆ ಕಾರ್ಮಿಕರ ಹಿತ ಕಾಪಾಡುವ ಕೆಲಸ ಮಾಡಬೇಕಿದೆ.

Tags: ವಲಸೆ ಕಾರ್ಮಿಕರು
Previous Post

2019-20ರಲ್ಲಿ ರೂ. 2000 ಮೌಲ್ಯದ ನೋಟುಗಳು ಮುದ್ರಣವಾಗಲೇ ಇಲ್ಲ

Next Post

ಸಮಸ್ಯೆ ಬಗೆಹರಿಸುವ ಬದಲು ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಸಮಸ್ಯೆ ಬಗೆಹರಿಸುವ ಬದಲು ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

ಸಮಸ್ಯೆ ಬಗೆಹರಿಸುವ ಬದಲು ಸೃಷ್ಟಿಸಿದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada