• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪಿಸ್ತೂಲ್ ಖರೀದಿಗಿಂತ ರೆಸ್ಟಾರಂಟ್‌ ತೆರೆಯಲು ಹೆಚ್ಚು ದಾಖಲೆ ಸಲ್ಲಿಸಬೇಕು! 

by
February 1, 2020
in ಕರ್ನಾಟಕ
0
ಪಿಸ್ತೂಲ್ ಖರೀದಿಗಿಂತ ರೆಸ್ಟಾರಂಟ್‌ ತೆರೆಯಲು ಹೆಚ್ಚು ದಾಖಲೆ ಸಲ್ಲಿಸಬೇಕು! 
Share on WhatsAppShare on FacebookShare on Telegram

2022ರ ವೇಳೆಗೆ ನಿಯೋ ಸೂಪರ್‌ ಪವರ್‌ ಆಗುವ ಕನಸು ಕಾಣುತ್ತಿದೆ ಭಾರತ. ಹೆಚ್ಚೂಕಮ್ಮಿ 140 ಕೊಟಿ ಜನರಿಗೆ ಮನೆಯಾಗಿರುವ ದೇಶದಲ್ಲಿನ ರಾಜಕೀಯ, ಆಡಳಿತಾತ್ಮಕ ಹಾಗೂ ಕಾರ್ಯಾಂಗ ವ್ಯವಸ್ಥೆಗಳು ಕೆಲಸ ಮಾಡುವ ವೇಗ ಯಾವ ಮಟ್ಟಿಗೆ ಇದೆ ಎಂಬುದು ತಿಳಿಯದ ವಿಷಯವೇನಲ್ಲ.

ADVERTISEMENT

ವಿಶ್ವ ಬ್ಯಾಂಕ್‌ನ ’Ease of Doing Business’ ರ‍್ಯಾಂಕಿಂಗ್‌ನಲ್ಲಿ 63ನೇ ಸ್ಥಾನಕ್ಕೆ ಜಿಗಿದಿರುವುದೇನೋ ಸರಿ. ಆದರೆ, ಉದ್ಯೋಗ ಸೃಷ್ಟಿಯೊಂದಿಗೆ ಸುಸ್ಥಿತ ಆರ್ಥಿಕ ಪ್ರಗತಿಗೆ ಅಗತ್ಯವಿರುವ ವಾತಾವರಣ ದೇಶದಲ್ಲಿ ಅದೆಷ್ಟರ ಮಟ್ಟಿಗೆ ಇದೆ ಎಂಬುದನ್ನು ತಳಮಟ್ಟದಲ್ಲಿ ಕಣ್ಣಿಗೆ ರಾಚುವಂತೆ ತೋರುವ ವಾಸ್ತವಾಂಶವೊಂದನ್ನು 2019-2020ರ ಆರ್ಥಿಕ ಸಮೀಕ್ಷೆಯ ವರದಿ ಕಣ್ಣ ಮುಂದೆ ಇಟ್ಟಿದೆ.

ಬಡ ಜನರಿಗೆ ಪಡಿತರ ವಿತರಣೆ ಮಾಡುವ ಸಾರ್ವಜನಿಕ ವಿತರಣಾ ವ್ಯವಸ್ಥೆಗಳಿಂದ ಹಿಡಿದು, ರಾಷ್ಟ್ರ ಭದ್ರತೆಗಾಗಿ ವಿದೇಶೀ ಶಸ್ತ್ರಾಸ್ತ್ರಗಳ ಖರೀದಿವರೆಗೂ ವಕ್ಕರಿಸಿಕೊಂಡಿರುವ ಅಧಿಕಾರಶಾಹಿತನವೆಂಬ ಕ್ಯಾನ್ಸರ್‌‌ ಗಡ್ಡೆಗೊಂದು ಕೆಮೋಥೆರಪಿ ಮಾಡದೇ ಹೋದಲ್ಲಿ ನಮ್ಮದೇ ಮಹತ್ವಾಕಾಂಕ್ಷೆಗಳು ಕೇವಲ ಭ್ರಮೆಗಳಾಗಿ ಉಳಿದುಬಿಡುತ್ತವೆ.

ಪಿಸ್ತೂಲ್‌ ಖರೀದಿ ಮಾಡಲು ಕೇಳುವ ದಾಖಲೆಗಳಿಗಿಂತಲೂ ಹೆಚ್ಚಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೆಸ್ಟಾರಂಟ್‌ ಒಂದನ್ನು ತೆರೆಯಲು ದಾಖಲೆಗಳನ್ನು ಒದಗಿಸಬೇಕೆಂಬ ವಾಸ್ತವಿಕ ಸಂಗತಿಯೊಂದರ ನಡವೆಯೇ ಇನ್ನೂ ಜೀವಿಸುತ್ತಿದ್ದೇವೆ.

2019-20ರ ಆರ್ಥಿಕ ಸಮೀಕ್ಷೆ ಪ್ರಕಾರ, ಬೆಂಗಳೂರಿನಲ್ಲಿ ರೆಸ್ಟಾರಂಟ್‌ ತೆರೆಯಲು ಒಟ್ಟಾರೆ 36 ವಿವಿಧ ದಾಖಲೆಗಳನ್ನು ಸರ್ಕಾರೀ ಕಚೇರಿಗಳಿಗೆ ಸಲ್ಲಿಸಬೇಕಿದೆ. ಮಿಕ್ಕಂತೆ ದೆಹಲಿಯಲ್ಲಿ 26 ಹಾಗೂ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ 22 ದಾಖಲೆಗಳನ್ನು ಅಧಿಕಾರಿಗಳ ಮುಂದೆ ಇಡಬೇಕಾಗಿದೆ. ಇದರೊಂದಿಗೆ ದೆಹಲಿ ಮತ್ತು ಕೋಲ್ಕತ್ತಾಗಳಲ್ಲಿ ’Police Eating License’ ಎಂದು ಪ್ರತ್ಯೇಕವಾಗಿ ಲೈಸೆನ್ಸ್‌ಗಳನ್ನು ಪಡೆಯಬೇಕಿದ್ದು, ಇವುಗಳಿಗಾಗಿ 45 ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

ಇದೇ ದೆಹಲಿ ಮತ್ತು ಕೋಲ್ಕತ್ತಾಗಳಲ್ಲಿ ಪಿಸ್ತೂಲ್‌ಗಳನ್ನು ಇಟ್ಟುಕೊಳ್ಳಲು ಕ್ರಮವಾಗಿ 19 ಹಾಗೂ 12 ದಾಖಲೆಗಳನ್ನು ಸಲ್ಲಿಸಿದರೆ ಸಾಕು.

ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಅಡೆತಡೆಗಳಿದ್ದು, ದೈನಂದಿನ ವ್ಯಾಪಾರ ನಡೆಸಿಕೊಂಡು ಹೋಗಲೂ ಸಹ ಭಾರೀ ಸವಾಲುಗಳನ್ನು ಬಾರ್‌ ಮತ್ತು ರೆಸ್ಟಾರಂಟ್‌ಗಳ ಮಾಲೀಕರು ಎದುರಿಸುತ್ತಿದ್ದಾರೆ.

ಚೀನಾ ಹಾಗೂ ಸಿಂಗಪುರಗಳಲ್ಲಿ ರೆಸ್ಟಾರಂಟ್‌ಗಳನ್ನು ತೆರೆಯಲು ಸರಾಸರಿ 4 ದಾಖಲೆಗಳು ಸಾಕಾದರೆ ಭಾರತದಲ್ಲಿ ಇದರ ಸರಾಸರಿ 12-16ರಷ್ಟಿದೆ. ದೇಶದ ರೆಸ್ಟಾರಂಟ್‌ ಮಾರುಕಟ್ಟೆ ಗಾತ್ರ $61 ಶತಕೋಟಿಯಷ್ಟಿದ್ದು, ಇಲ್ಲಿನ ಜನಸಂಖ್ಯೆ ಹಾಗೂ ಏರುಗತಿಯಲ್ಲಿ ಸಾಗುತ್ತಿರುವ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಕ್ಷೇತ್ರದ ಮಾರುಕಟ್ಟೆ ವ್ಯಾಪ್ತಿ ಹಲವು ಪಟ್ಟು ವೃದ್ಧಿಸುವ ಕ್ಷಮತೆಯನ್ನು ಹೊಂದಿದೆ.

ಅತ್ತ ಚೀನಾ ಈ ವಿಷಯದಲ್ಲಿ ಜಾಣ ನಡೆಗಳನ್ನು ಇಟ್ಟಿದ್ದು, ಅಲ್ಲಿನ ರೆಸ್ಟಾರಂಟ್‌ ಸೇವೆಗಳ ಮಾರುಕಟ್ಟೆ ಕ್ಷೇತ್ರ $815 ಶತಕೋಟಿಯಷ್ಟಿದೆ. ಭಾರತದಲ್ಲಿ ಸರ್ಕಾರೀ ಪೋರ್ಟಲ್‌ಗಳಿಂದ ಸದ್ಯದ ಮಟ್ಟಿಗೆ ಕೇವಲ ಲೈಸೆನ್ಸ್‌ ಹಾಗೂ ಅನುಮತಿಗಳ ಪಟ್ಟಿಯನ್ನು ಮಾತ್ರವೇ ಪಡೆದುಕೊಳ್ಳಬಹುದಾಗಿದೆ. ಮತ್ತೊಂದೆಡೆ, ನ್ಯೂಝೀಲೆಂಡ್‌ನ ಆಕ್ಲೆಂಡ್‌‌ನ ಉದಾಹರಣೆಯನ್ನೇ ತೆಗೆದುಕೊಂಡರೆ: ಅಲ್ಲಿನ ಪೌರಸಭೆಯ ಪೋರ್ಟಲ್‌ನಲ್ಲಿ ಲೈಸೆನ್ಸ್‌ ಪಡೆದುಕೊಳ್ಳಲು ಅನುಸರಿಸಬಹುದಾದ ಪ್ರಕ್ರಿಯೆಗಳ step by step ವಿವರಗಳು, ವಿವಿಧ ಶುಲ್ಕಗಳ ಮಾಹಿತಿ ಹಾಗೂ ರೆಸ್ಟಾರಂಟ್ ತೆರೆಯಲು ತೆಗೆದುಕೊಳ್ಳಬಹುದಾದ ಸಮಯದ ಮಿತಿಯನ್ನು ಸ್ಪಷ್ಟವಾಗಿ ವಿವರಿಸಲಾಗಿರುತ್ತದೆ. ಇದರೊಂದಿಗೆ ಬಳಸಲು ಸಿದ್ಧವಿರುವ ಬ್ಯುಸಿನೆಸ್‌ ಐಡಿಯಾಗಳು, ಹಾಗೂ ವಿವಿಧ ಗಾತ್ರದ ಬ್ಯುಸಿನೆಸ್‌ಗಳ ಸಮಗ್ರ ಮಾಹಿತಿಯೂ ಸಹ ಅದೇ ಪೋರ್ಟಲ್‌ನಲ್ಲಿ ಸುಲಭವಾಗಿ ಲಭ್ಯವಿದೆ.

ಅಧಿಕಾರಶಾಹೀ ವರ್ಗದ ವಿಪರೀತ ದೊಣ್ಣೆನಾಯಕತ್ವ ಹಾಗೂ ವಾಸ್ತವತೆಗಳಿಗೆ ತೆರೆದುಕೊಂಡಿರುವ ಪಾರದರ್ಶಕ ವ್ಯವಸ್ಥೆಗೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರುವ ನೂರಾರು ಜ್ವಲಂತ ಉದಾಹರಣೆಗಳಲ್ಲಿ ಇದೂ ಒಂದು.

Tags: BangalorebengaluruDocumentsPistolrestaurantದಾಖಲೆಪಿಸ್ತೂಲ್ರೆಸ್ಟಾರಂಟ್‌
Previous Post

CAA ವಿರೋಧಿಸಿ ಪ್ರತಿಭಟಿಸುವವರಿಗೆ ಅವಮಾನದ ಬಹುಮಾನ 

Next Post

CAA: ಮಾತುಕತೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ

Related Posts

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?
Top Story

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ನಟಿಗೆ ನಿರ್ಮಾಪಕರೊಬ್ಬರು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಧಾರವಾಹಿಯಲ್ಲಿ ನಟಿಸಿದ ನಟಿಗೆ ಸಂಭಾವನೆ ನೀಡದ ನಿರ್ಮಾಪಕರಿಂದ ವಂಚನೆ...

Read moreDetails
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
CAA: ಮಾತುಕತೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ

CAA: ಮಾತುಕತೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಬಿಜೆಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada