• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

by
November 15, 2019
in ದೇಶ
0
ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!
Share on WhatsAppShare on FacebookShare on Telegram

ಭಾರತದಲ್ಲಿ ಅಧಿಕಾರದಲ್ಲಿರುವವರ ಹಿತಾಸಕ್ತಿಗಾಗಿಯೇ ಜಗತ್ತಿನಲ್ಲಿ ನೂರಾರು ನಕಲಿ ಜಾಲತಾಣಗಳು ಸೃಷ್ಟಿಯಾಗಿವೆಯಂತೆ!ಹೌದು ಇದನ್ನು ನಂಬಲೇಬೇಕು. ಅಧಿಕಾರ ಹಿಡಿಯುವವರು ಭಾರತದಲ್ಲಿಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದುದನ್ನು ಬರೆಸಿಕೊಂಡು ಹಿಂಬಾಗಿಲ ಮೂಲಕ ಹೇಗೆ ಜನಪ್ರಿಯತೆಯನ್ನು ಗಳಿಸಲು ಹೇಗೆ ಹಾತೊರೆಯುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.

ADVERTISEMENT

ಅಂದಹಾಗೆ ಜಗತ್ತಿನಾದ್ಯಂತ ಭಾರತದ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲೆಂದೇ ಬರೋಬ್ಬರಿ 265 ನಕಲಿ ನ್ಯೂಸ್ ಮಾಧ್ಯಮ ತಾಣಗಳು ಕಾರ್ಯನಿರತವಾಗಿವೆ. ಈ ಮಾಧ್ಯಮ ಜಾಲತಾಣಗಳು ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಹಿತಾಸಕ್ತಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತಿವೆ. ಇದನ್ನು ಭಾರತದಲ್ಲಿಯೇ ಕುಳಿತು ಮ್ಯಾನೇಜ್ ಮಾಡಲಾಗುತ್ತಿದೆ. ಹೀಗೆ ವಿಶ್ವದ 65 ದೇಶಗಳಲ್ಲಿ ಈ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ಪತ್ತೆಯಾಗಿರುವ ಕರ್ಮಕಾಂಡವನ್ನು ಬ್ರುಸೆಲ್ಸ್ ಮೂಲದ ಇಯು ಡಿಸ್ಇನ್ಫೋ ಲ್ಯಾಬ್ ಎಂಬ ಸಂಸ್ಥೆ ಬಯಲು ಮಾಡಿದೆ.

ಮೂಲಗಳ ಪ್ರಕಾರ ಬಹುತೇಕ ಈ ಎಲ್ಲಾ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ದೆಹಲಿ ಕೇಂದ್ರಿತ ಮಾಧ್ಯಮ ಸಂಸ್ಥೆಯೊಂದರ ಮೂಗಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ನಕಲಿ ನ್ಯೂಸ್ ಹೌಸ್ ಗಳ ಕರ್ಮಕಾಂಡದ ಜಾಡನ್ನು ಹಿಡಿದು ತನಿಖೆ ನಡೆಸಲು ಹೊರಟ ಡಿಸ್ಇನ್ಫೋ ಲ್ಯಾಬ್ ನ ತಂಡಕ್ಕೆ ಒಂದೊಂದೇ ಕರಾಳ ಮುಖಗಳು ಕಾಣಿಸಿಕೊಳ್ಳತೊಡಗಿದವು.

ಈ ನಕಲಿ ನ್ಯೂಸ್ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯ ಪುಂಜಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದಾಗ ಅವುಗಳ ಹಿಂದಿನ ದುರುದ್ದೇಶ ಬಯಲಾಗತೊಡಗಿದೆ. ಅಂದರೆ ಈ ಜಾಲತಾಣಗಳು ಭಾರತ ಸರ್ಕಾರದ ಪರವಾಗಿ ಯೂರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರುವಂತಹ ಮತ್ತು ಅಭಿಪ್ರಾಯವನ್ನು ಮೂಡಿಸುವಂತಹ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿದ್ದವು. ಇಷ್ಟೇ ಅಲ್ಲದೇ ನಮ್ಮ ದೇಶದಲ್ಲಿರುವ ಕೆಲವು ಸರ್ಕಾರದ ಮುಖವಾಣಿಯಂತಿರುವ ಮಾಧ್ಯಮ ಸಂಸ್ಥೆಗಳ ರೀತಿಯಲ್ಲಿ ಪಾಕಿಸ್ತಾನವನ್ನು ಟೀಕಿಸುವ ರೀತಿಯಲ್ಲಿನ ಲೇಖನಗಳು, ಟಿಪ್ಪಣಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದವು. ಈ ಮೂಲಕ ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಯೂನಿಯನ್ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದವು ಎಂದು ಸಂಸ್ಥೆ ಹೇಳಿದೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಬಿತ್ತರ ಮಾಡುತ್ತಿದ್ದ ಈ ಜಾಲತಾಣಗಳನ್ನು ಭಾರತದ ಸುದ್ದಿ ಮಾಧ್ಯಮವೊಂದು ಹಿಡಿತದಲ್ಲಿಟ್ಟುಕೊಂಡಿದೆ. ಇತ್ತೀಚಿಗೆ ಯೂರೋಪಿಯನ್ ಸಂಸದರನ್ನು ಕಾಶ್ಮೀರಕ್ಕೆ ಆಹ್ವಾನಿಸಲಾಗಿತ್ತು. ಈ ಭೇಟಿಯನ್ನು ಆಯೋಜಿಸಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪ್ ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ Non-Aligned Studies ಎಂಬ ಸಂಸ್ಥೆ. ತನಿಖೆ ನಡೆಸಿದ ಸಂಸ್ಥೆಯ ಪ್ರತಿನಿಧಿಗಳಿಗೆ ಮೂಡಿದ್ದ ಅನುಮಾನಗಳು ಗಟ್ಟಿಯಾಗಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪಿನ ಐಪಿ ವಿಳಾಸ ಒಂದೇ ಎಂಬುದು ತಿಳಿದಾಗ.

ಇನ್ನು ಯೂರೋಪಿಯನ್ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಫೇಕ್ ನ್ಯೂಸ್ ಸಂಸ್ಥೆಗಳು ಎಲ್ಲಿಲ್ಲದ ಆಸಕ್ತಿ ತೋರಿಸಿ ಸಕ್ರಿಯವಾಗಿದ್ದವು.

ಇಯು ಡಿಸ್ಇನ್ಫೋ ಲ್ಯಾಬ್ ನ ತನಿಖಾ ತಂಡವು ನ್ಯೂಯಾರ್ಕ್ ಮಾರ್ನಿಂಗ್ ಟೆಲಿಗ್ರಾಫ್, ದಿ ಡಬ್ಲಿನ್ ಗೆಜೆಟ್ ಹಾಗೂ ಟೈಮ್ಸ್ ಆಫ್ ಪೋರ್ಚುಗಲ್ ಎಂಬ ಸುದ್ದಿ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿದೆ. ಆಗಲೇ ಗೊತ್ತಾದದ್ದು ಈ ಮೂರು ಜಾಲತಾಣಗಳು ಭಾರತ ಸರ್ಕಾರದ ಪರವಾದ ಸುದ್ದಿಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂಬುದು. ಇವುಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಾರತ ಸರ್ಕಾರ ಮತ್ತು ಸರ್ಕಾರದ ಮುಂದಾಳತ್ವ ವಹಿಸಿರುವವರ ಪರವಾಗಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಯೂರೋಪಿಯನ್ ಯೂನಿಯನ್ ದೇಶಗಳಿಂದ ಒಳ್ಳೆಯ ಅಭಿಪ್ರಾಯಗಳು ಬರುವಂತೆ ನೋಡಿಕೊಳ್ಳುತ್ತಿದ್ದವು.

ಈ ನಕಲಿ ಸುದ್ದಿ ಜಾಲತಾಣಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಪಾರ್ಲಿಮೆಂಟ್ ಹೆಸರನ್ನೂ ತಮ್ಮ ಸುದ್ದಿ ಬಿತ್ತರಕ್ಕೆ ದುರ್ಬಳಕೆ ಮಾಡಿಕೊಂಡಿವೆ. ಯೂರೋಪಿಯನ್ ಪಾರ್ಲಿಮೆಂಟ್ ಮ್ಯಾಗಜಿನ್ ಎಂದು ಸ್ವಘೋಷಣೆ ಮಾಡಿಕೊಂಡ EP Today ಎಂಬ ಜಾಲತಾಣವು ಭಾರತ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿತ್ತು.

EP Today ಯ ತುಂಬೆಲ್ಲಾ ಇದ್ದ ಹೆಚ್ಚು ಲೇಖನಗಳೆಂದರೆ ಪಾಕಿಸ್ತಾನಿ ವಿರೋಧಿಯವು ಮತ್ತು ಭಾರತ ಸರ್ಕಾರ ಅಂದರೆ ಬಿಜೆಪಿ ಸರ್ಕಾರವನ್ನು ಹೊಗಳುವ ಲೇಖನಗಳು.

EP Today ಸುಮಾರು ಒಂದೂವರೆ ಲಕ್ಷದಷ್ಟು ಫೇಸ್ ಬುಕ್ ಫ್ಯಾನ್ ಗಳನ್ನು ಹೊಂದಿದೆಯಾದರೂ, ಇದರಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಬಹುತೇಕ ಲೇಖನಗಳು ಅಮೇರಿಕಾದ ಜಾಲತಾಣಗಳು ಮತ್ತು rt.comನಿಂದ ಎರವಲು ಪಡೆದ ಲೇಖನಗಳಾಗಿರುತ್ತವೆ.

Tags: BrusselsEU DisinfoLabEuropeanFake NewsIndian interestPakistanParliamentRussiaಇಯು ಡಿಸ್ಇನ್ಫೋ ಲ್ಯಾಬ್ತನಿಖೆನಕಲಿ ಸುದ್ದಿಪಾಕಿಸ್ತಾನಬ್ರುಸೆಲ್ಸ್ಭಾರತೀಯ ಹಿತಾಸಕ್ತಿಯೂರೋಪಿಯನ್ರಷ್ಯಾಸಂಸತ್ತು
Previous Post

ಉಪ ಚುನಾವಣಾ ಕಣ ರಂಗೇರುತ್ತಿರುವಾಗ ಬಣ್ಣಕಳೆದುಕೊಳ್ಳುತ್ತಿರುವ ಕಾಂಗ್ರೆಸ್

Next Post

ದಿಕ್ಕಿಲ್ಲದ ಭಗವತಿ, ಸಮುದ್ರ ತಳ ಸೇರಿದ ತ್ರಿದೇವ್, ಸಾಲದಲ್ಲಿ ಬಿದ್ದ ಕಂಪೆನಿ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ದಿಕ್ಕಿಲ್ಲದ ಭಗವತಿ

ದಿಕ್ಕಿಲ್ಲದ ಭಗವತಿ, ಸಮುದ್ರ ತಳ ಸೇರಿದ ತ್ರಿದೇವ್, ಸಾಲದಲ್ಲಿ ಬಿದ್ದ ಕಂಪೆನಿ

Please login to join discussion

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ
Top Story

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

by ಪ್ರತಿಧ್ವನಿ
October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 24, 2025
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ
Top Story

ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ

by ಪ್ರತಿಧ್ವನಿ
October 24, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada