ಕೋವಿಡ್-19 ಹೊಸ ಮಾರ್ಗಸೂಚಿಗಳ ಕುರಿತು ಮಾಧ್ಯಮಗೋಷ್ಟಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಪತ್ರಿಕಾಗೋಷ್ಟಿಯಲ್ಲಿ ಅನಗತ್ಯ ಭಯ ಹುಟ್ಟಿಸುವ ಮಾಧ್ಯಮಗಳನ್ನು ಟೀಕಿಸಿದ್ದಾರೆ. ಯಮಪಾಶ, ಮಾರಣಹೋಮ, ರಣಕೇಕೆ ಮುಂತಾದ ವಿಶೇಷಣಗಳಿಂದ ಕರೋನಾ ಸೋಂಕಿನ ಕುರಿತು ವರದಿ ಮಾಡಬೇಕಾದ ಅಗತ್ಯವಿಲ್ಲ, ಜನರಲ್ಲಿ ನೀವು ಅನಗತ್ಯ ಭಯ ಹುಟ್ಟಿಸುತ್ತಿದ್ದೀರಿ ಎಂದಿದ್ದಾರೆ.
ಸಾರ್ಸ್ ರೋಗದಲ್ಲಿ 10 ಶೇಕಡಾ ಮರಣ ಸಂಭವಿಸುತ್ತದೆ. ಕೆಲವು ದೇಶಗಳಲ್ಲಿ 15 ಶೇಕಡಾ ಮರಣ ಪ್ರಮಾಣವೂ ದಾಖಲಾಗಿತ್ತು. ಅಲ್ಲದೆ ಎಬೋಲಾ ಮುಂತಾದ ರೋಗಗಳಿಗೆ ಹೋಲಿಸಿದರೆ ಕರೋನಾದ ಪ್ರಮಾಣ ಭಾರೀ ಕಡಿಮೆಯಿದೆ. ರಾಜ್ಯದಲ್ಲಿ ಕರೋನಾದ ಮರಣ ಪ್ರಮಾಣ 1.2 ಶೇಕಡಾ ಇದೆ. ನೀವು ಜನರಿಗೆ ವಸ್ತು ಸ್ಥಿತಿಯನ್ನು ಮುಟ್ಟಿಸಬೇಕೆಂದು ಮಾಧ್ಯಮಗಳಲ್ಲಿ ಕೇಳಿಕೊಂಡಿದ್ದಾರೆ.
Also Read: ಕೋವಿಡ್-19: ದೇಶದಲ್ಲಿ ಶೇ. 49.32, ರಾಜ್ಯದಲ್ಲಿ ಶೇ. 52.79 ರೋಗಿಗಳು ಸೋಂಕಿನಿಂದ ಮುಕ್ತ
ಜನರು ಭಯಬಿದ್ದು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಸಾಮಾನ್ಯ ನೆಗಡಿ ಜ್ವರಕ್ಕೂ ಹೆದರುತ್ತಿದ್ದಾರೆ. ಈಗಾಗಲೇ ಮಳೆಗಾಲ ಶುರುವಾದ್ದರಿಂದ ಸಾಮಾನ್ಯ ಜ್ವರ ಬರಲು ಶುರುವಾಗುತ್ತದೆ. ಅದಕ್ಕೆಲ್ಲಾ ಭಯಪಡಬೇಡಿ. ವೈದ್ಯರನ್ನು ಸಂಪರ್ಕಿಸಿ ಎಂದು ಜನರಿಗೆ ಹೇಳಿದ್ದಾರೆ.
ಹೊಸ ಮಾರ್ಗಸೂಚಿಯ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಇನ್ನು ಮುಂದೆ ಪರೀಕ್ಷಿಸಲಾಗುತ್ತದೆ. ಅಲ್ಲದೆ ಹೊರಗಿನಿಂದ ರಾಜ್ಯಗಳಿಗೆ ಬಂದವರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಕಠಿಣ ಕ್ವಾರಂಟೈನ್ನಲ್ಲಿಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
Also Read: ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?