• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!

by
May 17, 2020
in ದೇಶ
0
ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!
Share on WhatsAppShare on FacebookShare on Telegram

ಯಾಕೂಬ್ ಮತ್ತು ಅಮೃತ್. ಒಬ್ಬ ಹಿಂದೂ ಮತ್ತೊಬ್ಬ ಮುಸ್ಲಿಂ. ಈ ಇಬ್ಬರು ಯುವಕರ ಕುರಿತು ಈಗ ಇಡೀ ದೇಶವೇ ಮಾತನಾಡುತ್ತಿದೆ. ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರು ಪಡುತ್ತಿರುವ ಬವಣೆ ದೇಶದ ಪ್ರಭುತ್ವದ ಆತ್ಮ ಸಾಕ್ಷಿಯನ್ನು ಕೆಣಕಿದೆ. ಲಕ್ಷಾಂತರ ಕಾರ್ಮಿಕರು ಈ ಲಾಕ್ ಡೌನ್ ಸಹಿಸಿಕೊಂಡು ಬೀದಿಯಲ್ಲಿ ಕಣ್ಣೀರಾಗಿದ್ದನ್ನು ನಾವು ಕಂಡಿದ್ದೇವೆ. ಈ ಎಲ್ಲದರ ಮಧ್ಯೆ ಇದೊಂದು ಸುದ್ದಿ ಈಗ ದೇಶ ಮತ್ತೆ ಕಣ್ಣೀರಾಗುವಂತೆ ಮಾಡಿದೆ.

ADVERTISEMENT

ಯಾಕೂಬ್, ಅಮೃತ್ ಸೇರಿದಂತೆ ಒಟ್ಟು 70 ಜನ ತಲಾ 4 ಸಾವಿರ ರೂಪಾಯಿ ಕೊಟ್ಟು ಒಂದು ಟ್ರಕ್ ನಲ್ಲಿ ತಮ್ಮ ಊರಿಗೆ ಹೊರಟಿದ್ದರು. ಹೀಗಿರುವಾಗ ದಾರಿ ಮಧ್ಯೆ ಅಮೃತ್ ವಾಂತಿ ಮಾಡೋದಕ್ಕೆ ಶುರುವಿಟ್ಟುಕೊಂಡಿದ್ದಾನೆ. ತಕ್ಷಣ ಇದು ಜತೆಗಿದ್ದ ಇತರರಲ್ಲಿ ಆತಂಕ ಸೃಷ್ಟಿಮಾಡಿದೆ. ಇದು ಕರೋನಾ ಇರಬಹುದು ಎಂದು ಹೇಳಿದ್ದಾರೆ‌. ಅಲ್ಲದೆ ಅಮೃತ್ ನನ್ನು ಇಲ್ಲಿಯೇ ಅರ್ಧ ದಾರಿಗೆ ಬಿಟ್ಟುಬಿಡುವ ನಿರ್ಧಾರಕ್ಕೆ ಬಂದರು. ಅಂತೆಯೇ ಅಮೃತ್ ನನ್ನು ರಸ್ತೆ ಬದಿಯಲ್ಲಿ ಕೂರಿಸಿ ಪ್ರಯಾಣ ಮುಂದುವರೆಸಲು ಮುಂದಾದರು. ಈ ವೇಳೆ ಜೀವದ ಗೆಳಯನನ್ನು ಅರ್ಧ ದಾರಿಯಲ್ಲಿ ಬಿಡಲು ಒಪ್ಪದ ಯಾಕೂಬ್ ಅಭ್ಯಂತರ ತೋರಿದ್ದಾನೆ. ಶತಾಯಗತಾಯ ಅಮೃತ್ ನನ್ನು ಜತೆ ಕರೆದುಕೊಳ್ಳಲು ಒಪ್ಪದ‌ ಕಾರಣ ಯಾಕೂಬ್ ಕೂಡ‌ ಅಮೃತ್ ಜತೆ ಟ್ರಕ್ ನಿಂದ ಇಳಿದು ಬಿಡುತ್ತಾನೆ.

Also Read: ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರನ್ನ ತಡೆದು ನಿಲ್ಲಿಸಲು ʼನ್ಯಾಯಾಲಯʼಕ್ಕೂ ಅಸಾಧ್ಯ!

ಅಮೃತ್, ನಿರಂತರವಾಗಿ ವಾಂತಿ ಮಾಡುತ್ತಾ ಸುಸ್ತಾಗಿ ಹೋಗಿದ್ದ. ಆಯಾಸಹೊಂದಿದ ಅಮೃತ್ ನನ್ನು ತನ್ನ ಮಡಿಲಲ್ಲಿ ಕೂರಿಸಿ ದಾರಿಹೋಕರಿಗೆ ಕೈ ಮುಗಿದ ಯಾಕೂಬ್ ಸಹಾಯಕ್ಕಾಗಿ ಅಂಗಲಾಚಿದ. ಆದರೆ ಇದು ಕರೋನಾ ಇರಬಹುದು. ನಮಗೆ ಯಾಕೆ ಇಂಥಾ ಊಸಾಬರಿ ಅಂತೇಳಿ ಸಹಾಯ ಹಸ್ತ ಚಾಚದೆ ಮುಂದಕ್ಕೆ ನಡೆದಿದ್ದಾರೆ. ಹೀಗೆ ಸಹಾಯ ಸಿಗದೆ ಅಸಾಹಯಕನಾಗಿ ತನ್ನ ಮಡಿಲಲ್ಲಿ ಅಮೃತ್ ನನ್ನು ಮಲಗಿಸಿಕೊಂಡಿರುವಾಗಲೇ ಅಮೃತ್ ಕೊನೆಯುಸಿರೆಳೆದಿದ್ದಾನೆ.

ಆ ಬಳಿಕ ವೈಧ್ಯರ ತಂಡವೊಂದು ಬಂದು ಇಬ್ಬರನ್ನೂ ಆಸ್ಪತ್ರೆ ಸೇರಿಸಿದ್ದಾರೆ. ಅಲ್ಲದೇ ಭೋಪಾಲ್ ನ ಶಿವಪುರಿ‌ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಅಮೃತ್ ಗೆ ಹಾಗೂ ಯಾಕೂಬ್ ನಿಗೆ ಕರೋನಾ ಟೆಸ್ಟ್ ನಡೆಸಿದ್ದಾರೆ. ಟೆಸ್ಟ್ ನ ವರದಿ ಬಂದ ಬಳಿಕ ಅಮೃತ್ ಶವಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.

Also Read: ಲಾಕ್‌ಡೌನ್:‌ 900 ಕಿ.ಮೀ‌ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ

ಅಂದಹಾಗೆ, ಅಮೃತ್ ಮತ್ತು ಯಾಕೂಬ್ ಗುಜರಾತಿನ ಸೂರತ್ ನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದರು. ದುರಾದೃಷ್ಟವಶಾತ್, ಅಮೃತ್ ಊರ ಸೇರಲಾಗದೆ ತನ್ನ ಗೆಳೆಯ‌ ಯಾಕೂಬ್ ಮಡಿಲಲ್ಲಿ ಅಸುನೀಗಿದ್ದಾನೆ.

Also Read: UPಯಲ್ಲಿ ಟ್ರಕ್ ಅಪಘಾತಕ್ಕೆ 23 ವಲಸೆ ಕಾರ್ಮಿಕರು ಬಲಿ

ಕರೋನಾ ಎಂಬ ಮಹಾಮಾರಿ ಕಣ್ಣೆದುರು ಬಂದು ನಿಲ್ಲುವಾಗಲೂ ಯಾಕೂಬ್ ಜೀವದ ಗೆಳಯನ ಜತೆಗೆ ಜೀವದ ಹಂಗು ತೊರೆದು ನಿಂತಿದ್ದಾನೆ. ಮಾನವೀಯ ಮೌಲ್ಯ ಸತ್ತು ಮಣ್ಣಾಗುವ ಈ ಹೊತ್ತಲಿ‌ ಯಾಕೂಬ್ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾನೆ. ಸದ್ಯ ಯಾಕೂಬ್ ನನ್ನು ಕ್ವಾರಂಟೈನ್ ನಲ್ಲಿ‌ ಇಡಲಾಗಿದೆ.

Tags: ಅಮೃತ್ ಮತ್ತು ಯಾಕೂಬ್ಉತ್ತರಪ್ರದೇಶಪ್ರಜಾಪ್ರಭುತ್ವ
Previous Post

ರಾಹುಲ್‌ ಗಾಂಧಿ ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೇನು?

Next Post

ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

ಲಾಕ್‌ಡೌನ್ 4.0: ಕೇಂದ್ರ ಸರ್ಕಾರ ನೀಡಿರುವ ಸಡಿಲಿಕೆಗಳೇನು?

Please login to join discussion

Recent News

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada