ಮಾಜಿ IAS ಅಧಿಕಾರಿ ಕಣ್ಣನ್ ಗೋಪಿನಾಥನ್ ಮತ್ತೆ ನರೇಂದ್ರ ಮೋದಿ ಹಾಗೂ ಅವರ ಅಭಿಮಾನಿಗಳ ಕಾಲೆಳೆದಿದ್ದಾರೆ. 2012 ರಿಂದ ಭಾರತೀಯ ನಾಗರೀಕ ಸೇವೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಣ್ಣನ್ ಗೋಪಿನಾಥನ್, ಆರ್ಟಿಕಲ್ 370 ರದ್ದಾದಾಗ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ದಾಖಲಿಸಿದ್ದರು.
ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರದ ಅನ್ಯಾಯಗಳ ವಿರುದ್ದ ದನಿಯೆತ್ತಲಾಗುವುದಿಲ್ಲವೆಂಬ ಕಾರಣ ನೀಡಿ ನೇರವಾಗಿ ಹೋರಾಟ ರಂಗಕ್ಕೆ ಧುಮುಕಿದ್ದರು. CAA-NRC ಹೋರಾಟಗಳು ತೀವ್ರತರವಾಗಿ ಕಾವು ಪಡೆಯುತ್ತಿದ್ದಾಗ ಕಣ್ಣನ್ ಗೋಪಿನಾಥನ್ ಕೇಂದ್ರದ ಅಸಮಾನತೆಯ ನೀತಿಯ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸಿದ್ದರು.
ಕೇಂದ್ರ ವಿರುದ್ಧ ಹೋರಾಟಗಳ ಸಂಧರ್ಭದಲ್ಲಿ ಸಕ್ರಿಯವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ಗೋಪಿನಾಥನ್, ಕರೋನಾ, ಲಾಕ್ಡೌನ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ತೊಡಗಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಕೇಂದ್ರ ಸರ್ಕಾರ ಕಣ್ಣನ್ ಗೋಪಿನಾಥನ್ ಅವರ ಮೇಲೆ ಒತ್ತಡ ಹೇರಿ, ಬೆದರಿಸುತ್ತಿದೆಯೇ ಎಂದು ಗುಮಾನಿಗಳೆದ್ದಿತ್ತು.ಅಂತಹ ಗುಮಾನಿಗಳಿಗೆಲ್ಲಾ ಸ್ವತಃ ಗೋಪಿನಾಥನ್ ತೆರೆ ಎಳೆದಿದ್ದಾರೆ.
ನಾನು ಟ್ವಿಟರ್ನಿಂದ ಸ್ವ ಇಚ್ಛೆಯಿಂದ ಹೊರಗುಳಿದಿದ್ದೇನೆ. ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ನನ್ನನ್ನು ಹೆದರಿಸಲು ನರೇಂದ್ರ ಮೋದಿ ಹಾಗೂ ಅವರ ಬೆದರಿಸುವ ತಂಡವು ಹತ್ತು ಬಾರಿ ಜನ್ಮವೆತ್ತಿ ಬರಬೇಕು ಎಂದಿದ್ದಾರೆ.
ಜನರನ್ನು ನೇರಾ ನೇರಾ ಭೇಟಿಯಾಗಲು ಸಾಧ್ಯವಿಲ್ಲದ ಈ ದುರಿತ ಕಾಲದಲ್ಲಿ ಇನ್ನಷ್ಟು ಓದಲು ಹಾಗೂ ಹೆಚ್ಚು ಕಲಿಯಲು ತಾನು ತನ್ನ ಸಮಯವನ್ನು ಮೀಸಲಾಗಿರಿಸಿದ್ದೇನೆ. ಹಾಗಾಗಿ ಟ್ವಿಟರ್ನಲ್ಲಿ ತಾನು ಸಕ್ರಿಯವಾಗಿ ಇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.
On my absence from Twitter, neither have I been threatened nor can I ever be.
Dear PM @narendramodi and his gang of bullies will have to take birth ten times for that. 🙂
But I felt that Twitter shortens our vision. One needs a longer view of history to fight this.
— Kannan Gopinathan (@naukarshah) August 10, 2020






